ಎಲ್ಲಿದ್ದಾಳೆ ಕೃತಿ?

ಬಹುಶಃ ಕೃತಿ ಈಗ ಅಗತ್ಯಕ್ಕಿಂತಲೂ ಹೆಚ್ಚಿನ ಸೇಫ್‌ ಝೋನ್‌ಗೆ ಹೋಗಿಬಿಟ್ಟಿದ್ದಾಳೆ ಅನ್ಸುತ್ತೆ. ಒಮ್ಮೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಮುಖ ತೋರಿಸುವುದುಂಟು, ಆದರೆ ಸುದ್ದಿಗಾರರ ಕ್ಯಾಮೆರಾದಿಂದ ಮೈಲುಗಟ್ಟಲೇ ದೂರ ಉಳಿದಿದ್ದಾಳೆ. ಹೋಗಲಿಬಿಡಿ, ಅವಳ ಅಭಿಮಾನಿಗಳಿಗಾಗಿ ಅಂತೂ ಒಂದು ಗುಡ್‌ ನ್ಯೂಸ್‌ ಇದೆ, ಅಂದ್ರೆ ಇದೇ ವರ್ಷ ಕೃತಿಯ 5 ಚಿತ್ರಗಳು ಶೂಟಿಂಗ್‌ ಅರಂಭಿಸಲಿವೆಯಂತೆ! ಸುದ್ದಿಗಾರರ ಪ್ರಕಾರ, ಕೃತಿ ಈಗ ಹೀರೋ ರಾಜ್‌ಕುಮಾರ್‌ ರಾವ್ ‌ಜೊತೆ ಪಂಜಾಬಿನ ಚಂಡೀಗಢದ ಒಂದು ಚಿತ್ರಕ್ಕಾಗಿ ಶೂಟಿಂಗ್‌ನಲ್ಲಿ ತೊಡಗಿದ್ದಾಳೆ. ಅಂದಹಾಗೆ ಕೃತಿ ಅಕ್ಷಯ್‌ ಕುಮಾರ್‌ ಜೊತೆ `ಬಚ್ಚನ್‌ ಪಾಂಡೆ’ ಚಿತ್ರದಲ್ಲೂ ಕಾಣಿಸಲಿದ್ದಾಳೆ. ಆಗಾಗ ಬೆಳ್ಳಿತೆರೆಯಲ್ಲಿ ನಿನ್ನ ಮುಖ ತೋರಿಸುತ್ತಿರಮ್ಮ ಕೃತಿ ಇಲ್ಲದಿದ್ದರೆ ಜನ `ಎಲ್ಲಿದ್ದಾಳೆ ಕೃತಿ?’ ಅಂತ ಕೇಳಿದರೆ ಆಶ್ಚರ್ಯವೇನಿಲ್ಲ, ಎನ್ನುತ್ತಾರೆ ಹಿತೈಷಿಗಳು.

ನೂರಾಳಿಗೀಗ ಸೆಲೆಬ್ರೇಶನ್ಮೂಡ್

noora_1

ಬಾಲಿವುಡ್‌ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳು ಹಾಗೂ ಮ್ಯೂಸಿಕ್‌ ವಿಡಿಯೋಗಳ ಮುಖಾಂತರ ನೂರಾ ಫತೇಹಿ ತನ್ನ ಫ್ಯಾನ್ಸ್ ಮನದಲ್ಲಿ ಭದ್ರ ಸ್ಥಾನ ಪಡೆದಿದ್ದಾಳೆ. ನೂರಾ ಇತ್ತೀಚೆಗೆ ಮೊರೆಕ್ಕೋದ ಮರುಭೂಮಿಯಲ್ಲಿ  ಹಾಲಿಡೇ ಎಂಜಾಯ್‌ಮಾಡುತ್ತಿದ್ದಾಳೆ. ಅಲ್ಲಿಂದಲೇ ಅವಳು ತನ್ನ ಫ್ಯಾನ್ಸ್ ಗಾಗಿ ಒಂದು ಗುಡ್‌ ನ್ಯೂಸ್‌ ಶೇರ್‌ ಮಾಡಿದ್ದಾಳೆ. ಅದೇನಂದ್ರೆ, ಸೋಶಿಯಲ್ ಮೀಡಿಯಾದ ಅವಳ ಒಂದು ಅಕೌಂಟ್‌ನಲ್ಲಿ ಫಾಲೋಯರ್ಸ್‌ ಸಂಖ್ಯೆ 20 ಮಿಲಿಯನ್‌ ಮೀರಿದೆಯಂತೆ! ಆಹಾ, ಇದಂತೂ ಸೆಲೆಬ್ರೇಶನ್‌ ಟೈಂ ಅಲ್ಲವೇ ನೂರಾ? ಎನ್ನುತ್ತಿದ್ದಾರೆ ಹಿತೈಷಿಗಳು.

ಕಾರ್ತಿಕ್‌ ಮಾಡಲಿದ್ದಾನೆ ಧಮಾಕಾ 

kartik_1

ಕೊರೋನಾ ಕಾರಣ ಬಹಳ ದಿನಗಳಿಂದ ಮನೆಯಲ್ಲೇ ಬಂಧಿಯಾಗಿರುವ ಕಾರ್ತಿಕ್‌ ಆರ್ಯನ್‌ ಇದೀಗ ಧಮಾಕಾ ಮಾಡುವ ಮೂಡ್‌ನಲ್ಲಿದ್ದಾನೆ. ಅಯ್ಯೋ….. ಇದು ಅವನ ರಿಯಲ್ ಧಮಾಕಾ, ಸ್ಟಾರ್‌ ಗಿರಿ ಏರಿಬಿಟ್ಟಿತೇ ಅಂತಲ್ಲ ಅಂದುಕೊಳ್ಳಬೇಡಿ. ಈತನ ಮುಂದಿನ ಚಿತ್ರ `ಧಮಾಕಾ’ ಅಷ್ಟೆ, ಅದರಲ್ಲಿ ನಟಿಸಲಿದ್ದಾನೆ! ತನ್ನ ಬರ್ತ್‌ಡೇ ದಿನ FB‌ನಲ್ಲಿ ಈ ಚಿತ್ರದ ಪೋಸ್ಟರ್‌ ಶೇರ್ ಮಾಡುತ್ತಾ ಕಾರ್ತಿಕ್‌ ಈ ವಿಷಯ ತಿಳಿಸಿದ್ದಾನೆ. ಇವನ ಪಾಲಿಗಂತೂ ಈ ಚಿತ್ರ ಬಲು ವಿಶೇಷ. ಏಕೆಂದರೆ ಇವನ ಡ್ರೀಂ ಲೇಡಿ ಯಾಮಿನಿ ಗೌತಮ್ ಈ ಚಿತ್ರದ ನಾಯಕಿ. ಈ ಮಹಾನ್‌ ಧಮಾಕಾದ ಶೂಟಿಂಗ್‌ ಈ ಹೊಸ ವರ್ಷ ಆರಂಭ!

ಭಯ ಪಡಲೇಬೇಕು ಕಣಮ್ಮ ಸಾರಾ!

sara_1

ಸಾರಾ ಅಲಿಖಾನ್‌ ಮತ್ತು ವರುಣ್‌ ಧವನ್‌ರ ಜೋಡಿಯ `ಕೂಲಿ ನಂ1′ ಚಿತ್ರ ಕಳೆದ ಷಾಂತ್ಯದ OTTಯಲ್ಲಿ ಬಿಡುಗಡೆ ಆಗಿತ್ತು. ಚಿತ್ರದ ಟ್ರೇಲರ್‌ ರಿಲೀಸ್‌ ಆದಂತೆ ಟ್ರೋಲಿಗರು ವ್ಯಂಗ್ಯದ ವಾಗ್ಬಾಣಕ್ಕೆ ತೊಡಗಿದರು. ಇದೇ ಸಾರಾ, ಸುಶಾಂತ್‌ನ ಸಾವಿಗೆ ತುಟಿ ಪಿಟಕ್‌ ಎನ್ನಲಿಲ್ಲ, ಜೊತೆಗೆ ನಶೆಯ ಮೂಡ್‌ನಲ್ಲಿರುತ್ತಾಳೆ ಎಂದು ಟೀಕಿಸಿದರು. ಈ ಚಿತ್ರದ ಟ್ರೇಲರ್‌ಗಂತೂ ರಾಶಿ ರಾಶಿ ಡಿಸ್‌ ಲೈಕ್‌ ಬಂದು ಅದೇ ದೊಡ್ಡ ರೆಕಾರ್ಡ್‌ ಆಗಲಿದೆ ಎಂದು ಕುಟುಕಿದ್ದಾರೆ. ಸುದ್ದಿಗಾರರ ಪ್ರಕಾರ ಈ ಎಲ್ಲಾ ಟ್ರೋಲಿಗರಿಂದ ಸಾರಾ ಆತ್ಮವಿಶ್ವಾಸವನ್ನೇ ಕಳೆದುಕೊಂಡಿದ್ದಾಳಂತೆ. ಇದೇ ರೀತಿ ಮುಂದುವರಿದರೆ ತನ್ನ ಕೆರಿಯರ್‌ನ ಗತಿ ಗೋವಿಂದಾನೇ ಎಂದು ಭಯಪಡುತ್ತಿದ್ದಾಳೆ, ಭಯ ಪಡಬೇಕಾದ್ದೇ ಬಿಡಮ್ಮ ಎನ್ನುತ್ತಿದ್ದಾರೆ ಹಿತೈಷಿಗಳು.

ತಾರಾಳ ಅದೃಷ್ಟ ಏನಾಗುವುದೋ ಏನೋ?

tara_1

ಕರಣ್‌ ಜೋಹರ್‌ನ ಚಿತ್ರದಲ್ಲಿ ನಟಿಸಿದ್ದರಿಂದ ಬಾಲಿವುಡ್‌ ತಾರಾಳ ಅದೃಷ್ಟವೇನೋ ಖುಲಾಯಿಸಿತು, ಎಲ್ಲೆಲ್ಲೂ ಚರ್ಚೆ ನಡೆಯಿತು. ಆದರೆ ಇದರಿಂದ ಅವಳಿಗೆ ಯಾವ ಲಾಭ ಆಗಲಿಲ್ಲ. ಇದುವರೆಗೂ ಅವಳಿಗೆ ಒಂದೇ ಒಂದು ಗಮನಾರ್ಹ ಪಾತ್ರ ಸಿಕ್ಕಿಲ್ಲ ಎಂಬುದು ದುಃಖದ ಸಂಗತಿ. ಹೀಗಿರುವಾಗ ತನ್ನ ನಟನೆಗೆ ಸಾಣೆ ಹಿಡಿಯುವಂಥ ಪಾತ್ರಗಳನ್ನು ಹುಡುಕಿಕೊಳ್ಳುವ ಬದಲು ಅವಳು FB‌ನಲ್ಲಿ ತನ್ನ ಗ್ಲಾಮರಸ್‌ ಪೋಸ್ಟರ್‌ಗಳನ್ನು ಪೋಸ್ಟ್ ಮಾಡುವುದರಲ್ಲಿ ಬಿಝಿ ಆಗಿದ್ದಾಳೆ. ತಾರಾ ಬೇಬಿ, FB‌ನಲ್ಲಿ ನಿನ್ನ ಫಾಲೋಯರ್ಸ್‌ ಸಂಖ್ಯೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ, ನೀನು ಬೆಳ್ಳಿ ತೆರೆಯಲ್ಲಿ ಇನ್ನೂ ಉಳಿಯಬೇಕು ಎಂದು ಹೇಳುವವರ ಸಂಖ್ಯೆ ಕಡಿಮೆಯಾದೀತು, ಎಚ್ಚರ! ಎನ್ನುತ್ತಿದ್ದಾರೆ ಹಿತೈಷಿಗಳು.

`ಟ್ರೋಲರ್ಸ್‌ ಕಂಡ್ರೆ ಭಯವಿಲ್ಲ!’ ಕರೀನಾ

trolls1

ಕರೀನಾ ಇತ್ತೀಚೆಗೆ ತನ್ನ ಪ್ರೆಗ್ನೆನ್ಸಿ ಹಾಗೂ `ಲಾಲ್‌ಸಿಂಗ್‌ ಚಡ್ಡಾ’ ಚಿತ್ರದ ಶೂಟಿಂಗ್‌ ಕುರಿತಾಗಿ ಸಂಭ್ರಮಿಸುತ್ತಿದ್ದಾಳೆ. ಕರೀನಾ FB‌ನಲ್ಲೂ ಸಾಕಷ್ಟು ಆ್ಯಕ್ಟಿವ್ ‌ಆಗಿದ್ದಾಳೆ, ಹೀಗಾಗಿ ಆಗಾಗ ಟ್ರೋಲಿಗರ ಟೀಕೆಗೆ ಗುರಿ ಆಗುತ್ತಿರುತ್ತಾಳೆ. ಟ್ರೋಲ್ಸ್ ಕುರಿತಾಗಿ ಮಾತನಾಡುತ್ತಾ ಕರೀನಾ ನೀಡಿದ ಪ್ರಕ್ರಿಯೆ ಎಂದರೆ, ಜನ ಇತ್ತೀಚೆಗೆ ಬಹಳ ಬಿಡುಬೀಸಾಗಿ ಕುಳಿತಿದ್ದಾರೆ ಅನ್ಸುತ್ತೆ, ಅದಕ್ಕೆ ಬಾಯಿಗೆ ಬಂದಂತೆ ಬೊಗಳೆ ಬಿಡ್ತಾ ಇದ್ದಾರೆ. ಹೀಗಿರುವಾಗ ಈ ಟ್ರೋಲ್ಸ್ ‌ಗೆ ಏಕೆ ಭಯಪಡಲಿ? ಅಂತಾಳೆ. ಮೇಡಂ, ಈ ಮಾತನ್ನು ತಮ್ಮ ಪತಿರಾಯರಿಗೂ ತಿಳಿಸಿ, ಟ್ರೋಲಿಗರಿಗೆ ಹೆದರಿ ಆತ ತನ್ನ ಆತ್ಮಕಥೆ ಪ್ರಕಟಿಸುವುದನ್ನೇ ನಿಲ್ಲಿಸಿದ್ದಾನೆ, ಎಂದು ಎಚ್ಚರಿಸುತ್ತಿದ್ದಾರೆ ಸುದ್ದಿಗಾರರು.

ಶೋಷಣೆಯ ಆರೋಪ ಹೊರಿಸುವ ಸರದಿ

Mandana_1

ಇದೀಗ ವಂದನಾಳದು ಲೈಂಗಿಕ ಶೋಷಣೆ ಮತ್ತು ನಶೆಯ ಚಟ ಬಾಲಿವುಡ್‌ಗೆ ಹೊಸತೇನಲ್ಲ. ಇತ್ತೀಚೆಗಂತೂ ಇದರ ಕುರಿತಾಗಿ ಸುದ್ದಿಗಳು ಪ್ರಕಟಗೊಳ್ಳುತ್ತಲೇ ಇರುತ್ತವೆ. ಇದೀಗ ಈ ಹೊಸ ಪ್ರಕರಣಕ್ಕೆ ಸೇರಿದವಳೆಂದರೆ, ಬಿಗ್‌ಬಾಸ್‌ನ ಸದಸ್ಯೆಯಾಗಿದ್ದ ವಂದನಾ ಕರೀಮಿಯದ್ದು. ಇವಳು ತನ್ನ ಮುಂದಿನ `ಕೋಕಾಕೋಲಾ’ ಚಿತ್ರದ ನಿರ್ಮಾಪಕ ಮಹೇಂದ್ರ ಧರೀವಾಲ್ ‌ವಿರುದ್ಧ  ಲೈಂಗಿಕ ಶೋಷಣೆಯ ಆರೋಪ ಹೊರಿಸಿದ್ದಾಳೆ. ಇವಳ ಪ್ರಕಾರ, ಮಹೇಂದ್ರ ಇವಳ ವ್ಯಾನಿಟಿ ವ್ಯಾನಿನಲ್ಲಿ ಇವಳ ಜೊತೆ ಅದೂ ಒಂಟಿಯಾಗಿದ್ದಾಗ ಕೆಟ್ಟದಾಗಿ ನಡೆದುಕೊಂಡನಂತೆ.  ಕೊರಿಯೊಗ್ರಾಫರ್‌ನ ನೆರವಿನಿಂದ ಅಲ್ಲಿಂದ ಹೇಗೋ ಪಾರಾದಳಂತೆ. ತನ್ನನ್ನು ತಾನು ಸಮಾಜದ ಕೈಗನ್ನಡಿ ಎಂದು ಭಾವಿಸುವ ಬಾಲಿವುಡ್‌, ಎಂದೆಂದೂ ತಾನು ಸುಧಾರಣೆ ಮಾಡಿಕೊಳ್ಳಲಾರೆ ಎಂದು ಹೇಳುತ್ತಿದೆಯೇ?

ಚೀಟಿಂಗ್‌ ಓಕೆ, ಚುಮ್ಮಾ ಯಾಕೆ?

kohli_or_anushka_1

ನೆಟ್‌ ಫ್ಲಿಕ್ಸ್ ನಲ್ಲಿ ಇತ್ತೀಚೆಗೆ ಬಿಡುಗಡೆಯಾದ `ಎ ಸೂಟೆಬಲ್ ಬಾಯ್‌’ ಚಿತ್ರವನ್ನು ವಿದೇಶದಲ್ಲಿ ಎಲ್ಲೆಲ್ಲೂ ಕೊಂಡಾಡಲಾಯಿತು. ಆದರೆ ಭಾರತದಲ್ಲಿ ಈ ಚಿತ್ರದ ಒಂದು ದೃಶ್ಯಕ್ಕೆ ದೊಡ್ಡ ರಾದ್ಧಾಂತವಾಯಿತು. ಈ ಚಿತ್ರದ ಒಂದು ಚುಂಬನದ ದೃಶ್ಯ ದೇವಾಲಯದಲ್ಲಿ ಶೂಟ್‌ ಮಾಡಲಾಯಿತು. ಇದಂತೂ ಭಗವಾಧಾರಿಗಳಿಗೆ ಒಂದಿಷ್ಟು ರುಚಿಸದ ವಿಷಯ. ಅದು ಹೇಗೆ ರುಚಿಸೀತು? ಮಂದಿರದಲ್ಲಿ ಕಣ್ಣು ಮುಚ್ಚಿಕೊಂಡು ದಾನದಕ್ಷಿಣೆ ನೀಡುತ್ತಾ, ಪೂಜಾರಿಗಳ ಮಾತಿಗೆ ಗೋಣಾಡಿಸುವುದಷ್ಟೇ ಸರಿ ಎನ್ನುತ್ತಾರವರು. ಪ್ರತಿದಿನ ಜನ ಇಲ್ಲಿಗೆ ಬಂದು ಪರಲೋಕದ ಸುಧಾರಣೆಯ ವಿಚಾರ ಕೇಳುತ್ತಾ ಮೋಸಕ್ಕೆ ಒಳಗಾಗುತ್ತಿದ್ದಾರೆ. ನಟಿ ಸ್ವರಾ ಭಾಸ್ಕರ್‌ ಈ ಕುರಿತಾಗಿ ಖಾರವಾಗಿ ಪ್ರತಿಕ್ರಿಯಿಸುತ್ತಾ, ಕಠುವಾದ ಮಂದಿರದಲ್ಲಿ ಗ್ಯಾಂಗ್‌ ರೇಪ್‌ ಆದರೆ ಪರವಾಗಿಲ್ಲ, ಒಂದು ಚುಂಬನ ಶೂಟ್‌ ಮಾಡಿದರೆ ಘೋರ ಅಪರಾಧವೇ? ಎಂದು ಸಿಡಿದಿದ್ದಾಳೆ. ಪಾಪ, ಸ್ವರಾ ಮಹಾಮುಗ್ಧೆ. ಈ ಧರ್ಮದ ದಂಧೆ ನಡೆಯುವುದೇ ಹೀಗೆ….. ಒಮ್ಮೆ ಬಾಬಾಗಳ ಮುಚ್ಚಿದ ಕೋಣೆಗಳಲ್ಲಿ, ಮತ್ತೊಮ್ಮೆ ಮಂದಿರದ ತೆರೆದ ಪ್ರಾಂಗಣದಲ್ಲಿ ಹೆಣ್ಣಿನ ಮಾನ ಹರಾಜಾಗುತ್ತಿರುತ್ತದೆ ಎಂಬುದು ಅವಳಿಗೆ ಹೇಗೆ ತಿಳಿಯಬೇಕು?

ನಸುನಗುತ್ತಲೇ ನಶೆಯ ದಾರಿದೀವಿಗೆ

bharti_1

ಸದಾ ಕಿರುತೆರೆಯ ಎಲ್ಲಾ ಶೋಗಳಲ್ಲೂ ಎಲ್ಲರನ್ನೂ ನಕ್ಕು ನಲಿಸುವ ಈ ಮಹಾತಾಯಿ ಅದಾವಾಗ ನಶೆಗೆ ವಶಳಾದಳೋ ತಿಳಿಯದು. ಅದು ಗೊತ್ತಾಗಿದ್ದು ಈ ಭಾರತಿ ಸಿಂಗ್‌ ಎಂಬ ಮಹಾತಾಯಿಯ ಮನೆಗೆ ರೈಡ್‌ ಆದಾಗಲೇ! ತಾನು ನಶಾಕೋರಿ ಹೌದೆಂದು ಈಕೆ ತಾನೇ ಕನ್ಛೆಸ್‌ ಮಾಡಿಕೊಂಡಿದ್ದಾಳೆ. ಇವಳ ಫ್ಯಾನ್ಸ್ ತಮ್ಮ ಆದರ್ಶ ನಾಯಕಿ ಇಂಥ  ಡ್ರಗ್‌ ಅಡಿಕ್ಟೇ ಎಂದು ತಿಳಿದು ದಿಗ್ಭ್ರಾಂತರಾದರು. ಮುಂಬೈ ಎಂಬ ಮಹಾನಗರಿಗೆ ಬಂದವರು ಬಡವರೋ, ಶ್ರೀಮಂತರೋ ಮುಖ್ಯವಲ್ಲ, ಇಲ್ಲಿನ ನೀರಿನ ಮಹಿಮೆ ಅಂಥದ್ದು, ಲೋಲುಪತೆಯ ನಶೆ ಏರಿಸಿಬಿಡುತ್ತದೆ. ಬಾಲಿವುಡ್‌ಗೂ ನಶೆಗೂ ಬಿಡದ ನಂಟು, ಹಾಗಿರುವಾಗ ಈ ಕುರಿತು ಇಷ್ಟು ಕಿರುಚಾಟವೇಕೆ? ಇದು ಎಲ್ಲಕ್ಕಿಂತಲೂ ವಿಶಿಷ್ಟ ಕ್ಷಣ ವಿರಾಟ್‌ ಅನುಷ್ಕಾ (ಈ ಪ್ರತಿ ಅಚ್ಚಿಗೆ ಹೋಗುವವರೆಗೂ ಮಗು ಆಗಿರಲಿಲ್ಲ) ಇತ್ತೀಚೆಗೆ ಬಹಳ ಖುಷಿಯಲ್ಲಿದ್ದಾರೆ. ಅನುಷ್ಕಾ ಗರ್ಭವತಿ ಎಂಬುದೇ ಕಾರಣ. ಈ ಸಡಗರದ ಮಧ್ಯೆಯೂ ಆಕೆ ಸತತ ಜಾಹೀರಾತುಗಳಲ್ಲಿ ನಟಿಸುತ್ತಾ ಎಷ್ಟೋ ಬಿಝಿ ಆಗಿದ್ದಾಳೆ. ವಿರಾಟ್‌ ಸಹ ಭಾರತ ಆಸ್ಟ್ರೇಲಿಯಾ ಮ್ಯಾಚ್‌ಗಾಗಿ ವಿದೇಶದಲ್ಲಿದ್ದಾನೆ. ಈ ಜೋಡಿ ಇತರ ದಂಪತಿಗಳಿಗೆ ನಿಜಕ್ಕೂ ಆದರ್ಶವಾಗಿದ್ದಾರೆ. ಒಂದು ಆರೋಗ್ಯಕರ ಮಗು ಪಡೆಯಲು ಪುರೋಹಿತರ ಸಲಹೆಗಳ ಹಿಂದೆ ಓಡುವ ಬದಲು, ಆರೋಗ್ಯಕರ ಜೀವನ ನಡೆಸುತ್ತಾ ತಮ್ಮ ದೈನಂದಿನ ಕೆಲಸದಲ್ಲಿ ಬಿಝಿಯಾಗಿರಬೇಕೆಂದು ತೋರಿಸುತ್ತದೆ. ಆಲ್ ದಿ ಬೆಸ್ಟ್ ವಿರುಷ್ಕಾ!

ಬಿಡುಗಡೆಗೆ ಮುಂಚೆಯೇ ಚರ್ಚಾಸ್ಪದ ಆದ ಚಿತ್ರ

rosie1

ಹಿಂದೊಂದು ಕಾಲದಲ್ಲಿ ಮಿಂಚಿದ್ದ ಹೀರೋ ವಿವೇಕ್‌ ಒಬೆರಾಯ್‌ ಇದೀಗ ಮತ್ತೆ ಚರ್ಚೆಯಲ್ಲಿದ್ದಾನೆ. ಈತ ತನ್ನ ಹೋಂ ಪ್ರೊಡಕ್ಷನ್‌ನಲ್ಲಿ `ರೋಝಿ’ ಎಂಬ ಚಿತ್ರ ತಯಾರಿಸುತ್ತಿದ್ದಾನೆ. ಇದರಲ್ಲಿ ಗ್ರೇಟ್‌ ಏನಿದೆ ಅಂತೀರಾ? ಇದರಲ್ಲಿನ ವೈಶಿಷ್ಟ್ಯವೆಂದರೆ ಸಲ್ಮಾನ್ ಖಾನ್‌ನ ತಮ್ಮ ಅರ್ಬಾಸ್‌ ಖಾನ್‌ ಸಹ ಇಲ್ಲಿ ನಟಿಸುತ್ತಿದ್ದಾನೆ. ಇದಲ್ಲವೇ ಶಾಕಿಂಗ್‌ ನ್ಯೂಸ್‌! ಹೌದು, ನಂಬಲರ್ಹ ಮೂಲಗಳ ಪ್ರಕಾರ ಇದು ಅಕ್ಷರಶಃ ಸತ್ಯ. ಇದು ನಿಜವೇ ಆಗಿದ್ದರೆ ಸಲ್ಮಾನ್‌ನ ಪ್ರಕ್ರಿಯೆ ಹೇಗಿರುತ್ತದೋ ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇದೆ. ಹಾಗೇಕೆ ಎಲ್ಲರೂ ಭಾವಿಸುತ್ತಾರೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ….. ಅಲ್ಲವೇ?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ