ಜಾಗೀರ್ದಾರ್*
ಪ್ಯಾನ್ ಇಂಡಿಯಾ ಹೀರೋ ತೆಲುಗು ಚಿತ್ರರಂಗದ ಖ್ಯಾತ ನಟ ರಾಮ್ ಚರಣ್ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಸಿನಿಮಾ ರಂಗದಲ್ಲಿ ಹೆಸರು ಮಾಡಿರುವ ಸ್ಟಾರ್.. ಖ್ಯಾತ ನಟ ಚಿರಂಜೀವಿ ಅವರ ಪುತ್ರನಾದರೂ ಅಪ್ಪನಂತೆ ನಕಲು ಮಾಡ್ದೇ ಸ್ವಂತ ಸಾಮರ್ಥ್ಯದಿಂದ ಬೆಳೆದ ನಟ. ಇತ್ತೀಚೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ.
ರಾಣಿ ಎಲಿಜಬೆತ್ ನಂತರ ಸಾಕುಪ್ರಾಣಿಯೊಂದಿಗೆ ತಮ್ಮ ಮೇಣದ ಪ್ರತಿಮೆಯನ್ನು ಹೊಂದಿರುವ ಎರಡನೇ ವ್ಯಕ್ತಿ ಮತ್ತು ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಇದು ಎಲ್ಲಾ ಅಭಿಮಾನಿಗಳಿಗೆ ಆಚರಣೆ ಮತ್ತು ಸಂತೋಷದ ಕ್ಷಣವಾಗಿದೆ. ಈ ಪ್ರತಿಮೆಯು ಮೇ 19 ರವರೆಗೆ ಲಂಡನ್ನಲ್ಲಿ ಸಾರ್ವಜನಿಕ ವೀಕ್ಷಣೆಗೆ ಲಭ್ಯವಿರುತ್ತದೆ ಮತ್ತು ನಂತರ ಅದನ್ನು ಸಿಂಗಾಪುರದ ಮೇಡಮ್ ಟುಸ್ಸಾಡ್ಸ್ಗೆ ಸ್ಥಳಾಂತರಿಸಲಾಗುತ್ತದೆ.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ