ಕೃತಿ ಹೊರಟಳು ದ. ಭಾರತಕ್ಕೆ
ಈ ಶೀರ್ಷಿಕೆ ಓದಿ ಕೃತಿಗೆ ದಕ್ಷಿಣದ ಯಾವುದೋ ಚಿತ್ರ ಸಿಕ್ಕಿತು ಅಂದುಕೊಳ್ಳಬೇಡಿ. ಅಸಲಿಗೆ ಕೃತಿ ಇತ್ತೀಚೆಗೆ ದಕ್ಷಿಣದ ಬಾಹುಬಲಿ ಅಂದ್ರೆ ಪ್ರಭಾಸ್ ಜೊತೆ ಗುಟ್ಟು ಗುಟ್ಟಾಗಿ ಕೈ ಕೈ ಹಿಡಿದು ದಕ್ಷಿಣದೆಲ್ಲೆಡೆ ಸುತ್ತಾಡುತ್ತಿದ್ದಾಳಂತೆ! ಈತನ `ಆದಿಪುರುಷುಡು’ ಚಿತ್ರದ ಸೆಟ್ ನಿಂದ ಹಿಡಿದು, ಲಂಚ್ ಡಿನ್ನರ್ ಡೇಟ್ಸ್ ಹೆಸರಲ್ಲಿ ಇಬ್ಬರೂ ಒಟ್ಟೊಟ್ಟಿಗೆ ಸುತ್ತಾಡುತ್ತಿದ್ದಾರೆ. ಈ ಕುರಿತಾಗಿ ವರದಿಗಾರರು ಕೇಳಿದರೆ ಇಬ್ಬರೂ ತುಟಿ ಪಿಟಕ್ಕೆನ್ನದೆ ಸುಮ್ಮನಿದ್ದಾರೆ. ಆದರೆ ವದಂತಿ ನಂಬುವುದಾದರೆ, ಇವರಿಬ್ಬರೂ ಮದುವೆ ಆಗಲಿದ್ದಾರಂತೆ! ಮತ್ತೊಂದು ಸುದ್ದಿ ಎಂದರೆ ಇವರ ಎಂಗೇಜ್ ಮೆಂಟ್ ಗಾಗಿ ಮಾಲ್ಡೀವ್ಸ್ ಹೋಟೆಲ್ ಸಹ ಬುಕ್ ಆಗಿದೆಯಂತೆ! ಈ ಸುದ್ದಿ ನಿಜ ಆಗುವುದಾದರೆ ಇನ್ನು ಕೃತಿಯನ್ನು ಹಿಡಿಯಲಾದೀತೇ?
ಖಾಸಗಿ ಜೀವನದಲ್ಲಿ ಅಸ್ತವ್ಯಸ್ತ ಜಾಹ್ನವಿ
ಹೀಗಂತ ವರದಿಗಾರರು ಎಲ್ಲೂ ಹೇಳುತ್ತಿಲ್ಲ, ಬದಲಿಗೆ ದಿ. ಶ್ರೀದೇವಿಯ ಮಗಳಾದ ಜಾಹ್ನವಿಯ ತಂದೆ ಬೋನಿ ಕಪೂರ್ ತಾವೇ ಹೇಳುತ್ತಿದ್ದಾರೆ. ಇತ್ತೀಚೆಗಷ್ಟೆ ಅವರು ಒಂದು ಕಡೆ ಮಾತನಾಡುತ್ತಿದ್ದಾಗ, ತಾವು ಮಗಳ ಬೆಡ್ ರೂಮಿಗೆ ಹೋದಾಗೆಲ್ಲ ಅವಳ ಪರ್ಸನಲ್ ಥಿಂಗ್ಸ್, ಬಟ್ಟೆಬರೆ ಎಲ್ಲವೂ ಅಲ್ಲಿ ಇಲ್ಲಿ ಹರಡಿ ಬಿದ್ದಿರುತ್ತವಂತೆ. ಬೋನೀಜಿ, ಇದಕ್ಕೇಕೆ ಚಿಂತೆ? ಜಾಹ್ನವಿ ಈಗಾಗಲೇ ಸ್ಟಾರ್ ಆಗಿದ್ದಾಳೆ, ಸದಾ ಸಿನಿಮಾ ಶೂಟಿಂಗ್ ಎಂದು ಬಿಝಿ ಆಗಿರುತ್ತಾಳೆ. ಹಾಗಿರುವಾಗ ಖಾಸಗಿ ಜೀವನದಲ್ಲಿ ಅವಳು ತುಸು ಅಸ್ತವ್ಯಸ್ತಳಾದರೆ ಇದರಲ್ಲಿ ಆಶ್ಚರ್ಯವೇನು ಬಂತು? ಪ್ರಾಜೆಕ್ಟ್ಸ್ ಜೊತೆ ಅವಳು ತನ್ನ ಫಿಗರ್ ಮೇಂಟೆನೆನ್ಸ್ ಕೂಡ ಚೆನ್ನಾಗಿ ಮಾಡುತ್ತಿರುವಾಗ ಇದಕ್ಕೆಲ್ಲ ಟೆನ್ಶನ್ ತೆಗೆದುಕೊಳ್ಳಬೇಕೇಕೆ?
ಎಲ್ಲಿದ್ದೀಯಮ್ಮ ಊರ್ವಶಿ?
ಕೆಲವು ದಿನಗಳ ಹಿಂದೆ ಕ್ರಿಕೆಟರ್ ಋಷ್ ಪಂತ್ ಕುರಿತಾದ ಒಂದು ಪೋಸ್ಟ್ ನಿಂದಾಗಿ ಊರ್ವಶಿ, ಒಂದಷ್ಟು ದಿನ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸ್ಟಂಟ್ ನಡೆಸಿದಳು. ನಂತರ ಋಷ್ ಗೆ ಆ್ಯಕ್ಸಿಡೆಂಟ್ ಆಯಿತು, ಅದಾದ ಮೇಲೆ ಊರ್ವಶಿ ಮತ್ತೆ FBನಿಂದ ಮಾಯವಾದಳು. ನಂತರ ಅವಳು ವಾಪಸ್ಸು ಮರಳಿದಾಗ, ಹಳದಿ ಸೀರೆಯಲ್ಲಿ ತನ್ನ ಬೆಡಗು ಬಿನ್ನಾಣ ಪ್ರದರ್ಶಿಸುತ್ತಾ ನುಲಿಯುತ್ತಿದ್ದಳು. ಈಗ ಅವಳ ಅಳಿದುಳಿದ ಫ್ಯಾನ್ಸ್ ಅವಳಿಂದ ತಿಳಿಯ ಬಯಸುವುದು ಎಂದರೆ, ಅವಳು ಹೀಗೆಯೇ ಸದಾ ಕಣ್ಣಾಮುಚ್ಚಾಲೆ ಆಡುತ್ತಿರುತ್ತಾಳೋ ಅಥವಾ ಬೆಳ್ಳಿ ತೆರೆಯಲ್ಲಿ ಮತ್ತೆ ತನ್ನ ಮುಖ ತೋರಿಸುತ್ತಾಳೋ ಇಲ್ಲವೋ ಎಂದು ವ್ಯಂಗ್ಯವಾಡುತ್ತಿದ್ದಾರೆ. ಪಾಪ, ಫ್ಯಾನ್ಸ್ ಮನಸ್ಸಿಗೆ ಬೇಸರ ಆಗಬಾರದು, ಆದರೂ ಒಂದು ವಿಷಯ ಹೇಳಲೇಬೇಕು. ಈ ಊರ್ವಶಿ ಮೇಡಂ ಬಳಿ ಯಾವುದೇ ಸಿನಿಮಾಗಳಿಲ್ಲ….. ನೊಣ ಹೊಡೆಯುವ ಬದಲು ಹೀಗೆ FB ಗಿಮಿಕ್ಸ್ ನಡೆಸುತ್ತಿದ್ದಾಳೆ, ಅವಳಿಗಾಗಿ ಕಾಯುತ್ತಾ ಕೂರಬೇಡಿ ಅಂತ!
ಸಿದ್ದು ವೆಡ್ಸ್ ಕಿಯಾರಾ
`ನಾವು ಬರೀ ಫ್ರೆಂಡ್ಸ್ ಅಷ್ಟೇ ಕಣ್ರೀ’ ಎಂದು ಆರಂಭವಾದ ಸಿದ್ದಾರ್ಥ್ ಕಿಯಾರಾರ ಪ್ರೇಮ ಪಯಣ ಇಂದು `ನಾವಿಬ್ಬರೂ ಪತಿ ಪತ್ನಿ’ ಎಂಬಲ್ಲಿಗೆ ಬಂದು ನಿಂತಿದೆ. ಈ ಪ್ರೇಮಿಗಳು ಮೊದಲಿನಿಂದಲೂ ತಮ್ಮ ಸಂಬಂಧವನ್ನು ಬಲು ಗುಟ್ಟು ಗುಟ್ಟಾಗಿಯೇ ಉಳಿಸಿಕೊಂಡಿದ್ದರು. ಕೆಮ್ಮು, ಪ್ರೇಮ ಕಾಮಗಳನ್ನು ಬಹಳ ದಿನ ಮುಚ್ಚಿಡಲಾಗದು ಅಂತಾರೆ. ಇವರ ಕಥೆಯೂ ಹೀಗೆ ಆಗಿ ಪರಿಣಯದಲ್ಲಿ ಸುಖಾಂತ್ಯ ಕಂಡಿತು. ರಾಜಾಸ್ಥಾನದಲ್ಲಿ ನಡೆದ ಇವರ ಅದ್ಧೂರಿ ಮದುವೆಗೆ ಬಾಲಿವುಡ್ ಮಂದಿ ಸಾಕ್ಷಿಯಾದರು. ಯಾವ ವರದಿಗಾರರು ಇವರ ಪ್ರೇಮಾಲಾಪನೆಯ ಸುದ್ದಿ ಹಂಚುತ್ತಿದ್ದರೋ, ಅವರಿಂದ ಮದುವೆ ಸುದ್ದಿ ಹಬ್ಬದಂತೆ ಭಲೇ ಎಚ್ಚರ ವಹಿಸಿದ್ದರು. ಮದುವೆಗೆ ಕೆಲವೇ ಮಂದಿ ಆಪ್ತೇಷ್ಟರು ಮಾತ್ರ ಬರುವಂತಾಗಿತ್ತು, ತಮ್ಮ ಅಭಿಮಾನಿಗಳಿಗಾಗಿ ಆನ್ ಲೈನ್ ನಲ್ಲಿ ಇವರು ತಮ್ಮ ಮದುವೆ ಕಾರ್ಯಕ್ರಮವನ್ನು ಲೈವ್ ಹಂಚಿಕೊಳ್ಳಬಾರದಿತ್ತೇ…?
ಫ್ಲಾಪ್ ಆದ ಮಾಧವನ್ ಜೋಕ್
ದಕ್ಷಿಣದ ಮಾಧವನ್ ಬಾಲಿವುಡ್ ನಲ್ಲಿ ಸ್ಟಾರ್ ಆದದ್ದು ಹಳೆ ಸುದ್ದಿ. ಈತ ಸದಾ ಗಂಭೀರ, ಅನಗತ್ಯ ಮಾತುಗಳಾಡುವುದಿಲ್ಲ. ಏನೋ ಒಮ್ಮೊಮ್ಮೆ ಜೋಕ್ ಮಾಡುವಾಗ…. ಇರಲಿ, ವಿಷಯ ಏನು ಅಂದ್ರೆ, ಒಂದು ಇವೆಂಟ್ ನಲ್ಲಿ ಮಾಧವನ್ ಯಾವುದೋ ಜೋಕ್ ಹೇಳುತ್ತಿದ್ದ. ಅದರಲ್ಲಿ ಶಾದಿ, ಮುಸ್ಲಿಂ ಎಂಬ ಪದಗಳು ಹೇಗೋ ನುಸುಳಿದ್ದವು. ಕೇಳಬೇಕೇ? ಒಂದು ಕೋಮಿನವರಿಗೆ ಕೆಟ್ಟ ಕೋಪ ಬಂದೇಬಿಟ್ಟಿತು. ಇದಾದ ನಂತರ ಈತನಿಗೆ ಮುಸ್ಲಿಂ ವಿರೋಧಿ ಎಂಬ ಲೇಬಲ್ ಹಚ್ಚಿದ್ದಲ್ಲದೆ, ಉತ್ತಮ ಕಲಾವಿದ ಒಳ್ಳೆಯ ವ್ಯಕ್ತಿ ಆಗಿರಲೇಬೇಕು ಎಂದೇನಿಲ್ಲ, ಎಂದು ಆಡಿಕೊಂಡರು. ಯಾವ ಕೋಮಿನವರೇ ಇರಲಿ, ಜೋಕ್ ನಲ್ಲಿ ಒಂದು ಪದ ನುಸುಳಿದ ತಕ್ಷಣ ಅದನ್ನು ಇಷ್ಟು ಸೀರಿಯಸ್ ಆಗಿ ತೆಗೆದುಕೊಳ್ಳಬೇಕೇ? ಇದುವರೆಗೂ ಸಿನಿಮಾ ಮಾತ್ರ ಧಾರ್ಮಿಕ ಕೋಪಕ್ಕೆ ಗುರಿಯಾಗಿತ್ತು, ಈಗ ಕಲಾವಿದರ ವಾಕ್ ಸ್ವಾತಂತ್ರ್ಯ ಸೆನ್ಸಾರ್ ಆಗಬೇಕೇ?
OTT ಡೆಬ್ಯೂ ಪಡೆದ ಶಾಹಿದ್
ವೆಬ್ ಸೀರೀಸ್ `ಫರ್ಝಿ’ಯ ಟ್ರೇಲರ್ ಬಂದ ನಂತರ, ಇದು ಬೇಗ OTT ಯಲ್ಲಿ ಪ್ರದರ್ಶಿತಗೊಳ್ಳಲಿ ಎಂದು ಜನ ಕಾಯುತ್ತಿದ್ದರು. ಶಾಹಿದ್ ಕಪೂರ್, ದಕ್ಷಿಣದ ವಿಜಯ್ ಸೇತುಪತಿ, ಕೆ.ಕೆ. ಮೆನನ್ ಮುಂತಾದ ಘಟಾನುಘಟಿಗಳ ಈ ಸೀರೀಸ್, ಕ್ರೈಂ ಆ್ಯಕ್ಷನ್ ಗಳ ಡಬnd ಡೋಸ್ ನೀಡಿ ಪ್ರೇಕ್ಷಕರ ಮನ ಗೆದ್ದಿದೆ! ಶಾಹಿದ್, ಸೇತುಪತಿ ಇಬ್ಬರೂ ಈ ಸರಣಿಯಿಂದ OTTಗೆ ಡೆಬ್ಯು ಪಡೆದಿದ್ದಾರೆ. ಇವರಿಬ್ಬರ ಫ್ಯಾನ್ ಫಾಲೋಯಿಂಗ್ ಸಹ ಜಬರ್ದಸ್ತಾಗಿದೆ, ಇದರ ಲಾಭ ಈ ಸೀರೀಸ್ ಗೆ ಖಂಡಿತಾ ದಕ್ಕಲಿದೆ. ಉಳಿದ ವಿವರಗಳನ್ನು ಓದುಗರು OTT ನೋಡಿ ಎಂಜಾಯ್ ಮಾಡಿ!
ರಿಷಭ್ ತರಲಿದ್ದಾರೆ ಕಾಂತಾರ ಪ್ರೀಕ್ವೆಲ್
ರಿಷಭ್ ಶೆಟ್ಟಿಯವರ `ಕಾಂತಾರ’ ದಕ್ಷಿಣದಾದ್ಯಂತ ಪ್ರಚಂಡ ಗದ್ದಲ ಎಬ್ಬಿಸಿದ್ದಲ್ಲದೆ, ಹಿಂದಿ ವರ್ಷನ್ ಮೂಲಕ ಬಾಲಿವುಡ್ ಬೆಚ್ಚಿ ಬೀಳುವಂತೆ ಮಾಡಿದಿ. ಇದರಿಂದಾಗಿ ಎಷ್ಟೋ ಹಿಂದಿ ಚಿತ್ರಗಳು ಮಖಾಡೆ ಮಲಗಿದವು. ದೇಶಾದ್ಯಂತ ಪ್ರಚಂಡ ಯಶಸ್ಸು ಗಳಿಸಿದ ಈ ಚಿತ್ರದ ಸೀಕ್ವೆಲ್ ಬರಲಿ ಎಂದು ಅಭಿಮಾನಿಗಳು ತುದಿಗಾಲಲ್ಲಿ ಕಾತರಿಸಿದ್ದರು. ಆದರೆ ಎಲ್ಲರೂ ಆಶ್ಚರ್ಯಪಡುವಂತೆ ರಿಷಭ್ ಇದರ ಪಾರ್ಟ್ ಬದಲು ಪ್ರೀಕ್ವೆಲ್ ಅಂದ್ರೆ ಪಾರ್ಟ್ ನೀಡುವುದಾಗಿ ಘೋಷಿಸಿದ್ದಾರೆ! ನಿಜಕ್ಕೂ ಇದು ಮಾಸ್ಟರ್ ಸ್ಟ್ರೋಕ್ ಎನ್ನುತ್ತಿದೆ ಬಾಲಿವುಡ್ ನ ಬಾಕ್ಸ್ ಆಫೀಸ್ ವಿಭಾಗ. ಇಂಥ ಚಾಣಾಕ್ಷತನದಿಂದಾಗಿಯೇ ದಕ್ಷಿಣದ ಚಿತ್ರಗಳು ಇಡೀ ದೇಶಾದ್ಯಂತ ಗಟ್ಟಿಯಾಗಿ ತಳರುತ್ತಿವೆ. ಅತಿ ದುಬಾರಿ ಬಜೆಟ್, ಹೈಫೈ ಆ್ಯಕ್ಷನ್, ಕೋಟ್ಯಂತರ ರೂ.ಗಳ ಸ್ಟಾರ್ ಕಾಸ್ಟ್ ಯಾ ವೈಭವೋಪೇತ ಚಿತ್ರೀಕರಣಕ್ಕಿಂತ, ಚಿತ್ರ ಸರಳವಾಗಿದ್ದರೂ ಜನಮಾನಸದಲ್ಲಿ ಉಳಿಯುವಂತಿರಬೇಕು ಎಂದು ರಿಷಭ್ ನಿರೂಪಿಸಿದ್ದಾರೆ. ಢೋಂಗಿ ಆಡಂಬರಕ್ಕಿಂತ ಸತ್ವಯುತ ಕಥೆ ಎಲ್ಲಾ ಕಾಲಕ್ಕೂ ಸಲ್ಲುತ್ತದೆ ಎಂದು ಸಾರಿದೆ `ಕಾಂತಾರ.’
ನ್ಯಾಸಾಳ ಸ್ಟಂಟ್ ನಲ್ಲಿ ಏನಿದು ಹೊಸ ವಿನ್ಯಾಸ?
ದುಬೈನಲ್ಲಿ ಗ್ರಾಂಡ್ ಪಾರ್ಟಿ ಇರಲಿ, ಮುಂಬೈನಲ್ಲಿ ಲೇಟ್ ನೈಟ್ ವಾಕ್, ನ್ಯಾಸಾ ದೇವಗನ್ ಎಲ್ಲಾ ಕಡೆ ಮಿಂಚೇ ಮಿಂಚುತ್ತಾಳೆ. ಸಿಂಘಂ ಅಜಯ್ ದೇವಗನ್ ರ ಫ್ಯಾನ್ಸ್ ಇದೀಗ ಈತನನ್ನು ನಿಮ್ಮ ಮಗಳು ಯಾವಾಗ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಳ್ಳುತ್ತಾಳೆಂದು ಕೇಳುತ್ತಲೇ ಇದ್ದಾರೆ. ಅಂದಹಾಗೆ ನ್ಯಾಸಾ ತಾಯಿ ತಂದೆಯರಿಂದ ರಕ್ತಗತವಾಗಿ ಅಭಿನಯ ಕಲೆ ಪಡೆದು, ಸ್ವಪ್ರತಿಭೆಯಿಂದ ಸಿನಿಮಾದಲ್ಲಿ ಮಿಂಚಲು ಎಲ್ಲಾ ರೀತಿಯಿಂದಲೂ ಸಿದ್ಧಳಿದ್ದಾಳೆ. ಆದರೆ ಅವಳಿಗೆ ಸಿನಿಮಾದಲ್ಲಿ ವಿಶೇಷ ಅಭಿರುಚಿ ಇದ್ದಂತಿಲ್ಲ. ಅದುವೇ ನಿಜವಾದರೆ, ಸ್ಟಾರ್ ಕಿಡ್ಸ್ ಮಾತ್ರವೇ ಸಿನಿಮಾದಲ್ಲಿ ಉಳಿಯುತ್ತಾರೆ ಎನ್ನುವವರ ಬಾಯಿ ತೆಪ್ಪಗಾದೀತು.