ಅಮೆರಿಕಾದ ಹಿಂಡನ್ ಬರ್ಗ್ ರಿಸರ್ಚ್ ನ ರಿಪೋರ್ಟ್ ನಂತರ, ಯಾವ ತರಹ ವಿಶ್ವಾದ್ಯಂತದ ಇನ್ ವೆಸ್ಟರ್ನ್ ಅಡಾನಿ ಗ್ರೂಪ್ ನ ಕಂಪನಿಗಳಿಂದ ಹಣ ಹಿಂಪಡೆದರೋ, ಅದರಿಂದ ಈ ರಿಪೋರ್ಟ್ ನಲ್ಲಿ ಎಷ್ಟು ದಮ್ ಇದೆ ಅಂತ ನಿರೂಪಿತವಾಗಿದೆ. ಗೌತಂ ಅಡಾನಿ ಎಷ್ಟೋ ಕೋರ್ಟ್ ಕೇಸುಗಳ ಧಮಕಿ ನೀಡಿದರೂ ಏನೂ ನಡೆಯದು. ಅಡಾನಿಯ ಹೊಸ 20 ಸಾವಿರ ಕೋಟಿಗಳ ಷೇರು ವಹಿವಾಟಿನ ಮಾರಾಟ ಮೊದಲ ದಿನವೇ ನೆಲಕಚ್ಚಿತು. ಏಕೆಂದರೆ ಷೇರು 3,177 ನಿಂದ 3,276 ಪ್ರತಿ 100 ರೂ.ಗಳ ಷೇರಿಗೆ ಅನ್ವಯಿಸುವಂತೆ ಮಾರಾಟ ಮಾಡಲಾಯಿತು, ಮಾರ್ಕೆಟ್ ನಲ್ಲಿ ಅದು 2,762 ರೂ.ಗಳದ್ದಾಗಿತ್ತು.
ಒಂದು ಉದ್ಯಮದ ಹುಟ್ಟು ಸಾವಿನಿಂದ ಇಡೀ ದೇಶದ ಆರ್ಥಿಕ ಸ್ಥಿತಿಗೆ ದೊಡ್ಡ ವ್ಯತ್ಯಾಸ ಆಗಬಾರದು. ಆದರೆ ಇಲ್ಲಿನ ಇಕ್ಕಟ್ಟು ಎಂದರೆ, ಅಡಾನಿ ಗ್ರೂಪ್ ನಲ್ಲಿ ಜನತೆಯ ಹಣ ಇತ್ಯಾದಿಗಳಲ್ಲಿ ಹೂಡಿಕೆಯಾಗಿದೆ. ಮ್ಯೂಚುವಲ್ ಫಂಡ್ಸ್ ಸಹ ಇದರಲ್ಲಿ ಕೋಟ್ಯಂತರ ಹೂಡಿವೆ. ಸಾಲ ನೀಡುವ ಕಂಪನಿ, ಸಾಮಾನ್ಯವಾಗಿ ಷೇರು ಮಾರುಕಟ್ಟೆಯಲ್ಲಿ ಹಣ ಅಡವಿರಿಸಿ, ನೀಡುತ್ತದೆ. ಈ ಅಡಾನಿ ಕಂಪನಿಯಲ್ಲಂತೂ ಹೆಚ್ಚೂಕಡಿಮೆ 1 ಲಕ್ಷ ಕೋಟಿಗಳ (1,00,00,00,00,000) ಹೂಡಿಕೆಯಾಗಿದೆ.
ಶ್ರೀಮಂತರಲ್ಲಿ ಕೆಲವರಿಗೆ ಹಾನಿ ಆಗಬಹುದು, ಆದರೆ ಇದು ಅಡಾನಿಯಂಥ ಕಂಪನಿಯಿಂದ ಗಳಿಸಿದ್ದ ಲಾಭದ ಮುಂದೆ ಏನೇನೂ ಅಲ್ಲ. ಅಸಲಿ ನಷ್ಟ ಸಾಮಾನ್ಯ ಜನತೆಯದು. ಇಂಥ ಮಧ್ಯಮ ವರ್ಗದವರು ತಮ್ಮ 10-20 ಸಾವಿರ, 4-5 ಲಕ್ಷ ಹೂಡಿದವರು ಮೂರ್ಛೆ ಹೋಗುವಂತಾಗಿದೆ.
ಮತ್ತೊಂದು ಭಾರಿ ಹಾನಿ ಎಂದರೆ, ಬಿಜೆಪಿ ಸರ್ಕಾರ ಗೌತಂ ಅಡಾನಿಯನ್ನು ಕರೆಸಿ, 2014ರ ಚುನಾವಣೆಯಲ್ಲಿ ಹಣಕಾಸು, ವಿಮಾನಗಳ ಹಾರಾಟದ ವ್ಯವಸ್ಥೆಯ ಬದಲಿಗೆ ತುಂಬಿಸಿಕೊಟ್ಟಿದ್ದರ ಪ್ರಾಜೆಕ್ಟ್ ಗಳಿಂದಾಗಿಯೂ ಖಂಡಿತಾ ಹಾನಿ ಆಗುತ್ತದೆ. ಇದರಿಂದ ಎಷ್ಟೋ ಪೋರ್ಟ್, ರೈಲ್ವೆ ಸ್ಟೇಷನ್, ಏರ್ ಪೋರ್ಟ್ ಗಳು ಅಪಾಯಕ್ಕೆ ಸಿಲುಕಿವೆ.
ಹಿಂಡನ್ ಬರ್ಗ್ ರಿಪೋರ್ಟ್ ಅಡಾನಿ ಗ್ರೂಪ್ ನ್ನು ಕೇವಲ ಮೇಲು ಮೇಲಷ್ಟೇ ಸ್ಪರ್ಶಿಸಿ ಇಷ್ಟು ಸಹಸ್ರಾರು ಕೋಟ್ಯಂತರ ಹಾನಿಯ ವರದಿ ನೀಡಿವೆ. ಈಗ ವಿಶ್ವವಿಡೀ ಪೇಪರ್ ಗಳ ಹಣಕಾಸು ತಜ್ಞರು ಹುಡುಕಾಟಕ್ಕೆ ತೊಡಗಿದ್ದಾರೆ. ಏಕೆಂದರೆ ಅಡಾನಿ ಗ್ರೂಪ್ ಹಲವಾರು ದೇಶಗಳಲ್ಲಿ ದಂಧೆ ಹರಡಿದೆ. ಕೇಂದ್ರ ಸರ್ಕಾರಕ್ಕೆ ಅಲ್ಲೆಲ್ಲ ಹಿಂದೂ ಅಜೆಂಡಾಗಳ ಭಯಭೀತಿ ಇರಲೇ ಇಲ್ಲ! ಹಿಂಡನ್ ಬರ್ಗ್ ವಿಶೇಷವಾಗಿ ಹೇಳಿದ್ದೆಂದರೆ, ಭಾರತದಲ್ಲಿ ಅಡಾನಿಯ ಮುಖವಾಡ ಕಳಚುವ ಪ್ರಕ್ರಿಯೆಯಲ್ಲಿ ತೊಡಗಿದ್ದ ಪರಾಂಜಯ್ ಗುಹಾ ಟಾಕುರ್, ಗುಜರಾತ್ ನ ಒಬ್ಬ ಟ್ಯೂಬರ್ ನ್ನು ಕೋರ್ಟಿಗೆಳೆದು ಜೇಲಿಗೆ ಹಾಕಿಸುವ ಬೆದರಿಕೆ ಒಡ್ಡಿತು.
ವಿದೇಶೀ ಜರ್ನಲಿಸ್ಟ್ ಆಡಿಟರ್ ಶಾಹ್ ಧನಧಾರಿ ಯಾರಂತಲ್ಲ, ಅವರ ಬಳಿ ಒಟ್ಟು 11 ಜನ ಕೆಲಸದವರಿದ್ದು, 32,000 ರೂ.ಗಳ ಬಾಡಿಗೆ ಕೊಡುತ್ತಾ, ಅಡಾನಿ ಟೋಟಲ್ ಗ್ಯಾಸ್ ಗೆ ಕ್ಲೀನ್ ಚಿಟ್ ನೀಡುತ್ತಾ, ಆ ಕಂಪನಿಯ ಮಾರ್ಕೆಟ್ ವ್ಯಾಲ್ಯೂ 42,75,56,70,00,000ಗಿಂತಲೂ ಹೆಚ್ಚು. ಈ ಅಖಂಡ ಹಣ ಈ ರಿಪೋರ್ಟ್ ನಂತರ ಅಪಾಯಕ್ಕೆ ಸಿಲುಕಲಿದೆ. ಈ ಮೊತ್ತದ ಅರ್ಥ, ಸರ್ಕಾರಿ ಬ್ಯಾಂಕುಗಳು ಅಥವಾ ಜನತೆಯ ಹಣ ಎಲ್ಲೋ ಹೂಡಿಕೆಯಾಗಿದೆ ಅಂತ. ಇದು ಮುಳುಗಿ ಹೋದರೆ, ಯಾವ ಯಾವ ದೊಡ್ಡ ಕುಳಗಳು ಎಲ್ಲೆಲ್ಲಿ ಕೊಚ್ಚಿ ಹೋಗಲಿವೆಯೋ…. ಗೊತ್ತಿಲ್ಲ. ಆದರೆ ಯಾರು ಸಕಾಲಕ್ಕೆ ಇಂಥ ನೀರಿನಿಂದ ಮುತ್ತು ಆಯ್ದುಕೊಂಡರೋ ಅವರು ಬದುಕುಳಿದರು.
ಯಾರ ಹಣ ಮುಳುಗಿತೋ ಅವರು ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ದೇಶದಲ್ಲಿ ಎಲ್ಲೆಲ್ಲೂ ಗುಡಿ ಗೋಪುರಗಳು ಏಳುತ್ತಿವೆ, ಹಣದ ಹೊಳೆ ಹರಿಯುತ್ತಿದ್ದಂತೆ ಎಲ್ಲರ ಹಣ ವಾಪಸ್ಸು ಬರಲೂಬಹುದು. ಮುಸಲ್ಮಾನರ ಗುಡಿಸಲು ಸರಿ ಆಗಲೂಬಹುದು. ಮತ್ತಿನ್ನೇನು ಚಿಂತೆ? ಲಕ್ಷ್ಮಿ ಮಹಾ ಚಂಚಲೆ! ಜಾತಿ, ಧರ್ಮ, ದಾನದಕ್ಷಿಣೆ, ಸೇವೆ, ರೀತಿ ರಿವಾಜು, ಸಂಪ್ರದಾಯ, ಚಾರ್ ಧಾಮ್ ತೀರ್ಥಯಾತ್ರೆ, ಧಾರ್ಮಿಕ ಕಾರಿಡಾರ್…. ಇತ್ಯಾದಿ ಎಲ್ಲರನ್ನೂ ಉದ್ಧರಿಸುತ್ತವೆ, ಅಡಾನಿಯಿಂದ ಆದ ಅಲ್ಲೋಲ ಕಲ್ಲೋಲಗಳನ್ನೂ ಶಾಂತಗೊಳಿಸುತ್ತವೆ.
ಧರ್ಮದ ಜಪಮಾಲೆ ಹಿಡಿದ ಹೆಂಗಸರು
ಆಫ್ಘಾನಿಸ್ತಾನದ ಹೊಸ ಶಾಸಕರು ಹೆಣ್ಣುಮಕ್ಕಳು ವಿದ್ಯೆ ಕಲಿತು ಏನೂ ಆಗಬೇಕಿಲ್ಲ ಎಂಬ ಘೋಷಣೆ ಕೇಳಿ ಯಾರೂ ಆಶ್ಚರ್ಯಪಡಬೇಕಿಲ್ಲ. ಇರಾನ್, ಸೌದಿ ಅರೇಬಿಯಾ, ಕತಾರ್, ಇರಾಕ್, ಲಿಬಿಯಾದಂಥ ದೇಶಗಳ ಕೈಲಿ ಈ ಅಧಿಕಾರವಿದ್ದಿದ್ದರೆ, ಯಾವತ್ತೋ ಅವರು ಹೀಗೆ ಮಾಡುತ್ತಿದ್ದರು. ಆದರೆ ಈ ತೈಲ ರಾಷ್ಟ್ರಗಳು ಪಾಶ್ಚಾತ್ಯ ದೇಶದವರಿಗೆ ಕೋಪ ಬರಬಾರದು ಎಂದು ತಂತಮ್ಮ ತವರನ್ನು ಅರ್ಧಂಬರ್ಧ ಇಸ್ಲಾಮಿಕ್ ದೇಶಗಳಾಗಿಸಿಕೊಂಡು ಹೆಂಗಸರಿಗೆ ತುಸು ರಿಲೀಫ್ ನೀಡಿದರು.
ಆಫ್ಘಾನಿಸ್ತಾನದ ಬಳಿ ಇದೀಗ ತೈಲ ಇಲ್ಲ ಅಥವಾ ರಷ್ಯಾ ಚೀನಾ ಸೇನಾಪಡೆಗೆ ಇದರ ಅಗತ್ಯ ಇಲ್ಲ. ಹೀಗಾಗಿ ಇದು ಪೂರ್ಣತಃ ಇಸ್ಲಾಮಿಕ್ ದೇಶವಾಗಿದೆ. ಇಸ್ಲಾಂ ಅಥವಾ ಯಾವುದೇ ಧರ್ಮದ ಮೂಲಮಂತ್ರ, ಹೆಣ್ಣು ಶಿಕ್ಷಣ ಪಡೆಯಬಾರದು. ಕೇವಲ ಮಕ್ಕಳು ಹೆರುವ ಯಂತ್ರವಾಗಿ, ಸದಾ ಧರ್ಮದ ಸೇವೆ ಮಾಡುತ್ತಿರಬೇಕು. ಕ್ರೈಸ್ತರ ಪ್ರಪಂಚದಲ್ಲೂ ಅನಾದಿ ಕಾಲದಿಂದ ಇದೇ ನಡೆದು ಬಂದಿದೆ. ಅಲ್ಲಿ ಪ್ರಿಂಟಿಂಗ್ ಪ್ರೆಸ್ ಬಂದ ನಂತರ ಹೊಸ ವಿಚಾರಧಾರೆ ಹೊರಬಂದಿತು. ಅದರಿಂದ ಟೆಕ್ನಾಲಜಿ ಬೆಳೆಯಿತು, ಜೀವನಶೈಲಿ ಸುಧಾರಿಸಿತು.
ಆಫ್ಘಾನಿಸ್ತಾನಕ್ಕಂತೂ ಏನೂ ಬೇಡ. ಅದು ತನ್ನ ಪರ್ವತ ಪ್ರದೇಶದ ಫಸಲು, ಕುರಿಗಳು, ಇಬಾದತ್, ಕೊಲೆ ರಕ್ತದ ಪ್ರವಾಹದಲ್ಲೇ ಖುಷಿಯಾಗಿದೆ. ತಾಲಿಬಾನಿ ಫೈಟರ್ಸ್ ಗೆ ಅಲ್ಲಿ ಓದುಬರಹ ಬೇಕಿಲ್ಲ, ಪ್ರಗತಿ ಮೊದಲೇ ಇಲ್ಲ. ಹತ್ಯಾಕಾಂಡ ಒಂದೇ ಅವರ ಗುರಿ. ಹೇಗೋ ಮಾಡಿ ಆಧುನಿಕ ಮಾರಕಾಸ್ತ್ರಗಳ ಬಳಕೆ ಒಂದು ಕಲಿತಿದ್ದಾರೆ. ಅವರಿಗೆ ಬೇಕಾಗುವಷ್ಟು ಪೆಟ್ರೋಲ್, ಬಂದೂಕು, ತೋಪು, ಗುಂಡು, ಸಿಡಿಮದ್ದು, ಟ್ಯಾಂಕರ್ ಗಳನ್ನು ತಮ್ಮ ತೋಟದಲ್ಲಿ ಬೆಳೆದ ಮಾದಕ ದ್ರವ್ಯ ಪದಾರ್ಥ, ಕಾರ್ಪೆಟ್ಮಾರಾಟಗಳಿಂದ ಗಳಿಸುತ್ತಿದೆ. ಅವರು ತಮ್ಮ ಕಚ್ಚಾ ರಸ್ತೆ, ಅರೆಬೆರೆ ಮನೆ, ಕೈಯಲ್ಲೇ ನೇಯ್ದ ಬಟ್ಟೆಗಳಿಂದಲೇ ಸುಖವಾಗಿದ್ದಾರೆ. ಪಾಶ್ಚಿಮಾತ್ಯ ರಾಷ್ಟ್ರಗಳು, ರಷ್ಯಾ ಅಥವಾ ಯಾರೂ ಇವರಿಗೆ ತಿಳಿಹೇಳಲಾರರು.
ಇಂದು ಇಲ್ಲಿ ಹೆಣ್ಣಿನ ಮೇಲೆ ನಡೆಯುತ್ತಿರುವ ಶೋಷಣೆಗೆ ಅಲ್ಲಿನ ಹೆಂಗಸರೇ ಕಾರಣ ಎಂಬುದನ್ನು ಮರೆಯಬಾರದು. ಅಲ್ಲಿನ ತಾಯಂದಿರು ತಮ್ಮ ಗಂಡು ಮಕ್ಕಳನ್ನು ಸಾಯಲು, ಸಾಯಿಸಲು ಮೊದಲಿನಿಂದಲೇ ತರಬೇತಿ ನೀಡುತ್ತಾರೆ. ಈ ಹುಡುಗರ ಸಾವು ಅವರಿಗೆ ಅಲ್ಲಾನ ಇಚ್ಛೆ. ಇವರಿಗೆ ಅನೇಕ ಮಕ್ಕಳಿರುತ್ತವೆ, 5-6 ಸತ್ತರೆ ದುಃಖವೇನು? ತಮ್ಮ ಹೆಣ್ಣುಮಕ್ಕಳ ಮೇಲೆ ಕಂದಾಚಾರದ ಹೊರೆ ಹೊರಿಸುತ್ತಾರೆ. ಅವರ ಸ್ವಾತಂತ್ರ್ಯ ಕಸಿಯುತ್ತಾರೆ, ತಿರುಗಿ ಬಿದ್ದವರ ಕಾಲು ಮುರಿಯುತ್ತಾರೆ. ತಾಲಿಬಾನಿ ತರುಣರಿಗೆ ಇವರ ಮೂಢನಂಬಿಕೆಯೇ ಮೂಲಾಧಾರ.
ಆಫ್ಘನ್ ಹೆಂಗಸರ ನೆರವಿನಿಂದ ಆ ದೇಶದ ಎಕಾನಮಿ ನಡೆಸುತ್ತದೆ. ಅವರು ಕಾರ್ಪೆಟ್ ಹೆಣೆಯುತ್ತಾರೆ, ಫಸಲು ನೋಡಿಕೊಳ್ಳುತ್ತಾರೆ, ಜಾನುವಾರು ಸಂರಕ್ಷಿಸುತ್ತಾರೆ. ಗುಲಾಮರಾಗಿದ್ದರೂ ಅವರು ಇತರ ಹೆಂಗಸರನ್ನು ಗುಲಾಮಗಿರಿಗೆ ದೂಡುತ್ತಾರೆ. ಹೆಣ್ಣುಮಕ್ಕಳು ಶಾಲೆಗೆ ಹೋಗಲೇಬಾರದು ಎಂಬ ನಿಲುವಿನ ಹಿಂದೆ ಇವರದೇ ಮೇಲುಗೈ. ಅವರು ನಿಜವಾಗಿಯೂ ಸಿಡಿದು ಬಿದ್ದಿದ್ದರೆ, ತಾಲಿಬಾನಿ ಗಂಡಸರು ಎಂದೋ ತೆಪ್ಪಗಾಗುತ್ತಿದ್ದರು.
ಅಲ್ಲಿ ಹೆಣ್ಣನ್ನು ನಡುಹಗಲೇ ಎಲ್ಲರ ಮುಂದೆ ಕೊಂದಾಗ, ಹೆಂಗಸರು ಚಪ್ಪಾಳೆ ತಟ್ಟುತ್ತಾರೆ. ನಡೆಯುತ್ತಿರುವ ಕಂದಾಚಾರದ ವ್ಯವಸ್ಥೆ ವಿರುದ್ಧ ಯಾರು ದನಿ ಎತ್ತಿದರೂ, ಆಡಳಿತ ವಿರೋಧಿಸಿದರೂ ಇವರುಗಳು ಅವರನ್ನು ಬಗ್ಗು ಬಡಿಯುತ್ತಾರೆ. ಪ್ರತಿ ಪ್ರೌಢ, ಮುದಿ ಹೆಂಗಸು ಯೌವನಕ್ಕೆ ಕಾಲಿಟ್ಟ ಹೆಣ್ಣನ್ನು ಅಕಾಲಿಕ ವೃದ್ಧಾಪ್ಯಕ್ಕೆ ಬಲವಂತವಾಗಿ ದೂಡುತ್ತಾಳೆ.
ಭಾರತದಲ್ಲೂ ಸನಾತನ ಕಾಲದಿಂದ ಇದೇ ಪದ್ಧತಿ ಇದೆ. ಹುಡುಗಿಯರು ಏನನ್ನು ಧರಿಸಬೇಕು, ತಿನ್ನಬೇಕು, ಎಲ್ಲೆಲ್ಲಿ ಸುತ್ತಾಡಬೇಕು, ಯಾರನ್ನು ಫ್ರೆಂಡ್ಸ್ ಆಗಿಸಿಕೊಳ್ಳಬೇಕು, ಮದುವೆಗೆ ಯಾರನ್ನು ಆರಿಸಬೇಕು, ಸತಿಯಾಗಿ ಹೇಗಿರಬೇಕು…. ಎಲ್ಲವನ್ನೂ ಹೆಂಗಸರೇ ನಿರ್ಧರಿಸುತ್ತಾರೆ. ಹೀಗೆ ಸದಾ ಧರ್ಮದ ಜಪಮಾಲೆ ಹಿಡಿದ ಹೆಂಗಸರು, ಹಿಂದೂ ರಾಷ್ಟ್ರದ ಹೆಸರಲ್ಲಿ ವೋಟು ಹಾಕುತ್ತಾರೆ.
ಇದರ ಕೊನೆಯ ಹಂತ ಆಫ್ಘಾನಿಸ್ತಾನದಂತೆಯೇ ಆಗುತ್ತದೆ. ಹಿಂದೂ ರಾಷ್ಟ್ರದ ಅಥರ್ ಮುಸ್ಲಿಂಯುಕ್ತ ದೇಶವಲ್ಲ, ಕೇವಲ ಪಂಡಪುರೋಹಿತರ ದೇಶವಾಗಿದ್ದು, ನೆನೆದಾಗ ಹೆಣ್ಣನ್ನು ಓಡಿಸಿಕೊಂಡು ಹೋಗಲಾಗುತ್ತದೆ. ನೆನೆದಾಗ ಅವಳ ಕಿವಿ ಮೂಗು ಕತ್ತರಿಸಲಾಗುತ್ತದೆ, ನೆನೆದಾಗ ಅವಳ ಮೇಲೆ ಆರೋಪ ಹೊರಿಸಿ, ಮನ ಬಂದಾಗ ರೇಪ್ ಮಾಡಲಾಗುತ್ತದೆ, ನೆನೆದಾಗ ತುಂಡರಿಸಲಾಗುತ್ತದೆ, ಮನಬಂಬಂತೆ ತುಳಿದು ಮಣ್ಣಲ್ಲಿ ಮಣ್ಣಾಗಿಸಲಾಗುತ್ತದೆ. ತಾಲಿಬಾನಿ ಅಂದ್ರೆ ಕಪ್ಪು ಬಣ್ಣದಲ್ಲಿರುತ್ತಾರೆ ಅಂತಲ್ಲ, ಅವರು ಬೆಳ್ಳಗೆ, ಕಾವಿಧಾರಿಗಳೂ ಆಗಿರಬಹುದು.
ಎಲ್ಲರೂ ಸಾಧಾರಣ ಮನುಷ್ಯರೇ….
ಭಾರತೀಯ ಮೂಲದ ಹಾಗೂ ಭಾರತೀಯ ಅಳಿಯನಾಗಿದ್ದುಕೊಂಡೂ ಬ್ರಿಟನ್ನಿನ ಪ್ರಧಾನಮಂತ್ರಿ ಋಷಿ ಸುನಕ್, ಭಾರತೀಯರು ಇಂಗ್ಲೆಂಡ್ ಪ್ರವೇಶಿಸದಂತೆ ತಡೆ ಒಡ್ಡುತ್ತಿದ್ದಾರೆ. ಇಂಗ್ಲೆಂಡಿನ ಕಂದಾಚಾರಿಗಳು ಇದೀಗ ರೇಸ್, ರಿಲಿಜನ್, ಕಲರ್ ಗಳಿಂದ ಮಹಾನ್ ಚಿಂತೆಗೊಳಗಾಗಿದ್ದಾರೆ…. ನಮ್ಮ ಪ್ರಧಾನ ಮಂತ್ರಿ, ಗೃಹಮಂತ್ರಿ, ಬೀದಿ ಗಲ್ಲಿಯ ಪೂಜಾರಿಯ ತರಹ! ಅವರಿಗೆ ಇಷ್ಟರಲ್ಲೇ ಗ್ರೇಟ್ ಬ್ರಿಟನ್ನಿನಲ್ಲಿ ಕೇವಲ ಮೂಲ ಬಿಳಿಯರು ಮಾತ್ರವೇ ಇರುತ್ತಾರೆ ಎಂಬುದೊಂದು ನಂಬಿಕೆ. ಭಾರತದಲ್ಲಿರುವಂತೆಯೇ ಅಲ್ಲೂ ಸಹ ಮೆಸೇಜ್ ಗಳ ಮೂಲಕ ಬಿಳಿಯರೇ ಶ್ರೇಷ್ಠರು, ಕರಿಯರು ಅಥವಾ ಇನ್ನಾರೂ ಅಲ್ಲ ಎಂದು ಪ್ರೇರೇಪಿಸುತ್ತಿದ್ದಾರೆ.
ಭಾರತೀಯ ಪ್ರಧಾನಮಂತ್ರಿ ಅವರೊಂದಿಗೆ ಹಾರ್ದಿಕ ಮಾತುಕಥೆ, ಅಲ್ಲದೇ ಮತ್ತೇನೂ ಮಾಡಲಾರರು. ಅಮೆರಿಕಾದ ಭಾರತೀಯ ರಕ್ತವುಳ್ಳ ಕಮಲಾ ಹ್ಯಾರಿಸ್ ಹಾಗೂ ಬ್ರಿಟನ್ನಿನ ಪೂರ್ತಿ ರಕ್ತವುಳ್ಳ ಋಷಿ ಸುನಕ್ ಕುರಿತಾಗಿ ತಂಡದವರು ಹಾಡಿ ಹೊಗಳಿದ್ದೇ ಹೊಗಳಿದ್ದು! ಇದರಿಂದ ನಮ್ಮ ಪಕ್ಷ ಬೆಳಗೀತು ಎಂದು ಭಾವಿಸಿದರು, ಆದರೆ ಆ ಮಹನೀಯರು ಇವರನ್ನು ಕ್ಯಾರೇ ಎನ್ನಲಿಲ್ಲ.
ಭಾರತೀಯರು ಬ್ರಿಟನ್ನಿನ ವೀಸಾ ಪಡೆಯಲು ತಿಂಗಳುಗಟ್ಟಲೇ ಸರತಿಯಲ್ಲಿ ನಿಲ್ಲುವುದಿದ್ದೇ ಇದೆ, ಸಾವಿರಾರು ಅಪಾಯಕಾರಿ ಇಂಗ್ಲಿಷ್ ಚ್ಯಾನೆಲ್ಸ್, ಸಣ್ಣಪುಟ್ಟ ಮಾತಿಗೂ ಯೂರೋಪಿನ ಮುಖ್ಯವಾಹಿನಿಯಿಂದ ಪಾರಾಗಿ, ಅಲ್ಲಿಗೆ ಹೋಗಿ ತಮ್ಮ ದೇಶದ ಸರ್ಕಾರದಿಂದಲೇ ಅಪಾಯ ಎಂದು ಹೇಳಿಕೊಳ್ಳಲು ಅವಕಾಶವಾಗಿದೆ. ವಿಶ್ವವಿಡೀ ಭಾರತೀಯರು ಕಾನೂನುಬಾಹಿರವಾಗಿ ಹರಡಿದ್ದು, ಅವರೆಲ್ಲ ಹೇಳುವುದು ತಮ್ಮ ಮೂಲ ದೇಶದಲ್ಲಿ ಭೇದಭಾವ, ಹಿಂಸೆ, ಸರ್ಕಾರಿ ತಾಲಿಬಾನಿಸಂನಿಂದ ತ್ರಸ್ತರೆಂದೇ ಹೇಳುತ್ತಾರೆ, ತಮಗೆ ಶರಣಾಗತಿ ನೀಡಿ ಎಂದು ಬೇಡಿಕೊಳ್ಳುತ್ತಾರೆ.
ಇಂಥ ಕಾನೂನು ಬಹಳಷ್ಟು ಯೂರೋಪಿನ ದೇಶಗಳಲ್ಲಿವೆ. ಯಾರೇ ಶರಣಾಗತರು ಬರಲಿ, ಅವರ ಮಾತನ್ನು ಆಲಿಸದೇ ಓಡಿಸುವವರಲ್ಲ. ಈ ಕಾರಣದಿಂದಾಗಿ ಅಲ್ಲಿಗೆ ಹೋದ ಭಾರತೀಯರು, ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಭಾರತದಲ್ಲಿ ನಡೆಸುತ್ತಿರುವ ಅನ್ಯಾಯಗಳ ಬಗ್ಗೆ ಸುಳ್ಳು ಸುಳ್ಳೇ ಹೇಳಿಕೊಳ್ಳುತ್ತಾರೆ.
ತಾನೇ ಹಿಂದೂ ಆದರೂ ಋಷಿ ಸುನಕ್ ಹಿಂದೂಗಳ ಮಾತು ಕೇಳದೇ ಇರುವುದು ಎಷ್ಟು ಸರಿ? ಅವರಿಗೆ ತಮ್ಮ ಧರ್ಮ, ದೇಶದವರಿಗಿಂತ ಮಿಗಿಲಾಗಿ, ಆ ದೇಶದಲ್ಲಿ ತನ್ನ ವೋಟ್ ಉಳಿಸಿಕೊಳ್ಳುವುದೇ ದೊಡ್ಡ ಚಿಂತೆಯಾಗಿದೆ. ಇಂಥ ಮಂದಿ ಇಂಗ್ಲೆಂಡ್, ಅಮೆರಿಕಾ ಮಾತ್ರವಲ್ಲದೆ, ಇನ್ನೂ ಅನೇಕ ದೇಶಗಳಲ್ಲಿ ಹರಡಿಹೋಗಿದ್ದು, ತಮ್ಮ ಮೂಲ ದೇಶವನ್ನು ಒಂದು ದುಃಸ್ವಪ್ನ ಎಂಬಂತೆ ಮರೆತುಬಿಟ್ಟಿದ್ದಾರೆ. ಭಾರತೀಯ ಮೂಲದವರಾದರೂ ಇವರು ಭಾರತದ ಸರ್ಕಾರದ ಮಾತು ಕೇಳಿಸಿಕೊಳ್ಳಲು ಒಂದಿಷ್ಟೂ ತಯಾರಿಲ್ಲ.
ಇವರಿಗಿಂತ ಬೆಟರ್ ಎಂದರೆ, ಅಮೆರಿಕಾದ ಮಾಜಿ ರಾಷ್ಟ್ರಪತಿ ಡೊನಾಲ್ಡ್ ಟ್ರಂಪ್. ಇವರು ದೆಹಲಿ, ಮುಂಬೈಗಳಲ್ಲಿ ಟ್ರಂಪ್ ಟವರ್ ಸ್ಥಾಪನೆಗಾಗಿ ಅಮೆರಿಕಾದ ಹೌಸ್ ಟನ್ ನಲ್ಲಿ, ಮೋದಿಯವರ ಭಾರತೀಯ ಮೂಲದ ಜನರೊಂದಿಗೆ ಸಭೆಯಲ್ಲಿ ನಿಂತಿದ್ದರು ಹಾಗೂ ಭಾರತಕ್ಕೆ ಕೋವಿಡ್ ಗೆ ಮೊದಲೇ ಬಂದಿದ್ದರು. ಆಗ ಅಹಮದಾಬಾದ್ ನಲ್ಲಿ ಅವರು ಮೋದಿಯವರ `ಮತ್ತೊಮ್ಮೆ ಟ್ರಂಪ್ ಸರ್ಕಾರ ಬರಲಿ!’ ಎಂಬ ಘೋಷಣೆಗೆ ಗದ್ಗದಿತರಾಗಿದ್ದರು. ಇಂಥ ಋಷಿ ಸುನಕ್, ಕಮಲಾ ಹ್ಯಾರಿಸ್ ನಂಥ ಮಂದಿ ನಮ್ಮ ದೇಶಕ್ಕೆ ಧರ್ಮ ಕರ್ಮ ಎಂದು ಬಂದರೆ, ಇವರನ್ನು ಧರ್ಮದ್ರೋಹಿಗಳೆಂದೇಕೆ ಘೋಷಿಸಬಾರದು?