ಅಮೆರಿಕಾದ ಹಿಂಡನ್ ಬರ್ಗ್ ರಿಸರ್ಚ್ ನ ರಿಪೋರ್ಟ್ ನಂತರ, ಯಾವ ತರಹ ವಿಶ್ವಾದ್ಯಂತದ ಇನ್ ವೆಸ್ಟರ್ನ್ ಅಡಾನಿ ಗ್ರೂಪ್ ನ ಕಂಪನಿಗಳಿಂದ ಹಣ ಹಿಂಪಡೆದರೋ, ಅದರಿಂದ ಈ ರಿಪೋರ್ಟ್ ನಲ್ಲಿ ಎಷ್ಟು ದಮ್ ಇದೆ ಅಂತ ನಿರೂಪಿತವಾಗಿದೆ. ಗೌತಂ ಅಡಾನಿ ಎಷ್ಟೋ ಕೋರ್ಟ್ ಕೇಸುಗಳ ಧಮಕಿ ನೀಡಿದರೂ ಏನೂ ನಡೆಯದು. ಅಡಾನಿಯ ಹೊಸ 20 ಸಾವಿರ ಕೋಟಿಗಳ ಷೇರು ವಹಿವಾಟಿನ ಮಾರಾಟ ಮೊದಲ ದಿನವೇ ನೆಲಕಚ್ಚಿತು. ಏಕೆಂದರೆ ಷೇರು 3,177 ನಿಂದ 3,276 ಪ್ರತಿ 100 ರೂ.ಗಳ ಷೇರಿಗೆ ಅನ್ವಯಿಸುವಂತೆ ಮಾರಾಟ ಮಾಡಲಾಯಿತು, ಮಾರ್ಕೆಟ್ ನಲ್ಲಿ ಅದು 2,762 ರೂ.ಗಳದ್ದಾಗಿತ್ತು.
ಒಂದು ಉದ್ಯಮದ ಹುಟ್ಟು ಸಾವಿನಿಂದ ಇಡೀ ದೇಶದ ಆರ್ಥಿಕ ಸ್ಥಿತಿಗೆ ದೊಡ್ಡ ವ್ಯತ್ಯಾಸ ಆಗಬಾರದು. ಆದರೆ ಇಲ್ಲಿನ ಇಕ್ಕಟ್ಟು ಎಂದರೆ, ಅಡಾನಿ ಗ್ರೂಪ್ ನಲ್ಲಿ ಜನತೆಯ ಹಣ ಇತ್ಯಾದಿಗಳಲ್ಲಿ ಹೂಡಿಕೆಯಾಗಿದೆ. ಮ್ಯೂಚುವಲ್ ಫಂಡ್ಸ್ ಸಹ ಇದರಲ್ಲಿ ಕೋಟ್ಯಂತರ ಹೂಡಿವೆ. ಸಾಲ ನೀಡುವ ಕಂಪನಿ, ಸಾಮಾನ್ಯವಾಗಿ ಷೇರು ಮಾರುಕಟ್ಟೆಯಲ್ಲಿ ಹಣ ಅಡವಿರಿಸಿ, ನೀಡುತ್ತದೆ. ಈ ಅಡಾನಿ ಕಂಪನಿಯಲ್ಲಂತೂ ಹೆಚ್ಚೂಕಡಿಮೆ 1 ಲಕ್ಷ ಕೋಟಿಗಳ (1,00,00,00,00,000) ಹೂಡಿಕೆಯಾಗಿದೆ.
ಶ್ರೀಮಂತರಲ್ಲಿ ಕೆಲವರಿಗೆ ಹಾನಿ ಆಗಬಹುದು, ಆದರೆ ಇದು ಅಡಾನಿಯಂಥ ಕಂಪನಿಯಿಂದ ಗಳಿಸಿದ್ದ ಲಾಭದ ಮುಂದೆ ಏನೇನೂ ಅಲ್ಲ. ಅಸಲಿ ನಷ್ಟ ಸಾಮಾನ್ಯ ಜನತೆಯದು. ಇಂಥ ಮಧ್ಯಮ ವರ್ಗದವರು ತಮ್ಮ 10-20 ಸಾವಿರ, 4-5 ಲಕ್ಷ ಹೂಡಿದವರು ಮೂರ್ಛೆ ಹೋಗುವಂತಾಗಿದೆ.
ಮತ್ತೊಂದು ಭಾರಿ ಹಾನಿ ಎಂದರೆ, ಬಿಜೆಪಿ ಸರ್ಕಾರ ಗೌತಂ ಅಡಾನಿಯನ್ನು ಕರೆಸಿ, 2014ರ ಚುನಾವಣೆಯಲ್ಲಿ ಹಣಕಾಸು, ವಿಮಾನಗಳ ಹಾರಾಟದ ವ್ಯವಸ್ಥೆಯ ಬದಲಿಗೆ ತುಂಬಿಸಿಕೊಟ್ಟಿದ್ದರ ಪ್ರಾಜೆಕ್ಟ್ ಗಳಿಂದಾಗಿಯೂ ಖಂಡಿತಾ ಹಾನಿ ಆಗುತ್ತದೆ. ಇದರಿಂದ ಎಷ್ಟೋ ಪೋರ್ಟ್, ರೈಲ್ವೆ ಸ್ಟೇಷನ್, ಏರ್ ಪೋರ್ಟ್ ಗಳು ಅಪಾಯಕ್ಕೆ ಸಿಲುಕಿವೆ.
ಹಿಂಡನ್ ಬರ್ಗ್ ರಿಪೋರ್ಟ್ ಅಡಾನಿ ಗ್ರೂಪ್ ನ್ನು ಕೇವಲ ಮೇಲು ಮೇಲಷ್ಟೇ ಸ್ಪರ್ಶಿಸಿ ಇಷ್ಟು ಸಹಸ್ರಾರು ಕೋಟ್ಯಂತರ ಹಾನಿಯ ವರದಿ ನೀಡಿವೆ. ಈಗ ವಿಶ್ವವಿಡೀ ಪೇಪರ್ ಗಳ ಹಣಕಾಸು ತಜ್ಞರು ಹುಡುಕಾಟಕ್ಕೆ ತೊಡಗಿದ್ದಾರೆ. ಏಕೆಂದರೆ ಅಡಾನಿ ಗ್ರೂಪ್ ಹಲವಾರು ದೇಶಗಳಲ್ಲಿ ದಂಧೆ ಹರಡಿದೆ. ಕೇಂದ್ರ ಸರ್ಕಾರಕ್ಕೆ ಅಲ್ಲೆಲ್ಲ ಹಿಂದೂ ಅಜೆಂಡಾಗಳ ಭಯಭೀತಿ ಇರಲೇ ಇಲ್ಲ! ಹಿಂಡನ್ ಬರ್ಗ್ ವಿಶೇಷವಾಗಿ ಹೇಳಿದ್ದೆಂದರೆ, ಭಾರತದಲ್ಲಿ ಅಡಾನಿಯ ಮುಖವಾಡ ಕಳಚುವ ಪ್ರಕ್ರಿಯೆಯಲ್ಲಿ ತೊಡಗಿದ್ದ ಪರಾಂಜಯ್ ಗುಹಾ ಟಾಕುರ್, ಗುಜರಾತ್ ನ ಒಬ್ಬ ಟ್ಯೂಬರ್ ನ್ನು ಕೋರ್ಟಿಗೆಳೆದು ಜೇಲಿಗೆ ಹಾಕಿಸುವ ಬೆದರಿಕೆ ಒಡ್ಡಿತು.
ವಿದೇಶೀ ಜರ್ನಲಿಸ್ಟ್ ಆಡಿಟರ್ ಶಾಹ್ ಧನಧಾರಿ ಯಾರಂತಲ್ಲ, ಅವರ ಬಳಿ ಒಟ್ಟು 11 ಜನ ಕೆಲಸದವರಿದ್ದು, 32,000 ರೂ.ಗಳ ಬಾಡಿಗೆ ಕೊಡುತ್ತಾ, ಅಡಾನಿ ಟೋಟಲ್ ಗ್ಯಾಸ್ ಗೆ ಕ್ಲೀನ್ ಚಿಟ್ ನೀಡುತ್ತಾ, ಆ ಕಂಪನಿಯ ಮಾರ್ಕೆಟ್ ವ್ಯಾಲ್ಯೂ 42,75,56,70,00,000ಗಿಂತಲೂ ಹೆಚ್ಚು. ಈ ಅಖಂಡ ಹಣ ಈ ರಿಪೋರ್ಟ್ ನಂತರ ಅಪಾಯಕ್ಕೆ ಸಿಲುಕಲಿದೆ. ಈ ಮೊತ್ತದ ಅರ್ಥ, ಸರ್ಕಾರಿ ಬ್ಯಾಂಕುಗಳು ಅಥವಾ ಜನತೆಯ ಹಣ ಎಲ್ಲೋ ಹೂಡಿಕೆಯಾಗಿದೆ ಅಂತ. ಇದು ಮುಳುಗಿ ಹೋದರೆ, ಯಾವ ಯಾವ ದೊಡ್ಡ ಕುಳಗಳು ಎಲ್ಲೆಲ್ಲಿ ಕೊಚ್ಚಿ ಹೋಗಲಿವೆಯೋ.... ಗೊತ್ತಿಲ್ಲ. ಆದರೆ ಯಾರು ಸಕಾಲಕ್ಕೆ ಇಂಥ ನೀರಿನಿಂದ ಮುತ್ತು ಆಯ್ದುಕೊಂಡರೋ ಅವರು ಬದುಕುಳಿದರು.