ಸಾಮಾನ್ಯವಾಗಿ ಜನ ಎರಡರ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಚಿಂತಸದೆ, ಎರಡೂ ಒಂದೇ ಎಂದುಕೊಳ್ಳುತ್ತಾರೆ. ಇವೆರಡರ ನಡುವಿನ ಅಂತರ ಹಾಗೂ ಪಾರಾಗುವ ಬಗೆ ಹೇಗೆಂದು ತಿಳಿಯೋಣವೇ……?

ಇತ್ತೀಚಿನ ಆಧುನಿಕ ಜೀವನಶೈಲಿ ಹಾಗೂ ಅನಾರೋಗ್ಯಕರ ಅಭ್ಯಾಸಗಳಿಂದಾಗಿ, ವಿಶ್ವವಿಡೀ ಜನ ಬೇರೆ ಬೇರೆ ತರಹದ ಗಂಭೀರ ಹೃದ್ರೋಗಗಳಿಗೆ ಈಡಾಗುತ್ತಿದ್ದಾರೆ. ಇದರಲ್ಲಿ ಹಾರ್ಟ್‌ ಅಟ್ಯಾಕ್‌ ಕಾರ್ಡಿಯಾಕ್‌ ಅರೆಸ್ಟ್ ಗೆ ಸಂಬಂಧಿಸಿದ ಕೇಸುಗಳೇ ಹೆಚ್ಚು. ಸಾಮಾನ್ಯವಾಗಿ ಜನ ಇವೆರಡನ್ನೂ ಒಂದೇ ಎಂದು ಭಾವಿಸುತ್ತಾರೆ, ವ್ಯತ್ಯಾಸ ಗಮನಿಸುವುದಿಲ್ಲ.

ಕಾರ್ಡಿಯಾಕ್‌ ಅರೆಸ್ಟ್ ಇದು ಯಾರಿಗೆ ಯಾವಾಗ ಬೇಕಾದರೂ ದಿಢೀರ್‌ ಎಂದು ಕಾಣಿಸಿಕೊಳ್ಳಬಹುದು. ಈ ಪ್ರಕರಣದಲ್ಲಿ ಹೃದಯ ದೇಹಕ್ಕೆ ರಕ್ತವನ್ನು ಪಂಪ್‌ ಮಾಡುವುದನ್ನೇ ನಿಲ್ಲಿಸಿಬಿಡುತ್ತದೆ, ಆಗ ರೋಗಿ ತಕ್ಷಣ ಜ್ಞಾನ ತಪ್ಪುತ್ತಾನೆ. ಕೆಲವೇ ನಿಮಿಷಗಳಲ್ಲಿ ತಕ್ಷಣ ಚಿಕಿತ್ಸೆ ದೊರಕದೆ ಹೋದರೆ, ರೋಗಿ ಅಲ್ಲೇ ಸಾಯುತ್ತಾನೆ.

ಇದರ ಪ್ರಮುಖ ಲಕ್ಷಣವೆಂದರೆ ಜ್ಞಾನ ತಪ್ಪುವುದು. ಅದಕ್ಕೂ ಮೊದಲು ರೋಗಿ ಈ ಕೆಳಗಿನ ಲಕ್ಷಣಗಳನ್ನು ಸೂಕ್ಷ್ಮವಾಗಿ ಗಮನಿಸತಕ್ಕದ್ದು : ಅಸಾಮಾನ್ಯ ಆಗುವ ಹೃದಯದ ಬಡಿತ, ತಲೆ ಸುತ್ತುವಿಕೆ, ಬಿದ್ದೇ ಬಿಡ್ತೀನಿ ಎನ್ನುವ ಆತಂಕ, ಎದೆನೋವು, ಉಸಿರಾಟದಲ್ಲಿ ತೊಂದರೆ, ವಾಂತಿ ಆಗುವಿಕೆ.

ಇದಾದ ನಂತರ ಈ ತರಹ ಆದ ತಕ್ಷಣ ರೋಗಿಗೆ ಉಸಿರಾಡುವುದೇ ಕಷ್ಟವಾಗುತ್ತದೆ, ಕೆಲವರಿಗೆ ಸ್ವಲ್ಪ ಹೊತ್ತಿಗೆ ಉಸಿರಾಟ ಮಮೂಲಿ ಆಗಬಹುದು, ಅತಿ ವೇಗವಾಗಿ ಉಸಿರಾಡುವುದು, ಪೂರ್ತಿ ಜ್ಞಾನ ಕಳೆದುಕೊಳ್ಳುವುದು ಇತ್ಯಾದಿ ಆಗಬಹುದು.

ನಿಮ್ಮ ಜೀವನಶೈಲಿ ಸರಿ ಇರದೆ ಇದ್ದರೆ, ಈ ಸ್ಥಿತಿ ಯಾರಿಗೆ, ಯಾವಾಗ ಬೇಕಾದರೂ ಬರಬಹುದು. ಆದರೆ ಕೆಲವರಿಗೆ ಇದರಿಂದ ಹೆಚ್ಚಿನ ಅಪಾಯ ತಟ್ಟಬಹುದು. ಇದು ಆನುವಂಶಿಕವಾಗಿದ್ದರೆ, ಅಂದರೆ ನಿಮ್ಮ ಹಿರಿಯರಿಗೆ ಹೀಗೇ ಆಗಿ ಸಾವು ಬಂದಿದ್ದರೆ, ನಿಮಗೆ ಭವಿಷ್ಯದಲ್ಲಿ ಈ ಕಷ್ಟ ಕಟ್ಟಿಟ್ಟ ಬುತ್ತಿ. ಅಂದ್ರೆ, ನಿಮ್ಮ ಹಿರಿಯರು ಯಾರಾದರೂ 50-60ರ ವಯಸ್ಸಿನಲ್ಲಿ ಈ ಕಾಟಕ್ಕೆ ತೀರಿಕೊಂಡಿದ್ದರೆ, ನೀವು ಅಧಿಕ ಎಚ್ಚರಿಕೆ ವಹಿಸಬೇಕು. ಏಕೆಂದರೆ ನಿಮಗೆ ಈ ಕಷ್ಟ ಯಾವಾಗ ಬೇಕಾದರೂ ಎದುರಾಗಬಹುದು.

ಇಷ್ಟು ಮಾತ್ರವಲ್ಲದೆ, ಯಾರಿಗೆ ಕೊರೋನರಿ ಆರ್ಟರಿ ಡಿಸೀಸ್‌ (ಹೃದಯದ ಧಮನಿಗಳಲ್ಲಿ ಬ್ಲಾಕೇಜ್‌) ಯಾವ ಹೈಪರ್‌ ಟೆನ್ಶನ್‌, ಶುಗರ್‌, ಧೂಮಪಾನ, ಮದ್ಯಪಾನಗಳಂಥ ದುಶ್ಚಟಗಳಿದ್ದರೆ ಅಂಥವರಿಗೆ ಇದು ತಪ್ಪದು.

ಹೇಗೆ ಎದುರಿಸುವುದು?

ಯಾವ ವ್ಯಕ್ತಿಗೆ ಹೀಗಾಗಿದೆಯೋ, ಡಾಕ್ಟರ್‌ ಬಳಿ ಹೋಗಲು ತಡವಾದರೆ, ತಕ್ಷಣ CPR ಕೊಡಬೇಕು. ಇಂಥ ಸ್ಥಿತಿಯಲ್ಲಿ ರೋಗಿಯ ಹೃದಯ ಪರೀಕ್ಷಿಸಿ, ವೈದ್ಯರು ಅದಕ್ಕೆ ಶಾಕ್‌ ಟ್ರೀಟ್‌ ಮೆಂಟ್‌ ನೀಡಿ ಸ್ಥಿತಿ ನಿಯಂತ್ರಿಸುತ್ತಾರೆ. CPR ಅಂದ್ರೆ ಆಪತ್ಕಾಲದಲ್ಲಿ ನೆರವಾಗುವ ಒಂದು ವೈಜ್ಞಾನಿಕ ಪ್ರಕ್ರಿಯೆ. ಇದು ಯಾವ ರೋಗಿಗೆ ಹೃದಯದ ಬಡಿತ ಅಥವಾ ಉಸಿರಾಟ ನಿಂತಿದೆಯೋ ಅಂಥವರಿಗೆ ಒದಗಿಸಲಾಗುತ್ತದೆ. CPR ಮೂಲಕ ವ್ಯಕ್ತಿಗೆ ಬೇರೆಯವರು ಬಾಯಿಂದ ಊದಿ ಊದಿ ಉಸಿರಾಡಲು ನೆರವಾಗುತ್ತಾರೆ. ಇದರಿಂದ ರೋಗಿಯ ಶ್ವಾಸಕೋಶಕ್ಕೆ ತಕ್ಷಣ ಆಮ್ಲಜನಕ ದೊರಕುತ್ತದೆ. ಜೊತೆಗೆ ರೋಗಿಯ ಹೃದಯದ ಮೇಲೆ ಮುಷ್ಟಿಯಿಂದ ಗುದ್ದಿ, ದೇಹದಲ್ಲಿನ ಆಕ್ಸಿಜನ್‌ ಸಂಚಾರ ಸುಗಮಗೊಳ್ಳಲು ನೆರವಾಗುತ್ತಾರೆ.

ಹಾರ್ಟ್ಅಟ್ಯಾಕ್

ಇತ್ತೀಚೆಗಂತೂ ಎಲ್ಲಿ ನೋಡಿದರೂ ಹೃದಯಘಾತದ ಸುದ್ದಿಗಳೇ ಕೇಳಿ ಬರುತ್ತಿವೆ. ಬ್ಲಡ್‌ ಕ್ಲಾಟಿಂಗ್‌ ಆಗುವುದರಿಂದ ಅಥವಾ ಹೃದಯದಲ್ಲಿ ಬ್ಲಡ್‌ ಸಪ್ಲೈನ ಕೊರತೆಯಿಂದ ಹಾರ್ಟ್‌ ಅಟ್ಯಾಕ್‌ ಸ್ಥಿತಿ ಮೂಡಬಹುದು. ಸಾಮಾನ್ಯವಾಗಿ ಇದು ಬಹುತೇಕ ಕೊರೋನರಿ ಆರ್ಟರೀಸ್‌ ನ ಬ್ಲಾಕೇಜ್‌ ಕಾರಣ ಆಗುತ್ತದೆ. ಇದು ಹಾರ್ಟ್‌ ಗೆ ಗಂಭೀರ ಹಾನಿ ಉಂಟು ಮಾಡಿ, ಪ್ರಾಣಾಘಾತಕ ಆಗಲೂಬಹುದು.

ಇದರ ಲಕ್ಷಣಗಳು

ಟೆನ್ಶನ್‌, ಮಾನಸಿಕ ಒತ್ತಡ, ಎದೆನೋವು, ಉಸಿರಾಟದ ಏರುಪೇರು, ತಣ್ಣಗಿನ ಬೆವರು ಬರುವಿಕೆ, ಹೃದಯದ ಬಡಿತ ಕ್ರಮೇಣ ಹೆಚ್ಚುವಿಕೆ, ದೇಹಾದ್ಯಂತ ಹಿಂಡುವ ನೋವು, ವಿಪರೀತ ಉರಿ, ತಲೆ ಸುತ್ತು, ಸುಸ್ತು, ವಾಂತಿ ಇತ್ಯಾದಿ.

ಸ್ಟ್ರೋಕ್‌ ಮೆದುಳಿನ ರಕ್ತ ಸಂಚಾರದಲ್ಲಿ ಅಡಚಣೆ ಕಾರಣ ಸ್ಟ್ರೋಕ್‌ ಅಥವಾ ಪಾರ್ಶ್ವವಾಯು ಉಂಟಾಗುತ್ತದೆ. ಇದು ಮೆದುಳಿನ ಅಂಗಾಂಶ (ಟಿಶ್ಯು)ಗಳನ್ನು ಗಾಢ ಪ್ರಭಾವಿತಗೊಳಿಸುತ್ತದೆ. ಇದಂತೂ ತೀವ್ರ ಗಂಭೀರ ಮೆಡಿಕಲ್ ಎಮರ್ಜೆನ್ಸಿ. ನಮ್ಮ ಮೆದುಳಿನ ರಕ್ತಸಂಚಾರದಲ್ಲಿ ಏರುಪೇರಾದಾಗ ಈ ಸಂಕಟ ಮೂಡುತ್ತದೆ.

ಸ್ಟ್ರೋಕಿನ ಲಕ್ಷಣ

ಇದ್ದಕ್ಕಿದ್ದಂತೆ ಮಾನಸಿಕ ಭ್ರಮೆ, ಮಾತನಾಡಲು ಕಷ್ಟ. ಮುಖ, ಕೈಕಾಲುಗಳ ತಿರುಚಿಕೊಳ್ಳುವಿಕೆ, ನಡೆಯಲು/ಕೂರಲು/ಮಗ್ಗಲು ಬದಲಾಯಿಸಲಿಕ್ಕೂ ಕಷ್ಟ ಪಡಬೇಕಾದ ಸ್ಥಿತಿ, ಅಸ್ಪಷ್ಟ ದೃಷ್ಟಿ, ವಿಪರೀತ ತಲೆನೋವು, ಆಹಾರ ನುಂಗಲಿಕ್ಕೂ ಕಷ್ಟ, ಟ್ರಾನ್ಸಿಯೆಂಟ್‌ಸ್ಕೇಮಿಕ್‌ ಅಟ್ಯಾಕ್‌ ಇತ್ಯಾದಿ.

ಸ್ಕೇಮಿಕ್ಸ್ಟ್ರೋಕ್‌ : ಮೆದುಳಿನಲ್ಲಿ ಆಕ್ಸಿಜನ್‌ ಯುಕ್ತ ರಕ್ತನಾಳಗಳು ಸಹಜವಾಗಿ ಕೆಲಸ ಮಾಡಲಾಗದೆ ಅತಿಯಾದ ಅಡಚಣೆ ಕಾಡಿದಾಗ, ಮೆದುಳಿನ ಜೀವಕೋಶಗಳು ಕ್ರಮೇಣ ಸಾಯತೊಡಗುತ್ತವೆ. ಇದಕ್ಕೆ ಕಾರಣ ಸ್ಕೇಮಿಕ್‌ ಸ್ಟ್ರೋಕ್‌. ಮೆದುಳಿನ ರಕ್ತಧಮನಿಗಳಲ್ಲಿ ಇಂಥ ಅಡಚಣೆ, ಅವು ಬೇಗ ಸಂಕುಚಿತಗೊಳ್ಳುವಂತೆ ಮಾಡುತ್ತವೆ. ಒಮ್ಮೊಮ್ಮೆ ಇದು ಸಣ್ಣ ಬ್ಯಾಡ್‌ ಕ್ಲಾಟ್ಸ್ ನಿಂದಲೂ ಆಗಬಹುದು.

ಟ್ರಾನ್ಸಿಯೆಂಟ್ಸ್ಕೇಮಿಕ್ಸ್ಟ್ರೋಕ್‌ : ಮೆದುಳಿಗೆ ರಕ್ತ ಕೊಂಡೊಯ್ಯುವ ಧಮನಿಗಳು, ಕೆಲವು ಕಾಲ ಆ ಕರ್ತವ್ಯ ನಿರ್ವಹಿಸಲಾರದೆ ತಟಸ್ಥಗೊಂಡಾಗ ಒಂದು `ಮಿನಿ’ ಸ್ಟ್ರೋಕ್‌ ಆಗುತ್ತದೆ. ರಕ್ತ ಸಂಚಾರದಲ್ಲಿ ದಟ್ಟ ಅಡಚಣೆ ಮೂಡಿಸುವ ಈ ಅವಧಿ ಸ್ಟ್ರೋಕಿನ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ.

ಹೀಮೋರೇಗಿಕ್ಸ್ಟ್ರೋಕ್‌ : ಮೆದುಳಿನ ಕೆಲವು ಧಮನಿಗಳು ಇದ್ದಕ್ಕಿದ್ದಂತೆ ಸಿಡಿದು, ಬ್ಲಡ್‌ ಫ್ಲೋ ನಿಂತೇ ಹೋದರೆ, ಬ್ರೇನ್‌ ಸೆಲ್ಸ್ ಸಂಪೂರ್ಣ ಡ್ಯಾಮೇಜ್‌ ಆಗುತ್ತವೆ. ಆಗ ಮೆದುಳಿನ ಎಲ್ಲಾ ಭಾಗದಲ್ಲೂ ರಕ್ತ ಹೇಗೆ ಹೇಗೋ ಹರಡಿ ಹೋಗುತ್ತದೆ. ಇದುವೇ ಹೀರೋರೇಗಿಕ್‌ ಸ್ಟ್ರೋಕ್‌ ಗೆ ಮೂಲ.

ನಮ್ಮ ಆಧುನಿಕ ಜೀವನಶೈಲಿಯಲ್ಲಿ ಹೇಗಾದರೂ ಬದಲಾವಣೆ ತಂದುಕೊಂಡು, ಹೃದ್ರೋಗಗಳ ಇಂಥ ಅಪಾಯಗಳನ್ನು ಕಡಿಮೆಗೊಳಿಸಬಹುದಾಗಿದೆ. ಧೂಮಪಾನ, ಮದ್ಯಪಾನದಂಥ ದುರಭ್ಯಾಸಗಳನ್ನು ತ್ಯಜಿಸುವ ಮೂಲಕ, ಹೆಚ್ಚಿನ ವ್ಯಯಾಮ, ಬ್ರಿಸ್ಕ್ ವಾಕಿಂಗ್‌, ಜಾಗಿಂಗ್‌ ಗಳಂಥ ಚಟುವಟಿಕೆಗಳಿಂದ ದೇಹ ತೂಕ ನಿಯಂತ್ರಿಸಿಕೊಂಡರೆ, ಇಂಥ ಹೃದ್ರೋಗಗಳಿಂದ ಪಾರಾಗಬಹುದು. ಜೊತೆಗೆ BP, ಕೊಲೆಸ್ಟ್ರಾಲ್ ಮಟ್ಟಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದೂ ಸಹ ಮುಖ್ಯ. ಆಗ ಮಾತ್ರ ಈ ಅಪಾಯಗಳು ದೂರಾಗಬಲ್ಲವು.

ಡಾ. ವಿವೇಕ್ಕುಮಾರ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ