ಅಮೆರಿಕಾದ ಟ್ಯಾರೀಪಗಳ ಪರಿಣಾಮವಾಗಿ, ಈಗ ಭಾರತದ ನರೇಂದ್ರ ಮೋದಿಯವರು ಹೋಗಿ ಚೀನಾದ ಮಡಿಲಲ್ಲಿ ಶರಣಾಗತಿ ಪಡೆಯಬೇಕಿದೆ. ಗ್ವಾನ್ ತೀರ, ಅಸ್ಸಾಯಿ ಚೀನಾ, ಅರುಣಾಚಲ ಪ್ರದೇಶಗಳ ಕುರಿತಾಗಿ ತಾವು ಟೀಕಿಸುತ್ತಿದ್ದುದನ್ನು ಮರೆತಂತಿದೆ. ಅವರ ಪಕ್ಷ ಮೋದಿಯವರ ವಿರೋಧಿಗಳನ್ನು ಸುಲಭವಾಗಿ ಜಗ್ಗಿಹಿಡಿದು, ಚೀನಾವನ್ನು ಯಾವ ರೀತಿಯಲ್ಲೂ ಹೇಗಾದರೂ ಸರಿ ಸಮರ್ಥಿಸಿಕೊಳ್ಳುವ ವಕಾಲತ್ತು ನಡೆಸುತ್ತದೆ.
ನಮ್ಮ ವ್ಯಾಪಾರಿಗಳು ಚೀನಾದಿಂದ ಸತತ ರಾಶಿರಾಶಿ ಸಾಮಗ್ರಿ ಆಮದು ಮಾಡಿಕೊಳ್ಳುತ್ತಿರುವವರೆಗೂ ಎಲ್ಲಾ ಸಲೀಸು. ಎಲ್ಲೆಲ್ಲಿ ಭಗವಾ ಧ್ವಜ ಹಾರಾಡುತ್ತಿದೆಯೋ ಅಲ್ಲೂ ಚೀನಾ ಸಾಮಗ್ರಿ ತುಂಬಿ ಹೋಗುವಂತಾದಾಗ ಮಾತ್ರ. ಸಕಲ ಚೀನಾ ಮೂಲದ್ದೇ ಆಗಿರಬೇಕು. ಬಹಳಷ್ಟು ಉತ್ಪನ್ನಗಳು ಭಾರತದಲ್ಲೇ ತಯಾರಾದರೂ, ಅದರ ಕಚ್ಚಾ ಸಾಮಗ್ರಿ ಹಾಗೂ ಯಾವ ಯಂತ್ರಗಳಿಂದ ಅವು ತಯಾರಾಗುತ್ತವೆ, ಅವೆಲ್ಲ ಚೀನಾ ಮೂಲದ್ದೇ! ಹೀಗಾಗಿಯೇ ಚೀನಾದಿಂದ ಭಾರತ 100 ಸಹಸ್ರ ಕೋಟಿ ಡಾಲರ್ ಗಳಿಗಿಂತಲೂ ಹೆಚ್ಚಿನ ಸಾಮಗ್ರಿ ಆಮದು ಮಾಡಿಕೊಳ್ಳಬೇಕಾಗುತ್ತದೆ.
ಇಂದು ಯಾವುದೇ ಹೋಲ್ ಸೇಲ್ ಮಾರ್ಕೆಟ್ ನಲ್ಲಿ ಹೋಗಿ ನೋಡಿ, ಪ್ರತಿ ಡಬ್ಬಾದ ಮೇಲೂ `ಮೇಡ್ ಇನ್ ಚೀನಾ’ ಎಂಬ ಲೇಬಲ್ ರಾರಾಜಿಸುತ್ತಿರುತ್ತದೆ. ಎಷ್ಟೋ ಸಾಮಗ್ರಿ ಅನಾಮಧೇಯ ಹೆಸರಿನಲ್ಲಿ ಬರುತ್ತದೆ, ಯಾವ ಚೀನಾದ ತಯಾರಕರು ತಮ್ಮ ದೇಶೀ ಬ್ರಾಂಡ್ ಅಂಟಿಸಿರುತ್ತಾರೆ. ಭಾರತೀಯರು ಚೀನಾದ ಈ ಮಾಲು ಪಡೆದು ಧನ್ಯೋಸ್ಮಿ ಎಂದುಕೊಳ್ಳುತ್ತಾರೆ. ಅವರಿಗೆ ಅದರಲ್ಲಿ ಎಲ್ಲೂ ಶತ್ರುತ್ವದ ದುರ್ವಾಸನೆಯ ಸುಳಿವು ಸಿಗುವುದಿಲ್ಲ. ಆದರೆ ಟ್ರಂಪಣ್ಣನ ಟ್ಯಾರೀಫ್ ಜಗಳದ ಮೊದಲಿನ ವ್ಯಾಪಾರದ ನೆಪವಿದ್ದರೂ, ಚೀನಾವನ್ನು ರೂಲಿಂಗ್ ಪಾರ್ಟಿ ಶತ್ರುಗಳೆಂದೇ ಭಾವಿಸುತ್ತಿತ್ತು. BJP ಸರ್ಕಾರದ ಮೂಲಕ ಚೀನಾದ ಕಮ್ಯೂನಿಸ್ಟ್ ಪಾರ್ಟಿ ಹಾಗೂ ಕಾಂಗ್ರೆಸ್ ಪಾರ್ಟಿಯ ವಿಚಾರ ವಿನಿಮಯದ ಸಂಧಾನ ಕಂಡು ಡಂಗೂರ ಸಾರುತ್ತಿತ್ತು.
ಟ್ರಂಪಣ್ಣ ಭಾರತವನ್ನು ನಡೆಸಿಕೊಳ್ಳುತ್ತಿರುವ ಪರಿ ನಿಜಕ್ಕೂ ನಾಚಿಕಿಗೇಡಿತನದ ಹಾಗೂ 2 ದೊಡ್ಡ ಪ್ರಜಾಪ್ರಭುತ್ವ ದೇಶಗಳ ಕೊರತೆಗಳನ್ನು ಎತ್ತಿಹಿಡಿಯಲಾಗುತ್ತಿದೆ, ಇದರ ಅರ್ಥ ನಾವು ನೆಹರೂ ಹಾಗೂ ಹಿಂದಿನ ಪ್ರಧಾನಿಗಳ ಹಾಗೆ ಮತ್ತೆ ಚೀನಾದ ಬೂಟು ನೆಕ್ಕಲಾಗದು. ಸದ್ಯದ ಪರಿಸ್ಥಿತಿಯಲ್ಲಿ, ಭಾರತದ ಧುರೀಣರು ಹೆದರಿಕೊಂಡು ಚೀನಾದ ಸೆರಗಿನಲ್ಲಿ ಅಡಗಿಕೊಳ್ಳುತ್ತಿರುವಂತಿದೆ. ಹೀಗೆ ಮಾಡುವುದು ಅನಿವಾರ್ಯ ಅಂತಾದರೆ, ಮೊದಲು ಚೀನಾದೊಂದಿಗೆ ಗಡಿ ವಿವಾದ ಇತ್ಯರ್ಥ ಮಾಡಿಕೊಳ್ಳುವುದು ಲೇಸು.
ಇಬ್ಬರು ನೆರೆಹೊರೆಯವರು ಬಹಳ ದಿನಗಳ ಜಗಳದ ನಂತರ ಕೈ ಕೈ ಮಿಲಾಯಿಸಬೇಕಾದರೆ, ಮೊದಲ ವಿಷಯವಾಗಿ ಪರಸ್ಪರರ ಜಗಳಕ್ಕೆ ಇತಿಶ್ರೀ ಹಾಡಬೇಕು. ಒಂದು ಮನೆಯ ಹೊಗೆ, ಕೊಳಚೆ ನೀರು ಪಕ್ಕದ ಮನೆಗೆ ನುಗ್ಗುತ್ತಿದ್ದರೆ ಅಂಥ ಕೊಳಕನ್ನು ಮೊದಲು ನಿವಾರಿಸಿಕೊಳ್ಳಬೇಕು. ಒಂದು ಮನೆಯವರು ಪಕ್ಕದ ಮನೆಯವರ ಮುಂದೆ ಕಾರು ಪಾರ್ಕಿಂಗ್ ಮಾಡುವುದನ್ನು ತಮ್ಮ ಹಕ್ಕೆಂದೇ ಭಾವಿಸುತ್ತಾರೆ, ಇದಕ್ಕೆ ವಿರೋಧ ತೋರಿದರೂ ಒಪ್ಪಲಾರರು, ಹಾಗಿರುವಾಗ ಅಂಥ ನೆರೆಯವರಿಂದ ನಮಗೆ ರೋಗ ಕಾಡಿದಾಗ ಔಷಧಿ ಯಾವ ಸಹಾಯ ಪಡೆಯುವುದು ಹೇಗೆ?
ಅಗತ್ಯ ಬಿದ್ದಾಗ ಕತ್ತೆ ಕಾಲು ಹಿಡಿ ಎಂಬ ನೀತಿ ಪಾಠವನ್ನು ಅನಾದಿ ಕಾಲದಿಂದ ಕಲಿಯುತ್ತಿದ್ದೇವೆ. ಧಾರ್ಮಿಕ ಪುರಾಣ ಅದನ್ನೇ ಸಾರುತ್ತದೆ. ಅಮೃತ ಮಂಥನ ನಡೆಸಲು ದಾನವರನ್ನು ದೇವತೆಗಳು ಸಹಾಯಕ್ಕೆ ಕರೆದರು, ಆದರೆ ನಂತರ ಅವರಿಗೆ ಅಮೃತ ಮಾತ್ರ ಕೊಡಲಿಲ್ಲ. ಅಗತ್ಯ ಬಿದ್ದಾಗ ರಾಮ ತನಗೇನೂ ಕೇಡು ಮಾಡದ ವಾಲಿಯ ವಧೆ ಮಾಡಿದ, ಅವನು ಗೆಳೆಯ ಸುಗ್ರೀವನ ಶತ್ರು ಎಂಬ ಒಂದೇ ಕಾರಣಕ್ಕಾಗಿ. ರಾಕ್ಷಸ ರಾಣ ದುರಾಚಾರಿ ಎಂದು ಕೊಲ್ಲಲಾಯಿತು, ಅವನ ತಮ್ಮ ವಿಭೀಷಣನನ್ನು ಮಾತ್ರ ಮುಗ್ಧನೆಂದೇ ಸ್ವೀಕರಿಸಲಾಯಿತು.
ಮಹಾಭಾರತದಲ್ಲಿ ಮೊದಲು ತನಗೆ ಪ್ರತಿಸ್ಪರ್ಧಿ ಆಗಬಾರದು ಎಂದು ಅರ್ಜುನ ಏಕಲವ್ಯನ ಹೆಬ್ಬೆರಳನ್ನು ತೆಗೆಸಿದ. ನಂತರ ಕುರುಕ್ಷೇತ್ರದ ಯುದ್ಧದ ಸಮಯದಲ್ಲಿ ಅವನ ಸಹಾಯ ಅಪೇಕ್ಷಿಸಲಾಯಿತು.
ಪೌರಾಣಿಕ ಕಾಲದಿಂದಲೂ, ನಂತರ ಸಹ ನಮ್ಮವರೊಂದಿಗೆ ಮಾಡುವ ಇಂಥ ವಿಶ್ವಾಸಘಾತಗಳ ಅಭ್ಯಾಸ, ನಮಗೆ ಸದಾ ದುಬಾರಿ ಎಂದು ಸಾಬೀತಾಗಿವೆ. ಟ್ರಂಪ್ ಸಹ ಯಾವುದೋ ಕಾರಣಕ್ಕೆ ಮೋದಿಯವರ ವಿರುದ್ಧ ಕೋಪಗೊಂಡಿದ್ದರು. ಆದರೆ 2024ರ ಅಮೆರಿಕಾ ಅಧ್ಯಕ್ಷರ ಚುನಾವಣೆಯಲ್ಲಿ ಭಾರತೀಯ ಮೂಲದ ತಾಯಿ ಕೊಂಡಿ ಹೊಂದಿದ್ದ ಕಮಲಾ ಹ್ಯಾರಿಸ್ ರಿಗೆ ಮೋದಿಯವರು ಯಾವ ಹೆಚ್ಚುಗಾರಿಕೆಯನ್ನೂ ತೋರಿರಲಿಲ್ಲ. ಇವರ ಸಮರ್ಥಕರು ವಿದೇಶಗಳಲ್ಲಿ ಭಾರತೀಯ ಮೂಲದ ಅಮೆರಿಕಾ ಚರಮಪಂಥೀಯ ಡೊನಾಲ್ಡ್ ರಿಗೆ ಖುಲ್ಲಂ ಖುಲ್ಲ ಸಹಾಯ ಮಾಡುತ್ತಿದ್ದರು.
ಚೀನಾದೊಂದಿಗೆ ಸಂಬಂಧ ಹೆಚ್ಚಿಸಿಕೊಳ್ಳುವುದರಿಂದ ಭಾರತಕ್ಕೆ ಯಾವುದೇ ಲಾಭವಿಲ್ಲ. ಧನಕನಕಗಳ ಅಂಬರ ಆಗಿರುವ ನೆರೆ ರಾಷ್ಟ್ರ ಚೀನಾ, ಬಡ ಭಾರತಕ್ಕೆ ನೆರವಾಗದು. ಭಾರತದಲ್ಲಿ ಎಲ್ಲೆಲ್ಲೂ ಖಾಲಿ ನೆಲದ ಸಂಪತ್ತಿದೆ, ಹೆಚ್ಚಿನ ಜನಸಂಖ್ಯೆ ಇದೆ, ಆದರೆ ಎಲ್ಲರ ಜೇಬೂ ಖಾಲಿ! ಭಾರತಕ್ಕೆ ತನ್ನ ಕಚ್ಚಾ ಸಾಮಗ್ರಿ, ಕಚಡಾ ರೆಡಿಮೇಡ್ ಐಟಂ ಮಾರಲು ಮಾರುಕಟ್ಟೆ ಬೇಕು, ಅದು ರಷ್ಯಾ ಚೀನಾದಲ್ಲಿಲ್ಲ, ಅಮೆರಿಕಾದಲ್ಲಿ ಮಾತ್ರ ಇದೆ!
ಟ್ರಂಪ್ ಇವತ್ತು ಇದ್ದಾರೆ, ನಾಳೆ ಅಧಿಕಾರದಿಂದ ಇಳಿಯುತ್ತಾರೆ. ಅವರ ಟ್ಯಾರೀಫ್ ಇತ್ತು ಇದೆ, ನಾಳೆ ಇರೋಲ್ಲ. ಆದರೆ ಚಾಚಿರುವ ಸ್ವಾರ್ಥಿ ಸ್ನೇಹಹಸ್ತ, ಮುಂದೆ ಬಹಳ ದುಬಾರಿ ಆದೀತು. ಚೀನಾ ಭಾರತವನ್ನು ನಂಬಲು ಕಾರಣ, ಇದು ಏಷ್ಯಾ ಖಂಡದ ಭಾಗ, ಬುದ್ಧನ ಜನ್ಮಭೂಮಿ ಎಂದೆಲ್ಲ ನೀವು ಭಾವಿಸಿದ್ದರೆ, ಖಂಡಿತಾ ಅದನ್ನೆಲ್ಲ ಮರೆತುಬಿಡಿ. ಚೀನಾ ಒಂದು ಮಾರಾಟ ಮಾಡುವ ದೇಶ, ತಯಾರಕರ ದೇಶ, ನಮ್ಮ ಸಂಕಷ್ಟಕ್ಕೆ ನೆರವಾಗುವವರಲ್ಲ.
ಆಪರೇಶನ್ ಸಿಂಧೂರ್ ನಡೆದಾಗ, ಚೀನಾ ಮುಕ್ತಹಸ್ತದಿಂದ ಪಾಕ್ ಗೆ ನೆರವಾಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಭಾರತದ ದೋಸ್ತಿಗಾಗಿ ಅದು ಪಾಕಿಸ್ತಾನದ ಕೈ ಬಿಡಲಿದೆ ಎಂದು ಎಲ್ಲಿಯೂ ಹೇಳಿಲ್ಲ. ಭಾರತಕ್ಕಂತೂ ಈಗ ಹಾವು ಸುಂಡಿಲಿಯ ಪರಿಸ್ಥಿತಿ ಉಂಟಾಗಿದೆ.
ಯಾವುದು ಹೆಚ್ಚು ಮುಖ್ಯ? ಮಗು ಯಾ ಕೆರಿಯರ್
ವರ್ಕಿಂಗ್ ಮದರ್ಸ್ ಗೆ ಈಗ ದೊಡ್ಡ ಕಂಟಕ ಎಂದರೆ ಅವರ ಮಕ್ಕಳನ್ನು ನೋಡಿಕೊಳ್ಳುವ ದಾದಿಯರದ್ದು. ಏಕೆಂದರೆ ಆ ದಾದಿಗೆ ಈ ಮಗು ಹೆಚ್ಚು ಪ್ರಿಯವಾಗುತ್ತದೆ. ಈ ತಾಯಂದಿರಿಗೆ ಬೇಕಿರುವುದು ದಾದಿ ಮಗುವಿನ ಆರೈಕೆ ಮಾಡಲಿ, ಆದರೆ ಪ್ರೀತಿವಾತ್ಸಲ್ಯ ತೋರಬೇಕಾದಾಗ ಮಾತ್ರ ಮಗು ತಕ್ಷಣ ದಾದಿ ಮಡಿಲು ಬಿಟ್ಟು ಹೆತ್ತ ತಾಯಿಯ ಬಳಿ ಬಂದುಬಿಡಬೇಕೆಂಬುದು. ಆದರೆ ಬೆಳಗ್ಗಿನಿಂದ ರಾತ್ರಿಯವರೆಗೂ ಸದಾ ಯಾರ ತೋಳಲ್ಲಿ, ಮಡಿಲಲ್ಲಿ ಮಗು ಬೆಳೆಯುತ್ತದೋ ಆ ಜೀವವೇ ಮಗುವಿಗೆ ಪ್ರಿಯವಾಗುತ್ತದೆಯೇ ಹೊರತು, ಯಾವಾಗಲೋ ಬಂದು ಎತ್ತಿಕೊಳ್ಳುವ ತಾಯಿ ಅಲ್ಲ.
ಯಾವುದೋ ಕಾರಣಕ್ಕಾಗಿ ಇಂಥ ದಾದಿ ಕೆಲಸ ಬಿಟ್ಟು ಹೊರಟು ಹೋದರೆ, ಕೇವಲ ಸಣ್ಣ ಕೂಸು ಮಾತ್ರವಲ್ಲ, ತುಸು ಬೆಳೆದ ಮಕ್ಕಳು ಸಹ ಕಂಗಾಲಾಗುತ್ತಾರೆ. ಏಕೆಂದರೆ ತಾಯಿ ದಾದಿ ಅಂತ ಬಂದಾಗ, ಮಕ್ಕಳಿಗೆ ದಾದಿಯೇ ಹೆಚ್ಚು ಆಪ್ತಳಾಗುತ್ತಾಳೆ. ಇಂಥ ಸಮಸ್ಯೆಗೆ ತುತ್ತಾದ ಮಕ್ಕಳನ್ನು ಹೆತ್ತವರು ಮಾನಸಿಕತಜ್ಞರ ಬಳಿ ಕರೆದೊಯ್ಯುತ್ತಾರೆ. ಆದರೆ ಅವರು ತಾನೇ ಏನು ಮಾಡಿಯಾರು? ಮಗುವನ್ನು ಶಾಂತವಾಗಿರಿಸಲು ಒಂದಷ್ಟು ಭಾರಿ ಸಲಹೆ ನೀಡಿ, ದೊಡ್ಡ ಮೊತ್ತದ ಹಣ ವಸೂಲಿ ಮಾಡಿ ಕಳುಹಿಸಿಬಿಡುತ್ತಾರೆ.
ಆದರೆ ಈ ಸಮಸ್ಯೆಗೆ ಪರಿಹಾರ, ಉದ್ಯೋಗಸ್ಥ ತಾಯಿ ತನ್ನ ಕೆಲಸ ತೊರೆಯುವುದಲ್ಲ. ಇದೇ ಮಕ್ಕಳು ಮುಂದೆ ತುಸು ಬೆಳೆದಾಗ, ದಾದಿ ಯಾರು, ಅವಳ ಅಸಲಿ ಪಾತ್ರವೇನು ಎಂದು ತಿಳಿದಾಗ, ಮಕ್ಕಳು ಸಹಜವಾಗಿಯೇ ಹೆತ್ತ ತಾಯಿಯತ್ತ ವಾಲುತ್ತಾರೆ. ಇಂದಿನ ಬೆಳೆಯುತ್ತಿರುವ ಮಕ್ಕಳು ಸಹ ಹೆತ್ತ ತಾಯಿ ಸದಾ ಸ್ಮಾರ್ಟ್ ಆಗಿರಬೇಕು, ಸುಶಿಕ್ಷಿತೆ, ತಿಳಿವಳಿಕೆಯುಳ್ಳವಳೇ ಆಗಿರಬೇಕೆಂದು ಬಯಸುತ್ತಾರೆ. ಕೊಳಕು ಸೀರೆಯುಟ್ಟು ಸದಾ ಅಡುಗೆಮನೆ ಸಂಭಾಳಿಸುವ ತಾಯಿ ಎಲ್ಲಾ ಮಕ್ಕಳಿಗೂ ಇಷ್ಟವಾಗುವುದಿಲ್ಲ.
ವರ್ಕಿಂಗ್ ಮದರ್ಸ್ ಈಗ ರಾಜಿ ಆಗಬೇಕಿರುವುದು, ಮಕ್ಕಳು ಸಣ್ಣವರಾಗಿದ್ದಾಗ, ಸೋಶಿಯಲೈಸಿಂಗ್ ನ್ನು ಕಂಟ್ರೋಲ್ ಮಾಡಬೇಕಿದೆ. ಹೋಟೆಲ್, ಪಾರ್ಟಿ, ಪಿಕ್ನಿಕ್ ಇತ್ಯಾದಿಗಳ ಸಮಯವನ್ನು ಮಗುವಿಗಾಗಿ ಬಿಟ್ಟುಕೊಡಬೇಕಿದೆ. ಮಕ್ಕಳನ್ನು ಆಟಪಾಠಗಳಿಗೆ ಪ್ರೇರೇಪಿಸಿ, ಅವರೊಂದಿಗೆ ಹೊರಗೆ ಓಡಾಡಬೇಕಿದೆ.
ಬಹಳಷ್ಟು ಜನ ಈ ತಾಯಂದಿರು ಕೆಲಸಕ್ಕೆ ರಜಾ ಹಾಕಲಿ ಅಂತಾರೆ, ಇದು ಖಂಡಿತಾ ತಪ್ಪು. ಮಗುವಿನ ಆರೈಕೆ ಮಾಡಬೇಕು, ನಿಜ. ಆದರೆ ಮನೆಯಲ್ಲಿ ಅಜ್ಜಿ ತಾತಾ, ಆಯಾ, ದಾದಿ ಇದ್ದಾಗ ಕೆರಿಯರ್ ನ್ನು ಖಂಡಿತಾ ಬಿಟ್ಟುಕೊಡಬಾರದು, ರಜಾ ಹಾಕಬಾರದು. ಈ ತರಹ ಕೆಲಸ ಬಿಡು, ಬ್ರೇಕ್ ತೆಗೆದುಕೊಳ್ಳುವ ಕ್ರಿಯೆ ಅವಳ ವ್ಯಕ್ತಿತ್ವದ ಮೇಲೆ ಬೀರುವ ಪ್ರಭಾವ, ವರ್ಷಗಳವರೆಗೆ ಸ್ಲೋ ಪಾಯಿಸನ್ ತರಹ ಮನಸ್ಸನ್ನು ಆರಿಸುತ್ತದೆ. ಎಷ್ಟೋ ಕುಟುಂಬಗಳು ಮುರಿಯಲು ಕಾರಣ, ಸುಶಿಕ್ಷಿತ ಹೆಂಗಸರು ನಡುವೆ ಮಕ್ಕಳನ್ನು ನೋಡಿಕೊಳ್ಳಲೆಂದೇ ಕೆರಿಯರ್ ನಿಂದ ಬ್ರೇಕ್ ಪಡೆದದ್ದು. ಅಸಲಿಗೆ ಈಗ ಮಗು ಕೇವಲ ಹೆತ್ತ ತಾಯಿಯ ಜವಾಬ್ದಾರಿ ಮಾತ್ರವಲ್ಲ, ಅದು ತಾಯಿತಂದೆ ಇಬ್ಬರ ಜವಾಬ್ದಾರಿಯೂ ಹೌದು. ಏನೇ ಹೆಚ್ಚುವರಿ ಜವಾಬ್ದಾರಿ ಬಂದರೂ, ಅದನ್ನು ಇಬ್ಬರೂ ಸಮಾನವಾಗಿ ಹಂಚಿಕೊಳ್ಳಬೇಕು. ಇದು ಖಂಡಿತಾ ಸಾಧ್ಯ, ಪ್ರಕೃತಿಯೇ ಇದನ್ನು ಕಲಿಸುತ್ತದೆ, 10 ಸಾವಿರ ವರ್ಷಗಳ ಪ್ರಾಚೀನ ನಾಗರಿಕತೆ ಹಾಗೂ ಧರ್ಮ ಇತರ ವಿಷಯ ಕಲಿಸುವ ಹಾಗೆಯೇ. ಇದಕ್ಕೆ ಸೂತ್ರವನ್ನು ಪ್ರತಿ ಜೋಡಿಯೂ ತಾವೇ ಕಂಡುಕೊಳ್ಳಬೇಕು. ಕೆರಿಯರ್ ಪ್ರೀತಿವಾತ್ಸಲ್ಯಗಳನ್ನು ಇಬ್ಬರೂ ಸಮಾನಾಂತರವಾಗಿ ಹೇಗೆ ಹಂಚಿಕೊಳ್ಳಬೇಕು ಎಂದು ಅರಿಯಬೇಕು. ಇದು ಅಸಾಧ್ಯವಂತೂ ಅಲ್ಲ. ತಂದೆಯ ಬಳಿಯೂ ಹೆಚ್ಚಿನ ಸಮಯವಿರುತ್ತದೆ, ಅವರು ಮಕ್ಕಳನ್ನು ನೋಡಿಕೊಳ್ಳುವ, ಅವರ ಜವಾಬ್ದಾರಿ ಹೊರುವ ಮನಸ್ಸು ಮಾಡಬೇಕಷ್ಟೆ.
ಹೀಗೆ ತಂದೆಯರ ಜವಾಬ್ದಾರಿ ಹೆಚ್ಚಿದಾಗ, ಸಮಾಜ ತನಗೆ ತಾನೇ ಹೊಸ ನಿಯಮ ಮಾಡಿಕೊಂಡು, ವರ್ಕಿಂಗ್ ಫಾದರ್ಸ್ ಈ ಹೊಸ ಜವಾಬ್ದಾರಿಗೆ ಹೊಂದಿಕೊಳ್ಳುವಂತೆ ಮಾಡಬಲ್ಲದು. ಏಕೆಂದರೆ ಎಲ್ಲಾ ವರ್ಕಿಂಗ್ ಫೋರ್ಸ್ ನಲ್ಲೂ ಹೆಣ್ಣುಗಂಡು ಸರಿಸಮಾನವಾಗಿ ಚೈಲ್ಡ್ ಕೇರ್ ಗೆ ತೊಡಗುತ್ತಾರೆ, ಯಾರ ಕೆರಿಯರ್ ಗೂ ಇದರಿಂದ ತೊಂದರೆ ಆಗದು.
ಇಂದಿನ ಅಗತ್ಯ ಎಂದರೆ, ವರ್ಕಿಂಗ್ ಫಾದರ್ಸ್ ಗೆ ಬಗೆಬಗೆಯ ಸೌಲಭ್ಯಗಳು ಸಿಗುವಂತಾಗಬೇಕು, ವರ್ಕಿಂಗ್ ಮದರ್ ನ `ವರ್ಕಿಂಗ್’ ಕಿತ್ತುಕೊಳ್ಳುವಂತೆ ಆಗಬಾರದು.
ಸ್ರೀಟ್ ಡಾಗ್ಸ್ ಭಿಕಾರಿಗಳ ಹಾಗೆ
ಬೀದಿ ನಾಯಿಗಳ ಕುರಿತಾಗಿ ಸುಪ್ರೀಂ ಕೋರ್ಟ್ ನ ತೀರ್ಪು ಬಿಲ್ ಕುಲ್ ಸರಿ ಹಾಗೂ ಜನಹಿತ ಪರ. ಪ್ರಾಚೀನ ಕಾಲದಿಂದ ನಾಯಿ ಮಾನವನ ಸಂಗಾತಿ ಆಗಿದೆ. ಆದರೆ ಅವು ಹಳ್ಳಿ, ಹೊಲಗದ್ದೆ, ಕಾಡು, ಸಣ್ಣ ಊರುಗಳಲ್ಲಿದ್ದಾಗ ಸರಿಯಾಗಿತ್ತು. ಅವು ಮಾನವರ ಒಂದು ಭಾಗವೇ ಆಗಿಹೋಗಿದ್ದವು. ಆದರೆ ಇಂದಿನ ಮಹಾನಗರದ ಜೀವನದಲ್ಲಿ ಇಕ್ಕಟ್ಟಾದ ಗಲ್ಲಿ, ಟ್ರಾಫಿಕ್ ತುಂಬಿದ ರಸ್ತೆ, ಎಲ್ಲೆಲ್ಲೂ ಜನಸಾಗರ, ನಡೆದಾಡಲು ನೆಪ ಮಾತ್ರಕ್ಕೆ ದಾರಿ ಇರುವ ಕಡೆ, ಈ ನಾಯಿಗಳನ್ನು ಸರಿಸಮಾನವಾಗಿ ನೋಡಿಕೊಳ್ಳುವುದಾದರೂ ಹೇಗೆ?
ಬೀದಿ ನಾಯಿಗಳು ಬೀದಿ ಪಾಲಾದದ್ದು ಏಕೆ? ಹಿಂದೆ ಪ್ರಾಣಿಪ್ರೇಮಿ ಆಗಿದ್ದ ಮಾಲೀಕರು, ಅವನ್ನು ಬೀದಿಗೆ ಬಿಟ್ಟು ತಮ್ಮ ಕೆಲಸದಲ್ಲಿ ಬಿಝಿ ಆಗಿಹೋದರು. ಇವು ಇತರ ಹಕ್ಕಿಗಳು, ಮಂಗಗಳ ಹಾಗೆ ತಾವಾಗಿ ನಗರಕ್ಕೆ ಬಂದವಲ್ಲ. ಇವು ಹಿಂದೆಲ್ಲ ಯಾರದೋ ಮನೆಯಲ್ಲಿ ಸುಖವಾಗಿದ್ದವು, ಆದರೆ ಮಾಲೀಕರಿಗೆ ಏನೋ ಕಾರಣಕ್ಕೆ ಇವು ಬೇಡವಾದಾಗ, ಬೀದಿಗೆ ಬಿದ್ದವು. ಅಲ್ಲಿಂದ ಇವುಗಳ ಸಂತತಿ ಹಾಗೇ ಬೆಳೆಯುತ್ತಾ ಹೋಯಿತು.
ನಾಯಿಗಳಿಗೆ ಸದಾ ಮುಕ್ತ, ಫ್ರೀ ಜಾಗ ಇರಬೇಕು, ಅವು ಬಯಸಿದ ಆಹಾರ ಇರಬೇಕು, ತಮ್ಮದೇ ಟೆರಿಟರಿ ಇರಬೇಕು, ಅದು ಇಂದಿನ ಮಹಾನಗರಗಳಲ್ಲಿ ಇಲ್ಲ. ನಾಯಿಪ್ರೇಮಿಗಳು ಒಂದು ಧರ್ಮಕಾರ್ಯ ಎಂಬಂತೆ ಅವಕ್ಕೆ ಆಹಾರ ಒದಗಿಸುತ್ತಿದ್ದರು, ಆದರೆ ಬೀದಿಗೆ ಬಿದ್ದ ಮೇಲೆ ಇವಕ್ಕೆ ಅದೇನೂ ಇಲ್ಲ. ಹೀಗಾಗಿ ಕಸದ ತೊಟ್ಟಿಯಲ್ಲಿ ಸಿಗುವ ವಿಟಮಿನ್ ಯುಕ್ತ ಆಹಾರ ಸೇವಿಸಲು ಆರಂಭಿಸಿದವು. ಹೀಗೆ ಒಮ್ಮೆ ಆರೋಗ್ಯ ಗಳಿಸಿದರೆ, ಆಹಾರವಿಲ್ಲದೆ ಒಮ್ಮೊಮ್ಮೆ ರಕ್ತಪಿಪಾಸುಗಳಾಗುತ್ತವೆ.
ಈ ನಾಯಿಗಳಿಗೆ ಅವುಗಳ ಏರಿಯಾಗೆ ಬರುವಂಥ ಪ್ರತಿಯೊಬ್ಬ ಅಪರಿಚಿತರೂ ಶತ್ರು ಸಮಾನ ಆಗುತ್ತಾರೆ. ಅದು ಮಗು, ಮುದುಕರು, ಇತರ ಪ್ರಾಣಿ ಯಾರೇ ಆಗಿರಬಹುದು. ಇದಕ್ಕೆ ನಾಯಿಪ್ರೇಮಿಗಳ ಬಳಿ ಯಾವ ಚಿಕಿತ್ಸೆಯೂ ಇಲ್ಲ. ಏಕೆಂದರೆ ಮನೆಯಲ್ಲೇ ವಾಸಿಸುವ, ತರಬೇತಿ ಪಡೆದ ನಾಯಿಗಳೂ ಸಹ ಉಗ್ರ ಆಗುತ್ತವೆ. ಮಾಲೀಕರು ಕಟ್ಟಿದ್ದ ಹಗ್ಗ ಬಿಡಿಸಿಕೊಂಡು, ಯಾರನ್ನು ಶತ್ರು ಎಂದು ಭಾವಿಸುತ್ತಲೇ ಅವರ ಮೇಲೆ ಆಕ್ರಮಣ ನಡೆಸುತ್ತವೆ.
ಸುಪ್ರೀಂ ಕೋರ್ಟ್ ದೆಹಲಿಯ ಬೀದಿಗಳಿಂದ ಇದನ್ನು ಓಡಿಸಿದ್ದಾರೆ, ಇದು ಒಳ್ಳೆಯದಾಯಿತು. ಇದನ್ನು ಹಲವು ವರ್ಷಗಳ ಹಿಂದೆಯೇ ಪ್ರತಿ ಸಂಘಸಂಸ್ಥೆ, ನಗರಪಾಲಿಕೆಗಳು ಕೈಗೊಳ್ಳಬೇಕಿತ್ತು.
ಪ್ರಾಣಿಪ್ರಿಯರಿಗೆ ಈ ಮೂಕಜೀವಿಗಳ ಮೇಲೆ ಪ್ರೀತಿ ಇದೆ ಅಂತೇನಲ್ಲ. ಈ ಜನ ಧಾರ್ಮಿಕ ಕಾರಣಗಳಿಗಾಗಿ ಹೀಗೆ ಮಾಡುತ್ತಾರೆ. ಹಸುವಿಗೆ ಆಹಾರ ಕೊಟ್ಟರೆ ಪುಣ್ಯ ಸಿಗುತ್ತದೆ, ಗೋಪೂಜೆಯಿಂದ ಪುಣ್ಯಪ್ರಾಪ್ತಿ ಎಂದೆಲ್ಲ ಭಾವಿಸುತ್ತಾರೆ. ಈ ಮಂದಿ ನಾಯಿಗಳಿಗೆ ಏನು ಉಣಿಸುತ್ತಾರೋ ತಿಳಿಯದು, ಬೀದಿ ನಾಯಿ ಹೇಗೆ ಈ ಮಟ್ಟದಲ್ಲಿ ಹೆಚ್ಚುತ್ತವೆ, ಪರಸ್ಪರ ಕಿತ್ತಾಡಿ ಹೇಗೆ ಗಾಯ ಮಾಡಿಕೊಳ್ಳುತ್ತವೆ, ಇತ್ಯಾದಿ ಏನೂ ತಿಳಿಯದು. ಬೀದಿ ನಾಯಿ ಬೀದಿ ಭಿಕಾರಿಗಳ ತರಹವೇ, ಅವರಿಗೆ ಆಹಾರ, ಕಂಬಳಿ ಕೊಡಬಹುದೇ ಹೊರತು ಯಾರೂ ಅವರನ್ನು ಮನೆಗೆ ಸೇರಿಸಿಕೊಳ್ಳುವುದಿಲ್ಲ.
ಕಿಷ್ಕಿಂಧೆಯಾದ ನಗರ ಜೀವನದಲ್ಲಿ ಕಡಿವಾಣ ಇಲ್ಲದೇ ಬೆಳೆಯುತ್ತಿರುವ ಈ ನಾಯಿಗಳನ್ನು ಹೀಗೇ ಬಿಡು ಬದಲು, ಅವು ಹುಟ್ಟದಂತೆ ನಿಯಂತ್ರಿಸುವುದೇ ಸರಿ. ಇಂಥ ನಾಯಿಗಳನ್ನು ಮಕ್ಕಳ ಹಾಗೆ ಎಂದು ಭಾವಿಸುವುದಾದರೆ, ಅವುಗಳ ವ್ಯಾಪಾರದ ಧಂಧೆ ನಿಲ್ಲಬೇಕು. ಕಾನೂನಿನ ಪ್ರಕಾರ ಇವನ್ನು ಸಾಕುವ ಹೊಣೆ ಹೊರುವಂತಾಗಬೇಕು. ಯಾರು ಒಮ್ಮೆ ಇನ್ನು ಸಾಕು ಜವಾಬ್ದಾರಿ ಹೊರುತ್ತಾರೋ, ಅವರು ಅಕ್ಷರಶಃ ಈ ನಾಯಿಗಳ ಆರೈಕೆ ಮಾಡಬೇಕು. ಎಲ್ಲಾ ಪ್ರಾಣಿಪ್ರೇಮಿಗಳೂ ಇದನ್ನು ನಿಷ್ಠೆಯಿಂದ ಮಾಡದ ಕಾರಣ, ಇವನ್ನು ಅನಿಮಲ್ ಶೆಲ್ಟರ್ ಗಳಲ್ಲಿ ಬಿಡುವುದೇ ಸರಿ. ವಿದೇಶಗಳ ಅನೇಕ ನಗರಗಳಲ್ಲಿ ಇವನ್ನು `ಕಲಿಂಗ್’ ಎಂಬ ಹೆಸರಲ್ಲಿ ಸಾಯಿಸಲಾಗುತ್ತದೆ.
ನಾಯಿ ಮಾನವರ ಸಂಗಾತಿ ಸರಿ, ಆದರೆ ಇಲ್ಲಿ ನಾಯಿಗೆ ಸಂಗಾತಿಯಾದರು ಮಾನವರಾಗಿರುವುದೇ ಕಂಟಕಕ್ಕೆ ಬಂದಿದೆ. ಅವರು ಸ್ವಾರ್ಥಿ ಸಂಗಾತಿಗಳು, ಬಡಿಗೆಯಿಂದ ಬಾರಿಸಲು ಹಿಂಜರಿಯುವವರಲ್ಲ.





