ಖುಲ್ಲಂಖುಲ್ಲಾ ಡಿಂಗ್‌ ಡಾಂಗ್‌!

ಬಾಲಿವುಡ್‌ನ ಎಲ್ಲಾ ಜೋಡಿಗಳೂ ತಮ್ಮ ಸಂಬಂಧವನ್ನು ಮೀಡಿಯಾದಿಂದ ಗುಟ್ಟಾಗಿರಿಸಲು ಬಯಸಿದರೆ ಈ ಜೋಡಿ ಮಾತ್ರ ಖುಲ್ಲಂಖುಲ್ಲಾ ತಮ್ಮ ಪ್ರೇಮ ಪ್ರದರ್ಶಿಸುತ್ತಾ ಊರಿಗೆಲ್ಲ ಡಂಗೂರ ಸಾರುತ್ತಿದ್ದಾರೆ, ಅದುವೆ ಮುಗ್ಧಾ ಗೋಡ್ಸೆ ಹಾಗೂ ರಾಹುಲ್ ದೇವ್ ‌ಜೋಡಿಯದು. ಇತ್ತೀಚೆಗಷ್ಟೇ ಬೀಚ್‌ ಬಳಿ ನಲಿದಾಡುತ್ತಿದ್ದ ಈ ಜೋಡಿಯ ಫೋಟೋ ಫೇಸ್‌ಬುಕ್‌ನಲ್ಲಿ ವೈರಲ್ ಆಗಿ, ಎಲ್ಲೆಲ್ಲೂ ಚರ್ಚೆ ನಡೆಯಿತು. ಮದುವೆ ದಿನಾಂಕದ ಬಗ್ಗೆ ಮಾತ್ರ ಇಬ್ಬರೂ ಗಪ್‌ ಚುಪ್‌!

`ತನು ವೆಡ್ಸ್ ಮನು’ ಸೀರೀಸ್‌ನಿಂದ ಕಂಗನಾ ಔಟ್‌

ಅತಿಯಾದ ಮಾತು ಬಿಟ್ಟಿ ಪಬ್ಲಿಸಿಟಿಯನ್ನೇನೋ ನೀಡುತ್ತದೆ, ಆದರೆ ಅದರ ಪರಿಣಾಮ ಮಾತ್ರ ಪರ್ಸನಲ್ ಲೈಫ್‌ ಜೊತೆಯಲ್ಲೇ ಕೆರಿಯರ್‌ ಮೇಲೂ ಆಗುತ್ತದೆ. ಕಳೆದ ವರ್ಷ ಕಂಗನಾ ತನ್ನ ಇಂಥದೇ ಹುಚ್ಚು ಮಾತುಗಳಿಂದ ಮೀಡಿಯಾದಲ್ಲಿ ಮಿಂಚಿದ್ದಳು. ಅದರ ಪರಿಣಾಮವಾಗಿ ಜನ ಈಕೆಯನ್ನು ಪಾರ್ಟಿ, ಈವೆಂಟ್‌ ಶೋಗಳಿಗೆ ಕರೆಯುವುದನ್ನೇ ಬಿಟ್ಟರು ಇತ್ತೀಚಿನ ಸುದ್ದಿ ಎಂದರೆ ಆನಂದ್‌ ರಾಯ್‌ರ `ತನು ವೆಡ್ಸ್ ಮನು’ 1,  2 ಎರಡರಲ್ಲೂ ಈಕೆಗೆ ಉತ್ತಮ ಅವಕಾಶಗಳಿತ್ತು. ಆದರೆ ಈಗ ಅದರ 3ನೇ ಭಾಗದಲ್ಲಿ ನಿರ್ಮಾಪಕ ನಿರ್ದೇಶಕರಿಗೆ ಈಕೆ ಬೇಕಾಗಿಲ್ಲವಂತೆ! ಇದರ 2ನೇ ಭಾಗದ ಶೂಟಿಂಗ್‌ನಿಂದಲೇ ನಿರ್ದೇಶಕ ಆನಂದ್ ಹಾಗೂ ಕಂಗನಾ ಮಧ್ಯೆ ಜಗಳ ಶುರುವಾಗಿತ್ತು. ಈಕೆಯ ನಾನಾ ಬಗೆಯ ನಖ್ರಾ ಸಹಿಸಿ ಸಾಕಾದ ಅವರು, ಈಕೆಗೆ ಅಂದೇ `ಖೊಕ್‌’ ಕೊಡಲು ನಿರ್ಧರಿಸಿದ್ದರಂತೆ.

ಕುಳ್ಳನಾಗಿ ಮತ್ತೆ ಎತ್ತೆರಕ್ಕೇರಲಿರುವ ಶಾರೂಖ್

ತನ್ನ ಕೆರಿಯರ್‌ನ ಇಳಿಮುಖದಲ್ಲಿರುವ ಶಾರೂಖ್‌, ಆನಂದ್‌ ರಾಯ್‌ರ `ಝೀರೋ’ ಚಿತ್ರವನ್ನೇ ನಂಬಿಕೊಂಡಿದ್ದಾನೆ. ಈ ಚಿತ್ರ ಗೆದ್ದರೆ ಮಾತ್ರ ಈತನ ಉಳಿವು ಎಂದಾಗಿದೆ. ಖಾನ್‌ತ್ರಯರಲ್ಲಿ ಆಮೀರ್‌, ಸಲ್ಮಾನ್‌ರ ಚಿತ್ರಗಳ ಗಳಿಕೆಯ ಆಸುಪಾಸಿಗೂ ನುಸುಳಲಾರದ ಗತಿ ಈತನ ಚಿತ್ರಗಳಿಗೆ ಬಂದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಚಿತ್ರ ರಿಲೀಫ್‌ ನೀಡಬಹುದೇ…..? ಟೈಟಲ್ ಅನ್ವರ್ಥಕ ಆಗಬಾರದಷ್ಟೆ.

ವರ ರೆಡಿ, ಆದರೆ ಮನೆಯವರು ಒಪ್ಪಬೇಕಲ್ಲ

ಡ್ಯಾಶಿಂಗ್‌ ಹೀರೋ ವರುಣ್‌ ಈಗಾಗಲೇ `ಹಂಪ್ಟಿ ಶರ್ಮ ಕೀ ದುಲ್ಹನಿಯಾ, ಬದ್ರೀನಾಥ್‌ ಕೀ ದುಲ್ಹನಿಯಾ’ ದಂಥ ಚಿತ್ರಗಳಲ್ಲಿ ವರನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾನೆ. ಆದರೆ ನಿಜ ಜೀವನದಲ್ಲಂತೂ ವರನಾಗಿ ವಧು ಹುಡುಕುವುದರಲ್ಲಿ ಫ್ಲಾಪಾಗಿದ್ದಾನೆ. ಇವನ ವಧು ಯಾರಪ್ಪ…. ಅಂದಿರಾ? ಆಲಿಯಾ ಬೇಬಿ ಅಂತೂ ಖಂಡಿತಾ ಅಲ್ಲ ಬಿಡಿ. ಇತ್ತೀಚೆಗೆ ವರುಣ್ ಫ್ಯಾಷನ್‌ ಡಿಸೈನರ್‌ ನತಾಶಾಳ ಹಿಂದೆ ಭಾರಿ ಸುತ್ತುತ್ತಿದ್ದ. ಒಂದು ಸಂದರ್ಶನದಲ್ಲಿ ತನ್ನ ದುಃಖ ಹಂಚಿಕೊಳ್ಳುತ್ತಾ ಈತ, “ನಾನೇನೋ ವರನಾಗಿ ಕುದುರೆ ಹತ್ತಲು ರೆಡಿ. ಆದರೆ ನಮ್ಮ ಮನೆಯವರಿಗೆ ಯಾವ ವಧು ಒಪ್ಪಿಗೆ ಆಗುತ್ತಿಲ್ಲವಲ್ಲ…..?” ಎನ್ನುವುದೇ?

ಈಶಾಳಿಗೆ ಇದೆಂದರೆ ಅಲರ್ಜಿಯಂತೆ

ಕಳೆದ ವರ್ಷ ಈಶಾಳದೇ ಗಾಸಿಪ್ಪೋ ಗಾಸಿಪ್ಪು! ಮೊದಲು ತನ್ನ ಹಾಟ್‌ ಶೂಟ್‌ನಿಂದ ಸುದ್ದಿಯಲ್ಲಿ ಮಿಂಚಿದಳು. ಇತ್ತೀಚೆಗೆ ಈಕೆ ಇನ್‌ಸ್ಟಾಗ್ರಾಂನಲ್ಲಿ ತನ್ನ ಒಂದು ವಿಡಿಯೋ ಪೋಸ್ಟ್ ಮಾಡಿದ್ದಳು. ಅದರಲ್ಲಿ ಒಬ್ಬನನ್ನು ತೋರಿಸುತ್ತಾ ಈಕೆ, “ಐ ಹೇಟ್‌ ದಿಸ್ ಮ್ಯಾನ್‌!” ಎನ್ನುತ್ತಾಳೆ. ಆದರೆ ಇವಳಿಗೆ ಇಷ್ಟು ಕೋಪ ತರಿಸಿದ ಈ ಮನುಷ್ಯ ಯಾರು? ಅಸಲಿಗೆ ಈತ ಈಶಾಳ ಫಿಟ್‌ನೆಸ್ ಟ್ರೇನರ್‌ ವಿಕಾಸ್‌. ಇವಳ ಮೈಯಿಂದ ಬೆವರು ಹರಿಸುವುದೇ ಅವನ ಕೆಲಸ. ಹಲವು ದಿನಗಳಿಂದ ಇವಳ ಕೆರಿಯರ್‌ ತಣ್ಣಗಾಗಿದೆ. ಹಿಂದಿನ `ಬಾದ್‌ಶಾಹೋ’ ಸಂಪೂರ್ಣ ತೋಪಾಗಿತ್ತು, `ರುಸ್ತುಂ’ ಅಂತೂ ಇಂತೂ ಒಂದಿಷ್ಟು ಹೆಸರು ತಂದುಕೊಟ್ಟಿತು. ಕೆಲವು ದಿನಗಳ ಹಿಂದೆ ಈಕೆ ನ್ಯಾಪೋಟಿಸಂ ಬಗ್ಗೆ ಕಮೆಂಟ್‌ ಮಾಡುತ್ತಾ, ತನ್ನನ್ನು ಈಗಲೂ ಇಂಡಸ್ಟ್ರಿಯಲ್ಲಿ ಔಟ್‌ ಸೈಡರ್‌ನಂತೆ ಟ್ರೀಟ್ ಮಾಡುತ್ತಾರೆ, ಏಕೆಂದರೆ ತನ್ನ ಹೆಸರಿನ ಜೊತೆ ಯಾವುದೇ ಸ್ಟಾರ್‌ ಸರ್‌ನೇಮ್ ಇಲ್ಲವಲ್ಲ…. ಎಂದು ವ್ಯಂಗ್ಯವಾಡುತ್ತಾಳೆ.

ಈ ಕೆನೆಡಿಯನ್‌ ಸುಂದರಿಗೆ ಸರಿಸಾಟಿ ಯಾರು?

ತನ್ನ ಐಟಂ ಸಾಂಗ್‌ನಿಂದ ಎಂಥ ಡಲ್ ಸಿನಿಮಾಗೂ ಜೀವ ತುಂಬಬಲ್ಲ ಇಂಡಿಯನ್‌ ಕೆನೆಡಿಯನ್‌ ಗರ್ಲ್ ನೋರಾ ಫತೇಹಿ ಇದುವರೆಗೂ ಬಾಲಿವುಡ್‌ಗಿಂತ ತೆಲುಗು ಚಿತ್ರಗಳಲ್ಲಿ ಮಿಂಚಿದ್ದೇ ಹೆಚ್ಚು. ಈವರೆಗೂ ಬಾಲಿವುಡ್‌ನಲ್ಲಿ ಕೇವಲ ಗೌರವ ನಟಿಯಾಗಿ ಕಾಣಿಸುತ್ತಿದ್ದ ಈಕೆಗೆ ಇದೀಗ ಸಂಜಯ್‌ ಸೂರಿಯ `ಮೈ ಬರ್ತ್‌ ಡೇ ಸಾಂಗ್‌’ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿ ಪಾತ್ರ! ಕೌಟುಂಬಿಕ ಕಥಾಹಂದರವುಳ್ಳ ಈ ಚಿತ್ರದಲ್ಲಿ ನೋರಾಳಿಗೆ ನಿಜಕ್ಕೂ ಚಾಲೆಂಜಿಂಗ್‌ ರೋಲ್ ಇದೆಯಂತೆ.

ಕಾಫಿ ಕೆಫೆ ಅನುಗ್ರಹಿಸಿದ ಅವಕಾಶ

ಯಶ್‌ ರಾಜ್‌ ಫಿಲಮ್ಸ್ ನ ಆದಿತ್ಯ ಚೋಫ್ರಾ ತಮ್ಮ ಚಿತ್ರಕ್ಕಾಗಿ ಹೊಸ ಮುಖದ ಹುಡುಕಾಟಕ್ಕಾಗಿ ಖುದ್ದಾಗಿ ಓಡಾಡುತ್ತಾರೆ. ರಣವೀರ್‌ನ ಕಸಿನ್‌ ಆದರ್‌ ಜೈನ್‌ ಈ ರೀತಿ `ಕೈದಿ ಬ್ಯಾಂಡ್‌’ ಚಿತ್ರದಿಂದ ಡೆಬ್ಯು ಆಗಿದ್ದ. ಈ ಚಿತ್ರದಲ್ಲಿ ಆದರ್‌ಗೆ ಎದುರಾಗಿ ಆದಿತ್ಯ ಫ್ರೆಶ್‌ ಮುಖವನ್ನೇ ಬಯಸಿದ. ಆಗ ಈತನಿಗೆ ಸಿಕ್ಕ ಹೊಸ ಹುಡುಗಿ ಆನ್ಯಾ ಸಿಂಗ್‌, ಅದೂ ದೆಹಲಿಯ ಒಂದು ಕಾಫಿ ಕೆಫೆಯಲ್ಲಿ! ದೆಹಲಿಯ ನಿವಾಸಿಯಾದ ಈಕೆ ಮೊದಲು ಮಾಡೆಲಿಂಗ್‌ ಮಾಡುತ್ತಿದ್ದಳಂತೆ. ಯಶ್‌ರಾಜ್‌ ಫಿಲಮ್ಸ್ ನಲ್ಲಿ ಕೆಲಸ ಸಿಕ್ಕಿದ್ದು ಈಕೆಯ ಕೆರಿಯರ್‌ಗೆ ಗರಿ ಮೂಡಿಸಿದೆ. ಆದರೆ ಇದು ಎಷ್ಟು ತೋಪಾಯಿತೆಂದರೆ ಆದರ್‌ಗೆ ಮತ್ತೊಂದು ಚಾನ್ಸ್ ಸಿಕ್ಕಿದ್ದರೆ ಕೇಳಿ….. ಆದಿತ್ಯ ಈಗಾಗಲೇ ಆನ್ಯಾಳನ್ನು 3 ಸಿನಿಮಾಗೆ ಬುಕ್‌ ಮಾಡಿ ಆಯ್ತಂತೆ! ಹಿಂದೆ ಅನುಷ್ಕಾ ಶರ್ಮ ಸಹ ಅವನಿಗೆ ಹೀಗೇ ಸಿಕ್ಕಿದ್ದು.

ಮಲೈಕಾಳನ್ನು ಬಿಟ್ಟ ಅರ್ಬಾಝ್ ಮತ್ತೊಂದೆಡೆ ಬಿಝಿ

ಮಲೈಕಾ ಅರ್ಬಾಝ್ ನಡುವೆ ಡೈವೋರ್ಸ್‌ ಮೂಡಲು ಅರ್ಜುನ್‌ ಕಪೂರ್‌ ಮಲೈಕಾರ ಅಫೇರ್‌ ಕಾರಣ ಎನ್ನುತ್ತಿದ್ದರು. ವಿಚ್ಛೇದನದ ನಂತರ ಈಗ ಅರ್ಬಾಝ್ ಸಹ ಒಬ್ಬ ಮಿಸ್ಟ್ರಿ ಗರ್ಲ್ ಜೊತೆ ಆಗಾಗ ಕಾಣಿಸುತ್ತಾನೆ. ಈಕೆ ಬೇರಾರೂ ಅಲ್ಲ, ಯಾರಾ ಮೆಹ್ರಾ! ಆದರೆ ಇವರಿಬ್ಬರ ಬಾಯಲ್ಲೂ ತಮ್ಮ ಸಂಬಂಧ ಕೇವಲ ಸ್ನೇಹ ಅಷ್ಟೇ ಅಂತೆ. ಈಕೆ ಮಾತ್ರವಲ್ಲದೆ ಈತ ವಿದೇಶ ಸುಂದರಿ ಅಲೆಗ್ಸಾಂಡ್ರಿಯಾ ಜೊತೆ ಕೂಡ ಸುತ್ತುತ್ತಿದ್ದಾನಂತೆ. ತನ್ನ ಒಂಟಿತನ ನೀಗಿಸಿಕೊಳ್ಳಲು ಈತನಿಗೆ ಯಾರಾದರೊಬ್ಬರ ಕಂಪನಿ ಬೇಕೇಬೇಕು. ನೋಡೋಣ ಮುಂದೆ……

ಸಲ್ಮಾನ್‌ಗೆ ಮನಸೋಲದಿರಲು ಸಾಧ್ಯವೇ?

ಬಾಲಿವುಡ್‌ನ ಮೋಸ್ಟ್ ವಾಂಟೆಡ್‌ ಬ್ಯಾಚುಲರ್‌ ಸಲ್ಮಾನ್‌ನ ಹುಚ್ಚರ ಪಟ್ಟಿ ದಿನೇದಿನೇ ಬೆಳೆಯುತ್ತಿದೆ. ಈಗಿದಕ್ಕೆ ಹೊಸ ಸೇರ್ಪಡೆ ಎಂದರೆ ಶ್ರೀಲಂಕಾದ ಹುಡುಗಿ ಜ್ಯಾಕ್‌ಲೀನ್‌. ಈತನ ಜೊತೆ `ಕಿಕ್‌’ನಲ್ಲಿ ನಟಿಸಿದ್ದೇ ಇವಳು ಇವನಿಗೆ ಮನಸೋತಳಂತೆ. `ರೇಸ್‌’ ಚಿತ್ರದಲ್ಲೂ ಇವರಿಬ್ಬರೇ ಪ್ರಮುಖರು. ಆತನ ಕುರಿತಾಗಿ ಇವಳು ಹೇಳುತ್ತಾಳೆ, “ಅವರು ನನ್ನೆದುರು ಬಂದಾಗೆಲ್ಲ ನಾನು ಬಹಳ ನರ್ವಸ್ ಆಗುತ್ತೇನೆ. ನನ್ನ ಡೈಲಾಗ್ಸ್ ಸಹ ಮರೆತುಬಿಡ್ತೀನಿ. ಅವರೊಂದಿಗೆ ನನ್ನ ಸಂಬಂಧ ಸಾಕಷ್ಟು ಆಳವಾದುದು. ಅವರ ಕಾರಣದಿಂದಲೇ ನನಗೆ `ಕಿಕ್‌’ನಲ್ಲಿ ಚಾನ್ಸ್ ಸಿಕ್ಕಿದ್ದು.” `ರೇಸ್‌’ ನಂತರ ಇವರಿಬ್ಬರೂ `ಕಿಕ್‌’ನಲ್ಲೂ ಮುಂದುವರಿಯಲಿದ್ದಾರೆ.

ಮಗನ ಡೈಪರ್‌ ಬದಲಿಸಿದರೆ ತಪ್ಪೇನು?

ಛೋಟೆ ನವಾಬ್‌ ಎಂದೇ ಖ್ಯಾತನಾದ ಸೈಫ್‌ ಅಲಿಖಾನ್‌ ಇದೀಗ ಮಗ ಹುಟ್ಟಿದಾಗಿನಿಂದ ಫುಲ್ ಟೈಂ ಅವನ ಡೈಪರ್ ಬದಲಾಯಿಸುವುದರಲ್ಲಿ ಬಿಝಿ ಅಂತೆ. ತೈಮೂರ್‌ ಎಂಬ ಹೆಸರಿನ ಕಾರಣದಿಂದ ಈ ಮಗು ಹಿಂದೆ ಸುದ್ದಿಯಲ್ಲಿತ್ತು, ಈಗ ತನ್ನ ಕ್ಯೂಟ್‌ನೆಸ್‌ನಿಂದಾಗಿ ಹೆಸರು ಮಾಡುತ್ತಿದೆ. ಇದೀಗ ತಾನೇ ತನ್ನ ಮೊದಲ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿಕೊಂಡ ಈ ಮಗು, ತನ್ನ ಬಾಲ ಭಾಷೆಯನ್ನು ಅಮ್ಮ ಮಾತ್ರ ಅರ್ಥ ಮಾಡಿಕೊಳ್ಳುತ್ತಾಳೆ ಎನ್ನುತ್ತದೆ. ಅಪ್ಪ ಮಗುವನ್ನು ಆಂಗ್ಲದಲ್ಲೇ ಪಲುಕಿದರೆ, ಪಂಜಾಬಿ ತಾಯಿ ಕರೀನಾ, ಮಾತೃಭಾಷೆಯನ್ನು ಕಲಿಸತೊಡಗಿದ್ದಾಳೆ.

ಪಾತ್ರಕ್ಕೆ ತಕ್ಕಂತೆ ಬದಲಾಗುತ್ತಾ ಇರುತ್ತೇನೆ

ತನ್ನ ಮೊದಲ ಚಿತ್ರ `ದಂ ಲಗಾಕೆ ಹೈಶಾ’ದಲ್ಲಿ 85 ಕಿಲೋ ತೂಕದ ಡುಮ್ಮಿಯ ಪಾತ್ರ ನಿರ್ವಹಿಸಿ ಎಲ್ಲರಿಂದ ಸೈ ಎನಿಸಿಕೊಂಡಿದ್ದ ಭೂಮಿ ಪೆಡ್ನೇಕರ್‌ಗೆ ಮುಂದೆ ಟುನ್‌ ಟುನ್‌ ಅಥವಾ ಡುಮ್ಮಿ ಭಾರತಿಯಂಥ ಕಾಮಿಡಿ ಪಾತ್ರಗಳಷ್ಟೆ ಎಂದು ಬಾಲಿವುಡ್‌ ಆಡಿಕೊಂಡಿತ್ತು. ಆದರೆ ಮುಂದಿನ ಚಿತ್ರಗಳ ಡಿಮ್ಯಾಂಡ್‌ ಪ್ರಕಾರ ಕೂಡಲೇ ಸ್ಲಿಮ್ ಟ್ರಿಮ್ ಆದ ಈಕೆ ಖಿಲಾಡಿ ಕುಮಾರ್‌ ಜೊತೆ `ಟಾಯ್ಲೆಟ್‌: ಏಕ್‌ ಪ್ರೇಮ್ ಕಥಾ’ ಮತ್ತು ಆಯುಷ್ಮಾನ್‌ ಜೊತೆ `ಶುಭ್ ಮಂಗಲ್ ಸಾವಧಾನ್‌’ ಚಿತ್ರದಲ್ಲಿ ಬಳುಕುವ ಬಳ್ಳಿಯಾಗಿ ಕಾಣಿಸಿದಾಗ ಎಲ್ಲರೂ ಗಪ್‌ ಚುಪ್‌! ಚಿತ್ರದ ಪಾತ್ರಕ್ಕೆ ತಕ್ಕಂತೆ ಬದಲಾಗುವ ಭೂಮಿಯ ಭೂಮಿ ತೂಕದ ಗುಣ ಎಲ್ಲರಿಗೂ ಬರಲಿ.

ರಾಜಕೀಯಕ್ಕಿಳಿದ ರಜನಿ

ಕನ್ನಡ ಪತ್ರಿಕೆಯೊಂದರಲ್ಲಿ ಪ್ರೂಫ್‌ ರೀಡರ್‌, ನಂತರ ಬಸ್‌ ಕಂಡಕ್ಟರ್‌, ಆಮೇಲೆ ನಟನಾಗಿ ಸೂಪರ್‌ ಸ್ಟಾರ್‌ ಆದ ತಲೈವಾ ರಜನೀಕಾಂತ್‌ ತಮ್ಮ 67ನೇ ವಯಸ್ಸಿನಲ್ಲಿ ರಾಜಕೀಯಕ್ಕೆ ಇಳಿಯುವ ಸಾಹಸ ಮೆರೆದಿದ್ದಾರೆ. ತಮ್ಮ ರಾಜಕೀಯ ಪಕ್ಷದ ಲೋಗೋ, ಪಾರ್ಟಿ ಬಗ್ಗೆ ತಿಳಿಸಿದ್ದಾರೆ. ಇದರಿಂದಾಗಿ ತಮಿಳುನಾಡಿನಲ್ಲಿ ಹೊಸತೊಂದು ಪಕ್ಷದ ಉದಯವಾಗಿದೆ. ಜಯಲಲಿತಾರ ನಿಧನದಿಂದ ರಾಜಕೀಯವಾಗಿ ಖಾಲಿ ಉಳಿದಿರುವ ಸ್ಟಾರ್‌ ವರ್ಚಸ್ಸಿನ ವ್ಯಕ್ತಿಯೊಬ್ಬರ ಅಗತ್ಯವನ್ನು ಪೂರೈಸಲಿದ್ದಾರೆ. ದ. ಭಾರತದಲ್ಲಿ ಎಂ.ಜಿ.ಆರ್‌,  ಎನ್‌.ಟಿ.ಆರ್‌, ಜಯಾ ನಂತರ ಹೊಸ ಆಶಾಕಿರಣ ಕಾಣಿಸಿದೆ. ಕಮಲಹಾಸನ್‌ ಸಹ ತಮ್ಮ ಪಕ್ಷದ ಬಗ್ಗೆ ಸಾರಿಕೊಂಡಿರುವ ಈ ಸಂದರ್ಭದಲ್ಲಿ ಇವರಿಬ್ಬರನ್ನೂ ಹಿಂದಿನ ಶಿವಾಜಿ ಎಂ.ಜಿ.ಆರ್‌ಗೆ ಹೋಲಿಸಿ ಜನತೆ ಬೆರಗಾಗಿದೆ. ಮುಂದೆ….? ಕಾದು ನೋಡೋಣ.

ಮದುವೆ ನಂತರ ವಾಪಸ್ಸಾದ ಸುರ್ವೀನ್

`ಪಾರ್ಚ್ಡ್,’ `ಹೇಟ್‌ ಸ್ಟೋರಿ-2′ ಮುಂತಾದ ಚಿತ್ರಗಳಲ್ಲಿನ ತನ್ನ ಹಾಟ್‌ ಅಭಿನಯದಿಂದ ಪಡ್ಡೆಗಳಿಗೆ ಹುಚ್ಚು ಹಿಡಿಸಿದ ಸುರ್ವೀನ್ ಚಾವ್ಲಾ, ಇತ್ತೀಚಿಗಷ್ಟೆ ಸೈಲೆಂಟ್‌ ಆಗಿ ಮದುವೆ ಮಾಡಿಕೊಂಡು ಬಂದಿದ್ದಾಳೆ. ಇದೀಗ ಈಕೆ ರಾಜೀವ್ ‌ಖಂಡೇಲ್ ರಾವ್ ಜೊತೆ ಡಿಜಿಟಲ್ ಧಾರಾವಾಹಿ `ಹಕ್‌ ಸೇ’ನಲ್ಲಿ ಕೆಲಸ ಮಾಡುತ್ತಿದ್ದಾಳೆ. ಈ ಧಾರಾವಾಹಿ ತಯಾರಾಗಲು ಕನಿಷ್ಠ 2 ವರ್ಷ ಬೇಕಾಯಿತು. ಈ ಧಾರಾವಾಹಿ ಅಲ್ಕೋಟ್‌ರ ಖ್ಯಾತ ಕಾಂದಬರ್‌` ದಿ ಲಿಟ್ಲ್ ವುಮನ್‌’ ಆಧಾರಿತ.

ಪೋರಸ್‌ ಸೆಟ್‌ನಲ್ಲಿ ಬೆಂಕಿಗೆ ಸಿಲುಕಿದ ಸಮೀಕ್ಷಾ

ಕಿರುತೆರೆಯ 500 ಕೋಟಿಗಳ ಭಾರಿ ಬಜೆಟ್‌ನ `ಪೋರಸ್‌’ ಧಾರಾವಾಹಿ, ತನ್ನ ಭವ್ಯತೆ ಉಳಿಸಿಕೊಳ್ಳಲು ಹೆಚ್ಚು ನೈಜವಾಗಿ ಬರಲಿ ಎಂದು ರಿಯಲ್ ಶೂಟಿಂಗ್‌ಗೇ ಹೆಚ್ಚು ಆದ್ಯತೆ ನೀಡುತ್ತಿದೆ. ಇದರ ಒಂದು ಎಪಿಸೋಡ್‌ನ ಶೂಟಿಂಗ್‌ನಲ್ಲಿ ಒಲಂಪಿಯಾ (ಅಲೆಗ್ಸಾಂಡರ್‌ನ ತಾಯಿ) ಪಾತ್ರ ವಹಿಸುತ್ತಿರುವ ಸಮೀಕ್ಷಾ ಸಿಂಗ್‌, ಬೆಂಕಿಯ ಬಲೆಗೆ ಸಿಕ್ಕಿದ್ದು ನಿಜಕ್ಕೂ ದುರಂತ. ಇದರಿಂದ ಈಕೆಯ ಬೆನ್ನು, ಮುಖ ಭಾಗ ಸುಟ್ಟುಹೋಯಿತು. “ನನ್ನ ಬೆನ್ನಿನ ಬಹುತೇಕ ಭಾಗ ಸುಟ್ಟಿದೆ. ಸ್ವಲ್ಪ ಭಾಗ ಮುಖ ಕೂಡ . ಶೂಟಿಂಗ್‌ ನಿರ್ವಹಣೆಯಲ್ಲಿ ಎಷ್ಟು ನಿರತಳಾಗಿದ್ದೆ ಎಂದರೆ ಇದಾಗಿ 5 ನಿಮಿಷ ನನಗೆ ಏನೂ ತಿಳಿಯಲೇ ಇಲ್ಲ. ಶೂಟಿಂಗ್‌ ಮುಗಿಸಿ ಸ್ನಾನಕ್ಕೆಂದು ಬಾತ್‌ರೂಮಿಗೆ ಹೊರಟಾಗಲೇ ಬೆನ್ನು ವಿಪರೀತ ಉರಿಯುತ್ತಿರುವ ಅನುಭವ ಆಯಿತು. ಮುಖದ ಮೇಕಪ್‌ತೆಗೆಯುವಾಗಲೂ ಹಾಗೆ ಆಯಿತು. ನಾನು ಕನ್ನಡಿಯಲ್ಲಿ ನನ್ನ ಬೆನ್ನು ನೋಡಿಕೊಂಡಾಗ, ಅಲ್ಲೆಲ್ಲ ಕೆಂಪು ಕೆಂಪಾದ ಪದರ ಉಂಟಾಗಿತ್ತು. ನನ್ನ ಮುಖ ಸನ್‌ಬರ್ನ್‌ಗೆ ಒಳಗಾದಂತಿದೆ,” ಎನ್ನುತ್ತಾಳೆ ಸಮೀಕ್ಷಾ.

ಮಹಿಳಾ ಕ್ರಿಕೆಟ್‌ ಮ್ಯಾಚ್‌ಗಾಗಿ ರಾತ್ರಿಯಿಡೀ ಜಾಗರಣೆ

ಸ್ಟಾರ್‌ ಪ್ಲಸ್‌ ಶೋ `ಟೆಡ್‌ ನಯೀ ಸೋಚ್‌ ಮೇ’ ಇದೀಗ ಬಹು ಚರ್ಚೆಯಲ್ಲಿದೆ. ಶಾರೂಖ್‌ ನಮ್ಮ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಮಿತಾಲಿ ರಾಜ್‌ರನ್ನು ವೇದಿಕೆಗೆ ಕರೆದು, ಆಕೆ ತನ್ನ ತಂಡಕ್ಕಾಗಿ ತೋರಿಸುತ್ತಿರುವ ಶ್ರದ್ಧೆ ಕುರಿತು ಅಭಿನಂದಿಸುತ್ತಾ, ಮಹಿಳೆಯರು ಹೀಗೆ ಹಳೆಯ ಸಂಪ್ರದಾಯ ಬಿಟ್ಟು ಕ್ರಾಂತಿ ಮಾಡಿದರೆ ಗಂಡಸರು ಅವರ ಜೊತೆ ನಿಲ್ಲಬೇಕಾದ್ದೇ ಎಂದಾಗ, ಮಿತಾಲಿ ಸಹ ಶಾರೂಖ್‌ಗೆ ಒಂದು ಚಿತ್ರದಲ್ಲಿ ಕ್ರಿಕೆಟ್‌ ತಂಡದ ನಾಯಕನಾಗಿ ನಟಿಸುವಂತೆ ವಿನಂತಿಸಿದರು.

ಬಾಗಿಲು ಮುರಿಯುವಾಗ CID ದಯಾ ನೆನಪಾದರು

ಪ್ರಸಿದ್ಧ ಮರಾಠಿ ನಟಿ ಅದಿತಿ ದೇಶಪಾಂಡೆ ಮೊದಲ ಬಾರಿಗೆ ಹಿಂದಿಯ `ರಿಶ್ತಾ ಲಿಖೇಂಗ್‌ ಹಂ ನಯಾ’ ಧಾರಾವಾಹಿಗಾಗಿ ಮಲತಾಯಿ ಪಾತ್ರ ನಿರ್ವಹಿಸುತ್ತಿದ್ದಾರೆ. ಈಕೆಯ ಕಾರಣ ಈ ಪಾತ್ರ ಬಹು ಚರ್ಚೆಯಲ್ಲಿದೆ. ಧಾರಾವಾಹಿಗಾಗಿ ಅದಿತಿ ಒಮ್ಮೆ ಒಂದು ಬಾಗಿಲನ್ನು ಮುರಿದು ಹಾಕುವ ಸನ್ನಿವೇಶವಿತ್ತು. ಅದಂತೂ ಖಂಡಿತಾ ಸುಲಭದ ಕೆಲಸ ಆಗಿರಲಿಲ್ಲ. ಫೈನ್‌ ಶೂಟ್‌ಗೆ ಮೊದಲು ಈಕೆ ಅನೇಕ ಸಲ ಬಾಗಿಲನ್ನು ಮುರಿಯುವ ಅಭ್ಯಾಸ ಮಾಡಬೇಕಾಯಿತು.

“ನಿಜ ಹೇಳಬೇಕು ಅಂದ್ರೆ ಬಾಗಿಲು ಮುರಿದು ಹಾಕುವುದು ಸುಲಭದ ಕೆಲಸವಲ್ಲ. ಆದರೆ ನಾನು ಇದನ್ನು ಪ್ರಾಕ್ಟೀಸ್‌ ಮಾಡುತ್ತಾ ಆನಂದಿಸಿದೆ. ಪ್ರಾರಂಭದಲ್ಲಿ ನಾನು ಅದನ್ನು ಸರಿಯಾಗಿ ಮಾಡಲು ಆಗಲಿಲ್ಲ. ಆಗ ಪ್ರೊಡಕ್ಷನ್‌ ಟೀಮ್ ನನಗೆ, CID ದಯಾ ನಟಿಸಿದ್ದ ಇಂಥದೇ ದೃಶ್ಯಗಳ ವಿಡಿಯೋ ತೋರಿಸಿ ಹೆಚ್ಚಿನ ಪ್ರೇರಣೆ ನೀಡಿದರು. ಹೀಗಾಗಿ ದಯಾಗೆ ನಾನು ಆಭಾರಿ. ಮಂಗಳೂರಿನ ಮೂಲದ ಆ ತರುಣನ ಶಕ್ತಿ ಅಪಾರ! ಅದರಿಂದ ಈ ಕೆಲಸ ಮುಗಿಸುವಲ್ಲಿ ಅಂತೂ ನಾನು ಯಶಸ್ವಿಯಾದೆ,” ಎನ್ನುತ್ತಾರೆ ಅದಿತಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ