ಡಬ್ಬಲ್ ಶೇಡ್ನಲ್ಲಿ ಹರಿಪ್ರಿಯಾ

`ಉಗ್ರಂ' ಚಿತ್ರದ ನಂತರ ಕನ್ನಡ ಚಿತ್ರರಂಗದತ್ತ ಯೂ ಟರ್ನ್‌ ತೆಗೆದುಕೊಂಡ ಹರಿಪ್ರಿಯಾಳ ಅದೃಷ್ಟ ಬದಲಾಗಿದೆ. `ಬುಲೆಟ್‌ಬಸ್ಯಾ' ನಂತರ ಇದೀಗ `ರಿಕ್ಕಿ' ಚಿತ್ರದಲ್ಲಿ ಹರಿಪ್ರಿಯಾ ವಿಭಿನ್ನವಾದ ಪಾತ್ರ ಮಾಡಿರುವುದರ ಬಗ್ಗೆ ಒಳ್ಳೆ ಮಾತುಗಳು ಕೇಳಿಬರುತ್ತಿವೆ. ಎರಡು ವಿಭಿನ್ನವಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಹರಿಪ್ರಿಯಾಗೆ ನಕ್ಸಲ್ ಪಾತ್ರವೊಂದರಲ್ಲಿ ಯಾವುದೇ ಮೇಕಪ್‌ ಇಲ್ಲದೆ, ಗ್ಲಾಮರ್‌ ಇಲ್ಲದೇ ಖಡಕ್ಕಾಗಿ ಗನ್‌ ಹಿಡಿದು ಕಾಡಿನಲ್ಲಿ ಅಟ್ಟಹಾಸ ತೋರುವಂಥ ಹುಡುಗಿ ಪಾತ್ರ. ಈ ಪಾತ್ರದ ಬಗ್ಗೆ ತುಂಬಾನೆ ಹೋಪ್ಸ್ ಇಟ್ಟುಕೊಂಡಿರುವ ಹರಿಪ್ರಿಯಾಳ ಪ್ರತಿಭೆಗೆ ಸವಾಲ್ ‌ಒಡ್ಡುವಂತಿದೆ.

``ಹೌದು ನಾನು ಕೂಡಾ ಇಂಥದ್ದೊಂದು ಪಾತ್ರ ಮಾಡಬೇಕೆಂಬ ಆಸೆ ಇಟ್ಟುಕೊಂಡಿದ್ದೆ. ಅದೀಗ ಬೇಗನೇ ಒಲಿದು ಬಂತು. ನನ್ನ ಪಾತ್ರ ಎರಡು ವಿಭಿನ್ನ ಶೇಡ್ಸ್ ಹೊಂದಿರುತ್ತೆ. ಒಂದಕ್ಕೊಂದು ಸಾಮ್ಯತೆ ಇರುವುದಿಲ್ಲ. ಅಷ್ಟು ಡಿಫರೆಂಟಾಗಿ ಕಾಣಿಸಿಕೊಂಡಿದ್ದೇನೆ. ಸಿನಿಮಾ ನೋಡಿದ ಮೇಲೆಯೇ ಎಲ್ಲರಿಗೂ ಸ್ಪಷ್ಟವಾಗುತ್ತೆ. ಅದರ ಬಗ್ಗೆ ಈಗಲೇ ಏನೂ ಹೇಳುವಂತಿಲ್ಲ. ಸಸ್ಪೆನ್ಸ್.....'' ಎನ್ನುತ್ತಾಳೆ ಹರಿಪ್ರಿಯಾ.

ವಸ್ತ್ರ ವಿನ್ಯಾಸಕಿ ರೋಶಿನಿ

ಕನ್ನಡ ಸಿನಿಮಾರಂಗ ಸಾಕಷ್ಟು ಬದಲಾಗಿದೆ. ತಾರೆಯರಿಗೆ ಪ್ರತ್ಯೇಕವಾಗಿ ವಸ್ತ್ರವಿನ್ಯಾಸ ಮಾಡಿಸಲಾಗುತ್ತಿದೆ. ಫ್ಯಾಷನ್‌ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಬಾಲಿವುಡ್‌, ಟಾಲಿವುಡ್‌ನಂತೆ ನಮ್ಮ ತಾರೆಯರು ಉಡುಗೆ ತೊಡುಗೆಯಲ್ಲಿ ಅಪ್‌ ಡೇಟ್ ಆಗುತ್ತಿದ್ದಾರೆ. ವಸ್ತ್ರ ವಿನ್ಯಾಸಕಿಯರು ಹಾಗೆಯೇ ಬೆಳೆಯುತ್ತಿದ್ದಾರೆ. ಅವರಿಗೂ ಒಳ್ಳೆ ಅವಕಾಶ ಸಿಗುತ್ತಿದೆ. ಇತ್ತೀಚೆಗೆ ಅಂತಹ ಹೊಸ ಸೇರ್ಪಡೆ ರೋಶಿನಿ ಚಕ್ರಪಾಣಿ ಮತ್ತು ವೈಶಾಲಿ. ಹುಡುಗಿಯರಿಬ್ಬರೂ ವಸ್ತ್ರ ವಿನ್ಯಾಸಕಿಯರಾಗಿ ಚಿತ್ರಗಳಿಗೆ ಕೆಲಸ ಮಾಡುತ್ತಿದ್ದಾರೆ. `ಪ್ರೀತಿಯಲ್ಲಿ ಸಹಜ' ಚಿತ್ರಕ್ಕಾಗಿ ಇವರಿಬ್ಬರು ಅದರಲ್ಲಿರುವ ಎಲ್ಲ ನಟ ನಟಿಯರಿಗೆ ಬಹಳ ಆಸಕ್ತಿ ವಹಿಸಿ ಪಾತ್ರಗಳಿಗೆ ಒಪ್ಪುವಂತೆ ಸ್ತ್ರವಿನ್ಯಾಸ ಮಾಡಿ ನಿರ್ದೇಶಕರಿಂದ ಮೆಚ್ಚುಗೆ ಪಡೆದಿದ್ದಾರೆ. ಮೌಂಟ್‌ ಕಾರ್ಮೆಲ್ ‌ಕಾಲೇಜಿನ ರೋಶಿನಿ ತನ್ನ ಕೆಲಸದ ಬಗ್ಗೆ ಮಾತನಾಡುತ್ತಾ, ``ಫ್ಯಾಷನ್‌ ಡಿಸೈನರ್‌ ಆಗಿದ್ದ ನಾವು ಈ ಚಿತ್ರದಲ್ಲಿ ಬಹಳ ಶ್ರಮವಹಿಸಿ ಕಾಸ್ಟ್ಯೂಮ್ ಡಿಸೈನ್‌ ಮಾಡಿದ್ದೇವೆ. ನಮಗೆ ತುಂಬಾ ಇಷ್ಟವಾದ ಕೆಲಸವಿದು. ಈ ಚಿತ್ರಕ್ಕಾಗಿ ಡಿಸೈನ್‌ ಮಾಡುತ್ತಿರುವಾಗಲೇ `ಪಟಾಕಿ' ಚಿತ್ರಕ್ಕೆ ಕೆಲಸ ಮಾಡಲು ಆಫರ್‌ ಬಂದಿತು. ಗೋಲ್ಡನ್‌ ಸ್ಟಾರ್‌ ಗಣೇಶ್‌ ನಾಯಕತ್ವದ ಈ ಚಿತ್ರಕ್ಕೆ ಈಗಾಗಲೇ ಕಾಸ್ಟ್ಯೂಮ್ ಡಿಸೈನಿಂಗ್‌ ಕೆಲಸ ಶುರು ಮಾಡಿದ್ದೀವಿ. ಕನ್ನಡ ಚಿತ್ರರಂಗದಲ್ಲಿ ಒಳ್ಳೆ ಹೆಸರು ಮಾಡಬೇಕೆಂಬುದೇ ನಮ್ಮ ಆಸೆ,'' ಎನ್ನುತ್ತಾರೆ.

ಅರಮನೆಯೊ ಸೆರೆಮನೆಯೊ?

ರಿಯಾಲಿಟಿ ಶೋಗಳಲ್ಲೇ ಅತಿ ಹೆಚ್ಚು ಜನಪ್ರಿಯವಾದ ಟಿ.ವಿ. ಕಾರ್ಯಕ್ರಮ `ಬಿಗ್‌ ಬಾಸ್‌.' ಕಿತ್ತಾಟ, ಜಗಳ, ಸರಸ, ವಿರಸ, ಪ್ರೀತಿ, ದ್ವೇಷ ಎಲ್ಲವನ್ನೂ ವೀಕ್ಷಕರ ಮುಂದಿಡುವ ಈ ಶೋ ಈಗ ಮತ್ತೆ ಶುರುವಾಗಲಿದೆ. ಬಿಗ್‌ ಬಾಸ್‌..... ಕಿರುತೆರೆ ಹೊಕ್ಕಾಗಿದೆ. ಬಿಗ್‌ ಬಾಸ್‌ ಅಂದಾಕ್ಷಣ ನಮ್ಮ ಕಣ್ಣೆದುರಿಗೆ ಬರೋರು ಕಿಚ್ಚ ಸುದೀಪ್‌. ಸೀಸನ್‌-3ಯನ್ನು ಸುದೀಪ್‌ ನಿರ್ವಹಿಸುವುದಿಲ್ಲ ಎನ್ನುವ ಮಾತು ಕೇಳಿಬಂದಾಗಲೇ ಅನೇಕರು ನಿರಾಶೆ ಹೊಂದಿದ್ದರು. ಉಪೇಂದ್ರ ಕಾರ್ಯಕ್ರಮ ನಡೆಸಿಕೊಡುತ್ತಾರೆಂಬ ಊಹಾಪೋಹಕ್ಕೆ ತೆರೆ ಎಳೆದ ಕಲರ್ಸ್‌ ಚಾನೆಲ್, ಕಿಚ್ಚ ಸುದೀಪ್‌ ಅವರೇ ಬಿಗ್‌ ಬಾಸ್‌ ಎಂದಿತು. ಸುದೀಪ್‌ ಸೀಸನ್‌-3ಗೂ ತಾನೇ ಕಾಂಟ್ರಾಕ್ಟ್ ಸೈನ್‌ ಮಾಡಿರುವುದಾಗಿ ಹೇಳಿದರು. ಈ ಬಾರಿ ಬಿಗ್‌ ಬಾಸ್‌ ಸಾಕಷ್ಟು ಕುತೂಹಲ ಸೃಷ್ಟಿಸಲಿದೆ. ಇದರಲ್ಲಿ ಭಾಗಹಿಸಲು ಯಾವ ಯಾವ ಸ್ಪರ್ಧಿಗಳು ಬಿಗ್‌ ಬಾಸ್‌ ಮನೆಯೊಳಗೆ ಬರುತ್ತಾರೆಂಬುದರ ಬಗ್ಗೆ ಪ್ರತಿನಿತ್ಯ ಒಬ್ಬೊಬ್ಬರ ಹೆಸರು ಕೇಳಿಬರುತ್ತಿದೆ. ರಾಗಿಣಿ, ದಿಗಂತ್‌, ಐಂದ್ರಿತಾ, ಹುಚ್ಚ ವೆಂಕಟ್‌, ನಿತ್ಯಾನಂದ, ರಕ್ಷಿತ್‌ ಶೆಟ್ಟಿ, ಸತೀಶ್‌ ನೀನಾಸಂ, ಮೈತ್ರೇಯಿ ಗೌಡ...... ಆದರೆ ಇವರಾರೂ ಸಹ ತಾವು ಭಾಗಹಿಸುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಹೊರಗಡೆಯಿಂದ ಅರಮನೆಯಂತೆ ಕಾಣುವ ಬಿಗ್‌ ಬಾಸ್‌ ಮನೆ ಒಳಗೆ ಸೆರೆಮನೆ ಎಂಬುದು ಒಳಗೆ ಹೋಗುವ ಸ್ಪರ್ಧಿಗಳು ಅನುಭವಿಸಲಿದ್ದಾರೆ. ಕಾದು ನೋಡೋಣ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ