ಐಂದ್ರಿತಾ ಖಡಕ್‌ ಮಾತು

ಮೊದಲೆಲ್ಲ ಪತ್ರಕರ್ತರು ಏನೇ ಪ್ರಶ್ನೆ ಕೇಳಿದರೂ ತಾರೆಯರು  ಬಹಳ ಸಮಜಾಯಿಷಿ ಉತ್ತರ ನೀಡಿ ಎಲ್ಲಿಯೂ ಕಾಂಟ್ರೊವರ್ಸಿಗೆ ಸಿಕ್ಕಿ ಹಾಕಿಕೊಳ್ಳದಂತೆ ಎಚ್ಚರಿಕೆ ವಹಿಸುತ್ತಿದ್ದರು. ಕಾಲ ಬದಲಾದಂತೆ ತಾರೆಯರೂ ಬದಲಾದರು. ಟಾಕ್‌ಟೈಮ್ ನಲ್ಲಿ ಅಕುಲ್ ಕೇಳೋ ಎಲ್ಲ ಪ್ರಶ್ನೆಗಳಿಗೂ ನೇರವಾಗಿ ದಿಟ್ಟವಾಗಿ ಉತ್ತರ ಕೊಡುತ್ತಾರೆ. ಇತ್ತೀಚೆಗೆ ಐಂದ್ರಿತಾ ರೈಗೆ ಕೇಳಲಾದ ರಾಪಿಡ್‌ ಫೈರ್‌ ಫ್ರಶ್ನೆಗಳನ್ನು ಅಷ್ಟೇ ಕೂಲಾಗಿ ಎದುರಿಸಿ ಉತ್ತರ ಕೊಟ್ಟಿದ್ದಳು. ಓವರ್‌ರೇಟೆಡ್‌ ತಾರೆಯರು ಎಂದಾಗ ಪಾರೂಲ್‌ ಯಾದವ್ ಅಂದಳು. ಬಸ್‌ ಡ್ರೈವರನ್ನು ಯಾರಿಗೆ ಹೋಲಿಸ್ತೀಯಾ ಎಂದಾಗ ಪ್ರಜ್ವಲ್ ದೇವರಾಜ್‌. ಏಕೆಂದರೆ ಅವನು ಈಸಿಯಾಗಿ ಹುಡುಗಿಯರನ್ನು ಪಿಕಪ್‌ ಮಾಡ್ತಾನೆ ಅಂದ್ಲು. ರಮ್ಯಾ ಜೊತೆ ಏಕೆ ಮಾತಾಡೋದಿಲ್ಲ ಎಂದು ಕೇಳಿದಾಗ ರಮ್ಯಾ ನಂಬಿಕೆಯನ್ನು ಉಳಿಸಿಕೊಳ್ಳಲಿಲ್ಲ. ಆದರೂ ಆಕೆ ಬಗ್ಗೆ ದ್ವೇಷವಿಲ್ಲ. ಎದುರಿಗೆ ಬಂದ್ರೆ ಮಾತಾಡಿಸ್ತೀನಿ ಅಂದ್ಲು. ಇಂತಹ ಹಲವಾರು ಬೆಂಕಿ ಪ್ರಶ್ನೆಗಳಿಗೆ ಐಂದ್ರಿತಾ ಉತ್ತರಿಸಿ ಹ್ಯಾಂಪರ್‌ ಗೆದ್ದುಕೊಂಡು ಹೋಗಿದ್ದಳು.

ಶ್ರದ್ಧಾಳಿಗೆ ಲಕ್ಕೋ ಲಕ್ಕು!

`ಯೂಟರ್ನ್‌' ಚಿತ್ರದಲ್ಲಿ ನಟಿಸಿದ್ದೇ ತಡ ಶ್ರದ್ಧಾ ಶ್ರೀನಾಥ್‌ ಹಿಂತಿರುಗಿ ನೋಡಿದ್ದೇ ಇಲ್ಲ. ಅವಕಾಶಗಳು ಮೇಲಿಂದ ಮೇಲೆ ಬರುತ್ತಲೇ ಇದೆ. ಮಣಿರತ್ನಂ ಚಿತ್ರದಲ್ಲಿ ನಟಿಸಿ ಬಂದ ಮೇಲಂತೂ ತಾರಾ ಮೌಲ್ಯ ಇನ್ನೂ ಹೆಚ್ಚಾಯಿತು. ಇತ್ತೀಚೆಗೆ ಬಿಡುಗಡೆಯಾಗಿ ಯಶಸ್ವಿಯಾಗಿ ಓಡುತ್ತಿರುವ `ಆಪರೇಶನ್‌ ಅಲಮೇಲಮ್ಮ' ಚಿತ್ರದಲ್ಲಿ ಟೀಚರ್‌ ಪಾತ್ರದಲ್ಲಿ ಶ್ರದ್ಧಾ ಸಾಕಷ್ಟು ಗಮನ ಸೆಳೆದಳು. `ಯೂಟರ್ನ್‌' ಚಿತ್ರದಲ್ಲಿ ಪತ್ರಕರ್ತೆಯಾಗಿ ಸರಳವಾಗಿ ಕಾಣಿಸಿಕೊಂಡಿದ್ದ ಶ್ರದ್ಧಾ ಇತ್ತೀಚೆಗೆ ಗ್ಲಾಮರಸ್‌ ತಾರೆಯಾಗಿ ಮಿಂಚುತ್ತಿದ್ದಾಳೆ. ಅಲಮೇಲಮ್ಮ ಚಿತ್ರದಲ್ಲಿ ಪ್ರಮೋಷನ್‌ ಹಾಡಿಗಾಗಿ ಡ್ಯಾನ್ಸ್ ಕೂಡಾ ಮಾಡಿರುವ ಶ್ರದ್ಧಾಳಿಗೆ ಉತ್ತಮ ಭವಿಷ್ಯವಿದೆ ಎಂದು ಸ್ಯಾಂಡಲ್ ವುಡ್‌ ಹೇಳುತ್ತಿದೆ.

ರಾಜುಗೆ ಕಿಚ್ಚ ಸಾಥ್

ಫಸ್ಟ್ ರಾಂಕ್‌ ರಾಜು ಮೂಲಕ ಎಲ್ಲರ ಗಮನ ಸೆಳೆದಿದ್ದ ಗುರುನಂದನ್‌ ಇದೀಗ `ರಾಜು ಕನ್ನಡ ಮೀಡಿಯಂ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಮತ್ತೊಂದು ವಿಶೇಷತೆ ಕನ್ನಡದ ಜನಪ್ರಿಯ ಸ್ಟಾರ್‌ ಕಿಚ್ಚ ಸುದೀಪ್‌ ಗೆಸ್ಟ್ ಆಗಿ ಬಂದರೂ ದೊಡ್ಡ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಫ್ಟರ್‌ ಇಂಟರ್‌ವೆಲ್‌ನಲ್ಲಿ ಬರುವ ಸುದೀಪ್‌ ಬಹು ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಾರೆ. ಇದಕ್ಕಾಗಿ ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನ ಈಗ್‌ಟನ್‌ ರೆಸಾರ್ಟ್‌ನಲ್ಲಿ ಚಿತ್ರೀಕರಣ ನಡೆದಿದೆ. ಕೆ.ಎ. ಸುರೇಶ್‌ ನಿರ್ಮಾಣದ ನರೇಶ್‌ಕುಮಾರ್‌ ನಿರ್ದೇಶನದ ಈ ಚಿತ್ರಕ್ಕಾಗಿ ಸುದೀಪ್‌ ಐದು ದಿನಗಳ ಕಾಲ್ ಶೀಟ್‌ ಕೊಟ್ಟಿದ್ದಾರೆ. ಹಗಲು ರಾತ್ರಿ ಚಿತ್ರೀಕರಣ ನಡೆಯುತ್ತಿದೆ. ಆರಂಭದಲ್ಲಿ ಗೆಸ್ಟ್ ರೋಲ್ ಅಂತ ಸುದ್ದಿಯಾಗಿದ್ದರು. ಹೀರೋಗೆ ಸ್ಛೂರ್ತಿ ತುಂಬುವಂತಹ ವಿಶೇಷವಾದ ಪಾತ್ರ ಸುದೀಪ್‌ ಅವರದಾಗಿರುತ್ತೆ ಎಂದು ತಿಳಿದುಬಂದಿದೆ.

ಹೊಡಿ ಒಂಬತ್.......

ಭಟ್ರು, ಗಣೇಶ್‌ ಕಾಂಬಿನೇಶನ್‌ಗಾಗಿ ಪ್ರೇಕ್ಷಕರು ಬಹಳ ವರ್ಷಗಳಿಂದ ಕಾಯುತ್ತಲೇ ಇದ್ದರು. ಇಬ್ಬರೂ ಸೇರಿ ಒಂದು ಚಿತ್ರ ಮಾಡಬೇಕು ಅಂತ ಎಷ್ಟೇ ಬಾರಿ ಅಂದುಕೊಂಡರೂ ಅವರವರ ಚಿತ್ರಗಳಲ್ಲಿ ಬಿಜಿಯಾಗಿರುತ್ತಿದ್ದರು. ಕಡೆಗೂ ಕಾಲ ಕೂಡಿ ಬಂತು. ಮಳೆ ಹುಡುಗನೊಂದಿಗೆ ಗಾಳಿಪಟ ಹಾರಿಸಲು ಭಟ್ರು `ಮುಗುಳುನಗೆ' ಅಂತ ಸಿನಿಮಾ ತಯಾರಿಸಿಯೇ ಬಿಟ್ಟರು. ಈ ಚಿತ್ರದಲ್ಲಿ ಗಣೇಶ್‌ ವಿಶೇಷ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. `ಮುಗುಳುನಗೆ' ಚಿತ್ರದಲ್ಲಿ ಇಬ್ಬರು ನಾಯಕಿಯರು. ಚಿತ್ರಕ್ಕೆ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಹಾಡುಗಳು ಈಗಾಗಲೇ ಜನಪ್ರಿಯವಾಗಿದೆ. `ಹೊಡಿ ಒಂಬತ್......' ಹಾಡಂತೂ ಫೇಮಸ್‌ ಆಗಿದೆ. ಭಟ್ರು ಬರೆದಿರೋ ಹಾಡನ್ನು ವಿಜಯ್‌ಪ್ರಕಾಶ್‌ ಸೊಗಸಾಗಿ ಹಾಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಬಳಸುವ ಹೊಡಿ ಒಂಬತ್‌ ವರ್ಡ್‌ ಬಹಳ ದಿನಗಳಿಂದ ಭಟ್ಟರನ್ನು ಕಾಡುತ್ತಿತ್ತಂತೆ. ಈಗ ಎಲ್ಲಿ ನೋಡಿದ್ರೂ, ಕೇಳಿದ್ರೂ ಹೊಡಿ ಒಂಬತ್‌ ಅತ್ಯಂತ ಜನಪ್ರಿಯ ಹಾಡಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ