ಅದೊಮ್ಮೆ ಒಬ್ಬ ತಂದೆ ತನ್ನ ಮಕ್ಕಳೊಂದಿಗೆ ಪ್ರಾಣಿಸಂಗ್ರಹಾಲಯಕ್ಕೆ ಹೋಗಿರುತ್ತಾರೆ. ಆಲ್ಲಿ ಬಗೆ ಬಗೆ ಭಯಾನಕ, ಸಾಧು ಪ್ರಾಣಿಗಳು, ಪಶು ಪಕ್ಷಿಗಳು, ಸರಿಸೃಪಗಳು ಹೀಗೆ ಎಲ್ಲವನ್ನೂ ಗೂಡಿನಲ್ಲೋ‍, ಪಂಜರದೊಳಗೂ ಇಲ್ಲವೇ ಗಟ್ಟಿಯಾಗಿ ಬಂಧಿಸಲ್ಪಟ್ಟಂತೆ ನೋಡಿಕೊಂಡು ಬರುವಾಗ ಮತ್ಯಾಲಯದ ಬಳಿ ಬಂದು ಅಲ್ಲಿ ವಿಧ ವಿಧ ರೂಪದ ಬಣ್ಣ ಬಣ್ಣದ ಮೀನುಗಳನ್ನು ಕಣ್ತುಂಬ ನೋಡಿ ಆನಂದಿಸುತ್ತಿರುವಾಗ ಒಂದು ತೆರೆದ ಗಾಜಿನ ದೊಡ್ಡ ಬೋಗುಣಿಯಲ್ಲಿರುವ ಏಡಿಗಳನ್ನು ನೋಡಿ ಆಶ್ವರ್ಯ ಚಕಿತರಾಗಿ, ಅಪ್ಪಾ ಇಲ್ನೋಡಿ ಎಲ್ಲಾ ಪ್ರಾಣಿ ಪಕ್ಷಿಗಳು ತಪ್ಪಿಸಿಕೊಂಡು ಹೋಗದಂತೆ ಒಂದಲ್ಲಾ ಒಂದು ರೀತಿ ರಕ್ಷಿಸಲ್ಪಟ್ಟಿದ್ದರೆ, ಈ ಏಡಿಗಳನ್ನು ಮಾತ್ರ ತೆರೆದಿಟ್ಟಿದ್ದಾರಲ್ಲಾ? ಇದು ತಪ್ಪಿಸಿಕೊಂಡು ಹೊರಗ ಬಂದು ಯಾರಾನ್ನಾದರೂ ಕುಟುಕಿದರೆ ಏನು ಗತಿ ಇಲ್ಲವೇ ಯಾರಾದರೂ ನೋಡದೆ ಅದನ್ನು ತುಳಿದುಬಿಟ್ಟರೆ ಏನು ಮಾಡೋದು ಎಂದು ಕುತೂಹಲದಿಂದ ತಮ್ಮ ತಂದೆಯವರನ್ನು ಕೇಳಿದಾಗ, ಅದಕ್ಕೆ ನಗುತ್ತ ಆ ತಂದೆ ಹೇಳುತ್ತಾನೆ. ನೀವು ಸ್ಪಲ್ಪ ಕುತೂಹಲದಿಂದ ಗಮನಿಸಿ ನೋಡಿ ಒಂದು ಏಡಿ ಆ ಗಾಜಿನ ಪಾತ್ರೆಯಿಂದ ಮೇಲೆ ಬರಲು ಪ್ರಯತ್ನಿಸುತ್ತಿದ್ದಂತೆಯೇ ಉಳಿದ ಏಡಿಗಳು ಅದನ್ನು ಕೆಳಕ್ಕೆ ಹಿಡಿದೆಳೆಯುತ್ತವೆ ಮತ್ತು ಈ ಪ್ರಕ್ರಿಯೆ ನಿರಂತರವಾಗಿರುವುದರಿಂದ ಈ ಏಡಿಗಳನ್ನು ಮುಚ್ಚಿಡುವುದಾಗಲೀ, ಬಂಧಿಸುವುದಾಗಲೀ ಅಗತ್ಯವೇ ಇಲ್ಲ ಎನ್ನುತ್ತಾನೆ.

ಸುಮಾರು ಎರಡು ಮೂರು ವರ್ಷಗಳಿಂದ ಹಗಲು ರಾತ್ರಿ ಎನ್ನದೆ ಇಡೀ ಕೆಜಿಎಫ್ ಚಿತ್ರತಂಡ ಪರಿಶ್ರಮ ಪಟ್ಟು ಇಡೀ ಜಗತ್ತೇ ಈ ಕನ್ನಡ ಚಲನಚಿತ್ರದತ್ತ ನೋಡುವತ್ತಾ ಮಾಡಿದೆ. ಪ್ರಪ್ರಥಮ ಬಾರಿಗೆ ಕನ್ನಡ ಚಿತ್ರವೊಂದು ನಾನಾ ಭಾಷೆಗೆ ಡಬ್ಬಿಂಗ್ ಆಗಿ ಎಲ್ಲಾ ಚಿತ್ರ ರಸಿಕರರೂ ಬಿಡುಗಡೆಯ ದಿನವನ್ನು ಕಾಯುತ್ತಿದ್ದರೆ, ಅದೆಲ್ಲಿಂದಲೋ ಒಂದು ಅನಾಮಧೇಯ ಪತ್ರ ಕೆಜಿಏಫ್ ನಾಗರೀಕರ ಹೆಸರಿನಲ್ಲಿ, ಕೆಜಿಏಫ್ ಜನರನ್ನು ದಲಿತರ ಹೆಸರಿನಲ್ಲಿ ಎತ್ತಿ ಕಟ್ಟಿ ಚಲನಚಿತ್ರಕ್ಕೆ ಧಕ್ಕೆ ತರಲು ಯತ್ನಿಸಿದರೆ, ಚಿತ್ರ ಬಿಡುಗಡೆಯ ಹಿಂದಿನ ದಿನ ಮತ್ತೊಬ್ಬ ಮಹಾಶರು ನ್ಯಾಯಾಲಯದ ಮೆಟ್ಟಿಲನ್ನೇರಿ ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ತಂದಿದ್ದನ್ನು ನೋಡಿ ಮೇಲಿನ ಏಡಿ ಕತೆ ಜ್ಞಾಪಕ್ಕೆ ಬಂತು.

ಒಂದು ಒಳ್ಳೆಯ ಕೆಲಸಕ್ಕೆ ನೂರಾರು ವಿಘ್ನಗಳು ಎನ್ನುವಂತೆ ಒಬ್ಬ ಒಳ್ಳೆ ಕೆಲಸ ಮಾಡಿದರೆ ಅದಕ್ಕೆ ಬೆನ್ನು ತಟ್ಟಿ ಪ್ರೋತ್ಸಾಹಿಸುವುದು ಬಿಟ್ಟು ಅದಕ್ಕೆ ನೂರಾರು ಅನಾವಶ್ಯಕ ಅಡ್ಡಿ ಆತಂಕಗಳನ್ನು ತರುವುದು ಎಷ್ಟು ಸರಿ. ಬೆಳೆಯುತ್ತಿರುವ ಉದಯೋನ್ಮುಖ ಪ್ರತಿಭೆಗಳ ಕಾಲನ್ನು ಎಳೆಯುವುದು ನಿಜಕ್ಕೂ ಅಕ್ಷಮ್ಯ ಅಪರಾಧವೇ ಸರಿ. ಚಿತ್ರದ ಬಿಡುಗಡೆಗೆ ತಡೆ ಒಡ್ಡಲು ಪ್ರಯತ್ನಿಸಿದ ಎರಡೂ ಆರೋಪಗಳೇ ತದ್ವಿರುದ್ದವಾಗಿದೆ. ಮೊದಲನೆಯ ಆರೋಪ ಈ ಚಲನಚಿತ್ರದಲ್ಲಿ ಇಲ್ಲಿನ ಜನ ದುಷ್ಟರು ಮತ್ತು ದರೋಡೆಕೋರರು ಎಂದು ಬಿಂಬಿಸಲಾಗುತ್ತಿದೆ ಹಾಗಾಗಿ ಕೆಜಿಎಫ್ ನಗರ ಪ್ರಪಂಚದ ದೃಷ್ಟಿಯಲ್ಲಿ ಅವಗಣನೆಗೊಳಗಾಗುವಂತಿದೆ ಎಂದರೆ, ಮತ್ತೊಬ್ಬರ ಆರೋಪದಲ್ಲಿ ಈ ಚಿತ್ರದಲ್ಲಿ ಕಳೆದ ಎರಡು ದಶಕಗಳ ಹಿಂದೆ ಕೆಜಿಎಫ್ ನಗರದಲ್ಲಿ ಎಲ್ಲರಿಗೂ ಕಂಟಕಪ್ರಾಯನಾಗಿದ್ದ ತಂಗಂ ಎಂಬ ಕುಖ್ಯಾತ ವ್ಯಕ್ತಿಯ ಕಥೆಯನ್ನು ಆಧರಿಸಿದ್ದು, ಆ ವ್ಯಕ್ತಿಯ ಬಗ್ಗೆ ಚಿತ್ರ ಮಾಡುವ ಹಕ್ಕನ್ನು ಆತನ ತಾಯಿಯಿಂದ ಆತ ಪಡೆದಿರುವ ಕಾರಣ ತನಗೆ ನಷ್ಟವಾಗಿದೆ ಎಂದು ಆರೋಪಿಸಿದ್ದಾನೆ. ಮೊದಲನೆ ಆರೋಪ ಕೆಜಿಎಫ್ ನಗರ ಶಾಂತವಾದ ನಗರ ಎಂದು ಬಿಂಬಿಸಲು ಪ್ರಯತ್ನಿಸಿದರೆ ಎರಡನೆಯ ವ್ಯಕ್ತಿ ಅಲ್ಲಿ ತಂಗ ಎಂಬ ಕುಖ್ಯಾತನ ಹಾವಳಿ ಇತ್ತು ಎಂದು ನ್ಯಾಯಾಲಯದಲ್ಲಿಯೇ ಒಪ್ಪಿಕೊಂಡಿದ್ದಾನೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ