- ರಾಘವೇಂದ್ರ ಅಡಿಗ ಎಚ್ಚೆನ್.

ಬಸವನಗುಡಿ: ಅಶ್ವತ್ಥ ಕಲಾಭವನದಲ್ಲಿ ಸ್ನೇಹ ಬುಕ್ ಹೌಸ್ 555ನೇ ಕೃತಿ *ಮೌಲ್ಯಗಳ ಸರದಾರ ಡಾ||ರಾಜ್ ಕುಮಾರ್* ಡಾ.ರಾಜ್ ಕುಮಾರ್ ಚಿತ್ರಗಳಲ್ಲಿ ಸಾಮಾಜಿಕ ಮೌಲ್ಯಗಳ ಕೃತಿಯ ಲೋಕಾರ್ಪಣೆ ಸಮಾರಂಭ.

ವರನಟ ಡಾ||ರಾಜ್ ಕುಮಾರ್ ರವರ ಸುಪುತ್ರಿ ಶ್ರೀಮತಿ ಪೂರ್ಣಿಮಾ ರಾಮ್ ಕುಮಾರ್ ರವರು, ವಿದ್ವಾಂಸರಾದ ಡಾ.ಅರುಳು ಮಲ್ಲಿಗೆ ಪಾರ್ಥಸಾರಥಿರವರು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸಿ.ಸೋಮಶೇಖರ್ ರವರು, ಡಾ.ರಾಜ್ ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ಅಧ್ಯಕ್ಷರು, ಆಡಳಿತ ಪಕ್ಷದ ಮಾಜಿ ನಾಯಕರಾದ ಎನ್.ಆರ್.ರಮೇಶ್ ರವರು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ.ಮಹೇಶ್ ಜೋಷಿ , ಲೇಖಕರಾದ ಡಾ.ಕೆ.ನಟರಾಜ್, ಪ್ರಕಾಶಕರಾದ ಕೆ.ಬಿ.ಪರಶಿವಪ್ಪ ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಸಿ, ಕೃತಿಯ ಲೋಕಾರ್ಪಣೆ ಮಾಡಿದರು.

*ಡಾ.ಅರುಳು ಮಲ್ಲಿಗೆ* ಪಾರ್ಥಸಾರಥಿರವರು ಘನತೆ, ಗಾಂಭಿರ್ಯ, ಶತಮಾನದ ಸಾಧಕರು ಡಾ.ರಾಜ್ ಕುಮಾರ್ ರವರು ಎಷ್ಟೆ ಎತ್ತರಕ್ಕೆ ಏರಿದರು ಸರಳವಾಗಿ ಬದುಕಿದರು.

IMG-20250505-WA0006

ಚಲನಚಿತ್ರ ರಂಗಕ್ಕೆ ಹಾಗೂ ಅವರ ನಟಿಸಿದ ಪಾತ್ರಗಳಿಗೆ ನ್ಯಾಯ ಒದಗಿಸಿ ಮಾರ್ಯಾದ ಪುರುಷೋತ್ತಮರಾದರು. ಡಾ.ರಾಜ್ ಕುಮಾರ್ ಹಿಂದಿ ಚಲನಚಿತ್ರರಂಗದಲ್ಲಿ ಇದ್ದಿದರೆ ನಾವು ಇರುತ್ತಿರಲ್ಲಿಲ ಎಂದು ಅಮಿತಾಬ್ ಬಚ್ಚನ್ ರವರು ಹೇಳಿದರು, ಸಮಾಜವಾಗಿ ಜೀವಂತವಾಗಿರಬೇಕು ಎಂದರೆ ಮಹಾನ್ ಸಾಧಕರ ಪುಸ್ತಕ ಮುಂದಿನ ಪೀಳಿಗೆಗೆ ಲಭಿಸುವಂತೆ ಮಾಡಬೇಕು ಎಂದರು.

ಗುರುರಾಯರು, ಭಕ್ತ ಕನಕದಾಸ ಆನೇಕ ದೇವರುಗಳನ್ನು ಚಿತ್ರ ಮಾಡಿ ದೇವರುಗಳನ್ನು ಜೀವಂತವಾಗಿ ನೋಡಿವಂತೆ ಮಾಡಿದರು ಎಂದು ಹೇಳಿದರು.ಕೆನಡಾದ ಚರ್ಚ್ ನಲ್ಲಿ ಡಾ.ರಾಜ್ ಕುಮಾರ್ ಕನ್ನಡನಾಡು, ಕನ್ನಡಿಗರಿಗೆ ಸುಖ, ಶಾಂತಿ ಲಭಿಸಲಿ ಎಂದು ಮೊಂಬತ್ತಿ ಬೆಳಗಿಸಿ ಬೇಡಿಕೊಂಡರು.

*ಶ್ರೀಮತಿ ಪೂರ್ಣಿಮಾ ರಾಮ್ ಕುಮಾರ್* ರವರು ಮಾತನಾಡಿ ನಾಡಿನ ಸಮಸ್ತ ಅಭಿಮಾನಿ ದೇವರುಗಳಿಗೆ ನಮಸ್ಕಾರಗಳು.ನಮ್ಮ ತಂದೆ, ತಾಯಿಯವರು ಗಳಿಸಿದ ಕೀರ್ತಿ, ಖ್ಯಾತಿಯನ್ನು ಕನ್ನಡಿಗರಿಗೆ ಧಾರೆ ಎರೆಯುತ್ತೇನೆ. ಡಾ.ರಾಜ್ ಕುಮಾರ್ ರವರ ನೋಡಿ ಇನ್ನು ಕಲಿಯಬೇಕಾದದ್ದು ಬಹಳ ಇದೆ ಎಂದು ಹೇಳಿದರು.

IMG-20250505-WA0007

*ಎನ್.ಆರ್.ರಮೇಶ್* ರವರು ಮಾತನಾಡಿ ಭಾರತ ಚಿತ್ರರಂಗದಲ್ಲಿ ಡಾ.ರಾಜ್ ಕುಮಾರ್ ರವರು ವೈವಿಧ್ಯಮಯ, ಸಾಮಾಜಿಕ ಮೌಲ್ಯಗಳುವುಳ್ಳ ಚಿತ್ರಗಳಲ್ಲಿ ನಟಿಸಿದರು. 174ಕೃತಿಗಳು ಡಾ.ರಾಜ್ ಕುಮಾರ್ ರವರ ಬಗ್ಗೆ ಪುಸ್ತಕಗಳು ಪ್ರಕಟನೆಯಾಗಿದೆ ಇದು ಒಂದು ದಾಖಲೆಯಾಗಿದೆ.

ಪಾತ್ರಗಳ ಮೂಲಕ ಸಾಮಾಜಿಕ ಪೀಡಗುಗಳ ವಿರುದ್ದ ಸಮರ ಸಾರಿದರು, ಸಮಾಜದಲ್ಲಿ  ಬದಲಾವಣೆ ತಂದರು. ಕಸ್ತೂರಿ ನಿವಾಸ, ಜೀವನಚೈತ್ರ ಚಿತ್ರಗಳು ಯುವಕರಿಗೆ ಸ್ಪೂರ್ತಿಯಾಯಿತು.

ಡಾ.ರಾಜ್ ಕುಮಾರ್ ನಟಿಸಿದ ಚಿತ್ರಗಳು ಸಂಪೂರ್ಣ ಕುಟುಂಬ ಸಮೇತ ನೋಡಬಹುದಾದ ಚಿತ್ರಗಳಾಗಿದ್ದವು, ಅವರ ಕುಟುಂಬದ ಸ್ನೇಹ ಸಿಕ್ಕಿರುವುದು ನಮ್ಮ ಸೌಭಾಗ್ಯ ಎಂದು ಹೇಳಿದರು.

*ಸಿ.ಸೋಮಶೇಖರ್* ರವರು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅನುಸರಿಸಿದ ಮಹಾನ್ ವ್ಯಕ್ತಿತ್ವ ಡಾ.ರಾಜ್ ಕುಮಾರ್ ರವರು ಮೌಲ್ಯ ಸರದಾರ ಪುಸ್ತಕ ಹೊರಬಂದಿರುವುದು ಸಂತೋಷ ಸಂಗತಿಯಾಗಿದೆ.

ಡಾ.ರಾಜ್ ಕುಮಾರ್ ರವರ ಚಲನಚಿತ್ರಗಳಲ್ಲಿ ಉತ್ತಮ ಸಾಮಾಜಿಕ ಮೌಲ್ಯಗಳು ಇರುತ್ತಿತು. ನೈತಿಕ ಮೌಲ್ಯ, ಶುದ್ದತೆ ನಿಷ್ಟೆ, ಕಾಯಕ ಎಲ್ಲವು ಅವರಲ್ಲಿ ಇತ್ತು, ಎಲ್ಲ ಪಾತ್ರಗಳಿಗೆ ಪರಕಾಯ ಪ್ರವೇಶ ಮಾಡಿ ನಟ ಸೌರ್ವಭೌಮರಾದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ