- ರಾಘವೇಂದ್ರ ಅಡಿಗ ಎಚ್ಚೆನ್.

ವಾಮನ', 2025ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು. ಧನ್ವೀರ್​​ ನಾಯಕ ನಟನಾಗಿ ಅಭಿನಯಿಸಿರುವ ಈ ಚಿತ್ರದ ಟ್ರೇಲರ್​ ಅನ್ನು ಇಂದು ಚಾಲೆಂಜಿಂಗ್​ ಸ್ಟಾರ್ ದರ್ಶನ್​​​ ಅನಾವರಣಗೊಳಿಸಿದ್ದಾರೆ. ಈ ಮೂಲಕ ತಮ್ಮ ಆಪ್ತ ಗೆಳೆಯ ಧನ್ವೀರ್​ಗೆ ಸಾಥ್​ ಕೊಟ್ಟಿದ್ದಾರೆ.

ಸಂಜೆ ಟ್ರೇಲರ್​ ರಿಲೀಸ್​ ಹಿನ್ನೆಲೆ, ಮಧ್ಯಾಹ್ನದಿಂದಲೇ ಅಭಿಮಾನಿಗಳ ಸಂಭ್ರಮಾಚರಣೆ ಶುರುವಾಗಿತ್ತು. ನಾಯಕ ನಟ ಧನ್ವೀರ್​ ಜೊತೆಗೆ ದರ್ಶನ್​ ಅವರಿರುವ ಕಟೌಟ್​ಗೆ ಹಾಲಿನ ಅಭಿಷೇಕ ಮಾಡಲಾಗಿದೆ. ಡೋಲಿನ ಸದ್ದಿಗೆ ಫ್ಯಾನ್ಸ್​ ಕುಣಿದು ಕುಪ್ಪಳಿಸಿದ್ದಾರೆ. ದರ್ಶನ್​ ಮೇಲಿರುವ ಅಭಿಮಾನವನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದು, ಫೋಟೋ ವಿಡಿಯೋಗಳು ಆನ್​​ಲೈನ್​​ನಲ್ಲಿ ವೈರಲ್​ ಆಗಿದೆ.

ಚಾಲೆಂಜಿಂಗ್​​ ಸ್ಟಾರ್​​​ ದರ್ಶನ್​ ಮುಖ್ಯಭೂಮಿಕೆಯ ಕೊನೆ ಸಿನಿಮಾ 'ಕಾಟೇರ'. 2023ರ ಡಿಸೆಂಬರ್​​ ಕೊನೆಗೆ ಬಿಡುಗಡೆ ಆದ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ಸಿನಿಮಾದ ಸಕ್ಸಸ್ ಪಾರ್ಟಿಯನ್ನೂ ಆಯೋಜಿಸಲಾಗಿತ್ತು. ಆ ಬಳಿಕ ನಟ ದರ್ಶನ್​​, ಯಾವುದೇ ಸಾರ್ವಜನಿಕ ಕಾರ್ಯಕ್ರಮ ಅಥವಾ ಸಿನಿಮಾ ಪ್ರಮೋಶನಲ್​​ ಈವೆಂಟ್​​​ಗಳಲ್ಲಿ ಕಾಣಿಸಿಕೊಂಡಿಲ್ಲ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿದ ಹಿನ್ನೆಲೆ, ಕೆಲ ಕಾಲ ಸೆರೆವಾಸ ಅನುಭವಿಸಬೇಕಾಯಿತು. 2024ರ ಜೂನ್​​ನಲ್ಲಿ ಹತ್ಯೆ ಆರೋಪ ಪ್ರಕರಣದಲ್ಲಿ ಅರೆಸ್ಟ್ ಆಗಿ, ಡಿಸೆಂಬರ್‌ನಲ್ಲಿ ರೆಗ್ಯುಲರ್​​ ಬೇಲ್​​ ಪಡೆದಿರುವ ದರ್ಶನ್ ಇಂದು ತಮ್ಮ ಆಪ್ತ ಸ್ನೇಹಿತನ ಟ್ರೇಲರ್​ ಅನಾವರಣಗೊಳಿಸಿದ್ದಾರೆ. ಈವೆಂಟ್​ಗೆ ಖುದ್ದು ಆಗಮಿಸುತ್ತಾರೆಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದ್ರೆ ವಿಡಿಯೋ ಸಂದೇಶದ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ.

20250327_173618

ವಿಡಿಯೋ ಸಂದೇಶದ ಮೂಲಕ, ಧನ್ವೀರ್​​ ಸಿನಿಮಾ ಬಗ್ಗೆ ಮಾತನಾಡಿ ಶುಭ ಹಾರೈಸಿದ್ದಾರೆ. ಜೊತೆಗೆ ಬದುಕಿರೋತನಕ ಕನ್ನಡ ಸಿನಿಮಾಗಳನ್ನೇ ಮಾಡೋದು. ಕನ್ನಡಕ್ಕೆ ತಮ್ಮನ್ನು ಸಮರ್ಪಿಸೋದು ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.

'ಬಜಾರ್​', 'ಬೈ ಟು ಲವ್' ಮತ್ತು 'ಕೈವ'​ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡ ನಟ ಧನ್ವೀರ್​ ಗೌಡ ಅವರು ಚಾಲೆಂಜಿಂಗ್​ ಸ್ಟಾರ್​ನ ಬೆಸ್ಟ್​ ಫ್ರೆಂಡ್​ ಕೂಡಾ ಹೌದು. ದಾಸನ ಕಠಿಣ ಸಂದರ್ಭ ಸಾಥ್ ಕೊಟ್ಟವರು ಇವರೇ. ಇದೀಗ, ಇವರ ಮಂದಿನ ಚಿತ್ರಕ್ಕೆ ದರ್ಶನ್​ ಬೆಂಬಲ ಕೊಟ್ಟಿದ್ದಾರೆ. ಪೋಸ್ಟರ್ಸ್, ಟೀಸರ್ ಹಾಗೂ ಹಾಡುಗಳಿಂದಲೇ ಗಮನ ಸೆಳೆದಿದ್ದ ಚಿತ್ರತಂಡ ಇಂದು ತನ್ನ ಟ್ರೇಲರ್​ ಅನಾವರಣಗೊಳಿಸಿದೆ. ಏಪ್ರಿಲ್​ 10ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ.

ಬಹುನಿರೀಕ್ಷಿತ ವಾಮನ ಚಿತ್ರಕ್ಕೆ ಶಂಕರ್​ ರಾಮನ್ ಆ್ಯಕ್ಷನ್​ ಕಟ್​ ಹೇಳಿದ್ದಾರೆ.​​ ಡೈರೆಕ್ಷನ್​ ಜೊತೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಚೇತನ್​ ಗೌಡ ನಿರ್ಮಾಣದ ಚೊಚ್ಚಲ ಚಿತ್ರ ಇದು. ಅಜನೀಶ್​ ಬಿ.ಲೋಕನಾಥ್ ಅವರ​ ಸಂಗೀತ, ಮಹೇನ್​ ಸಿಂಹ ಅವರ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಭೂಷಣ್​ ನೃತ್ಯ ನಿರ್ದೇಶನ, ಅರ್ಜುನ್​ ರಾಜ್​, ವಿಕ್ರಂ ಮೋರ್​ ಹಾಗೂ ಜಾಲಿ ಬಾಸ್ಟಿನ್​ ಸಾಹಸ ನಿರ್ದೇಶನ ಹಾಗೂ ನವೀನ್​ ಹಾಡೋನಳ್ಳಿ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ