ಕಾಕ್ಟೇಲ್​ ಸಿನಿಮಾ ಮೂಲಕ ಹೀರೋ ಆಗಿ ಗುರುತಿಸಿಕೊಂಡ ಸ್ಯಾಂಡಲ್​ವುಡ್​ ನಟ ವಿರೇನ್​ ಕೇಶವ್​ ಇದೀಗ ಕಾಲಿವುಡ್​ಗೆ ನಾಯಕರಾಗಿ ಎಂಟ್ರಿ ಕೊಟ್ಟಿದ್ದಾರೆ.

ಪ್ಯಾಶನ್​ ಮೂವೀ ಮೇಕರ್ಸ್​ ಅಡಿ ಸಂತೋಷ್​ ಕುಮಾರ್​ ನಿರ್ದೇಶನದ “ಯುವನ್​ ರಾಬಿನ್​ಹುಡ್​ “ ತಮಿಳು ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.“ಯುವರತ್ನ” ಸಿನಿಮಾದಲ್ಲಿ ಪುಟ್ಟ ಪಾತ್ರ ನಿರ್ವಹಿಸಿದ್ದ ವಿರೇನ್​, “ಕಾಕ್ಟೇಲ್​” ಸಿನಿಮಾದಲ್ಲಿ ಭರವಸೆಯ ನಾಯಕರಾಗಿ ಹೊರಹೊಮ್ಮಿದ್ದರು.

ಈ ಕುರಿತು ಮಾತನಾಡಿರುವ ವಿರೇನ್​ ಕೇಶವ್, “ಇದು ಒಂದು ಆಕ್ಷನ್​ ಜಾನರ್​ ಚಿತ್ರವಾಗಿದ್ದು, ಕನ್ನಡ, ತಮಿಳು ಹಾಗೂ ಹಿಂದಿಯಲ್ಲಿ ಬಿಡುಗಡೆ ಮಾಡುವ ಆಲೋಚನೆ ಇದೆ. ರಗಡ್​ ಲುಕ್​ ನಲ್ಲಿ ನಾನು ಕಾಣಿಸಿಕೊಳ್ಳುತ್ತೇನೆ.” ಎಂದಿದ್ದಾರೆ.ಈಗಾಗಲೇ ಶೇ.80ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಇದರ ಜೊತೆಗೆ ವಿರೇನ್​ ನಟನೆಯ ಕನ್ನಡದ “ಬಾಸ್​” ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

ಇದರೊಂದಿಗೆ ವೈಭವ್​ ನಿರ್ದೇಶನದ ಹೊಸ ಸಿನಿಮಾ “ಬಸಿಕಟ್ಟೆ” ಸಿನಿಮಾದಲ್ಲೂ ವಿರೇನ್​ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಅರ್ಜುನ್​ ಛಾಯಾಗ್ರಾಹಣವಿದ್ದು, ರಾಧಾಕೃಷ್ಣ ಸಂಗೀತ ನೀಡಲಿದ್ದಾರೆ.

ಅವತಾರ್​ ಮೀಡಿಯಾಸ್​ ಪೋಸ್ಟ್​ ಪ್ರೊಡಕ್ಷನ್​ ಕೆಲಸದ ಜವಬ್ದಾರಿ ತೆಗೆದುಕೊಂಡಿದ್ದು, ಖ್ಯಾತ ನಟರು ಇದರಲ್ಲಿ ಅಭಿನಯಿಸಲಿದ್ದು, 2026ರ ಜನವರಿ 2ರಿಂದ ಶೂಟಿಂಗ್ ಆರಂಭವಾಗಲಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ