ಕೃಷ್ಣನನ್ನು ಅಥವಾ ಗೋವುಗಳನ್ನು ಜಾಮ್ದಾನಿನಲ್ಲಿ ನೇಯ್ಗೆ ಮಾಡಿ, ಜೀವಂತವಾಗಿ ಎದ್ದು ಬಂದಿರುವಂತೆ ನೀವು ಊಹಿಸಬಲ್ಲಿರಾ? ಅಥವಾ ಉತ್ತರ ಕರ್ನಾಟಕದ ಪ್ರಸಿದ್ಧ ಕುಪ್ಪಸದ ವಸ್ತ್ರವಾದ ಖಣ, ತನ್ನನ್ನು ಒಂದು ಸೀರೆಯಾಗಿ ಪರಿವರ್ತನೆಗೊಳಿಸಿ ಕೊಂಡಿರುವುದನ್ನು ಊಹಿಸಬಲ್ಲಿರಾ? ಈ ಸಂದರ್ಭದಲ್ಲಿ, ಆಧುನಿಕ ಪುನಃ ಆವಿಷ್ಕಾರಗಳಿಂದಾಗಿ ಇವುಗಳು ಹೇಗೆ ಉಳಿದು ಮುಂದುವರಿಯುತ್ತವೆ ಎಂಬುದರ ಬಗ್ಗೆ ಸ್ವಲ್ಪ ನೋಡೋಣ.......

ಆಗಸ್ಟ್ 7 ರಂದು ಪ್ರತಿ ವರ್ಷ ಬರುವ ರಾಷ್ಟ್ರೀಯ ಕೈ ಮಗ್ಗದ ದಿಸದಂದು, ಪ್ರಾಚೀನ ತಂತ್ರಗಳನ್ನು ನವೀನ ನೇಯ್ಗೆಯ ಪ್ರಯತ್ನಗಳೊಡನೆ ಬೆಳೆದಾಗ, ಅದರಿಂದ ನವ ಜೀವವನ್ನು ತುಂಬಬಲ್ಲೆವು ಎಂದು ನೋಡೋಣ. ಕೈಮಗ್ಗದ ಹೋರಾಟಗಾರರ ಹಾಗೂ ಭಾವೋದ್ದೀಪ್ತ ಸರ್ಕಾರೇತರ ಸಂಸ್ಥೆಗಳ ಪ್ರೋತ್ಸಾಹದಿಂದ ನೇಯ್ಗೆ ಹಾಗೂ ಜವಳಿ ತಜ್ಞರು, ತಲತಲಾಂತರಗಳಿಂದ ಹರಿದು ಬರುತ್ತಿರುವ ನಮ್ಮ ಪ್ರಾಚೀನ ಕೈಮಗ್ಗಗಳಿಗೆ ಹಾಗೂ ಜವಳಿಯ ಗಜಗಳಿಗೆ ನವೀನ ಪ್ರಾಮುಖ್ಯತೆಯನ್ನು ತಂದಿದ್ದಾರೆ.

ಬೆಂಗಳೂರಿನ ಎರಡು ಸೃಜನಶೀಲ ಉದಾಹರಣೆಗಳು ಈ ರೀತಿಯ ನೇಯ್ಗೆಯ ಹಾಗೂ ವಿನ್ಯಾಸದ ಜಗತ್ತಿನ ಯತ್ನಗಳ ಮೇಲೆ ಬೆಳಕನ್ನು ಚೆಲ್ಲುತ್ತವೆ. ಜವಳಿಯ ಪುನರುತ್ಥಾನದ ಬಾಟಿಕ್‌ ಆದ `ಮಾಧುರ್ಯ ಕ್ರಿಯೇಷನ್ಸ್,' ಉಪ್ಪಾಡದ ನೇಯ್ಗೆಯ ಮೇಲೆ ಜಾಮ್ದಾನಿಯ ಕೆಲಸವನ್ನು ಬೆಸೆದಿರುವಂತಹ ಒಂದು ಅನುಪಮವಾದ ಸೀರೆಯನ್ನು ಹೊರತಂದಿದ್ದಾರೆ. ಆಂಧ್ರಪ್ರದೇಶದ ನೇಕಾರರಾದ ಲಕ್ಷ್ಮಣರಾವ್ ‌ತಮ್ಮಿ ಸೆಟ್ಟಿಯವರು ನೃತ್ಯದ ಭಂಗಿಯಲ್ಲಿರುವ ಭಗವಾನ್‌ ಕೃಷ್ಣನೊಡನೆ ಎರಡು ಸುಂದರವಾದ ಹಸುಗಳನ್ನು ಸೀರೆಯ ಸೆರಗಿನಲ್ಲಿ ನೇಯ್ದಿದ್ದಾರೆ.

ಕಣ್ಸೆಳೆಯುವ ಸೀರೆಗಳು `ಕುಪ್ಪಸ' ಲೇಬಲ್ ನ ಅಡಿಯಲ್ಲಿದ್ದು, ಎರಡು ಶತಮಾನಗಳ ಹಿಂದಿನ ಖಣ ವಸ್ತ್ರದ ಮರುವಿನ್ಯಾಸವಾಗಿದೆ. ಈ ವಸ್ತ್ರವನ್ನು ಸೀರೆಯ ಅಗಲಕ್ಕೆ ನೇಯಲಾಗಿದೆ. ಖಣ ವಸ್ತ್ರ 30ಉ ಅಳತೆಯನ್ನು ಹೊಂದಿದ್ದು, ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದ ಪಾರಂಪರಿಕ ಮಾರುಕಟ್ಟೆಗೆ ಮಾತ್ರ ಸೀಮಿತವಾಗಿತ್ತು ಮತ್ತು ಈ ವಸ್ತ್ರಕ್ಕೆ ವೈವಿಧ್ಯತೆ ಇಲ್ಲದೆ, ಇದನ್ನು ನೇಯುವ ನೇಕಾರರೂ ಇಲ್ಲದೆ, ಈ ವಸ್ತ್ರಕ್ಕೆ ಬೇಡಿಕೆ ಇಲ್ಲದೆ ಹೋಗಿತ್ತು.

ರಾಷ್ಟ್ರೀಯ ಕೈಮಗ್ಗದ ದಿವಸವಾದ ಆಗಸ್ಟ್ 7ನ್ನು ಮತ್ತಷ್ಟು ವಿಶಿಷ್ಟವಾಗಿಸಲು ಏನನ್ನು ಮಾಡಲು ಸಾಧ್ಯ?

ಕೈಮಗ್ಗದ ಹೋರಾಟಗಾರರ ಹಾಗೂ ಭಾವೋದ್ದೀಪ್ತ ಸರ್ಕಾರೇತರ ಸಂಸ್ಥೆಗಳ ಸಹಾಯದಿಂದ ನೇಯ್ಗೆಯ ಹಾಗೂ ಜವಳಿ ತಜ್ಞರು, ನಮ್ಮ ಪಾರಂಪರಿಕ ಕೈಮಗ್ಗ ಹಾಗೂ ಜವಳಿಯ ಗಜಗಳಿಗೆ ಆಧುನಿಕತೆಯನ್ನು ಬೆಸೆದು, ತಲತಲಾಂತರಗಳಿಂದ ಹರಿದು ಬರುತ್ತಿರುವ ಅಸಂಖ್ಯಾತ ನೇಯ್ಗೆ, ಬಣ್ಣಗಳ ಬೆಸೆಯುವಿಕೆ ಮತ್ತು ಹ್ಯಾಂಡ್‌ ಬ್ಲಾಕ್‌ ಮುದ್ರಣಕ್ಕೆ ಒಂದು ನವೀನ ಬೆರಗನ್ನು ತಂದಿದ್ದಾರೆ. ಆದರೆ ಈ ವರದಿಗಾರರನ್ನು ಸೆಳೆದದ್ದು, ಜವಳಿ ಪುನರುತ್ಥಾನದ ಬೊಟಿಕ್‌ ಆದ ಮಾಧುರ್ಯ ಕ್ರಿಯೇಷನ್ಸ್ ರವರ ಅನುಪಮವಾದ ಉಪ್ಪಾಡದ ನೇಯ್ಗೆಯ ಮೇಲೆ ಅಲಂಕೃತವಾದ ಜಾಮ್ದಾನಿಯ ನೇಯ್ಗೆ. ಒಂದು ಸೀರೆಯ ಮೇಲೆ ಪ್ರಸಿದ್ಧವಾದ ರಾಜಾಸ್ಥಾನದ ನವಥ ದ್ವಾರದ ಶ್ರೀನಾಥ್‌ ಜಿ. ಇಲ್ಲಿ ಭಗವಾನ್‌ ಕೃಷ್ಣನು ಒಂದು ಪುಟ್ಟ ಬಾಲಕನಾಗಿದ್ದು, ಗೋವರ್ಧನ ಪರ್ವತವನ್ನು ಒಂದು ಕೈಯಿಂದ ಎತ್ತಿ ಹಿಡಿದಿದ್ದಾನೆ!

ಸೀರೆಯ ಸೆರಗಿನಲ್ಲಿ ಕಣ್ಸೆಳೆಯು ಈ ಕೆಲಸನ್ನು ಉಪ್ಪಾಡದ ಸೀರೆಯ ಮೇಲೆ ಆಂಧ್ರಪ್ರದೇಶದ ನೇಕಾರರು ನೇಯ್ದಿದ್ದಾರೆ. ಹಿರಿಯ ನೇಕಾರರಾದ, ಕೈಮಗ್ಗದ ಪ್ರಶಸ್ತಿ ವಿಜೇತರಾದ, ಸುಮೇರು ಕೈಮಗ್ಗದ ಲಕ್ಷ್ಮಣರಾವ್ ‌ತಮ್ಮಿಸೆಟ್ಟಿಯವರ ಅನುಭವಸ್ಥ ಕಣ್ಣಿನ ಮಾರ್ಗದರ್ಶನದಲ್ಲಿ ಇದನ್ನು ನೇಯಲಾಗಿದೆ. ಕಳೆದ ನಾಲ್ಕು ದಶಕಗಳಿಂದ ತಮ್ಮಿಸೆಟ್ಟಿಯವರು ಪವರ್‌ ಲೂಮ್ ಗಳ ದಾಳಿಯನ್ನು ಎದುರಿಸಿ, ಈ ರಾಜ್ಯದ ಅತಿ ಸುಂದರವಾದ ಕೈಮಗ್ಗದ ನೇಯ್ಗೆಯನ್ನು ನೇಯ್ದಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ