4 ದಿನಗಳ ಹೈದರಾಬಾದ್‌ ಟ್ರೇನಿಂಗ್‌ಗೆ ಹೋಗಬೇಕಾದ ಆರ್ಡರ್‌ ನೋಡಿ ಮಾಲಿನಿಗೆ ಒಂಥರಾ ದಿಗಿಲಾಯಿತು. ಅವಳ ಪತಿ ಸತೀಶ್‌ ಆಗಲೇ 6 ತಿಂಗಳು ಅಮೆರಿಕಾ ಟ್ರೇನಿಂಗ್‌ಗೆ ಹೋಗಿದ್ದರು. ಈಗ ತಾನು ಕೂಡ ಅಫಿಶಿಯಲ್ ಟೂರ್‌ಗೆ ಹೋಗಬೇಕಾಗಿ ಬಂದಿದ್ದು ಅವಳಿಗೆ ಸ್ವಲ್ಪ ಆತಂಕವನ್ನುಂಟು ಮಾಡಿತ್ತು.

ವೃದ್ಧ ಅತ್ತೆ, ಮಾವನನ್ನು ಬಿಟ್ಟು ಹೇಗೆ ಹೋಗುವುದು ಎಂದು ಅವಳ ಮನಸ್ಸು ಯೋಚಿಸುತ್ತಿತ್ತು. 4 ದಿನಗಳ ಕಾಲ ಅತ್ತೆಮಾವ ಹೇಗಿರುತ್ತಾರೆ, ಅವರ ಊಟತಿಂಡಿ ವ್ಯವಸ್ಥೆ ಹೇಗೆಂದು ಅವಳ ಮನಸ್ಸು ಚಿಂತಿಸುತ್ತಿತ್ತು. ಈಗ ಅವಳಿಗೆ ಕೆಲಸದಲ್ಲಿಯೂ ಗಮನವಿರಲಿಲ್ಲ.

ಸಂಜೆ ಅವಳು ಅಪಾರ್ಟ್‌ಮೆಂಟ್‌ನ ಪಾರ್ಕ್‌ನಲ್ಲಿ ಸುತ್ತಾಡುತ್ತಿರುವಾಗ ಎದುರಿನ ಫ್ಲ್ಯಾಟ್‌ನಲ್ಲಿ ವಾಸಿಸುವ ಶಶಿಕಲಾ ಭೇಟಿಯಾದರು. ಮುಖದಲ್ಲಿ ಚಿಂತೆ ತುಂಬಿಕೊಂಡಿದ್ದ ಮಾಲಿನಿಯನ್ನು ನೋಡಿ ``ಏನಾಯ್ತು ಮಾಲಿನಿ?'' ಎಂದು ಕೇಳಿದರು. ಆದರೆ ಮಾಲಿನಿಗೆ ಹೇಳಲು ಸಂಕೋಚ ಮತ್ತೆ ಮತ್ತೆ ಒತ್ತಾಯಿಸಿದಾಗ ಹೇಳಬೇಕಾಯಿತು. ಟ್ರೇನಿಂಗ್‌ ಹೋಗಬೇಕಾಗಿ ಬಂದದ್ದು ಹಾಗೂ ಅತ್ತೆಮಾವರನ್ನು ಯಾರು ನೋಡಿಕೊಳ್ಳುತ್ತಾರೆ ಎಂಬುದರ ಬಗ್ಗೆ ಅವಳು ಎಲ್ಲ ವಿಷಯನ್ನು ಶಶಿಕಲಾ ಮುಂದೆ ಹೇಳಿಕೊಂಡಳು.

ಶಶಿಕಲಾ ಆ ಮಾತಿಗೆ ನಗುತ್ತಲೇ, ``ಮಾಲಿನಿ, ನೀನು ನಿನ್ನ ಅತ್ತೆಮಾವನ ಚಿಂತೆ ಬಿಟ್ಟುಬಿಡು. ಅವರ ಬಗ್ಗೆ ನಾನು ಕಾಳಜಿ ವಹಿಸುತ್ತೇನೆ. ಹಾಗೊಮ್ಮೆ ಏನಾದರೂ ಸಮಸ್ಯೆಯಾದರೆ ನನ್ನನ್ನು ತಕ್ಷಣಕ್ಕೆ ಸಂಪರ್ಕಿಸಲು ಹೇಳು. ಅವರಿಗೆ ನನ್ನ ನಂಬರ್‌ ಕೊಡು,'' ಹೇಳಿದಳು.

ಶಶಿಕಲಾ ಹೇಳಿದ್ದನ್ನು ಕೇಳಿ ಮಾಲಿನಿಗೆ ಅಷ್ಟಿಷ್ಟು ನಿರಾಳ ಎನಿಸಿತು. ``ನೀನು ನನ್ನ ಸಮಸ್ಯೆಯನ್ನು ಕೆಲವೇ ನಿಮಿಷಗಳಲ್ಲಿ ಬಗೆಹರಿಸಿಬಿಟ್ಟೆ. ಕಳೆದ ಬಾರಿ ನಾನು ಅನಾರೋಗ್ಯದಿಂದಾಗಿ ಟ್ರೇನಿಂಗ್‌ಗೆ ಹೋಗಲು ಆಗಿರಲಿಲ್ಲ. ಆದರೆ ಈ ಸಲ ತಪ್ಪಿಸಿಕೊಳ್ಳುವ ಹಾಗಿರಲಿಲ್ಲ,'' ಎಂದು ಅವಳು ಖುಷಿಯಿಂದ ಹೇಳಿದಳು.

ಮರುದಿನವೇ ಮಾಲಿನಿ ತನ್ನ ಅತ್ತೆಮಾವನಿಗೆ ಕೈ ಬೀಸುತ್ತ ಟ್ರೇನಿಂಗ್‌ಗೆ ಹೊರಟುಬಿಟ್ಟಳು. 4 ದಿನಗಳ ಟ್ರೇನಿಂಗ್‌ ಮುಗಿಸಿಕೊಂಡು ಮಾಲಿನಿ ಬಂದಾಗ ಅತ್ತೆಮಾವ ಎದುರು ಮನೆಯ ಶಶಿಕಲಾರನ್ನು ಹೊಗಳಿದ್ದೇ ಹೊಗಳಿದ್ದು. ಅವರ ಮಾತು ಕೇಳಿ ಮಾಲಿನಿಗೂ ಖುಷಿಯಾಯಿತು. 2 ವರ್ಷದ ಹಿಂದೆ ಪತಿ ಸತೀಶ್‌ ಮನೆ ಖರೀದಿಸುವುದೆಂದಾಗ, ಅವಳು ಸ್ವತಂತ್ರ ಮನೆಯೇ ಉತ್ತಮ ಎಂದು ಪ್ರತಿಪಾದಿಸಿದ್ದಳು. ಆದರೆ ಸತೀಶ್‌ಗೆ ಮಾತ್ರ ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್‌ ಖರೀದಿಸುವುದು ಸೂಕ್ತ ಎನಿಸಿತ್ತು. ಸಂಕಷ್ಟದಲ್ಲಿ ಅಕ್ಕಪಕ್ಕದವರು ನೆರವಿಗೆ ಬರುತ್ತಾರೆ ಎನ್ನುವುದು ಸತೀಶನ ವಾದವಾಗಿತ್ತು. ಸ್ವತಂತ್ರ ಮನೆಗಳಲ್ಲಿ ಅಕ್ಕಪಕ್ಕದವರ ಭೇಟಿ ತಿಂಗಳಿಗೊಮ್ಮೆ ಕೂಡ ಕಷ್ಟ ಎನ್ನುವುದು ಕೂಡ ಅವನ ಅಭಿಪ್ರಾಯವಾಗಿತ್ತು.

ಅಕ್ಕಪಕ್ಕದ ಸಭ್ಯ ನಾಗರಿಕರು

ರಂಜಿತಾಳಿಗೆ ಅವಳ ಫ್ಲ್ಯಾಟ್‌ ಒಂದು ರೀತಿಯಲ್ಲಿ ವರದಾನ ಎಂಬಂತೆ ಸಾಬೀತಾಯಿತು. ಅವಳು ಹಾಗೂ ಅವಳ ಪತಿ ರಮಣ್‌ ಇಬ್ಬರೂ ಸೇರಿ ತಮ್ಮ ಉಳಿತಾಯದ ಹಣದಿಂದ ಒಂದು ಅಪಾರ್ಟ್‌ಮಂಟ್‌ನಲ್ಲಿ ಫ್ಲ್ಯಾಟ್‌ ಖರೀದಿಸಿದ್ದರು. ಅತ್ತೆಯ ನಿಧನಾನಂತರ ಮಾವ ಕೂಡ ಅವರ  ಜೊತೆಗೆ ವಾಸಿಸುತ್ತಿದ್ದರು. ಬೆಳಗ್ಗೆ 10 ಗಂಟೆಯ ಹೊತ್ತಿಗೆ ಗಂಡಹೆಂಡತಿ ಇಬ್ಬರೂ ಕೆಲಸಕ್ಕೆ ಹೊರಟರೆ ಮಾವ ಒಬ್ಬರೇ ಇರುತ್ತಿದ್ದರು. ತಿಂಡಿ ಊಟ ಮುಗಿಸಿ ಅವರು ಅಪಾರ್ಟ್‌ಮೆಂಟ್‌ನ ಪಾರ್ಕ್‌ನಲ್ಲಿ ಸುತ್ತಾಡುತ್ತಿದ್ದರು. ಅಲ್ಲಿ ಅವರಿಗೆ ಹೇಗೆ ಸಮಯ ಕಳೆಯುತ್ತಿತ್ತೋ ಗೊತ್ತಾಗುತ್ತಲೇ ಇರಲಿಲ್ಲ. ಒಂದು ವರ್ಷ ಆಗುವಷ್ಟರಲ್ಲಿ ರಂಜಿತಾಳಿಗೆ ಮೈಸೂರಿನಿಂದ ಬೆಂಗಳೂರಿಗೆ ವರ್ಗವಾಯಿತು. ಇನ್ನು ಹೇಗಪ್ಪಾ ಮಾವನವರ ಸ್ಥಿತಿ ಎಂದು ಅವಳಿಗೆ ಚಿಂತೆ ಆಗುತ್ತಿತ್ತು. ರಂಜಿತಾಳಿಗೆ ಇಷ್ಟು ಒಳ್ಳೆಯ ನೌಕರಿ ಬಿಟ್ಟುಬಿಡುವುದು ಸರಿ ಎನಿಸುತ್ತಿರಲಿಲ್ಲ. ಅವಳು ಹೇಗೊ ಮಾಡಿ ನೌಕರಿ ಹಾಗೂ ಕುಟಂಬ ನಿರ್ವಹಣೆ ಮಾಡುವುದಾಗಿ ನಿರ್ಧರಿಸಿಬಿಟ್ಟಿದ್ದಳು. ವಾರಾಂತ್ಯದಲ್ಲಿ ಅವಳು ಮೈಸೂರಿಗೆ ಬಂದಾಗ ಆಶ್ಚರ್ಯವಾಯಿತು. ಸೊಸೆ ಬೆಂಗಳೂರಿಗೆ ಹೊರಟು ಹೋಗುತ್ತಾಳೆ ಎಂದು ಗೊತ್ತಾದಾಗ ಮಾವನವರ ಸ್ನೇಹಿತರು ಸೇರಿಕೊಂಡು ಅವರಿಗೆ ತಿಂಡಿ ಊಟಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಂಡರು. ರಂಜಿತಾ ಕೆಲವೇ ತಿಂಗಳಲ್ಲಿ ಪುನಃ ಮೈಸೂರಿಗೆ ವರ್ಗ ಮಾಡಿಸಿಕೊಂಡಳು. ರಂಜಿತಾ ಈ ಕುರಿತಂತೆ ಹೀಗೆ ಹೇಳುತ್ತಾರೆ, ``ನಾನು ವೀಕೆಂಡ್‌ನಲ್ಲಿ ಮಾತ್ರ ಮನೆಗೆ ಬರುತ್ತಿದ್ದೆ. ಅಕ್ಕಪಕ್ಕದ ಮನೆಯವರು ನಮ್ಮ ಮಾವನವರನ್ನು ಬಹಳ ಚೆನ್ನಾಗಿ ಗಮನಿಸಿಕೊಳ್ಳುತ್ತಿದ್ದರು.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ