ಈ ಘಟನೆ ನಮ್ಮ ಮದುವೆಯ ನಿಶ್ಚಿತಾರ್ಥದ ನಂತರ ನಡೆದದ್ದು. ನಮ್ಮ ಮದುವೆ ತರಾತುರಿಯಲ್ಲಿ ನಿಶ್ಚಯವಾಗಿತ್ತು. ಹೀಗಾಗಿ ನಮಗೆ ಹುಡುಗನ ಮನೆಯವರ ಬಗ್ಗೆ ಹೆಚ್ಚಿಗೆ ಏನೂ ತಿಳಿದಿರಲಿಲ್ಲ. ಮದುವೆ ಎಷ್ಟು ಬೇಗ ನಿಶ್ಚಯವಾಯಿತೆಂದರೆ ಯಾರಿಗೂ ನನ್ನ ಅಭಿಪ್ರಾಯ ಕೇಳುವುದು ಅಗತ್ಯವೆಂದು ತಿಳಿಯಲಿಲ್ಲ. ನನ್ನ ಮದುವೆಯ ಬಗ್ಗೆ ನನಗೆ ಯಾವುದೇ ಥರದ ಉತ್ಸಾಹವಾಗಲಿ ಸಂತೋಷವಾಗಲೀ ಇರಲಿಲ್ಲ. ಹೇಗೋ ನಿಶ್ಚಿತಾರ್ಥವಾಗಿಬಿಟ್ಟಿತು.....ನಿಶ್ಚಿತಾರ್ಥದಂದು ಹುಡುಗನ ಅಕ್ಕ, ``ನಿನಗೆ ನನ್ನ ತಮ್ಮ ಹೇಗನ್ನಿಸಿದ?'' ಎಂದು ಕೇಳಿದರು.

ನಿಶ್ಚಿತಾರ್ಥದ ಮೊದಲು ಅವರನ್ನು ಒಂದು ಕ್ಷಣ ಮಾತ್ರ ನೋಡಿದೆ. ಏನೂ ಮಾತಾಡಿರಲಿಲ್ಲ. ಆದ್ದರಿಂದ ನಾನು ಏನೂ ಉತ್ತರಿಸಲಿಲ್ಲ. ಉತ್ತರ ಕೊಡದಿದ್ದಕ್ಕೆ, ನಾನು ಯಾವುದೋ ಒತ್ತಡದಿಂದಾಗಿ ಮದುವೆ ಮಾಡಿ ಕೊಳ್ಳುತ್ತಿದ್ದೇನೆಂದು ಅವರಿಗೆ ಅನ್ನಿಸಿತು.

2 ದಿನಗಳ ನಂತರ ನನ್ನ ಭಾವಿ ಪತಿಯಿಂದ ಫೋನ್‌ ಬಂತು. ಅವರು ನನ್ನನ್ನು ಭೇಟಿಯಾಗಬೇಕೆಂದಿದ್ದರು. ಆದರೆ ನಾನು ಮದುವೆಯಂತೂ ನಿಶ್ಚಯವಾಗಿದೆ. ಇನ್ನು ಮಾತುಕತೆಯಿಂದ ಏನೂ ಉಪಯೋಗವಿಲ್ಲವೆಂದು ತಿಳಿದು ಏನೋ ನೆಪ ಹೇಳಿ ತಪ್ಪಿಸಿಕೊಂಡೆ.

2 ದಿನಗಳ ನಂತರ ನನಗೆ ಅವರಿಂದ ಪ್ರೀತಿಭರಿತ ಗ್ರೀಟಿಂಗ್‌ ಕಾರ್ಡ್‌ ಬಂತು. ಅದರಲ್ಲಿ ಹೀಗೆ ಬರೆದಿತ್ತು, ``ಡಿಯರ್‌ ಕುಸುಮಾ, ನನ್ನ ಜೊತೆಯಲ್ಲಿದ್ದರೆ ನಿನ್ನೆಲ್ಲಾ ತೊಂದರೆಗಳು ದೂರವಾಗುತ್ತವೆ ಎಂದು ಹೇಳಲಾರೆ. ಆದರೆ, ನಾವಿಬ್ಬರೂ ಒಟ್ಟಿಗೆ ಸೇರಿ ಎಲ್ಲ ಕಷ್ಟಗಳನ್ನೂ ದೂರ ಮಾಡಿಕೊಳ್ಳೋಣ.

``ನನ್ನ ಹೆಜ್ಜೆ ಅಲುಗಾಡಿದಾಗೆಲ್ಲಾ ನಿನ್ನ ಹೆಜ್ಜೆಯನ್ನು ಜೊತೆಗೇ ಇಡು ಎಂದು ಕೇಳುವುದಿಲ್ಲ. ಆದರೆ ಮೈ ಮುಂದೆ ಮಾಡಿ ನಾನು ಬೀಳದಂತೆ ತಡಿ. ನನ್ನ ಜೊತೆಯಲ್ಲಿದ್ದರೆ ನಿನಗೆಂದೂ ದುಃಖದ ಕೂಗು ಕೇಳಿಬರುವುದಿಲ್ಲ ಎಂದು ಹೇಳಲಾರೆ. ಆದರೆ, ಹೇಗಾದರೂ ನಿನ್ನ ಮುಖದ ಮೇಲೆ ಮುಗುಳ್ನಗೆಯನ್ನು ವಾಪಸ್ಸು ತರುತ್ತೇನೆಂದು ವಾಗ್ದಾನ ಮಾಡುತ್ತೇನೆ.

``ಈ ನಮ್ಮ ಜೀವನ ಯಾತ್ರೆಯಲ್ಲಿ ಪ್ರತಿ ಕ್ಷಣವನ್ನೂ ಸಂತೋಷಮಯವಾಗಿ ಮಾಡೆಂದು ನಾನು ನಿನ್ನನ್ನು ಕೇಳುವುದಿಲ್ಲ. ಆದರೆ ಪ್ರತಿ ಸಂಜೆ, ಪ್ರತಿ ಬೆಳಗ್ಗೆ ನೀನು ನನ್ನ ಸಮೀಪದಲ್ಲಿರುವ ಎಂದು ಕೋರುತ್ತೇನೆ.''

ಪತ್ರದಲ್ಲಿ ಬರೆದಿದ್ದ ಈ ಮಾತುಗಳು ನನ್ನ ಹೃದಯವನ್ನು ತಟ್ಟಿದವು. ನಾನು ಕೂಡಲೇ ಅವರನ್ನು ಭೇಟಿಯಾಗಲು ಪರಿತಪಿಸತೊಡಗಿದೆ. ಮುಂದೆ ಸಂತೋಷ ಹಾಗೂ ಸಂಭ್ರಮಗಳೊಡನೆ ನಮ್ಮ ಮದುವೆ ನೆರವೇರಿತು. ನಾನು ಇಂದಿಗೂ ಆ ಪತ್ರವನ್ನು ಭದ್ರವಾಗಿ ಇಟ್ಟುಕೊಂಡಿದ್ದೇನೆ.

- ಕುಸುಮಾ, ದಾವಣಗೆರೆ.

ಅಣ್ಣನಿಗೆ ಹೆಣ್ಣು ನೋಡಲು ಅಪ್ಪ ಅಮ್ಮನೊಡನೆ ನಾನೂ ಹೋಗಿದ್ದೆ. ಹುಡುಗಿ ಬಿ.ಎ. ಓದುತ್ತಿದ್ದಳು. ಅಣ್ಣ ಹೈಸ್ಕೂಲ್‌ನಲ್ಲಿ ಇಂಗ್ಲಿಷ್ ಟೀಚರ್‌ ಕೆಲಸ ಮಾಡುತ್ತಿದ್ದ. ಹುಡುಗ ಹುಡುಗಿ ಪರಸ್ಪರ ಇಷ್ಟವಾಗಿದ್ದರು. ಒಂದು ವರ್ಷ ಕಳೆದರೂ ಹುಡುಗಿ ಮನೆಯವರಿಂದ ಯಾವುದೇ ಸುದ್ದಿ ಬರಲಿಲ್ಲ. ನಂತರ ನಮಗೆ ತಿಳಿದದ್ದು ಹುಡುಗ ಚೆನ್ನಾಗಿ ಓದಿ ಸರ್ಕಾರಿ ಕೆಲಸದಲ್ಲಿದ್ದಾನೆ. ಹೆಚ್ಚು ವರದಕ್ಷಿಣೆ ಕೇಳಬಹುದು. ನಮಗೆ ವರದಕ್ಷಿಣೆ ಕೊಡಲು ಆಗಲ್ಲ ಎಂದು ಹುಡುಗಿಯ ತಂದೆ ತಾಯಿ ಯೋಚಿಸಿ ಯಾವುದೇ ಪ್ರಸ್ತಾಪ ಮಾಡಿರಲಿಲ್ಲ. ಆದರೆ ನಮ್ಮ ತಂದೆ ತಾಯಿ ವರದಕ್ಷಿಣೆಯ ಬಗ್ಗೆ ಯಾವುದೇ ಬೇಡಿಕೆ ಇಟ್ಟಿರಲಿಲ್ಲ. ಹೆಣ್ಣಿನವರು ತಪ್ಪು ತಿಳಿದುಕೊಂಡಿದ್ದರು. ಇದು ಗೊತ್ತಾಗಿ ನಮ್ಮ ತಂದೆ ತಾಯಿ ಅವರ ಮನೆಗೆ ಹೋಗಿ, ``ನಮ್ಮನ್ನು ದುರಾಶೆ ಪಡುವರೆಂದು ತಿಳಿಯಬೇಡಿ. ನಮಗೆ ವರದಕ್ಷಿಣೆ ಬೇಡ. ಗುಣವಂತಳಾದ ಸೊಸೆ ಸಾಕು,'' ಎಂದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ