25 ವರ್ಷದ ಸ್ನೇಹಾ, ಸುರೇಶ್ ನನ್ನು ಪ್ರೀತಿಸತೊಡಗಿದಳು. ತನ್ನ ಮಾಡರ್ನ್ ಮಮ್ಮಿ ಎಂದು ಕರೆಸಿಕೊಳ್ಳುವ ಅಮ್ಮ ಅನಿತಾ ಇದರ ಬಗ್ಗೆ ಕೊಂಕು ತೆಗೆದು ಈ ವಿವಾಹ ಸಾಧ್ಯವೇ ಇಲ್ಲ ಎಂದು ಹೇಳಿದ್ದನ್ನು ಕೇಳಿದಾಗ ಸ್ನೇಹಾಗೆ ಅಚ್ಚರಿಯಾಯಿತು. ಸುರೇಶ್ ಜೊತೆಗೆ ನಿನ್ನ ಜಾತಕ ಹೊಂದುವುದಿಲ್ಲ. ಹಾಗಾಗಿ ಈ ಮದುವೆ ಮಾಡಲು ಸಾಧ್ಯವಿಲ್ಲ ಎಂದು ಅಮ್ಮ ಖಡಾಖಂಡಿತವಾಗಿ ಹೇಳಿದ್ದರು.
ಸ್ನೇಹಾ ತನ್ನ ಜೀವನದ ನಿರ್ಧಾರ ತೆಗೆದುಕೊಳ್ಳಲು ಯಾವ ಯಾವ ಮಾನಸಿಕ ತೊಂದರೆಗಳನ್ನು ದಾಟಿ ಹೋಗಬೇಕಾಯಿತು ಎನ್ನುವುದನ್ನು ಅವಳ ಮಾತುಗಳಲ್ಲಿ ಕೇಳಿ, ``ಒಂದು ಒಳ್ಳೆಯ ವಿಷಯವೆಂದರೆ, ಸುರೇಶನ ಕುಟುಂಬದವರು ಮಾತ್ರ ಈ ಜಾತಕದ ನಾಟಕವನ್ನು ಒಪ್ಪುವವರಾಗಿರಲಿಲ್ಲ. ಅವರು ನನ್ನನ್ನು ಅತ್ಯಂತ ಖುಷಿಯಿಂದ ತಮ್ಮ ಮನೆಯ ಸೊಸೆಯಾಗಿಸಿಕೊಳ್ಳಲು ಸಿದ್ಧರಾಗಿದ್ದರು. ಅಮ್ಮ ಪ್ರತಿದಿನ ನಾನು ನಿರುಪಯುಕ್ತಳು, ಮದುವೆಗೆ ಅಷ್ಟು ಆತುರ ಏನು ಎಂದು ಕೇಳುತ್ತಿದ್ದರು.
``ಸುರೇಶ್ ನನ್ನು ಬಿಟ್ಟು ನಾನು ಬೇರಾರ ಜೊತೆಗೂ ಮದುವೆ ಮಾಡಿಕೊಳ್ಳುವ ಕಲ್ಪನೆ ಕೂಡ ಮಾಡಿಕೊಂಡಿರಲಿಲ್ಲ. ಮದುವೆಯ ದಿನದವರೆಗೂ ಅಮ್ಮ ನನ್ನನ್ನು ನಿಂದಿಸುತ್ತಲೇ ಇದ್ದರು. ಯಾವುದೇ ಕಾರಣಕ್ಕೂ ಸುರೇಶ್ ಜೊತೆಗೆ ನನ್ನ ಮದುವೆ ಆಗಬಾರದೆಂದು ಅವರು ಪ್ರಯತ್ನ ನಡೆಸಿದರು. ಪ್ರೀತಿಸಿ ಮದುವೆಯಾಗಿದ್ದ ಕಾರಣದಿಂದ ನಾನು ಅಮ್ಮನ ಆಶೀರ್ವಾದ ಪಡೆಯದೆ ಗಂಡನ ಮನೆಗೆ ಹೊರಟು ಹೋದೆ.''
ಪ್ರಿಯಾ ತನ್ನ ಕುಟುಂಬದವರಿಗೆ ತಾನು ಬ್ರಾಹ್ಮಣ ಕುಟುಂಬದ ಶಶಿಧರ್ ನನ್ನು ಪ್ರೀತಿಸುತ್ತಿದ್ದು, ಅವರನ್ನು ಮದುವೆ ಆಗುವುದಾಗಿ ಹೇಳಿದಳು. ಅದು ಎರಡೂ ಕುಟುಂಬದರಲ್ಲಿ ಅಲ್ಲೋಲ ಕಲ್ಲೋಲವನ್ನು ಉಂಟು ಮಾಡಿತು. ನಾನ್ ವೆಜ್ ಸೇವನೆ ಮಾಡುವ ಕುಟುಂಬದ ಯುವತಿ ಪಕ್ಕಾ ಸಸ್ಯಾಹಾರಿ ಕುಟುಂಬದ ಜೊತೆ ಮದುವೆ ಎಂದರೆ ಹೇಗೆ ಸಾಧ್ಯ ಎಂದು ಚರ್ಚಿಸತೊಡಗಿದರು.
ಪ್ರಿಯಾಳ ತಂದೆ ಹೃದ್ರೋಗಿ. ಅವಳ ಅಮ್ಮ ಅವಳಿಗೆ ಹೇಗೆ ಹೆದರಿಸಿದರೆಂದರೆ, ನೀನೇನಾದರೂ ಆ ಹುಡುಗನನ್ನು ಮದುವೆಯಾದರೆ ನಿನ್ನ ತಂದೆಗೆ ಹೃದಯಾಘಾತವಾಗುತ್ತದೆ ಎಂದು ಹೆದರಿಸಿ ಆಕೆಯನ್ನು ಸುಮ್ಮನಾಗಿಸಿದರು. ಅದಾದ 6 ತಿಂಗಳಲ್ಲಿಯೇ ತಮ್ಮದೇ ಜಾತಿಯ ಯುವಕನ ಜೊತೆ ಮದುವೆ ಮಾಡಿದ ಬಳಿಕ ಆಕೆ ಕೆನಾಡಕ್ಕೆ ಹೊರಟುಹೋದಳು. ಅತ್ತ ಶಶಿಧರ್ ತನ್ನ ಇಚ್ಛೆಯಂತೆ ಮದುವೆಯಾಗದಿದ್ದಕ್ಕೆ ಬಹಳ ಬೇಸರಪಟ್ಟುಕೊಂಡ. ಪ್ರಿಯಾ ಕೂಡ ಬಹಳ ನೋವಿಂದ ಕೆನಡಾಕ್ಕೆ ಹೋದಳು. ಶಶಿಧರ್ ಒಳ್ಳೆಯ ಸ್ವಭಾವದ ಹುಡುಗನಾಗಿದ್ದೂ ಕೂಡ ಅವನನ್ನು ಒಪ್ಪಲಿಲ್ಲ. ಪ್ರಿಯಾ ಈಗ ಸೋಶಿಯಲ್ ಮೀಡಿಯಾದಿಂದ ದೂರವೇ ಉಳಿದಿದ್ದಾಳೆ. ಅವಳ ಗಂಡ ಒಬ್ಬ ಕುಡುಕ, ಅವನೊಂದಿಗೆ ಅವಳು ಖುಷಿಯಾಗಿಲ್ಲ.
ಎಲ್ಲೆಲ್ಲೂ ಜಾತಿಯ ಪ್ರಸ್ತಾಪ
ಪ್ರತಿಯೊಬ್ಬ ತಂದೆ ತಾಯಿಯರ ರೀತಿಯಲ್ಲಿ ಸುಧೀಂದ್ರ ಹಾಗೂ ಮನೀಷಾ ಶರ್ಮಾರ ಇಚ್ಛೆ ಏನಾಗಿತ್ತೆಂದರೆ, ತಮ್ಮ ಮಗ ಮೋಹನ್ ಕೂಡ ಬ್ರಾಹ್ಮಣ ಕುಟುಂಬದ ಹುಡುಗಿಯನ್ನೇ ಮದುವೆಯಾಗಬೇಕು ಎನ್ನುವುದಾಗಿತ್ತು. ಆದರೆ ಅವರ ಮಗ ತನ್ನದೇ ಆಫೀಸಿನ ಮರಾಠ ಸಮಾಜದ ಗೀತಾ ಪವಾರ್ ಳನ್ನು ಇಷ್ಟಪಡುತ್ತಿದ್ದ. ಹಲವು ವರ್ಷಗಳ ಪ್ರೀತಿ ಮದುವೆ ಮಾಡಿಕೊಳ್ಳಲು ಅವರನ್ನು ಪ್ರೇರೇಪಿಸಿತ್ತು. ಗೀತಾಳ ಪೋಷಕರಿಗೆ ಇದರಲ್ಲೇನೂ ಅಭ್ಯಂತರ ಇರಲಿಲ್ಲ. ಆದರೆ ಮೋಹನನ ಕುಟುಂಬದವರಿಗೆ ಮಾತ್ರ ಜಾತಿ ಧರ್ಮದ ಮುಖವೇ ಕಂಡುಬರುತ್ತಿತ್ತು.