ಪ್ರತಿಯೊಬ್ಬ ತಂದೆತಾಯಿ ತಮ್ಮ ಮಗು ಎಲ್ಲ ಕ್ಷೇತ್ರದಲ್ಲೂ ನಂಬರ್‌ ಒನ್‌ ಆಗಿರಬೇಕೆಂದು ಭಾರಿ ಮಹತ್ವಾಕಾಂಕ್ಷೆ ಇಟ್ಟುಕೊಂಡಿರುತ್ತಾರೆ. ಅದೇ ಕಾರಣಕ್ಕಾಗಿ ಅವರು ಮಕ್ಕಳ ಮೇಲೆ ಭಾರಿ ಒತ್ತಡ ಹೇರುತ್ತಾರೆ. ಇತ್ತೀಚಿನ ದಿನಗಳಲ್ಲಿ ಹಾಡು, ನಾಟಕ ಈ ತೆರನಾದ ರಿಯಾಲಿಟಿ ಶೋಗಳ ಹಾವಳಿ ಟಿವಿಗಳಲ್ಲಿ ಅತಿಯಾಗಿಬಿಟ್ಟಿವೆ. ತಮ್ಮ ಮಕ್ಕಳು ಕೂಡ ಅಂತಹ ಶೋನಲ್ಲಿ  ಪಾಲ್ಗೊಳ್ಳಬೇಕು, ಹೆಸರು ಮಾಡಬೇಕು ಎನ್ನುವುದು ಪೋಷಕರ ಮನದಾಳದ ಇಚ್ಛೆಯಾಗಿರುತ್ತದೆ. ಪ್ರತಿಯೊಬ್ಬರಿಗೂ ತಮ್ಮ ಮಗು `ಸೂಪರ್‌ ಕಿಡ್‌' ಆಗಬೇಕಿದೆ. ಮಗುವೊಂದು ಪರಿಸರದಿಂದ, ತನ್ನ ಕುಟುಂಬದಿಂದ ಮೊದಲು ಕಲಿಯುತ್ತದೆ. ನಂತರ ಗೆಳೆಯರಿಂದ ಆ ಬಳಿಕ ಟಿವಿಯಿಂದ ಏನೆಲ್ಲವನ್ನೂ ಕರಗತ ಮಾಡಿಕೊಳ್ಳುತ್ತದೆ.

ಸೃಷ್ಟಿಯ ವಯಸ್ಸು ಇನ್ನು ಎಂಟು. ಅವಳು ಶಾಲೆಗೆ ಹೋಗುತ್ತಾಳೆ. ಶಾಲೆಯಿಂದ ಮನೆಗೆ ಬರುತ್ತಿದ್ದಂತೆ ಸಂಗೀತ ಶಿಕ್ಷಕಿ ಮನೆಗೆ ಬಂದಿರುತ್ತಾರೆ. ಅದು ಮುಗಿಯುತ್ತಿದ್ದಂತೆ ಟ್ಯೂಶನ್‌ಗೆ ಹೋಗಬೇಕು. ಅಲ್ಲಿಂದ ಮರಳುತ್ತಿದ್ದಂತೆ ಈಜು ತರಬೇತಿಗೆ ಹೋಗುವ ಸಮಯ ಆಗಿಬಿಟ್ಟಿರುತ್ತದೆ. ಸಂಜೆ ಡ್ಯಾನ್ಸ್ ಕ್ಲಾಸ್‌ ಕೂಡ ಇದ್ದೇ ಇರುತ್ತದೆ. ಅದು ಮುಗಿಯುತ್ತಿದ್ದಂತೆ ಹೋಂವರ್ಕ್‌ನ್ನು ಪೂರೈಸಬೇಕಿರುತ್ತದೆ. ಅಷ್ಟೊತ್ತಿಗೆ ಅವಳಿಗೆ ಆಕಳಿಕೆ, ತೂಕಡಿಕೆ ಶುರು ಆಗಿಬಿಟ್ಟಿರುತ್ತದೆ. ಅದಕ್ಕೆ ಮೇಲಾಗಿ ಅಮ್ಮನ ಬೈಗುಳ ಕೇಳಬೇಕಾಗಿಬರುತ್ತದೆ.

ಈಗ ನೀವೇ ಯೋಚಿಸಿ, ಪುಟ್ಟ ಮಗುವಿಗೆ ಇಷ್ಟೊಂದು ಹೊರೆ ಸರಿಯೆ? ಈ ಧಾವಂತದ ನಡುವೆ ಅದಕ್ಕೆ ನೆಮ್ಮದಿಯಿಂದ ಒಂದೆಡೆ ಕುಳಿತುಕೊಳ್ಳುವ ಪುರಸತ್ತು ಇಲ್ಲ, ದಣಿವಾದಾಗ ನಿದ್ದೆಗೆ ಜಾರುವ ಅವಕಾಶ ಇಲ್ಲ.

ಈ ತೆರನಾದ ದಿನಚರಿ ಇತ್ತೀಚೆಗೆ ಪ್ರತಿಯೊಬ್ಬ ಮಕ್ಕಳದ್ದೂ ಆಗಿದೆ. ಪೋಷಕರು ತಮ್ಮ ಅಪೂರ್ಣ ಕನಸನ್ನು ಮಕ್ಕಳ ಮೇಲೆ ಹೇರುವ ಮುಖಾಂತರ ಅದನ್ನು ಈಡೇರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ತಮ್ಮ ಮಗು ಆಲ್‌ರೌಂಡರ್ ಆಗಬೇಕೆನ್ನುವುದು ಪ್ರತಿಯೊಬ್ಬರ ಆಕಾಂಕ್ಷೆ. ಸೂಪರ್‌ ಹೀರೋನ ರೀತಿಯಲ್ಲಿ ಸೂಪರ್‌ ಕಿಡ್‌ ಆಗಬೇಕು ಎನ್ನುವುದು ಅವರ ಮನದಾಳದ ಅಪೇಕ್ಷೆ ಆಗಿರುತ್ತದೆ.

ಹಿರಿಯ ವಕೀಲರಾದ ರಾಜಶೇಖರ್‌ ಮೂರ್ತಿ ಹೀಗೆ ಹೇಳುತ್ತಾರೆ, ``ಪೋಷಕರ ಈ ರೀತಿಯ ಮಹತ್ವಾಕಾಂಕ್ಷೆ ಮಕ್ಕಳನ್ನು ಖಿನ್ನತೆಗೆ ದೂಡುತ್ತಿದೆ. ಅಂಕಿಗಳ ಆಟದಲ್ಲಿ ಮುಂದಿರಬೇಕು ಎನ್ನುವುದು ಅವರ ವಿವಶತೆಯಾಗಿದೆ. ಇದೇ ಕಾರಣದಿಂದ ಪ್ರತಿ ವರ್ಷ ಪರೀಕ್ಷಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಅದೆಷ್ಟೋ ವಿದ್ಯಾರ್ಥಿಗಳು ಆತ್ಯಹತ್ಯೆಗೆ ಶರಣಾಗುತ್ತಿದ್ದಾರೆ. ಪೋಷಕರು ಮಕ್ಕಳನ್ನು ಈ ಸ್ಥಿತಿಗೆ ಖಂಡಿತಾ ದೂಡಬಾರದು! ಪ್ರತಿಯೊಂದು ಮಗು ಪ್ರತಿ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರಲು ಸಾಧ್ಯವಿಲ್ಲ ಎಂಬುದನ್ನು ಪೋಷಕರು ಮನಗಾಣಬೇಕು.

''ತಂದೆತಾಯಿ ಮಕ್ಕಳನ್ನು ಸಾಕಷ್ಟು ಪೋಷಿಸುತ್ತಾರೆ. ಆದರೆ ಪರಿಣಾಮ ಏನೂ ದಕ್ಕದೆ ಇದ್ದರೆ ಏನು ಕೊರತೆ ಇದೆ? ಎಂದು ಅನಿಸತೊಡಗುತ್ತದೆ. ವಾಸ್ತವ ಸಂಗತಿ ಏನೆಂದರೆ, ಟಿ.ವಿ.ಯಲ್ಲಿ ಬರುತ್ತಿರುವ ರಿಯಾಲಿಟಿ ಶೋಗಳು ಮುಗ್ಧ ಮನಸ್ಸುಗಳಲ್ಲಿ ಕ್ರಾಂತಿ ತಂದಿವೆ.

ತಮ್ಮ ಪ್ರತಿಭೆಯನ್ನು ಸಾಬೀತು ಮಾಡಿ ತೋರಿಸಬೇಕು, ತಮ್ಮ ಹೆಸರನ್ನು ಬೆಳಗಿಸಬೇಕು ಎಂಬ ಒತ್ತಡದ ತೂಗುಗತ್ತಿ ಅವರ ಮೇಲೆ ಸದಾ ತೂಗುತ್ತಿರುತ್ತದೆ. ಈ ಕಾರಣದಿಂದ ಅವರ ಸರಳತೆ ಮತ್ತು ಸಹಜ ಗುಣವೇ ಅದೃಶ್ಯವಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ