ಬಾಗಲಕೋಟೆ, ಬೆಳಗಾವಿ, ಕೊಪ್ಪಳ, ರಾಯಚೂರು ಹಾಗೂ ವಿಜಾಪುರ ಜಿಲ್ಲೆಗಳೊಂದಿಗೆ ತನ್ನ ಗಡಿಯನ್ನು ಹೊಂದಿದ ಜಿಲ್ಲಾ ಕೇಂದ್ರ. ಮುಂದೆ ವಿಜಾಪುರ ಜಿಲ್ಲೆಯಲ್ಲಿದ್ದ ಬಾಗಲಕೋಟೆಯು 1997ರ ಆಗಸ್ಟ್ 15 ರಿಂದ ಹುನಗುಂದ, ಬೀಳಗಿ, ಜಮಖಂಡಿ, ಮುಧೋಳ, ಬಾದಾಮಿ, ಬಾಗಲಕೋಟೆಗಳನ್ನು ಸೇರಿಸಿ ನೂತನ ಜಿಲ್ಲೆಯಾಯಿತು. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಈ ಊರಿಗೆ ಬಾಗಡಿಗೆ ಎಂಬ ಹೆಸರಿತ್ತು. ಸಿಂದ್‌ ವಂಶದ ಮಹಾಮಂಡೀಶ್ವರರು ಈ ಪ್ರಾಂತ್ಯವನ್ನು ಆಳುತ್ತಿದ್ದರು. ಮುಂದೆ ವಿಜಾಪುರದ ಆದಿಲ್ ‌ಷಾಹಿ ಅರಸರ ಆಡಳಿತಕ್ಕೆ ಒಳಪಟ್ಟಾಗ ಅವರು ಇದನ್ನು ಬಾಂಗಡಿಕೋಟ ಎಂದು ಕರೆದರು. ವಿಜಾಪುರದ ಸುಲ್ತಾನನು ತನ್ನ ಮಗಳಾದ ಬಲಿಮ್ ಷಾ ಬೀಬಿಗೆ ಇದನ್ನು ಉಡುಗೊರೆಯಾಗಿ ನೀಡಿದನೆಂದು, ಈ ಉಡುಗೊರೆಯು ತನ್ನ ಮಗಳ ಬಳೆಗಳ ವೆಚ್ಚಕ್ಕಾಗಿ ನೀಡಿದ ಕಾರಣ ಬಾಂದಡಿಕೋಟಾ ಎಂದು ಕರೆದನೆಂದು ಹೇಳುವರು. ಅದು ಕ್ರಮೇಣ ರೂಪಾಂತರವಾಗಿ ಬಾಗಲಕೋಟೆ ಎಂದಾಯಿತು.

ಹಲವಾರು ರಾಜಮನೆತನಗಳ ಆಳ್ವಿಕೆ ಕಂಡ ಬಾಗಲಕೋಟೆ 18ನೇ ಶತಮಾನದಲ್ಲಿ ಪೇಶ್ವೆಗಳ ಆಡಳಿತಕ್ಕೆ ಒಳಪಟ್ಟಿತು. ನಂತರ ಹೈದರಾಲಿ ವಶವಾಯಿತು. ಟಿಪ್ಪುವಿನ ಮರಣಾನಂತರ ಮತ್ತೆ ಮರಾಠರ ವಶವಾಯಿತು. 1818ರಲ್ಲಿ ನಡೆದ ಬ್ರಿಟಿಷ್‌ ಮರಾಠರ ಯುದ್ಧದಲ್ಲಿ ಸರ್‌ ಥಾಮಸ್‌ ಮನ್ರೋ ಮರಾಠರಿಂದ ವಶಪಡಿಸಿಕೊಂಡನು. 1884ರಲ್ಲಿ ಇದು ವಿಜಾಪುರ ಜಿಲ್ಲೆಗೆ ಸೇರಿತು. 1997ರಲ್ಲಿ ನೂತನ ಜಿಲ್ಲೆಯಾಯಿತು.

ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಆಲಮಟ್ಟಿ ಅಣೆಕಟ್ಟು ನಿರ್ಮಾಣದಿಂದ ಬಾಗಲಕೋಟೆ ಮುಳಗಡೆ ಪ್ರದೇಶವಾಗುವ ಮೂಲಕ ನವನಗರ ರೂಪುತಾಳಿತು. ಹಳೆಯ ಬಾಗಲಕೋಟೆಯಲ್ಲಿ ಪ್ರಸಿದ್ಧ ವಾಡೆಗಳಿದ್ದವು. ನೂತನ ನನಗರ ಕೂಡ ಸುಂದರ ತಾಣ. ಇಲ್ಲಿ ಹೆಚ್ಚು ಪ್ರಸಿದ್ಧಿ ಹೊಂದಿದ್ದು, ಜನಪರ ಮ್ಯೂಝಿಯಂ.

ಜನಪದ ವಸ್ತುಸಂಗ್ರಹಾಲಯ ಬಾಗಲಕೋಟೆಯ ನವನಗರದ 19ನೇ ಸೆಕ್ಟರ್‌ನಲ್ಲಿದ್ದು, ಇದು 2006ರಲ್ಲಿ ಲೋಕಾರ್ಪಣೆಗೊಂಡಿದೆ. ಪ್ರತಿದಿನ ಬೆಳಗ್ಗೆ 10.30 ರಿಂದ ಸಂಜೆ 5.30 ಇದರ ಕೆಲಸದ ಅವಧಿ. ಪ್ರತಿದಿನ ನೂರಾರು ಪ್ರವಾಸಿಗರು ಈ ವಸ್ತು ಸಂಗ್ರಹಾಲಯಕ್ಕೆ ಭೇಟಿ ಕೊಡುವರು. ಅಂದಹಾಗೆ ಇದಕ್ಕೆ ರಜಾ ದಿನಗಳು ಕೂಡ ಅಪರೂಪ. ಸಾರ್ವಜನಿಕ ರಜಾ ದಿನಗಳನ್ನು ಹೊರತುಪಡಿಸಿದರೆ ವರ್ಷವಿಡೀ ಯಾವುದೇ ಸಂದರ್ಭದಲ್ಲೂ ಇಲ್ಲಿಗೆ ಭೇಟಿ ನೀಡಬಹುದಾಗಿದೆ.

ಆಲಮಟ್ಟಿ ಅಣೆಕಟ್ಟಿನ ನಿರ್ಮಾಣದಿಂದಾಗಿ ಬಹುತೇಕ ಹಳೆಯ ಪಟ್ಟಣ ಮುಳುಗಿಹೋಗಿ ನವನಗರ ನಿರ್ಮಾಣವಾಯಿತು. ಕೃಷ್ಣಾ ನದಿ ಹಿನ್ನೀರಿನಲ್ಲಿ ಮುಳುಗಿದ ಹಳ್ಳಿಗಳು ಅಲ್ಲಿನ ಹಳ್ಳಿಯ ಜೀವನಶೈಲಿ ಅಂದಿನ ಹಳ್ಳಿಗಳು ಹೇಗಿರುತ್ತಿದ್ದವು, ಆ ಜನರ ಜೀವನಶೈಲಿ, ಅಲ್ಲಿನ ಸಂಸ್ಕೃತಿ ಇತ್ಯಾದಿ ಜನಪದ ವಸ್ತು ಸಂಗ್ರಹಾಲಯದ ಕಲಾಕೃತಿಗಳಲ್ಲಿ ರೂಪಿಸಲಾಗಿದೆ. ಅಷ್ಟೇ ಅಲ್ಲ, ಆಲಮಟ್ಟಿ ಯೋಜನೆಯ ಸಂಪೂರ್ಣ ಮಾಹಿತಿ ನೀಡುವ ಛಾಯಾಚಿತ್ರಗಳ ಗ್ಯಾಲರಿ ಕೂಡ ಇಲ್ಲಿದ್ದು ಬಾಗಲಕೋಟೆಗೆ ಬಂದವರು ಇದನ್ನು ನೋಡಿಯೇ ಬರಬೇಕು, ಅಂಥ ವೈಶಿಷ್ಟ್ಯತೆಯನ್ನು ಹೊಂದಿದೆ.

ವಿಶಿಷ್ಟ ವಿನ್ಯಾಸ

ಟಿಕೆಟ್‌ ಪಡೆದು ಒಳ ಪ್ರವೇಶಿಸಿ ಎಡಗಡೆಯಲ್ಲಿ ಹೊರಟರೆ ಗೋಡೆಯಲ್ಲಿ ಬಣ್ಣದ ಚಿತ್ತಾರದಿಂದ ಕಂಗೊಳಿಸುವ ಚಿತ್ರಗಳು ಗಮನ ಸೆಳೆಯುತ್ತವೆ. ಹಳ್ಳಿ ಜನರ ಆಚರಣೆಯ ಹಬ್ಬಗಳಾದ ನಾಗಪಂಚಮಿ, ಗಣೇಶ ಚತುರ್ಥಿ, ಜೋಕುಮಾರನ ಹಬ್ಬ, ವಿಜಯದಶಮಿ, ಎಳ್ಳಮಾವಾಸ್ಯೆಯ ಚರಗ, ದೀಪಾವಳಿ, ಕಾರ್ತೀಕ, ಹೋಳಿ ಹುಣ್ಣಿಮೆ, ಮೊಹರಂ ಹಬ್ಬಗಳನ್ನು ಆಚರಿಸುವ ದೃಶ್ಯಗಳು ಅಂದು ಹೇಗಿದ್ದವು ಎಂಬುದನ್ನು ಪೇಂಟಿಂಗ್‌ ಮೂಲಕ ಚಿತ್ರ ಚಿತ್ರಿಸಿರುವರಲ್ಲದೇ ಅವುಗಳ ವಿವರಣೆಯ ಫಲಕಗಳನ್ನು ಪ್ರತಿ ಚಿತ್ರಗಳ ಪಕ್ಕದಲ್ಲಿ ಅಳವಡಿಸಿದ್ದು ಜನಪದ ಹಬ್ಬಗಳ ಕಿರು ಮಾಹಿತಿಯನ್ನು ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಗಮನಿಸಬಹುದಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ