ಪರರ ಸಹವಾಸ, ಭವಿಷ್ಯದ ವಿನಾಶ!

ಪತ್ನಿ ಪರಪುರುಷನ ಜೊತೆ ಸಂಬಂಧ ಹೊಂದಿದ್ದಾಳೆ ಎಂದು ತಿಳಿದುಬಂದಾಗ, ಪತಿ ಪತ್ನಿಯರ ನಡುವೆ ಬಿರುಕು ಮೂಡುವುದು ಸಾಮಾನ್ಯವೇ ಸರಿ, ಜೊತೆಗೆ ಯಾರದಾದರೂ ಕೊಲೆ ನಡೆದರೂ ಆಶ್ಚರ್ಯವಿಲ್ಲ.

ದೆಹಲಿಯಲ್ಲಿ ವಿದ್ಯುತ್‌ ವಿತರಿಸುವ ಕಂಟ್ರಾಕ್ಟರ್‌ತನ್ನ ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಎಂದು ಪತಿರಾಯ ಅವನನ್ನು ಮಥುರಾವರೆಗೂ ಕರೆದೊಯ್ದು ಅಲ್ಲಿ ಕೊಲೆ ಮಾಡಿದ. ಆ ಕಂಟ್ರಾಕ್ಟರ್‌ ಈತನ ಪರಿಚಿತ ಮಾತ್ರವಲ್ಲದೆ, ಜೊತೆಯಲ್ಲಿ ಕೆಲಸ ಮಾಡುತ್ತಿದ್ದು, ಇವರ ಮನೆಯಲ್ಲೇ ಬಾಡಿಗೆದಾರನಾಗಿದ್ದ.

ಪತ್ನಿ ಮೇಲೆ ಪತಿಗೆ ಈ ಹಕ್ಕು ಎಂಬುದು ಬಹು ಹಳೆಯ ಸಂಗತಿ. ರಾಮನು ಸೀತೆಯನ್ನು ವಾಪಸ್ಸು ಪಡೆಯಬೇಕೆಂದು ಘೋರ ಯುದ್ಧವನ್ನೇ ಮಾಡಬೇಕಾಯಿತು, ಅದೇ ತರಹ ಪತ್ನಿಗಾದ ಸೇಡನ್ನು ತೀರಿಸಿಕೊಳ್ಳಲು ದಾಯಾದಿಗಳ ನಡುವೆ ಮಹಾಭಾರತದ ಕುರುಕ್ಷೇತ್ರವೇ ನಡೆಯಿತು. ಸಂದೇಹವೇ ಮೂಲವಾದ ರಾಜ್‌ಕಪೂರ್‌ರ `ಸಂಗಂ' ಎಂಥವರೂ ಮರೆಯದ ಚಿತ್ರ, ಇದರಲ್ಲಿ 3ನೇ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬರುತ್ತದೆ. ಅದೇ ತರಹ ನಾನಾಟಿಯ ಪ್ರಕರಣ ಬಹುದಿನ ಚರ್ಚೆಯಲ್ಲಿತ್ತು.

ಪತಿಗೆ ಪತ್ನಿಯ ಮೇಲಿನ ಈ ಹಕ್ಕಿನಿಂದಾಗಿ ಅವಳು ತನ್ನಿಷ್ಟದಂತೆ ಬೇರಾರೊಂದಿಗೂ ದೈಹಿಕ ಸಂಬಂಧ ಬೆಳೆಸಬಾರದೆಂಬ ಕಾರಣಕ್ಕೆ, ಇಂದೂ ಸಹ ಅನೇಕ ವಿವಾದಗಳು ಕೋರ್ಟಿನ ಕಟಕಟೆ ಹತ್ತುತ್ತಲಿವೆ.

ಈ ನಿಟ್ಟಿನಲ್ಲಿ ಕಾನೂನು ಸಹ ಏಕಪಕ್ಷೀಯಾಗಿದೆ. ಪತ್ನಿ ತನ್ನಿಷ್ಟದಂತೆ ಪರಪುರುಷನೊಂದಿಗೆ ಸಂಬಂಧ ಹೊಂದಿದ್ದರೆ, ಅದಕ್ಕೆ ಪತಿ ಆ 3ನೇ ವ್ಯಕ್ತಿ ಮೇಲೆ ಪತ್ತೇದಾರಿಕೆ ನಡೆಸಿ ಮೊಕದ್ದಮೆ ಹೂಡಬಹುದು. ಅಕಸ್ಮಾತ್‌ ಅನೈತಿಕ ಸಂಬಂಧವಿದೆ ಎಂಬುದು ಸಾಬೀತಾದರೆ, 3ನೇ ವ್ಯಕ್ತಿಗೆ ಕಠಿಣ ಶಿಕ್ಷೆಯೂ ಆಗುತ್ತದೆ. ಅದೇ ಪತಿರಾಯ ತಾನೇನಾದರೂ ಅಫೇರ್‌ ನಡೆಸಿ ಸಿಕ್ಕಿಬಿದ್ದರೆ, ಅವನಿಗೂ ಅಥವಾ ಅವನ ಪ್ರೇಯಸಿಗೂ (ಪತ್ನಿಯ ಸವತಿ...?) ಯಾವ ಶಿಕ್ಷೆಯೂ ಇಲ್ಲ! ಕೆಲವು ವರ್ಷಗಳ ಹಿಂದೆ ಈ ನಿಟ್ಟಿನಲ್ಲಿ ಸರ್ವೋಚ್ಚ ನ್ಯಾಯಾಲಯ ಪತ್ನಿ ಅಫೇರ್‌ ಹೊಂದಿದ್ದಳೆಂದು ಆ ಹಕ್ಕಿನ ವಿರುದ್ಧ ಶಿಕ್ಷೆ ವಿಧಿಸಿತ್ತು. ಏಕೆಂದರೆ, ಆ ಕಾನೂನಿನಿಂದ ಪತ್ನಿಗೆ ಬದಲಾಗಿ ಅವಳ ಪ್ರಿಯಕರನಿಗೆ ಶಿಕ್ಷೆ ಸಿಗುತ್ತದೆ ಎಂಬುದಕ್ಕಾಗಿ.ಇಂದೂ ಸಹ ಕಾನೂನು ಪತ್ನಿಯನ್ನು ಪತಿಯ ಸಂಪತ್ತು ಎಂದೇ ಭಾವಿಸುತ್ತದೆ. ಆದರೆ ವಾಸ್ತವ ಎಂದರೆ, ಪತಿ ಅಥವಾ ಪತ್ನಿ 3ನೇಯವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರೆ, ಅದು ವಿಚ್ಛೇದನಕ್ಕೆ ಕಾರಣ ಎಂದು ಭಾವಿಸಬಹುದೇ ಹೊರತು ಅದನ್ನೇ ಅಪರಾಧ ಅಥವಾ ಅಪರಾಧಕ್ಕೆ ಕುಮ್ಮಕ್ಕು ಎನ್ನುವಂತಿಲ್ಲ.

ಒಂದು ಪಕ್ಷ ಇಂದಿನ ಹೆಣ್ಣು ಬೇರೆಯವರೊಂದಿಗೆ ಸಂಬಂಧ ಮಾಡಿದರೆ, ಅವಳು ಅದರ ಸಾಧಕ ಬಾಧಕಗಳನ್ನು ಅರಿತೇ ಮಾಡಿರುತ್ತಾಳೆ. ಸಾಮಾಜಿಕವಾಗಿ ಇದನ್ನು ತಪ್ಪು ಎನ್ನಬಹುದು, ಆದರೆ ಸಮಾಜದ ಹೆಸರಿನಲ್ಲಿ ಪತ್ನಿಯಾದವಳಿಗೆ ಒಬ್ಬ ಹೆಣ್ಣಿನ ಸಾಮಾನ್ಯ ಹಕ್ಕುಗಳಿಂದ ವಂಚಿಸುವಂತಿಲ್ಲ ಎಂಬುದೂ ಅಷ್ಟೇ ಸತ್ಯ.

ದೈಹಿಕ ಸಂಬಂಧ ಎಂಬುದು ವೈವಾಹಿಕ ಸಂಬಂಧಗಳಿಂದ ವಿಭಿನ್ನ. ವಿವಾಹ ಎಂದರೆ ಜೊತೆಯಲ್ಲಿ ವಾಸ, ಮನೆಯ ಜವಾಬ್ದಾರಿ ಹಂಚಿಕೊಳ್ಳುವಿಕೆ, ಪರಸ್ಪರರನ್ನು ನೋಡಿಕೊಳ್ಳುವ ವಾಗ್ದಾನಗಳಾಗಿವೆ. ಆದರೆ ದಾಂಪತ್ಯದಲ್ಲಿ ಬೇಸರ ಇಣುಕಿದಾಗ, ಪತಿ ಅಥವಾ ಪತ್ನಿಗೆ ಬೇರೊಬ್ಬರ ಕುರಿತು ಆಸೆ ಮೂಡಿದರೆ, ಅದನ್ನು ಈ ಮದುವೆಯ ದುರ್ಬಲ ಲಿಂಕ್‌ ಎಂದುಕೊಳ್ಳಬಹುದು. ಇದಕ್ಕಾಗಿ ಡೈವೋರ್ಸ್‌ ಪಡೆಯಬೇಕೇ ಬೇಡವೇ ಎಂಬುದು ಅವರಿಬ್ಬರಿಗೇ ಬಿಟ್ಟದ್ದು. ಆದರೆ ಇದನ್ನೇ ನೆಪವಾಗಿಸಿ ಪತಿ, ಪತ್ನಿ ಅಥವಾ 3ನೇ ವ್ಯಕ್ತಿಯ ಕೊಲೆ ಮಾಡಿಸುವುದು ಸಾಮಾಜಿಕ ಹಕ್ಕು ಅಥವಾ ಮುಂದಿನ ಕ್ರಮ ಎಂಬುದು ಖಂಡಿತಾ ಸರಿಯಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ