1 ರಿಂದ 10 ಮಕ್ಕಳಿಗೆ ಜನ್ಮ ಕೊಡುವುದು, ಮರು ಮತಾಂತರ ಮಾಡಿಸುವುದು, ಪ್ಯಾಂಟ್, ಜೀನ್ಸ್ ಧರಿಸದಿರುವುದು, ಧಾರ್ಮಿಕ ಯಾತ್ರೆಗಳಿಗೆ ಹೋಗುವುದು ಇತ್ಯಾದಿ ವಿಷಯಗಳು ಭಾರತೀಯ ಜನತಾ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿಲ್ಲ. ಆದರೂ ಅದರ ಬಹಳಷ್ಟು ಕಾವಿ ಧರಿಸಿದ ಮತ್ತು ಕಾವಿ ಧರಿಸದ ನಾಯಕರು ಮತ್ತು ಬೆಂಬಲಿಗರು ಆ ವಿಷಯಗಳ ಬಗ್ಗೆ ಢಂಗೂರ ಸಾರಿ ಸಾರಿ ಆಡಳಿತ ನಡೆಸುತ್ತಾ ಮನೆಗಳ ಡ್ರಾಯಿಂಗ್ ರೂಮ್ ಗಳು ಹಾಗೂ ಬೆಡ್ರೂಮುಗಳಲ್ಲಿ ನುಗ್ಗಲು ಪ್ರಯತ್ನಿಸುತ್ತಿದ್ದಾರೆ. 2014ರ ಮೇ ತಿಂಗಳಿಂದ ಇವರ ಸದ್ದು ಎಷ್ಟು ಹೆಚ್ಚಾಗಿತ್ತೆಂದರೆ ಭಾರತ ವಿಕಸಿತ, ಸ್ವಚ್ಛ, ಭ್ರಷ್ಟಾಚಾರ ಮುಕ್ತ, ಆಧುನಿಕ ಹಾಗೂ ಸ್ಮಾರ್ಟ್ ದೇಶ ಆಗಲಿ ಬಿಡಲಿ ಮತಾಂಧವಂತೂ ಖಂಡಿತ ಆಗಿಬಿಡುತ್ತದೆ ಅನ್ನಿಸುತ್ತಿತ್ತು.
ಈ ವಿಷಯಕ್ಕೆ ಬ್ರೇಕ್ ಹಾಕಿದ ದೆಹಲಿಯ ಜನತೆಗೆ ಧನ್ಯವಾದಗಳು. ವಿಧಾನಸಭಾ ಚುನಾವಣೆಯಲ್ಲಿ 70ರಲ್ಲಿ ಕೇವಲ 3 ಸೀಟು ಗೆಲ್ಲಿಸಿ ಆ ಪಕ್ಷದ ಬಾಯಿ ಮುಚ್ಚಿಸಿದ್ದಾರೆ. ದೆಹಲಿಯ ಜನತೆಯಂತೂ ಇಂತಹ ಗೆಲುವನ್ನು ಎಂದೂ ಯಾವ ಪಾರ್ಟಿಗೂ ಕೊಟ್ಟಿರಲಿಲ್ಲ. ಸರಿಯಾದ ಪ್ರಜಾಪ್ರಭುತ್ವವಿರುವ ಬೇರೆ ಯಾವ ದೇಶದಲ್ಲೂ ಇಂತಹ ಬೆಂಬಲ ಸಿಗುವುದಿಲ್ಲ. ಈ ಫಲಿತಾಂಶ ಕಮ್ಯೂನಿಸ್ಟ್ ದೇಶಗಳಲ್ಲಿ ಕಂಡುಬರುತ್ತದೆ. ಅಲ್ಲಿ ಸರ್ಕಾರ ಹಾಗೂ ಮನೆ ಎರಡೂ ಸರ್ವಾಧಿಕಾರಿಗಳ ಕಪಿಮುಷ್ಟಿಯಲ್ಲಿರುತ್ತವೆ.
ಈ ಚಮತ್ಕಾರ ಮಾಡಿದ್ದು ಅರವಿಂದ್ ಕೇಜ್ರಿವಾಲ್ರ ಆಮ್ ಆದ್ಮಿ ಪಾರ್ಟಿ. ಕೇಜ್ರಿವಾಲ್ರ ಪತ್ನಿ ಸರ್ಕಾರಿ ಅಧಿಕಾರಿಯಾಗಿದ್ದರಿಂದ ಚುನಾವಣಾ ಪ್ರಚಾರಕ್ಕೆ ಬರಲಿಲ್ಲ. ಪತಿ ಕೇಜ್ರಿವಾಲ್ ಅವರನ್ನು ಧನ್ಯವಾದ ಸಲ್ಲಿಸಲು ಮಾತ್ರ ಜನತೆ ಹಾಗೂ ಕ್ಯಾಮೆರಾಗಳ ಮುಂದೆ ಕರೆತಂದರು.
ಅರವಿಂದ್ ಕೇಜ್ರಿವಾಲ್ರ ಚುನಾವಣಾ ಪ್ರಣಾಳಿಕೆಯಲ್ಲಿನ ಮನೆಗೆ ಸಂಬಂಧಿಸಿದ ವಿಷಯಗಳು ಗೃಹಿಣಿಯರನ್ನು ಸಂತೋಷಪಡಿಸುವುದಾಗಿತ್ತು. ಕೆರಂಟ್ ಬಿಲ್ನಲ್ಲಿ ರಿಯಾಯಿತಿ, ನೀರಿನ ಬಿಲ್ನಲ್ಲಿ ರಿಯಾಯಿತಿ, ಉಚಿತ ವೈಫೈ ಇತ್ಯಾದಿ ಬಿಟ್ಟಿಯಾಗಿ ಕೊಡಲಾಗುತ್ತಿದೆ ಅನ್ನಿಸಿದರೂ ಅಸಲಿಗೆ ಅವು ಬದುಕಿಗೆ ಸೌಕರ್ಯ ಕೊಡುವಂತಿವೆ. ಈ ಕಾರಣದಿಂದಾಗಿ ಕೇಜ್ರಿವಾಲ್ರ ಪಕ್ಷದ ಹಿಂದೆ ಎಲ್ಲ ಧರ್ಮ, ಎಲ್ಲ ಜಾತಿಯ ಜನರೂ ಸಾಗಿ ಆ ಪಕ್ಷಕ್ಕೆ ಶೇ.54ರಷ್ಟು ಅಭೂತಪೂರ್ವ ಬೆಂಬಲ ನೀಡಿದರು.
ಕೇಜ್ರಿವಾಲ್ರವರು ಈ ಚುನಾವಣೆಯ ಮೂಲಕ ಪರೋಕ್ಷವಾಗಿ ಸಾಬೀತುಪಡಿಸಿದ್ದೇನೆಂದರೆ, ವ್ಯಕ್ತಿ ಹೇಗೆ ಕಾಣುತ್ತಾನೆ ಎಂಬುದಕ್ಕಿಂತ ಆತ ಏನನ್ನು ಮಾಡಲು ಬಯಸುತ್ತಾನೆ ಅಥವಾ ಏನು ಮಾಡಬಹುದು ಎನ್ನುವುದು ಮುಖ್ಯವಾಗುತ್ತದೆ ಎಂಬುದು. ಅವರು ಕೆಮ್ಮಿನ ಸಮಸ್ಯೆಯಿಂದಾಗಿ ಚಳಿಗಾಲಗಳಲ್ಲಿ ಸದಾ ಮಫ್ಲರ್ ಧರಿಸುತ್ತಿದ್ದರು. ಅದರ ಬಗ್ಗೆ ಛೇಡಿಸಲಾಗುತ್ತಿತ್ತು. ಅವರ ಕೆಮ್ಮಿನ ಬಗ್ಗೆ ಗೇಲಿ ಮಾಡಲಾಯಿತು. ಅವರ ಸರಳತೆ, ನಿಷ್ಕಪಟ ಸ್ವಭಾವವನ್ನು ಗುರಿಯಾಗಿಸಿಕೊಳ್ಳಲಾಯಿತು. ಗೃಹಿಣಿಯ ರೀತಿ ಧರಣಿ ಕೂತಿದ್ದ ಬಗ್ಗೆ ನರೇಂದ್ರ ಮೋದಿಯವರ ಪಕ್ಷ ಗಂಟಲು ಹರಿದುಕೊಂಡಿತು. ಆದರೆ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಟೀಮ್ ಜಗ್ಗದೆ ಸ್ಥಿರವಾಗಿ ನಿಂತಿದ್ದರು.
ಸರಿಯಾದ ಸರ್ಕಾರ ಬೇಕಾಗಿದ್ದರೆ ಅದನ್ನು ನಡೆಸಲು ಸರಿಯಾದ ವ್ಯಕ್ತಿ ಬೇಕು. ಅವರು ಬಂಗಲೆ, ವಾಹನ, ಕೆಂಪುದೀಪ, ನೌಕರರ ಗುಂಪಿನೊಂದಿಗೆ ಇರುವವರಾಗಿರದೆ ಒಂದು ಸಾಧಾರಣ ಮನೆಯನ್ನು ಸಂಭಾಳಿಸುವ ಗೃಹಿಣಿಯಂತೆ ಕೆಲಸ ಮಾಡುವವರಾಗಿರಬೇಕು.
ಅರವಿಂದ್ ಕೇಜ್ರಿವಾಲ್ ಬಹಿರಂಗವಾಗಿ ಹೇಳಿಕೊಳ್ಳದಿದ್ದರೂ ಅವರೊಬ್ಬ ಕೌಟುಂಬಿಕ ವ್ಯಕ್ತಿ ಅನ್ನಿಸುತ್ತದೆ. ಹೇಡಿಗಳು ಯಾರೆಂದರೆ ಪತ್ನಿಯ ಜವಾಬ್ದಾರಿಯ ಹೊಣೆ ಬಿಟ್ಟುಹೋದವರು. ಪತ್ನಿಯ ಕೆಲಸದ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವವರನ್ನು ದೆಹಲಿ ಹೇಡಿಯಲ್ಲ, ಜಯಶಾಲಿ ಎಂದಿದೆ.
ಅರವಿಂದ್ ಕೇಜ್ರಿವಾಲ್ ಒಂದು ವೇಳೆ ದೆಹಲಿ ಮತ್ತು ದೇಶದ ಕೊಳಕನ್ನು ದೂರ ಮಾಡಿದರೆ ಧಾರ್ಮಿಕ ನಾಯಕರು ಸಿಟ್ಟು ಮಾಡಿಕೊಂಡರೂ, ಗೃಹಿಣಿಯರಂತೂ ಖಂಡಿತ ಸಂತೋಷಪಡುತ್ತಾರೆ.
ಭಯ ಎದುರಿಸುವ ಅಸ್ತ್ರ ಜ್ಞಾನ
ಪ್ರತಿಯೊಬ್ಬ ಮಹಿಳೆಗೂ ಹೆದರಿಕೆ ಎನ್ನುವುದು ಮುಖ್ಯ ಪ್ರಶ್ನೆಯಾಗಿರುತ್ತದೆ. ಆಕೆ ಸದಾ ಭಯದಲ್ಲೇ ಇರುತ್ತಾಳೆ. ಏಕೆಂದರೆ ಸಮಾಜ ಆಕೆಯನ್ನು ಅಷ್ಟೊಂದು ಮುಗ್ಧ ಹಾಗೂ ಪರಾವಲಂಬಿಯಾಗಿಸಿದೆ.
ತಾನು ಮಕ್ಕಳ ಪಾಲನೆ ಪೋಷಣೆ ಮಾಡಿದ್ದು, ದೊಡ್ಡವರಾದ ಮೇಲೆ ಅವರ ಆರ್ಥಿಕ ಅವಲಂಬಿಯಾದದ್ದು, ಮುಂದೆ ಅವರು ತನ್ನ ಕೈಮೀರಿ ಹೋಗದಿರಲಿ ಎಂಬ ಭಯ ಅವಳನ್ನು ಸದಾ ಕಾಡುತ್ತಿರುತ್ತದೆ. ಈ ಭಯ ಪುರುಷರಿಗೂ ಇರುತ್ತದೆ. ಆದರೆ ಇವರಿಗೆ ಸಮಾಜ ವಿಶ್ವಾಸ ಕೊಡುತ್ತಿರುತ್ತದೆ. `ಇದೆಲ್ಲವನ್ನು ನೀನೇ ಗಳಿಸಿರುವೆ, ನೀನು ಅದನ್ನು ಪುನಃ ಗಳಿಸಬಹುದು,’ ಎಂಬ ವಿಶ್ವಾಸವನ್ನು ಅವನಲ್ಲಿ ತುಂಬುತ್ತದೆ. ಹೀಗಾಗಿ ಅವರ ಭಯ ಹೊರಟುಹೋಗುತ್ತದೆ.
ಖ್ಯಾತ ನಟಿ ಕಾಜೋಲ್ ತಮ್ಮಲ್ಲಿರುವ ಭಯ ಹೋಗಲಾಡಿಸಲು ಓದಿಗೆ ಮೊರೆಹೋಗುತ್ತಾರೆ. ಓದಿನಿಂದಾಗಿ ತಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ ಹಾಗೂ ಭಯವನ್ನು ಹೇಗೆ ಎದುರಿಸಬೇಕೆಂದು ಕಲಿತುಕೊಳ್ಳಲು ಸಹಾಯವಾಗುತ್ತದೆ, ಎಂದು ಹೇಳುತ್ತಾರೆ.
ಜ್ಞಾನವೇ ಪ್ರತಿಯೊಂದು ಭಯವನ್ನೂ ಎದುರಿಸಲು ಕಲಿಸಿಕೊಡುತ್ತದೆ ಎಂಬುದು ನೂರಕ್ಕೆ ನೂರು ಸತ್ಯ. ಒಂದು ವೇಳೆ ಪ್ರವಾಹ ಭೀತಿಯಿಂದ ನೀವು ಎತ್ತರದ ಪ್ರದೇಶಕ್ಕೆ ಹೋಗುವವರಿದ್ದರೆ, ಏನೇನು ಸಾಮಗ್ರಿ ತೆಗೆದುಕೊಂಡು ಹೋಗಬೇಕೆಂದು ತಿಳಿದರೆ ನಿಮ್ಮ ಭಯ ತಂತಾನೇ ಹೊರಟುಹೋಗುತ್ತದೆ.
ಮನೆಯಲ್ಲಿ ರಾತ್ರಿ ಹೊತ್ತು ಕಳ್ಳ ನುಗ್ಗಿದರೆ, ಯಾವ ರೀತಿಯ ಬೆಳಕಿನಿಂದ ಕಳ್ಳರು ಹೆದರುತ್ತಾರೆ, ಯಾವ ರೀತಿಯ ಅರಚುವಿಕೆಯಿಂದ ಅವರು ಗಾಬರಿಬೀಳುತ್ತಾರೆ ಎಂಬುದನ್ನು ತಿಳಿದುಕೊಂಡಿದ್ದರೆ ನಿಮ್ಮ ಭಯ ಅರ್ಧ ಹೊರಟುಹೋಗಿರುತ್ತದೆ.
ಆದರೆ ಖೇದದ ಸಂಗತಿಯೆಂದರೆ ಇಂದಿನ ಮಹಿಳೆಯರು 18ನೇ ಶತಮಾನಕ್ಕೆ ಮರಳುತ್ತಿದ್ದಾರೆ. ಅವರು ಮಾಹಿತಿ ಪಡೆಯುವ ಬದಲು ಹರಟೆಗೆ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಪೂಜೆ ಪುನಸ್ಕಾರದಲ್ಲಿ ಮುಳುಗುತ್ತಿದ್ದಾರೆ. ಇವು ಅವರಲ್ಲಿನ ಭಯವನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ಬೇರೆಯವರ ಮೇಲೆ ಅವಲಂಬಿತರಾಗುವಂತೆ ಮಾಡುತ್ತಿವೆ.
`ಉಬರ್ ಟ್ಯಾಕ್ಸಿ’ಯಲ್ಲಿ ಕುಳಿತುಕೊಳ್ಳುವ ಹುಡುಗಿಗೆ ರಾತ್ರಿ ಹೊತ್ತು ತಾನು ಅದೆಷ್ಟು ಜಾಗೃತೆಯಿಂದಿರಬೇಕು ಎಂಬುದನ್ನು ತಿಳಿದುಕೊಂಡಿರಬೇಕು. ಇಂತಹ ಸಂದರ್ಭದಲ್ಲಿ ಪುರುಷರು ಕೂಡ ತಮ್ಮಲ್ಲಿರುವ ಹಣವನ್ನು ಅಲ್ಲಿ ಇಲ್ಲಿ ಬಚ್ಚಿಟ್ಟುಕೊಳ್ಳುತ್ತಾರೆ. ನಿಮಗೆ ಕೇವಲ ಒಂದು ಆ್ಯಪ್ ಮೇಲೆ, ಕ್ಯಾಬ್ಡ್ರೈವರ್ ಮೇಲೆ, ಸರ್ಕಾರದ ಮೇಲೆ, ಪೊಲೀಸರ ಮೇಲೆ, ಪೂಜಾರಿ ಮೇಲೆ, ಪಾದ್ರಿ ಮೇಲೆ ಅಥವಾ ಯಾವುದೇ ಅಪರಿಚಿತ ಶಕ್ತಿ ಮೇಲೆ ನಂಬಿಕೆ ಇದ್ದರೆ ನೀವು ಕ್ಷಣಾರ್ಧದಲ್ಲಿ ಲಕ್ಷ ಲಕ್ಷ ಕಳೆದುಕೊಳ್ಳಬಹುದು.
ಕಾಜೋಲ್ ಹೇಳುವುದೇನೆಂದರೆ, ನಾನು ಅಮ್ಮನ ಒತ್ತಾಯದ ಮೇರೆಗೆ 2 ವರ್ಷವದಳಿದ್ದಾಗಲೇ ಪತ್ರಿಕೆಯ ಹೆಡ್ ಲೈನ್ಸ್ ಓದಲು ಆರಂಭಿಸಿದ್ದೆ. ಆದರೆ ಇಂದಿನ ಸುಶಿಕ್ಷಿತ, ಅದರಲ್ಲೂ ಪದವೀಧರ ಮಹಿಳೆ ಪತ್ರಿಕೆಯನ್ನು ಕೇವಲ ಕನ್ನಡಿ ಒರೆಸುವ ಸಾಧನ ಎಂದು ಭಾವಿಸುತ್ತಾಳೆ.
ಓದುವ ಅವಶ್ಯಕತೆ ಏಕಿದೆಯೆಂದರೆ, ಅದು ಯಾರೂ ಹೇಳದ್ದನ್ನು ನಮಗೆ ಹೇಳುತ್ತದೆ. ಕಿಟಿಪಾರ್ಟಿಗಳಲ್ಲಾಗಲಿ, ವಾಟ್ಸ್ಅಪ್ನಲ್ಲಾಗಲಿ ಸಿಗದಂಥ ಜ್ಞಾನವದು. ಪುಸ್ತಕದಲ್ಲಿರುವ ಜ್ಞಾನ ವಾಸ್ತವ ಜ್ಞಾನ. ಅದರಿಂದ ಸ್ವಾರ್ಥ ಕಡಿಮೆಯಾಗುತ್ತದೆ.
ಪ್ರವಚನಗಳ ಮೇಲೆ ಭರವಸೆ ಇಡಬೇಡಿ. ಏಕೆಂದರೆ ಪ್ರವಚನದ ಬಳಿಕ ದಾನದ ಬಗ್ಗೆ ಪ್ರಸ್ತಾಪ ಬರುತ್ತದೆ. ನಿಮ್ಮಲ್ಲಿರುವ ಜ್ಞಾನ, ಹಣ ಭಯವನ್ನು ಎತ್ತಿ ಹಾರಿಸಿಬಿಡಿ ಎಂಬಂತಿರುತ್ತದೆ ಅವರ ಪ್ರವಚನಗಳ ಧಾಟಿ. ಭಗವಾ, ಕಪ್ಪು, ಹಸಿರು, ಬಿಳಿ ಬಟ್ಟೆಯವರಷ್ಟೇ ರಾಜ ವೈಭದ ಜೀವನ ನಡೆಸಬೇಕೆಂದಿರುತ್ತದೆ.
ಇದಕ್ಕಿಂತ ವಿಚ್ಛೇದನವೇ ಸೂಕ್ತ
`ನಾನು ಬಾವಿಗೆ ಬಿದ್ದು ಪ್ರಾಣ ಕಳೆದುಕೊಳ್ತೀನಿ,’ ಅಥವಾ `ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ತೀನಿ,’ ಎಂಬಂತಹ ಮಾತುಗಳನ್ನು ನಿಮ್ಮ ಪತಿ ಅಥವಾ ಪತ್ನಿಗೆ ಇನ್ನು ಮುಂದೆ ಹೇಳಬೇಡಿ.
ಮುಂಬೈ ಉಚ್ಚ ನ್ಯಾಯಾಲಯ ತನ್ನ ಒಂದು ತೀರ್ಪಿನಲ್ಲಿ ಅತ್ಯಂತ ಸೂಕ್ತವಾದುದನ್ನೇ ಹೇಳಿದೆ. ಯಾವ ಗಂಡ ಅಥವಾ ಹೆಂಡತಿ ಪರಸ್ಪರರನ್ನು ಹೆದರಿಸಲು ಆತ್ಮಹತ್ಯೆಯ ಬೆದರಿಕೆ ಹಾಕುತ್ತಿರುತ್ತಾರೊ, ಅವರು ಸಂಗಾತಿಯ ಬಗ್ಗೆ ಕ್ರೂರವಾಗಿ ವರ್ತಿಸುತ್ತಿರುತ್ತಾರೆ. ಅವರಿಗೆ ವಿಚ್ಛೇದನ ಪಡೆಯುವ ಹಕ್ಕು ಇದೆ.
ನಾಗಪುರದ ವೈದ್ಯ ದಂಪತಿಗಳ ಪ್ರಕರಣದಲ್ಲಿ ಪತಿಯ ಬೇಡಿಕೆಯನ್ನು ಮಾನ್ಯ ಮಾಡುತ್ತ ನ್ಯಾಯಮೂರ್ತಿ ಬಿ.ಆರ್. ಗವಾಯಿ ಹಾಗೂ ಮೃದುಲಾ ಭಾಟ್ಕರ್ ಇಂತಹ ಬೆದರಿಕೆಗಳು ಅನಾವಶ್ಯಕವಾಗಿ ಒತ್ತಡವನ್ನುಂಟು ಮಾಡುತ್ತವೆ ಮತ್ತು ವೈವಾಹಿಕ ಸಂಬಂಧಗಳು ಅದರ ನೆರಳಿನಲ್ಲಿ ಸುಗಮವಾಗಿ ಸಾಗುವುದು ಸಾಧ್ಯವೇ ಇಲ್ಲ ಎಂದು ಅಭಿಪ್ರಾಯಪಟ್ಟರು.
ಸಾಯುವ ಬೆದರಿಕೆ ಹಾಕುವುದು, ನಿದ್ರೆಯ ಮಾತ್ರೆಗಳನ್ನು ಸೇವಿಸುವುದು, ಸೀಮೆಎಣ್ಣೆಯನ್ನು ಮೈ ಮೇಲೆ ಎರಚಿಕೊಳ್ಳುವುದು, ಕೊರಳಿಗೆ ಸೀರೆಯ ಸೆರಗು ಸುತ್ತಿಕೊಳ್ಳುವುದು ಮುಂತಾದ ಅಸ್ತ್ರಗಳಿಂದ ಗಂಡನನ್ನು ಹಿಡಿತದಲ್ಲಿಟ್ಟುಕೊಳ್ಳಬಹುದು ಎಂದು ಮಹಿಳೆಯರು ಭಾವಿಸುತ್ತಾರೆ. ಎಷ್ಟೋ ಸಂದರ್ಭದಲ್ಲಿ ಗಂಡಂದಿರು ಕೂಡ ಹೀಗೆಯೇ ಮಾಡುತ್ತಾರೆ.
ವೈವಾಹಿಕ ಜೀವನದಲ್ಲಿ ಬಹಳಷ್ಟು ಸಂದರ್ಭಗಳು ಹೇಗೆ ಬರುತ್ತಿವೆಯೆಂದರೆ, ಆಗ ಗಂಡ ಅಥವಾ ಹೆಂಡತಿಗೆ ಇನ್ನೊಬ್ಬರ ಹಠಕ್ಕೆ ಒಪ್ಪದೇ ಇರುವ ಅನಿವಾರ್ಯತೆ ಬರುತ್ತದೆ. ಎರಡನೆಯದು, ವಿಚ್ಛೇದನ ಪಡೆದುಕೊಳ್ಳುವುದು ಸುಲಭ. ಆದರೆ ವಿಚ್ಛೇದನದ ಬಳಿಕ ಜೀವನ ನಡೆಸುವುದು ಅಷ್ಟು ಸುಲಭವಲ್ಲ. ಗಂಡ ಹೆಂಡತಿ ಎಷ್ಟೇ ಜಗಳ ಆಡಬಹುದು, ಆದರೆ ವಿಚ್ಛೇದನದ ಬಳಿಕ ಅವರಿಗೆ ಶಾಂತಿ ದೊರಕದು. ಇಬ್ಬರಿಗೂ ತಮ್ಮ ತಪ್ಪಿನ ಅರಿವು ಆಗುತ್ತದೆ. ವಿಚ್ಛೇದನದ ಬಳಿಕ ಇಬ್ಬರಿಗೂ ಕೆಲವು ದಿನ ಸಂತೋಷ ಎನಿಸಬಹುದು. ಆದರೆ ಬಳಿಕ ಕಪ್ಪು ಮೋಡಗಳು ಆವರಿಸುತ್ತವೆ. ಎಲ್ಲೆಲ್ಲೂ ಕತ್ತಿ ಎಂಬಂತೆ ಭಾಸವಾಗುತ್ತದೆ. ಜೀವನ ಮೃತ್ಯುವಿಗಿಂತ ಕಠೋರ ಎನಿಸುತ್ತದೆ.
ಕೆಲವೇ ಕೆಲವು ಪ್ರಕರಣಗಳಲ್ಲಿ ವಿಚ್ಛೇದಿತರಿಗೆ ಸಮಾಜ, ಸಂಬಂಧಿಕರು ಹಾಗೂ ಸ್ನೇಹಿತರ ಸಹಕಾರ ದೊರೆಯುತ್ತದೆ. ಮಕ್ಕಳಿದ್ದರೆ ಅವರು ಇಬ್ಬರದೂ ತಪ್ಪು ಎಂದು ಬಹಿರಂಗವಾಗಿಯೇ ದೂಷಿಸುತ್ತಾರೆ. ಈ ಕಹಿ ಒಂದುವೇಳೆ ಸಂಗಾತಿಯ ತೊಂದರೆಗಳನ್ನು ಅಥವಾ ಹತಾಶೆಯನ್ನು ಅರಿತುಕೊಳ್ಳದೇ ತಮ್ಮದೇ ನಡೆಯಬೇಕೆಂದು ಹಠ ಹಿಡಿದು ಸಾಯುವುದಾಗಿ ಬೆದರಿಕೆ ಹಾಕುವ ಅಸ್ತ್ರ ಪ್ರಯೋಗಿಸುತ್ತಾರೆ.
ಈ ಅಸ್ತ್ರ ಎರಡು ಅಲಗಿನ ಕತ್ತಿಯಂತೆ, ಏಕೆಂದರೆ ಸಾಯುವವರಂತೂ ಸತ್ತುಹೋಗಿ ಬಿಡುತ್ತಾರೆ, ಜೀವಂತ ಇರುವವರು ಜೈಲಿಗೆ ಹೋಗಬೇಕಾಗುತ್ತದೆ. ಇಂತಹ ಸ್ಥಿತಿಯಲ್ಲಿ ವಿಚ್ಛೇದನವೇ ಸೂಕ್ತ ಉಪಾಯ.
ತನ್ನ ಸಂಗಾತಿ ಆತ್ಮಹತ್ಯೆಯ ಬೆದರಿಕೆ ಹಾಕಿದ ಅಥವಾ ಹಾಕಿದವಳು ಎಂದು ನ್ಯಾಯಾಲಯದಲ್ಲಿ ಪುರಾವೆ ಪ್ರಸ್ತುತಪಡಿಸಿದರೆ, ಕೆಳ ಹಂತದ ನ್ಯಾಯಾಲಯಗಳು 2 ತಿಂಗಳಲ್ಲಿಯೇ ತೀರ್ಪು ನೀಡುವಂತಾಗಬೇಕು.
ವಿಚ್ಛೇದನದ ಅಲಗು ಆತ್ಮಹತ್ಯೆಯ ಅಲಗಿಗಿಂತ ಹೆಚ್ಚು ಹರಿತವಾಗಿರುತ್ತದೆ. ಜಗಳದ ಬಳಿಕ ವಿಚ್ಛೇದನದ ಸತ್ಯ ಎಷ್ಟೊಂದು ಪರಿಣಾಮಕಾರಿಯಾಗಿದೆ ಎಂದರೆ, ವಿಚ್ಛೇದನದ ಹೆಸರು ಕೇಳುತ್ತಿದ್ದಂತೆಯೇ ಇಬ್ಬರಿಗೂ ದಿಗಿಲಾಗುತ್ತದೆ. ಒಬ್ಬರಿಂದ ಇನ್ನೊಬ್ಬರನ್ನು ಬೇರೆ ಬೇರೆ ಮಾಡಿ ನ್ಯಾಯಾಲಯ ಒಳ್ಳೆಯದನ್ನೇ ಮಾಡಿತು. ಈಗ ಅವರು ಆತ್ಮಹತ್ಯೆಯ ಬೆದರಿಕೆಯನ್ನು ಯಾರ ಮುಂದೆ ಹಾಕುತ್ತಾರೆ?