ದೃಶ್ಯ1 : ಒಂದು ನಗರದ ಹಳೆಯ ದೇಗುಲದಲ್ಲಿ ಭಾಗವತ ಕಥಾ ಶ್ರವಣ ನಡೆಯುತ್ತಿತ್ತು. ಪ್ರವೇಶದ್ವಾರಕ್ಕೆ ನೇರವಾಗಿ ಸ್ವಾಮಿಗಳು ಹಾಗೂ ಅವರ ಸಹಚರರು ಸಂಗೀತಮಯ ಭಾಗವತ ಹೇಳುವಿಕೆಯಲ್ಲಿ ತಲ್ಲೀನರಾಗಿದ್ದರು. ಕಥಾವಾಚನ ಮಾಡುವ ಸ್ವಾಮಿಗಳ ಬಗ್ಗೆ ಮೊದಲೇ ಸಾಕಷ್ಟು ಪ್ರಚಾರ ಮಾಡಲಾಗಿತ್ತು. ಅವರು ಬಹಳ ಉನ್ನತಮಟ್ಟದ ಸ್ವಾಮಿಗಳು ಹಾಗೂ ಅವರಿಗೆ ಅನೇಕ ಸಲ ದೇವರು ಪ್ರತ್ಯಕ್ಷ ದರ್ಶನವಾಗಿದೆ ಎಂದೂ ಪ್ರಚಾರ ಮಾಡಲಾಗಿತ್ತು. ಸ್ವಾಮಿಗಳಿಗೆ ಯಾವುದರ ಅಗತ್ಯವಿಲ್ಲ. ಅವರಲ್ಲಿ ಜನರ ಕಲ್ಯಾಣಕ್ಕೆ ಧರ್ಮದ ಕೆಲಸ ಮಾಡುತ್ತಿದ್ದಾರೆ ಎಂದು ಅವರ ಬಗ್ಗೆ ಪ್ರಚಾರ ಕೈಗೊಳ್ಳಲಾಗಿತ್ತು.

ಹಾಲ್‌ನ ತುಂಬೆಲ್ಲ ಪೋಸ್ಟರ್‌ಗಳು ರಾರಾಜಿಸುತ್ತಿದ್ದವು. ಹಾಲ್‌ನ್ನು ತುಂಬಾ ಚೆನ್ನಾಗಿ ಅಲಂಕರಿಸಲಾಗಿತ್ತು.

ಸಿಂಹಾಸನದಂತಹ ಪೀಠದಲ್ಲಿ ಸ್ವಾಮಿಗಳು ಮೈಕ್‌ನಲ್ಲಿ ಸುಧಾಮ ಪ್ರಸಂಗವನ್ನು ವಿವರಿಸುತ್ತಿದ್ದರು. ಹಾಲ್‌ನಲ್ಲಿ  ಕುಳಿತಿದ್ದ ಸಾವಿರಾರು ಭಕ್ತಾದಿಗಳು ಭಕ್ತಿರಸದಲ್ಲಿ ಮುಳುಗಿ ಹೋಗಿದ್ದರು. ಅದು ಸ್ವಾಮಿಗಳ ಭಾಗವತ ಕಥಾ ಪ್ರಸಂಗದ 4ನೇ ದಿನವಾಗಿತ್ತು. ಮೋಹಮಾಯೆ ತ್ಯಜಿಸಿ ಎಂದು ಹೇಳುತ್ತಿದ್ದ ಸ್ವಾಮಿಗಳ ಮುಂದೆ ನೋಟುಗಳು ಕಾಲು ಮುರಿದುಕೊಂಡು ಬಿದ್ದಿದ್ದವು. ಅವನ್ನು ನೋಡಿ ಅವರ ಮುಖಕಳೆ ಇನ್ನು ಹೊಳೆಯುತ್ತಲಿತ್ತು.

ಸ್ವಾಮಿಗಳು ಕೃಷ್ಣ ಸುಧಾಮನ ಪ್ರಸಂಗದ ವರ್ಣನೆಯನ್ನು ರಸವತ್ತಾಗಿ ಮಾಡುತ್ತಲಿದ್ದರು. ಅಷ್ಟರಲ್ಲಿ ವೇದಿಕೆಯ ಹಿಂಭಾಗದಿಂದ ಕೈಯಲ್ಲಿ ದಾನಪಾತ್ರೆ ಹಿಡಿದುಕೊಂಡು ಹರಕಲು ಬಟ್ಟೆಯಲ್ಲಿದ್ದ ಒಬ್ಬ ವ್ಯಕ್ತಿ ಪ್ರತ್ಯಕ್ಷನಾಗುತ್ತಾನೆ. ಅವನು ಸ್ವಾಮಿಗಳ ಕಾಲಿಗೆ ಎರಗುತ್ತಾನೆ. ಸ್ವಾಮಿಗಳು ಆ ವ್ಯಕ್ತಿಯ ಕಡೆ ಬೆರಳು ಮಾಡಿ ತೋರಿಸುತ್ತ, ಇವನೇ ಸುಧಾಮ ಎಂದು ಹೇಳಿ ಪುನಃ ತಮ್ಮ ಕಥಾಪ್ರಸಂಗಕ್ಕೆ ಮರಳುತ್ತಾರೆ.

ಆ ಸುಧಾಮ ಪ್ರೇಕ್ಷಕರ ಮಧ್ಯೆ ಪ್ರವೇಶಿಸುತ್ತಾನೆ. ಜನರು ನಾ ಮುಂದೆ ತಾ ಮುಂದೆ ಎನ್ನುವ ರೀತಿಯಲ್ಲಿ ಆ ವ್ಯಕ್ತಿಯ ಪಾದ ಸ್ಪರ್ಶಿಸಿ ನಮಸ್ಕರಿಸುತ್ತಾರೆ. ಅಷ್ಟೇ ಅಲ್ಲ, ತಮ್ಮ ಶಕ್ತ್ಯಾನುಸಾರ ಅವನ ಕೈಗೆ ಹಣ ನೀಡುತ್ತಾರೆ. ಭಕ್ತರಲ್ಲಿ ಸಹಾನುಭೂತಿ ಉಂಟು ಮಾಡಲು ಆ ಸುಧಾಮ ಸ್ವಲ್ಪ ಕುಂಟುತ್ತ ನಡೆಯುತ್ತಿದ್ದ. ನೋಡು ನೋಡುತ್ತಿದ್ದಂತೆ ಅವನ ಕೈಯಲ್ಲಿದ್ದ ದಾನಪಾತ್ರೆ ನೋಟುಗಳಿಂದ  ತುಂಬಿ ಹೋಯಿತು. ಅವನು ಆ ನೋಟುಗಳನ್ನು ತನ್ನ ಹೆಗಲಿಗೇರಿಸಿದ ಬ್ಯಾಗಿಗೆ ತುರುಕುತ್ತಿದ್ದ.

ಸುಧಾಮ ಜನರು ಕುಳಿತುಕೊಂಡಿದ್ದ ಪ್ರತಿಯೊಂದು ಸಾಲಿಗೂ ಹೋಗಿ ದಾನದ ಮೊತ್ತವನ್ನು ನಗುಮೊಗದಿಂದ ಸ್ವೀಕರಿಸುತ್ತಲಿದ್ದ. ದಾನ ಕೊಡುವವರಲ್ಲಿ ಅನಕ್ಷರಸ್ಥರು, ಸಾಕ್ಷರರು, ಶ್ರೀಮಂತರು, ಬಡವರು ಹೀಗೆ ಎಲ್ಲರೂ ಇದ್ದರು. ಕಳೆದ 4 ದಿನಗಳಿಂದ ಭಕ್ತರು ದೇವಸ್ಥಾನಕ್ಕೆ ಹಾಗೂ ಸ್ವಾಮಿಗಳಿಗೆ ಸಾಕಷ್ಟು ದಾನ ದಕ್ಷಿಣೆ ಕೊಟ್ಟಿದ್ದರು. ಈಗ ಒಮ್ಮೆಲೆ ಸುಧಾಮನ ಪ್ರವೇಶ ಅವರಿಂದ ಮತ್ತಷ್ಟು ದಕ್ಷಿಣೆಯನ್ನು ಕಕ್ಕಿಸುವುದಾಗಿತ್ತು.

ಭಾಗವತ ಕಥೆಗಳ ಆಯೋಜನೆಯಲ್ಲಿ ಇಂತಹ ದೃಶ್ಯಗಳು ಸಾಮಾನ್ಯವಾಗುತ್ತ ಹೊರಟಿದೆ. ಅಲ್ಲಿ ಸುಧಾಮನಂತಹ ಪಾತ್ರ ನಾಟಕೀಯ ರೀತಿಯಲ್ಲಿ ವೇದಿಕೆಯಿಂದ ಕೆಳಗಿಳಿದು ಬರುತ್ತದೆ ಹಾಗೂ ಹಣ ಸಂಗ್ರಹ ಮಾಡುತ್ತದೆ. ಇದು ಹಣ ವಸೂಲಿಗೆ ಹೊಸ ತಂತ್ರ. ಭಕ್ತಿಯಲ್ಲಿ ಮುಳುಗಿರುವವರಿಗೆ ಇದು ಅರ್ಥವಾಗುವುದಿಲ್ಲ.

ದೃಶ್ಯ 2 : ನಗರದ ಒಂದು ಪ್ರತಿಷ್ಠಿತ ಭಾಗದಲ್ಲಿ ಅಂಗಡಿ ನಡೆಸುವ ಅನಿಲ್ ‌ಕುಮಾರ್‌ರ ಕೌಂಟರ್‌ನಲ್ಲಿ ಅಮೃತಶಿಲೆಯ ಒಂದು ಪುಟ್ಟ ಗೋವನ್ನು ನಿಲ್ಲಿಸಲಾಗಿದೆ. ಬಹಳ ಆಕರ್ಷಕವಾಗಿ ಕಾಣುವ ಆ ಹಸು ವಾಸ್ತವದಲ್ಲಿ ಹಣ ಹಾಕುವ ಹುಂಡಿ. ಅದರ ಹೊಟ್ಟೆಯ ಮೇಲೆ ಸಂಬಂಧಪಟ್ಟ ಗೋಸೇವಾ ಸಂಸ್ಥೆಯೊಂದರ ಹೆಸರು ಹಾಗೂ ವಿಳಾಸವನ್ನು ನಮೂದಿಸಲಾಗಿದೆ. ಆ ಹುಂಡಿಯಲ್ಲಿ ಪ್ರತಿದಿನ ಸುಮಾರು 200 ರೂ.ಗಳಷ್ಟು ಸಂಗ್ರಹವಾಗುತ್ತದೆ. ಗೋಸೇವಾ ಸಂಸ್ಥೆಯವರು ಅನಿಲ್ ‌ಕುಮಾರ್‌ ಅವರನ್ನು ವಿನಂತಿಸಿಕೊಂಡು ಆ ಹುಂಡಿಯನ್ನು ಅಲ್ಲಿ ಇಟ್ಟು ಹೋಗಿದ್ದರು. ಹಸುವಿನ ಆಕರ್ಷಣೆಗೆ ಮರುಳಾಗಿ ಅದರ ಬೆನ್ನ ಮೇಲಿದ್ದ ರಂಧ್ರದಿಂದ ನೋಟುಗಳನ್ನು ಒಳಗೆ ಹಾಕುತ್ತಿದ್ದರು. ಸಂಸ್ಥೆಯವರು ನೋಟಿನಿಂದ ತುಂಬಿಕೊಂಡ ಹಸುವನ್ನು ಎತ್ತಿಕೊಂಡು ಹೋಗಿ ಅದರ ಸ್ಥಾನದಲ್ಲಿ ಅದೇ ತೆರನಾದ ಬೇರೊಂದು ಹಸುವಿನ ಪ್ರತಿಕೃತಿಯನ್ನು ಇಟ್ಟು ಹೋಗುತ್ತಿದ್ದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ