ದೆಹಲಿಯ ಢೋಂಗಿ ಬಾಬಾ ವೀರೇಂದ್ರ ದೇವ್‌ ದೀಕ್ಷಿತ್‌ನ ರಹಸ್ಯ ಬಯಲಾದ ಬಳಿಕ ಪ್ರತಿಯೊಂದು ನ್ಯೂಸ್‌ ಚಾನೆಲ್‌ಗಳೂ `ಬಾಬಾನ ಐಷಾರಾಮಿ ಅಡ್ಡಾ,' `ಗುಹೆಯ ರಹಸ್ಯ,' `ದತ್ತು ಪುತ್ರಿಯ ನೈಜತೆ' ಮುಂತಾದ ಕಾರ್ಯಕ್ರಮಗಳನ್ನು ತೋರಿಸಿದವು. ಇಂತಹ ಅದೆಷ್ಟೋ ಕಥೆಗಳು ಹಾಗೂ ಗುಹೆಗಳನ್ನು ತೋರಿಸಿ ಜನರನ್ನು ಭ್ರಮಾಲೋಕದಲ್ಲಿ ತೇಲಾಡುವಂತೆ ಮಾಡುತ್ತಿವೆ. ಇಲ್ಲಿ ಉದ್ಭವಿಸುವ ಒಂದು ಪ್ರಶ್ನೆ ಎಂದರೆ, ಇಷ್ಟೊಂದು ಸಂಶೋಧನಾ ಪ್ರವೃತ್ತಿಯ ಮೀಡಿಯಾ ಚಾನೆಲ್‌ಗಳು ಇಷ್ಟು ವರ್ಷಗಳ ಕಾಲ ಎಲ್ಲಿದ್ದವು? ಇಲ್ಲಿ ಬಾಬಾ ಹೊಸಬನೇನಲ್ಲ. ಆತ ನಿರ್ಮಿಸಿದ ಗುಹೆಗಳು ಒಂದೇ ರಾತ್ರಿಯಲ್ಲಿ ಹುಟ್ಟಿಕೊಂಡದ್ದೇನಲ್ಲ. ಇದೆಂಥ ನಯಂಚಕತನ.... ಮೋಸಗಾರಿಕೆ? ಇವರೆಲ್ಲ ಇಲ್ಲಿಯವರೆಗೆ ಮಲಗಿ ನಿದ್ರಿಸುತ್ತಿದ್ದರಾ? ಬಾಬಾ ಜೈಲಿಗೆ ಹೋಗುತ್ತಿದ್ದಂತೆ ಚಾನೆಲ್ಸ್ ಎಚ್ಚರವಾಗಿಬಿಟ್ಟವಾ?

ಈ ಸ್ವಾರ್ಥಿ ಹಾಗೂ ಅವಕಾಶವಾದಿ ಚಾನೆಲ್‌ಗಳ ಮೇಲೂ ಉದ್ದೇಶಪೂರ್ವಕವಾಗಿ ಅಪರಾಧ ಮುಚ್ಚಿಟ್ಟ ಆರೋಪ ಹೊರಿಸಬೇಕು. ಏಕೆಂದರೆ ಈ ಎಲ್ಲ ನ್ಯೂಸ್‌ಚಾನೆಲ್‌ಗಳು `ದೇಶ ಜಗತ್ತಿನ ಸುದ್ದಿ ನೀಡುವುದರಲ್ಲಿ ನಾವೇ ಮುಂದು' ಎಂದು ಬೊಗಳೆ  ಕೊಚ್ಚಿಕೊಳ್ಳುತ್ತಿರುತ್ತವೆ.

ಈ ಮೀಡಿಯಾಗಳು ಹೀಗೆ ಪ್ರಶ್ನಿಸುತ್ತವೆ, ``ಜನರು ಇಷ್ಟೊಂದು ಮೂಢರಾದದ್ದು ಹೇಗೆ?'' ಅವು ಜನರನ್ನೇ ತಪ್ಪಿತಸ್ಥರನ್ನಾಗಿಸುತ್ತಿವೆ. ಈಗ ನೀವೇ ಹೇಳಿ, ಮುಂಜಾನೆ ರಾಶಿ ಫಲ, ಬಾಬಾಗಳ ಪ್ರವಚನ, ತಮ್ಮನ್ನು ತಾವು ದೇವಮಾನವ, ದೇವಿ ಎಂದು ಹೇಳಿಕೊಳ್ಳುವುರಿಂದ ಬಣ್ಣ ಬಣ್ಣದ ಶೋಗಳು, ಮಾಟಗಾತಿ ಮಹಿಳೆ, ನಾಗಿಣಿಯ ಸೇಡು, ಸ್ವರ್ಗನರಕ ಹೀಗೆ ಜನರಲ್ಲಿ ಮೂಢನಂಬಿಕೆ ತುಂಬುವವರು ಯಾರು? ಯಾವುದೋ ಧಾರ್ಮಿಕ ಕೇಂದ್ರದಲ್ಲಿ ಏನಾದರೂ ಘಟಿಸಿದರೆ ಅದರ ಬಗ್ಗೆ ದಿನವಿಡೀ ಚಾನೆಲ್ ಚರ್ಚೆ ನಡೆಸುತ್ತವೆ. ಯಾವುದಾದರೂ ಹೊಸ  ವಿಷಯ ಸಿಗುವವರೆಗೆ ಅದನ್ನೇ ರಬ್ಬರಿನ ಹಾಗೆ ಎಳೆಯುತ್ತಿರುತ್ತವೆ.

ಮೂಢನಂಬಿಕೆಯ ವ್ಯಾಪಾರ

ಸರ್ಕಾರಗಳು ಮೌನ ಮತ್ತು ಮಾಧ್ಯಮಗಳು ಇಂತಹವರ ಪ್ರಚಾರದಲ್ಲಿ ಜೊತೆ ನೀಡುತ್ತವೆ. ಇದರ ಪರಿಣಾಮ ಎಂಬಂತೆ ಮೂಢನಂಬಿಕೆ ಪಸರಿಸುವವರ ದೊಡ್ಡ ನೆಟ್‌ವರ್ಕ್‌ ಇಂಟರ್‌ನೆಟ್‌ನಲ್ಲಿ ಆವರಿಸಿಕೊಂಡಿದೆ. ಜನರು ವೈದ್ಯರಿಗಿಂತ ಹೆಚ್ಚಾಗಿ ಈ ಮೂಢ ಸ್ವಾಮಿಗಳ ಮೇಲೆ ನಂಬಿಕೆ ಇಟ್ಟಿದ್ದಾರೆ. ಈ ಸ್ವಾಮಿಗಳಿಗೆ ಹೆಚ್ಚೆಚ್ಚು ಮಹಿಳೆಯರೇ ಬಲಿ ಬೀಳುತ್ತಿದ್ದಾರೆ. ಮಹಿಳೆಯರ ಮುಖಾಂತರ ಪುರುಷರು ಕೂಡ ಸ್ವಾಮಿಗಳ ಜಾಲಕ್ಕೆ ಸಿಲುಕುತ್ತಿದ್ದಾರೆ.

ಒಂದು ವಿಡಂಬನೆಯ ಸಂಗತಿಯೆಂದರೆ ಯಾವ ಮಾಟಮಂತ್ರ, ಜ್ಯೋತಿಷ್ಯವನ್ನು ವಿಜ್ಞಾನ ನಂಬುವುದಿಲ್ಲವೋ, ಅದೇ ಮಾಟಮಂತ್ರ, ಜ್ಯೋತಿಷ್ಯದ ಜಾಲ ಇಂದು ಎಲ್ಲೆಡೆ ಪಸರಿಸುತ್ತಿದೆ. ಇಂದು ಎಲ್ಲರ ಕೈಗಳಲ್ಲೂ ಫೋನ್‌ ಇದೆ. ಇಂಟರ್‌ನೆಟ್‌ಸಂಪರ್ಕವಿದೆ. ಅದರ ಮುಖಾಂತರ ಮೂಢನಂಬಿಕೆಯ ಉದ್ಯೋಗ ವೇಗವಾಗಿ ಪ್ರಸಾರವಾಗುತ್ತಿದೆ. ಎಲ್ಲೆಲ್ಲೂ ಅದರ ಜಾಹೀರಾತುಗಳು, ವೆಬ್‌ಸೈಟ್‌ಗಳು ಕಂಡುಬರುತ್ತಿವೆ.

`ಒಂದೇ ಕ್ಲಿಕ್‌ನಲ್ಲಿ ನಿಮ್ಮ ಜೀವನವನ್ನು ಖುಷಿಯಿಂದ ತುಂಬಿಸಿಬಿಡುತ್ತೇವೆ,' ಎಂದು ಅವು ಬಡಾಯಿ ಕೊಚ್ಚಿಕೊಳ್ಳುತ್ತವೆ.

ಅಪರಾಧಕ್ಕೆ ಕುಮ್ಮಕ್ಕು

ಮೂಢನಂಬಿಕೆಯ ಭಯಾನಕ ಪರಿಣಾಮ ಕೊಲೆಗಳಲ್ಲಿ ಅಂತ್ಯವಾಗುತ್ತದೆ. ವಿಶ್ವಸಂಸ್ಥೆ ಕೆಲವು ವರ್ಷಗಳ ಹಿಂದೆ ಒಂದು ವರದಿ ಸಲ್ಲಿಸಿತ್ತು. ಅದರಲ್ಲಿ 1897ರಿಂದ 2003ರ ಅವಧಿಯಲ್ಲಿ 2,556 ಮಹಿಳೆಯರನ್ನು ಮಾಟಗಾತಿಯರೆಂದು ಹೇಳಿ ಅವರನ್ನು ಸಾಯಿಸಲಾಗಿತ್ತು. ಆ ಪಟ್ಟಿಯಲ್ಲಿ ಜಾರ್ಖಂಡ್‌, ಒಡಿಶಾ, ತಮಿಳುನಾಡು ಮೊದಲ 3 ಸ್ಥಾನದಲ್ಲಿ.ಮಾಟಗಾತಿ ದುಷ್ಟ ಪ್ರವೃತ್ತಿಗೆ ವಿರುದ್ಧವಾಗಿ ಕಾನೂನೇನೊ ಇದೆ. ಆದರೆ ಅದರಿಂದ ಏನೇನೂ ಪರಿಣಾಮ ಆಗುತ್ತಿಲ್ಲ. ಅದರಲ್ಲಿ ಮಹಿಳೆಗೆ ಹೊಡೆಯುವುದು, ಹಿಂಸೆ ನೀಡುವುದರ ಜೊತೆ ಮಾಟಗಾತಿ ಎಂದು ಘೋಷಿಸಲ್ಪಟ್ಟ ಮಹಿಳೆಗೆ ಮೂತ್ರ ಕುಡಿಸುವುದು, ಅರೆ ಬೆತ್ತಲೆ ಸುತ್ತಾಡಿಸುವುದು, ಮೂಲ ಸೌಕರ್ಯಗಳಿಂದ ಅವಳನ್ನು ವಂಚಿತಳನ್ನಾಗಿ ಮಾಡಲಾಗುತ್ತದೆ. ರಾಷ್ಟ್ರೀಯ ಮಹಿಳಾ ಆಯೋಗ ಕಾಲಕಾಲಕ್ಕೆ ವಿಚಾರ ಸಂಕಿರಣಗಳ ಮೂಲಕ ಜನರಲ್ಲಿ ಜಾಗೃತಿ ತರಲು ಪ್ರಯತ್ನಿಸುತ್ತಿದೆ. ಆದರೆ ಈ ಮೂಢನಂಬಿಕೆ ಕೊಲೆ ಮಾಡುವಷ್ಟು ಮುಂದೆ ಹೋಗಿರುವಾಗ, ಆಯೋಗ ಈ ತೆರನಾದ ಚಿಕ್ಕಪುಟ್ಟ ಕಾರ್ಯಕ್ರಮಗಳಿಗೆ ಸೀಮಿತಗೊಳಿಸುವುದು ಎಷ್ಟರ ಮಟ್ಟಿಗೆ ಸರಿ?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ