ಪ್ರತಿಯೊಂದು ಅವಿಭಕ್ತ ಕುಟುಂಬಗಳ ಹಾಗೆ ಕಾಂಗ್ರೆಸ್‌ ಕುಟುಂಬದಲ್ಲೂ ಯಾವುದೂ ಸರಿಯಾಗಿಲ್ಲ. ಒಮ್ಮೆ ಒಬ್ಬ ಸೊಸೆ ಮುನಿಸಿಕೊಂಡು ತನ್ನದೇ ಹೊಸ ಕುಟುಂಬ ಮಾಡಿಕೊಂಡರೆ, ಇನ್ನೊಮ್ಮೆ ಮಗ ಬೇರೆ ಜಾತಿಯವಳೊಂದಿಗೆ ಮದುವೆ ಮಾಡಿಕೊಂಡು ಪ್ರೀತಿಯ ಸಂಬಂಧ ಮುರಿದುಕೊಳ್ಳುತ್ತಾನೆ. ಮತ್ತೊಮ್ಮೆ ಸೋದರ ಬೇರೆ ಅಂಗಡಿ ತೆರೆದು ಅವಿಭಕ್ತ ಕುಟುಂಬಕ್ಕೇ ಸವಾಲೊಡ್ಡತೊಡಗುತ್ತಾನೆ. ಅವಿಭಕ್ತ ಕುಟುಂಬ ನಡೆಸಿಕೊಂಡು ಹೋಗುವುದು ಎಷ್ಟು ಕಠಿಣ ಕೆಲಸವೆಂದರೆ, ರಾಜಕೀಯ ಪಕ್ಷ ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್‌ ಪಕ್ಷ ನಡೆಸಿಕೊಂಡು ಹೋಗುವಷ್ಟು, ಅದು ಬಹುದೊಡ್ಡ ಮನೆ, ಇಲ್ಲಿ ಒಬ್ಬೊಬ್ಬರ ಕಾಲುಗಳು ಒಂದು ಕಡೆ, ಪರಿಸ್ಥಿತಿ ಗಂಭೀರ ಆದರೆ ಹೆಸರು ಇನ್ನೂ ಇದೆ.

ಪಂಜಾಬ್‌ ನಲ್ಲಿ ಕ್ಯಾ. ಅರವಿಂದರ್‌ ಸಿಂಗ್‌ ರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕಿತ್ತು ಹಾಕುವುದು, ಗೋವಾದಲ್ಲಿ ಮಾಜಿ ಮಂತ್ರಿ ಹೊರಟು ಹೋಗುವುದು ಅಥವಾ ಉತ್ತರ ಭಾರತದ ವ್ಯಾಪಾರ ಭಾರತೀಯ ಜನತಾ ಪಾರ್ಟಿಯ ವಶವಾಗುವುದು ಈ ಅವಿಭಕ್ತ ಕುಟುಂಬಕ್ಕೆ ಸವಾಲೇ ಸರಿ. ಆದರೆ ಈ ಕುಟುಂಬದಲ್ಲಿ ಒಂದಿಷ್ಟು ಅಂಟಿನ ನಂಟು ಇದೆಯೆಂದರೆ, ಅದು ಅವಿಭಕ್ತ ಕುಟುಂಬ ಮಾರುಕಟ್ಟೆಯನ್ನು ಸದಾ ಜಾಗೃತ ಸ್ಥಿತಿಯಲ್ಲಿರುತ್ತದೆ, ತಾನಿದ್ದೀನೆಂದರೆ, ಏನಾದರೂ ಆಗಿಯೇ ಆಗುತ್ತದೆ ಹಾಗೂ ಹೊಸಬರಾರೂ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳಲು ಆಗಲಾರದು.

ಈ ಕುಟುಂಬದಲ್ಲಿ ಜಾತಿ ಧರ್ಮದ ಭೇದಭಾವ ಇಲ್ಲವೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್‌ ನ ಭವಿಷ್ಯ ಅಷ್ಟೊಂದು ಕೆಟ್ಟದೆಂದು ಅನಿಸುವುದಿಲ್ಲ. ಏಕೆಂದರೆ ಬೇರೆ ಅವಿಭಕ್ತ ಕುಟುಂಬ ಮಂದಿರ ನಿರ್ಮಿಸಿ ಮಾರುಕಟ್ಟೆಯನ್ನು ಲೂಟಿ ಮಾಡಿದೆ. ಅದು ಮುಂದೇನೊ ಇದೆ. ಆದರೆ ಮಂದಿರ ಹಣ ಸ್ವಾಹಾ ಮಾಡುತ್ತದೆ, ಅದು ಏನೂ ಕೊಡುವುದಿಲ್ಲ. ಹೀಗಾಗಿ ಜನ ಒಂದಷ್ಟು ನಿರಾಶರಾಗಿದ್ದಾರೆ.

ಭಾರತೀಯ ಜನತಾ ಪರಿವಾರದಲ್ಲಿ ಪುರೋಹಿತಶಾಹಿ ಎಷ್ಟು ಪ್ರಬಲವಾಗಿದೆಯೆಂದರೆ, ಅಲ್ಲಿ ಮಹಾಪುರೋಹಿತನದ್ದೇ ದರ್ಬಾರು ಇಲ್ಲವೇ ಆ ಇಬ್ಬರದ್ದು, ಕೇವಲ ಇಬ್ಬರು, ಮಹಾ ಶಿಷ್ಯರದ್ದು. ಉಳಿದವರೆಲ್ಲ ಕುಟುಂಬದ ವ್ಯಾಪಾರದ ಲಾಭ ಪಡೆಯಬಹುದು. ಆದರೆ ಮುಟ್ಟಲಾಗದು. ಇಲ್ಲದಿದ್ದರೆ ಅವರನ್ನು ಮೇನಕಾ ವರುಣ್‌ ಗಾಂಧಿ ಹಾಗೆ ಹೊರಗಿನ ಕೋಣೆಯಲ್ಲಿ ಕೂರಿಸಲಾಗುತ್ತದೆ.

ಈ ಭಾರತೀಯ ಪಾರ್ಟಿ ಪರಿವಾರದ ಕೊಡುಗೆ ಕೂಡ ಏನಿಲ್ಲ. ಅಲ್ಲಿ ಚಿಟ್‌ ಫಂಡ್‌ ಕಂಪನಿಗಳ ಹಾಗೆ ಭಾರಿ ಬಡ್ಡಿಯ ಕನಸು ತೋರಿಸಲಾಗುತ್ತದೆ. ಅದರ ಬಲದ ಮೇಲೆ ಒಂದಿಷ್ಟು ವಿಮಾನಗಳನ್ನು, ಭವನಗಳನ್ನು ನಿರ್ಮಿಸಲಾಯಿತು.

joint-family-2

ಆದರೆ ಅದರ ಹಿಂದೆ ಮನೆಯ ಆಸ್ತಿ, ಸಂಪತ್ತು ಮಾರಲಾಗುತ್ತಿದೆ. ಈ ಅಂಗಡಿಗೆ ಗ್ರಾಹಕರು ಹೆಚ್ಚು. ಆದರೆ ಒಳ್ಳೆಯ ಪ್ಯಾಕಿಂಗ್ ನಲ್ಲಿ ಅವರಿಗೆ ಹಳಸಿದ, ಕೆಟ್ಟುಹೋದ, ಚಲಾವಣೆಯಾಗದ ಸರಕು ಸಿಗುತ್ತಿದೆ. ಎಲ್ಲಕ್ಕೂ ಮಹತ್ವದ ಸಂಗತಿಯೆಂದರೆ, ಈ ಪರಿವಾರದಲ್ಲಿ ಯಾರೊಬ್ಬರಿಗೂ ವ್ಯಾಪಾರ ಮಾಡಲು ಬರುವುದಿಲ್ಲ. ಎಲ್ಲರೂ ಭಜನೆ ಪೂಜೆಯಲ್ಲಿ ಮಗ್ನರಾಗಿರುತ್ತಾರೆ.

ಭಾರತೀಯ ಜನತಾ ಪರಿವಾರ ಸಾಕಷ್ಟು ಪಾರ್ಟಿ ನೀಡಿತು. ಸಾಕಷ್ಟು ಬಣ್ಣ ಸುಣ್ಣ ಮಾಡಿ ಮನೆಯನ್ನು ಹೊಳೆಯುವಂತೆ ಮಾಡಿತು, ಹೆಸರೇನೋ ಆಯಿತು. ಆದರೆ ಕಾಂಗ್ರೆಸ್‌ ನ ಬಿರುಕುಬಿಟ್ಟ ಮನೆಯ ಹಾಗೆ, ದೊಡ್ಡ ಗೋಡೆಯನ್ನು ನಿರ್ಮಿಸಲಿಲ್ಲ. 1707ರಲ್ಲಿ ಮೊಘಲ್ ಸಾಮ್ರಾಜ್ಯ ಪತನಗೊಂಡರೂ, ಕೆಂಪು ಕೋಟೆ 1857ರ ತನಕ ದೇಶದ ಮುಂದಾಳತ್ವ ನಡೆಸಿತು. ಆಂಗ್ಲರು ನಿರ್ಮಿಸಿದ್ದ ಕೊಲ್ಕತ್ತಾ, ಮುಂಬೈನಲ್ಲಿ ಆ ಬಲ ಇರಲಿಲ್ಲ. 1947ರಲ್ಲಿ ಕೆಂಪುಕೋಟೆ ಕಟ್ಟಡ ಪುನಃ ಸ್ವಾತಂತ್ರ್ಯದ ಗುರುತಾಯಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ