ನವದೆಹಲಿಯಲ್ಲಿ ಆರಂಭವಾದ ಫೆನೆಸ್ಟಾ ಓಪನ್ ರಾಷ್ಟ್ರೀಯ ಟೆನ್ನಿಸ್ ಚಾಂಪಿಯನ್ ಶಿಪ್ ನಲ್ಲಿ ವೈಷ್ಣವಿ ಅಡ್ಕರ್ ಹಾಗೂ ಕರ್ನಾಟಕದ ಎಸ್ಡಿ ಪ್ರಜ್ವಲ್ ದೇವ್ ತಮ್ಮ ತಮ್ಮ ವಿಭಾಗಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಆಡಿದ ಮಹಾರಾಷ್ಟ್ರದ ವೈಷ್ಣವಿ ಮೊದಲ ಸುತ್ತಿನಲ್ಲಿ, ತಮಿಳುನಾಡಿನ ಮ್ರಿದುಲಾ ಪಾಲನಿವೇಲ್ ವಿರುದ್ಧ 6-2, 6-4 ಅಂತರದಿಂದ ಜಯ ಸಾಧಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದರು.
ಡಿಸಿಎಂ ಶ್ರೀರಾಮ್ ಲಿಮಿಟೆಡ್ನ ಬೆಂಬಲದೊಂದಿಗೆ ಮತ್ತು ಆಲ್ ಇಂಡಿಯಾ ಟೆನಿಸ್ ಅಸೋಸಿಯೇಶನ್ (AITA) ಹಾಗೂ ದೆಹಲಿ ಲಾನ್ ಟೆನಿಸ್ ಅಸೋಸಿಯೇಶನ್ (DLTA) ಆಶ್ರಯದಲ್ಲಿ ನಡೆಯುತ್ತಿರುವ ಫೆನೆಸ್ಟಾ ಓಪನ್, ಭಾರತದ ಅತ್ಯಂತ ದೊಡ್ಡ ದೇಶೀಯ ಟೆನಿಸ್ ಚಾಂಪಿಯನ್ಶಿಪ್ ಆಗಿದ್ದು, ದೇಶದ ವಿವಿಧ ಭಾಗಗಳಿಂದ ಹಲವಾರು ಆಟಗಾರರು ಪಾಲ್ಗೊಂಡಿದ್ದಾರೆ.
ಮೊದಲ ಪಂದ್ಯದಿಂದಲೇ ಅದ್ಭುತ ಬೇಸ್ಲೈನ್ ಆಟವನ್ನು ಪ್ರದರ್ಶಿಸಿದ ವೈಷ್ಣವಿ 4-0 ಮುನ್ನಡೆ ಸಾಧಿಸಿದರು.
ಮೊದಲನೇ ಸುತ್ತಿನಲ್ಲಿ ತನ್ನ ಎದುರಾಳಿಯನ್ನು ಸುಲಭವಾಗಿ ಸೋಲಿಸಿದ ಕರ್ನಾಟಕದ ಪ್ರಜ್ವಲ್, ಎರಡನೇ ಸುತ್ತಿನಲ್ಲಿ ಸಾರ್ಥಕ್ ವಿರುದ್ಧ ಸೋತರು. ಬಳಿಕ ಪ್ರಜ್ವಲ್ ಮುಂದಿನ ಆರು ಸುತ್ತುಗಳನ್ನು ಸತತವಾಗಿ ಆಡಿ ಗೆಲುವನ್ನು ತಮ್ಮದಾಗಿಸಿಕೊಂಡರು.
ಒಡಿಶಾದ ದೇವಾಸಿಸ್ ಸಾಹು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಅಚ್ಚರಿ ಜಯ ದಾಖಲಿಸಿದರು. ದೇವಾಸಿಸ್ ಪಾರ್ಥ್ ಅಗರ್ರ್ವಾಲ್ ಅವರನ್ನು 7-5, 6-0 ಅಂತರದಿಂದ ಸೋಲಿಸಿದರು. ಪಾರ್ಥ್ 5-3 ಮುನ್ನಡೆ ಸಾಧಿಸಿದ್ದರೂ, 39ನೇ ರ್ಯಾಂಕ್ನ ದೇವಾಸಿಸ್ ನಾಲ್ಕು ಸತತ ಆಟಗಳನ್ನು ಆಡಿ ಗೆಲುವು ತಮ್ಮದಾಗಿಸಿಕೊಂಡರು.
ಇದೇ ವೇಳೆ, ಪಂಜಾಬಿನ ಸಹಿರಾ ಸಿಂಗ್ ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಸೊನಿಕಾ ಜಾದೀಶ್ ಅವರನ್ನು 6-4, 6-0 ಅಂತರದಲ್ಲಿ ಸೋಲಿಸಿ ಜಯಶೀಲರಾದರು.
ಕರ್ನಾಟಕದ ಆಟಗಾರ್ತಿ ಮೊದಲ ಎರಡು ಪಂದ್ಯಗಳನ್ನು ಸೋತ ನಂತರ ಸ್ಕೋರ್ ಅನ್ನು 2-2 ರಲ್ಲಿ ಸಮಬಲಗೊಳಿಸಿದ್ದರಿಂದ ಸಾಹಿರಾ ಆರಂಭಿಕ ಸೆಟ್ನಲ್ಲಿ ಕಠಿಣ ಸವಾಲನ್ನು ಎದುರಿಸಿದರು. ಏಳನೇ ಸುತ್ತಿನಲ್ಲಿ ಸಾಹಿರಾ ಮುನ್ನಡೆ ಸಾಧಿಸಿ ಗೆಲುವು ಸಾಧಿಸಿದರು.
ತಮಿಳುನಾಡಿನ ಮನೀಶ್ ಸುರೇಶ್ಕುಮಾರ್ ಕೂಡ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಒಡಿಶಾದ ಅಮೃತಜಯ್ ಮೊಹಾಂಟಿ ಅವರನ್ನು 6-3, 6-1 ಅಂತರದಲ್ಲಿ ಸೋಲಿಸಿ ಟೂರ್ನಿಯಲ್ಲಿ ಜಯಭೇರಿ ಬಾರಿಸಿದರು.
ಟೂರ್ನಿಯ ವಿಜೇತರಿಗೆ ಪ್ರಶಸ್ತಿಗಳ ಜೊತೆಗೆ ಒಟ್ಟು ₹21.55 ಲಕ್ಷಕ್ಕೂ ಅಧಿಕ ಬಹುಮಾನ ಮೊತ್ತ ಮತ್ತು ಕಿಟ್ ಭತ್ಯೆ ನೀಡಲಾಗುವುದು. ಅಂಡರ್-16 ಮತ್ತು ಅಂಡರ್-14 ಸಿಂಗಲ್ಸ್ ವಿಭಾಗದ ವಿಜೇತರು ಹಾಗೂ ರನ್ನರ್-ಅಪ್ಗಳು ತಲಾ ₹25,000 ಟೆನಿಸ್ ವಿದ್ಯಾರ್ಥಿ ವೇತನ ಪಡೆಯಲಿದ್ದಾರೆ.
ಬಾಯ್ಸ್ ಮತ್ತು ಗರ್ಲ್ಸ್ ಅಂಡರ್-16 ಹಾಗೂ ಅಂಡರ್-14 ವಿಭಾಗಗಳ ಕ್ವಾಲಿಫೈಯಿಂಗ್ ಮತ್ತು ಮುಖ್ಯ ಡ್ರಾ ಪಂದ್ಯಗಳು ಅಕ್ಟೋಬರ್ 5ರಿಂದ ಅಕ್ಟೋಬರ್ 11ರವರೆಗೆ ನಡೆಯಲಿವೆ.