ಹುಟ್ಟಿದಾಗಿನಿಂದ ಹಿಡಿದು ಸಾಯುವ ತನಕ ಪೂಜಾರಿ ಪುರೋಹಿತರು, ಧರ್ಮದ ಏಜೆಂಟರು ಅದೆಷ್ಟು ಸಲ ಮನುಷ್ಯನೊಬ್ಬನಿಗೆ ಸ್ವರ್ಗ ನರಕದ ದಾರಿ ತೋರಿಸುತ್ತಾರೊ, ಏನೋ! ಹೀಗೆ ಮಾಡುವುದರಿಂದ ಸ್ವರ್ಗಕ್ಕೆ ಹೋಗುವಿರಿ, ಹಾಗೆ ಮಾಡುವುದರಿಂದ ನರಕಕ್ಕೆ ಹೋಗುತ್ತೀರಿ ಎಂದು ಅವರು ಆಗಾಗ ಭಕ್ತರಿಗೆ ಹೇಳುತ್ತಲೇ ಇರುತ್ತಾರೆ. ಜನರನ್ನು ಈ ರೀತಿ ಭ್ರಮೆಯಲ್ಲಿ ತಳ್ಳುವ ಅವರಿಗೆ ಸ್ವತಃ ತಾವು ಸ್ವರ್ಗಕ್ಕೆ ಹೋಗುತ್ತೇವೋ, ನರಕಕ್ಕೆ ಹೋಗುತ್ತೇವೋ ಎಂಬುದೇ ಗೊತ್ತಿರುವುದಿಲ್ಲ.

ಈಗ ಮೂಢನಂಬಿಕೆಗಳು ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿವೆ. ಇಂದು ಯಾವ ಮಿಥ್ಯ ಪರಂಪರಾಗತ ರೀತಿ ರಿವಾಜುಗಳು ಅವಶ್ಯಕತೆಗೆ ಅನುಕೂಲಕರ ಆಗಿಲ್ಲ, ಅವನ್ನು ಕೂಡ ಪರಂಪರಾಗತ ರೀತಿಯಲ್ಲಿ ಹೆಚ್ಚಿಸುವ ಪ್ರಯತ್ನಗಳು ನಡೆದಿವೆ.

ಹುಡುಗಿಯರು ಬೆಳೆಯುತ್ತ ಹೋದಂತೆ ಹಿರಿಯರು ಅವರಿಗೆ ಕೆಲವೊಂದು ಮಾತುಗಳನ್ನು ಹೇಳುತ್ತಿರುವುದು ಕಂಡುಬರುತ್ತದೆ, ``ನೀನು ಆಯಾ ತಿಂಗಳ ಅಥವಾ ವರ್ಷದ ಇಂತಿಂಥ ದಿನ ಈ ವ್ರತ ಮಾಡು, ನಿನಗೆ ಒಪ್ಪುವಂಥ ಗಂಡ ಸಿಗುತ್ತಾನೆ.'' ಒಂದು ವೇಳೆ ಹಾಗೇನಾದರೂ ಆಗಿದ್ದರೆ ಇಂದು ಪ್ರತಿಯೊಬ್ಬ ಯುವತಿಯೂ ತನಗೆ ಅನುರೂಪನಾದ ಗಂಡನನ್ನೇ ಪಡೆದಿರುತ್ತಿದ್ದಳು. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಮೂಢನಂಬಿಕೆಗಳ ಪ್ರಮಾಣ ಹೆಚ್ಚು. ಇದರಲ್ಲಿ ವೈಜ್ಞಾನಿಕ ದೃಷ್ಟಿಕೋನದ ಕೊರತೆ ಭಾಸವಾಗುತ್ತದೆ. ಹೀಗಾಗಿ ನಾವೆಲ್ಲರೂ ವೈಜ್ಞಾನಿಕ ದೃಷ್ಟಿಕೋನ ಹೊಂದಿರುವವರಾಗಿರುವುದು ಅತ್ಯವಶ್ಯ.

ಒಂದು ವೇಳೆ ನಾವು ದೈನಂದಿನ ಜೀವನದಲ್ಲಿ ವೈಜ್ಞಾನಿಕ ದೃಷ್ಟಿಕೋನ ಅಳವಡಿಸಿಕೊಂಡರೆ ವೈಯಕ್ತಿಕ ಘಟನೆಗಳು ಮತ್ತು ಸಾಮಾಜಿಕ ಘಟನೆಗಳಲ್ಲಿ  ತರ್ಕ ಸಂಗತಿ ಕಾರಣಗಳನ್ನು ಅರಿಯಲು ಸಾಧ್ಯವಾಗುತ್ತದೆ. ಅದರಿಂದ ಅಸುರಕ್ಷತೆಯ ಭಾವನೆ ಮತ್ತು ನಿರರ್ಥಕ ಭಯದಿಂದ ಮುಕ್ತಿ ಕಂಡುಕೊಳ್ಳಲು ಸಾಧ್ಯವಾಗುತ್ತದೆ.

ಶುಭ ಶಕುನ ಅಪಶಕುನಗಳ ನಂಬಿಕೆ

ನಮ್ಮ ಸಮಾಜದಲ್ಲಿ ಮೂಢನಂಬಿಕೆಗೆ ಮಾನ್ಯತೆ ಕೊಡುವ ಕಥೆಗಳಿಂದ ಹಿಡಿದು ಶುಭ ಶಕುನ ಅಪಶಕುನಗಳ ಅಸಂಖ್ಯಾತ ಮಾನ್ಯತೆಗಳು ಕಾಗೆಗಳಿಗೆ ಸಂಬಂಧಪಟ್ಟಂತೆ ಇವೆ. ಅಂದಹಾಗೆ ಭಾರತೀಯ ಸಮಾಜದಲ್ಲಿ ಕಾಗೆಯನ್ನು ಧೂರ್ತ ಪಕ್ಷಿ ಎಂದು ಹೇಳಲಾಗುತ್ತದೆ. ಆದರೆ ಶ್ರಾದ್ಧದ ಸಂದರ್ಭದಲ್ಲಿ ಅದರ ಆಗಮನದ ನಿರೀಕ್ಷೆ ಮಾಡಲಾಗುತ್ತದೆ. ಅದು ಬರದೇ ಇದ್ದರೆ ಸತ್ತ ವ್ಯಕ್ತಿಯ ಆಸೆಗಳು ಈಡೇರಿಲ್ಲ ಎಂದು ಭಾವಿಸಲಾಗುತ್ತದೆ.

ಕಾಗೆಯೊಂದು ಮನೆ ಮುಂದೆ ಬಂದು ಕುಳಿತು ಕೂಗುತ್ತಿದ್ದರೆ, ಮನೆಗೆ ಯಾರೋ ಅತಿಥಿಗಳು ಬರಲಿದ್ದಾರೆಂಬ ಸೂಚನೆ ಎಂದು ಹೇಳಲಾಗುತ್ತದೆ. ಇಂದಿನ ಬೆಲೆ ಏರಿಕೆಯ ದಿನಗಳಲ್ಲಿ ಯಾರು ತಾನೇ ಆಕಸ್ಮಿಕ ಅತಿಥಿಗಳ ಆಗಮನವನ್ನು ಇಷ್ಟಪಡುತ್ತಾರೆ? ಮೂಢನಂಬಿಕೆಯ ವಿರೋಧಿ ಎಂದೇ ಹೇಳಲಾಗುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದೊಂದು ಉದಾಹರಣೆಯನ್ನೇ ತೆಗೆದುಕೊಳ್ಳಿ. ಅವರ ಕಾರಿನ ಮೇಲೆ ಕಾಗೆ ಕುಳಿತದ್ದು ಅವರಿಗೆ ಶುಭವಾಗಿ ಪರಿಣಮಿಸಿತು. ಅವರಿಗೆ ಅದಕ್ಕೂ ದುಬಾರಿ ಕಾರು ಬಂತು!

ಇಂದಿನ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ನಾವು ಮಂಗಳ ಲೋಕಕ್ಕೆ, ಚಂದ್ರನ ಅಂಗಳಕ್ಕೆ ಹೋಗುವ ಬಗ್ಗೆ ಯೋಚಿಸುತ್ತಿದ್ದೇವೆ. ಆದರೆ ಮೂಢನಂಬಿಕೆಗಳು ಮಾತ್ರ ನಮ್ಮ ಬೆನ್ನುಬಿಡುವ ಲಕ್ಷಣ ಕಂಡುಬರುತ್ತಿಲ್ಲ. ವೈಜ್ಞಾನಿಕ ಯುಗದ ಹೆಚ್ಚುತ್ತಿರುವ ಪ್ರಭಾವದ ಹೊರತಾಗಿ ಮೂಢನಂಬಿಕೆಯ ಹೊಸ ಹೊಸ ಬೇರುಗಳು ನಮ್ಮ ಮನಸ್ಸಿನಲ್ಲಿ ಇಳಿಯುತ್ತಲೇ ಹೊರಟಿವೆ. ಮೂಢನಂಬಿಕೆಗಳನ್ನು ಅಳಿಸಿ ಹಾಕಲು ಹಲವು ಜನರು ವರ್ಷಾನುವರ್ಷಗಳಿಂದ ಎಡಬಿಡದೆ ಪ್ರಯತ್ನಿಸುತ್ತಿದ್ದಾರೆ. ಆದರೆ ಅವರಿಗೆ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. ಸಿಗುವುದಾದರೂ ಹೇಗೆ? ಇಲ್ಲಿ ಎಲ್ಲರೂ ಅವಕಾಶಾದಿಗಳು. ನಮ್ಮ ಅಂಗಳದಲ್ಲಿ ಚೆಂಡು ಬರುತ್ತಿದ್ದಂತೆಯೇ ಅದನ್ನು ಇನ್ನೊಬ್ಬರ ಅಂಗಳಕ್ಕೆ ಒದೆಯುವುದೇ ಕೆಲಸ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ