ರಾಜಸ್ಥಾನದ ನಾಥಧ್ವಾರದಲ್ಲಿ ಅತಿ ಎತ್ತರದ ಹನುಮಂತನ ಪ್ರತಿಮೆ ನಿರ್ಮಾಣ ಪೂರ್ಣಗೊಂಡಿದ್ದು, ಮಾ.26ರಂದು ಅನಾವಣಗೊಳಿಸಲಾಗಿದೆ.
ಉತ್ತರ ಭಾರತದ ಕೆಲವು ಕಡೆ ಮಾ.26ರ ಗುರುವಾರ ರಾಮನವಮಿ ಆಚರಿಸಲಾಗಿದ್ದು, ಈ ಸಂದರ್ಭದಲ್ಲಿ ಪ್ರತಿಮೆಯನ್ನು ಅನಾವಣಗೊಳಿಸಲಾಗಿದೆ.
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶ್ರೀನಾಥ್ಜಿ ಮಂದಿರದ ತಿಲಕಾಯತ್ ರಾಕೇಶ್ ಮಹಾರಾಜ್ ಸೇರಿದಂತೆ ಹಲವು ಸಾಧು-ಸಂತರು ಹಾಗೂ ಭಕ್ತರು ಪಾಲ್ಗೊಂಡಿದ್ದರು.
ರಾಜಸಮಂದ್ ಜಿಲ್ಲೆಯ ನಾಥದ್ವಾರದ ಬಳಿಯ ಗಿರಿರಾಜ್ ಬೆಟ್ಟದ ಮೇಲೆ ಈ ಪ್ರತಿಮೆ ವಿರಾಜಮಾನಗೊಂಡಿದೆ. ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆ ಎನಿಸಿರುವ “ವಿಶ್ವಾಸ ಸ್ವರೂಪಂ” ಎದುರು ದಕ್ಷಿಣಾಭಿಮುಖ ಹನುಮನ ಪ್ರತಿಮೆ ಸ್ಥಾಪಿಸಲಾಗಿದೆ.
131 ಅಡಿ ಎತ್ತರದ ಈ “ಶ್ರೀ ಶ್ರೀಜಿ ಹನುಮಾನ್ಜಿ” ಪ್ರತಿಮೆಯು 30 ಕಿ.ಮೀ. ದೂರದಿಂದಲೂ ಕಾಣಿಸುವಷ್ಟು ಎತ್ತರದಲ್ಲಿದೆ.
ಮೂರು ವರ್ಷದ ಶ್ರಮ: 150 ಟನ್ ತೂಕದ ಪ್ರತಿಮೆ ನಿರ್ಮಾಣಕ್ಕೆ ಕುಶಲಕರ್ಮಿಗಳು ಹಾಗೂ ಎಂಜಿಯರ್ಗಳ ತಂಡವು ಮೂರು ವರ್ಷಗಳ ಶ್ರಮ ಹಾಕಿದ್ದಾರೆ. ಈ ಬೃಹತ್ ಪ್ರತಿಮೆಗೆ ಥಾಯ್ಲೆಂಡ್ನಿಂದ ಆಮದು ಮಾಡಿಕೊಳ್ಳಲಾದ ವಿಶೇಷ ಸುವರ್ಣ ಬಣ್ಣದ ಲೇಪನ ಮಾಡಲಾಗಿದೆ. ಇದರಿಂದ ಅದರ ಹೊಳಪು ದೀರ್ಘಕಾಲ ಉಳಿಯಲಿದೆ.





