ಭಾರತ ಸಹಿತ ಇಡೀ ಜಗತ್ತಿಗೆ 2020 ಅತ್ಯಂತ ಭಯಾನಕ ವರ್ಷವಾಗಿ ಪರಿಣಮಿಸಿದೆ. ಅರ್ಥ ವ್ಯವಸ್ಥೆಗಳು ಅಲ್ಲೋಲ ಕಲ್ಲೋಲಗೊಂಡಿವೆ. ಕೊರೋನಾ ವೈರಸ್‌ನ ಹಾವಳಿಯಿಂದ ಸಾವಿನ ಅಂಕಿಅಂಶಗಳು ಹೆಚ್ಚುತ್ತಲೇ ಹೊರಟಿವೆ. ಅದರ ಜೊತೆ ಜೊತೆಗೆ ತಮ್ಮವರ ಬಗೆಗಿನ ಚಿಂತೆ ಕೂಡ ವ್ಯಾಪಕವಾಗುತ್ತಾ ಸಾಗಿದೆ. ಕೊರೋನಾ ಹಾವಳಿಯು ಸಮಾಜದಲ್ಲಿ ವಿಜ್ಞಾನ ಹಾಗೂ ಸಂಶೋಧನೆಯ ಮಹತ್ವವನ್ನು ಸಾಬೀತುಪಡಿಸಿದೆ. ವಿಜ್ಞಾನ ನಮಗೆ ಈ ರೋಗದಿಂದ ಹೊರಬರಲು ಎಗ್ಸಿಟ್‌ ಪ್ಲಾನ್ ತಿಳಿಸಿಕೊಡುತ್ತದೆ. ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಅದಕ್ಕಾಗಿ ಲಸಿಕೆ ತಯಾರಿಸಲು ಸಿದ್ಧತೆಗಳು ಶುರುವಾಗಿವೆ. ಅದಕ್ಕೂ ಮುಂಚೆ ವಿಜ್ಞಾನಿಗಳು ಮತ್ತು ಸಂಶೋಧಕರು ಈ ವೈರಸ್‌ ಎಲ್ಲಿಂದ ಬಂತು, ಅದರ ಪಸರಿಸುವಿಕೆ ಹೇಗೆ ಆಗುತ್ತಿದೆ, ಯಾವ ತೆರನಾದ ಚಿಕಿತ್ಸೆ ಅದಕ್ಕೆ ಪರಿಣಾಮಕಾರಿ ಆಗಿರುತ್ತದೆ ಎಂಬುದನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಭೂಕಂಪ, ಪರಿಸರ ವಿಕೋಪ ಏನೇ ಆಗಿರಬಹುದು ಅಥವಾ ಬೇರೆ ಯಾವುದೇ ತೆರನಾದ ಸಂಕಟದ ಸಂದರ್ಭಗಳಲ್ಲಿ ಮನುಷ್ಯನ ನೆರವಿಗೆ ಬರುವುದು ವಿಜ್ಞಾನವೇ. ಇಡೀ ಜಗತ್ತು ವಿಜ್ಞಾನದ ದಾರಿಯಲ್ಲಿ ಸಾಗುತ್ತದೆ. ಆದರೆ ಬಹಳಷ್ಟು ಭಾರತೀಯರು ಇಂತಹ ಸಂಕಷ್ಟದ ಸಮಯದಲ್ಲೂ ಮೂಢನಂಬಿಕೆಯ ದಾರಿಯನ್ನೇ ಹಿಡಿಯುತ್ತಾರೆ. ಧಾರ್ಮಿಕ ರೀತಿ ರಿವಾಜುಗಳು, ಅನುಷ್ಠಾನಗಳು, ವ್ರತ ಉಪವಾಸಗಳ ಮುಖಾಂತರ ಸಂಕಷ್ಟಗಳನ್ನು ದೂರಗೊಳಿಸುವ ಉಪಾಯ ಕಂಡುಕೊಳ್ಳುತ್ತಾರೆ.

`ವರ್ಲ್ಡ್ ಎಕನಾಮಿಕ್ಸ್ ಪೇರಮ್’ 2008ರಲ್ಲಿ `ಯಂಗ್‌ ಸೈಂಟಿಸ್ಟ್ ಕಮ್ಯುನಿಟಿ’ ಆರಂಭಿಸಿತ್ತು. ಈಗ 2020ರಲ್ಲಿ ಜಗತ್ತಿನ 14 ದೇಶಗಳ ಒಟ್ಟು 25 ಯುವ ವಿಜ್ಞಾನಿಗಳು ಹೊರಹೊಮ್ಮಿದ್ದಾರೆ. ಅವರು ಸಂಶೋಧನೆಗಳ ಮುಖಾಂತರ ವಿಶ್ವದ ಸನ್ನಿವೇಶವನ್ನೇ ಬದಲಿಸುವ ಕೆಲಸ ಮಾಡಲಿದ್ದಾರೆ. ಒಂದು ವಿಷಯ ಕೇಳಿ ನಿಮಗೆ ಅಚ್ಚರಿಯಾಗಬಹುದು. ಅದೇನೆಂದರೆ, ಈ 25 ವರ್ಷದ ಯುವ ವಿಜ್ಞಾನಿಗಳಲ್ಲಿ 14 ಜನ ಮಹಿಳೆಯರಿದ್ದಾರೆ. ಆದರೆ ಭಾರತೀಯ ಮಹಿಳೆಯರು ಇದರಲ್ಲಿ ಬಹಳ ಹಿಂದೆ ಇದ್ದಾರೆ.

ಮೂಢನಂಬಿಕೆ ಮತ್ತು ಮಹಿಳೆಯರು

ಭಾರತೀಯ ಮಹಿಳೆಯರ ಒಂದು ವಿಷಯ ಜಗಜ್ಜಾಹೀರವಾಗಿದೆ. ಅದೇನೆಂದರೆ, ಅವರು ಬಹಳ ಹಿಂದಿನಿಂದಲೇ ಧರ್ಮ, ಕಂದಾಚಾರ ಹಾಗೂ ಮೂಢನಂಬಿಕೆಗಳ ಸಂಕೋಲೆಯಲ್ಲಿ ಬಂಧಿಸಲ್ಪಟ್ಟಿದ್ದಾರೆ. ಅವರು ಮುಂದಿಡುತ್ತಿರುವ ಹೆಜ್ಜೆಗಳನ್ನು ಧರ್ಮದ ಅಡೆತಡೆಗಳು ಅಡ್ಡಿಪಡಿಸುತ್ತಿವೆ.

ಕ್ರಿಮಿನಲ್ ಸೈಕಾಜಿಸ್ಟ್ ಹಾಗೂ ಸೋಶಿಯಲ್ ವರ್ಕರ್‌ ಅನುಜಾ ಹೀಗೆ ಹೇಳುತ್ತಾರೆ, “ಈ ಅಡ್ಡಿಗಳಿಂದಾಗಿ ಮಹಿಳೆಯರು ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿದ್ದಾರೆಯೇ ಎಂಬ ಬಗ್ಗೆ ಯೋಚಿಸಬೇಕು. ತಮ್ಮನ್ನು ತಾವು ದೈಹಿಕವಾಗಿ, ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಹಾನಿ ಅನುಭವಿಸುವಂತೆ ಮಾಡಿಕೊಳ್ಳುತ್ತಿದ್ದಾರೆಯೇ? ಮೂಢನಂಬಿಕೆಯ ಕಾರಣದಿಂದಾಗಿಯೇ ರಾಮ ರಹೀಮ ಚಿನ್ಮಯಾನಂದ ಹಾಗೂ ಆಸಾರಾಮ್ ರಂತಹ ಅನೇಕರು ಮಹಿಳೆಯರ ವಿಶ್ವಾಸದ ದುರ್ಲಾಭ ಪಡೆದುಕೊಳ್ಳುವಂತಾಯಿತು. ಇದರಿಂದಾಗಿ ಅವರು ತಮ್ಮ ಬ್ಯಾಂಕ್‌ ಬ್ಯಾಲೆನ್ಸ್ನ್ನು ಹೆಚ್ಚಿಸಿಕೊಂಡರು. ಮಹಿಳೆಯರ ಜೀವನದೊಂದಿಗೆ ಆಟ ಆಡಿದರು.

ಭಾರತೀಯ ಮಹಿಳೆಯರಲ್ಲಿ ಹೆಚ್ಚಿನವರು ಓದುಬರಹ ಬಲ್ಲವರಾಗಿಲ್ಲ. ಹೀಗಾಗಿ ಅವರ ಮೆದುಳು ಅಷ್ಟು ಮುಕ್ತವಾಗಿರುವುದಿಲ್ಲ ಹಾಗೂ ಜ್ಞಾನದ ಪರಿಪೂರ್ಣ ಉಪಯೋಗ ಮಾಡಿಕೊಳ್ಳುವುದಿಲ್ಲ. ಮನೆಯಲ್ಲಿ ಅತ್ತೆ ಮಾವ, ಅಕ್ಕಪಕ್ಕದವರು ಆಕೆಗೆ ಮೂಢನಂಬಿಕೆ ಒಪ್ಪಿಕೊಳ್ಳಲು ಒತ್ತಡ ಹೇರುತ್ತಾರೆ. ಆಕೆಗೆ ಅವರನ್ನು ಎದುರಿಸಿ ಮಾತನಾಡುವಷ್ಟು ಧೈರ್ಯ ಇರುವುದಿಲ್ಲ. ಹಾಗಾಗಿ ಎಲ್ಲರ ಮಾತನ್ನು ಒಪ್ಪಿ ಮುನ್ನಡೆಯಲೇಬೇಕಾಗುತ್ತದೆ.

ಅಂದಹಾಗೆ ಮಹಿಳೆಯರು ಬಹುಬೇಗ ಇನ್ನೊಬ್ಬರ ಮಾತಿಗೆ ಕಟ್ಟುಬೀಳುತ್ತಾರೆ. ಇದಕ್ಕೆ ಕಾರಣ ಅವರ ಭಾವನಾತ್ಮಕತೆ. ಅವರನ್ನು ಮೂರ್ಖರನ್ನಾಗಿಸುವುದು ಬಹಳ ಸುಲಭ. ಅವರು ಓದುಬರಹ ಬಲ್ಲವರಾಗಿದ್ದರೂ ಕಂದಾಚಾರ ಮೂಢನಂಬಿಕೆಗಳಿಗೆ ಬಹಳ ಬೇಗ ಈಡಾಗುತ್ತಾರೆ. ನೀವು ಒಂದಿಷ್ಟು ಗಮನಿಸಬೇಕಾದ ಸಂಗತಿಯೆಂದರೆ, ಮಾರುಕಟ್ಟೆ ಮಹಿಳೆಯರ ಬಟ್ಟೆಗಳು ಹಾಗೂ ಆಭರಣಗಳಿಂದ ತುಂಬಿ ತುಳುಕುತ್ತಿರುತ್ತದೆ. ಅದೇ ಪುರುಷರ ಸಾಮಗ್ರಿಗಳು ಅಷ್ಟೊಂದು ಹೆಚ್ಚಿನ ಪ್ರಮಾಣದಲ್ಲಿ ಸಿಗುವುದಿಲ್ಲ. ಮಹಿಳೆಯರು ಮೋಸ್ಟ್ ಕಂಪನಿ ‌ಬೈಯರ್ಸ್‌ ಆಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರಲ್ಲಿ ಬಹಳಷ್ಟು ಪ್ರಮಾಣದಲ್ಲಿ ನಿರೀಕ್ಷೆಯಿರುತ್ತವೆ. ಆಭರಣ, ಬಟ್ಟೆಗಳಂಥ ವಸ್ತುಗಳನ್ನು ಖರೀದಿಸಿ ಅವರು ಇನ್ನಷ್ಟು ಚೆನ್ನಾಗಿ ಕಾಣಲು ಬಯಸುತ್ತಾರೆ. ತಾವು ಧರಿಸಿದ್ದನ್ನು ನೋಡಿ ಸಮಾಜ ತಮ್ಮನ್ನು ಚೆನ್ನಾಗಿ ಸ್ವೀಕರಿಸಬೇಕೆಂದು ಬಯಸುತ್ತಾರೆ. ಆದರೆ ಅದರ ಪರಿಣಾಮ ಬಹಳ ಭೀಕರವಾಗಿರುತ್ತದೆ.

ಭಯವನ್ನುಂಟು ಮಾಡುವ ಮೂಢನಂಬಿಕೆ

ಜೀವನವನ್ನು ಮತ್ತಷ್ಟು ಉತ್ತಮವಾಗಿ ಹೇಗೆ ಜೀವಿಸಬಹುದು, ಮೂಢನಂಬಿಕೆ ಹಾಗೂ ಅದರಿಂದ ಉತ್ಪನ್ನವಾದ ಭಯದಿಂದ ಹೇಗೆ ಮುಕ್ತಿ ಕಂಡುಕೊಳ್ಳುವುದು ಎಂಬ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ. ಮೂಢನಂಬಿಕೆ ನಮ್ಮ ಸಮಾಜದಲ್ಲಿ ಆಳವಾದ ಬೇರುಗಳನ್ನು ಬಿಟ್ಟಿದೆ. ಸ್ತ್ರೀ ಅನಾರೋಗ್ಯ ಪೀಡಿತಳಾಗಿದ್ದಾಳೆ. ಅವಳ ದೇಹದಲ್ಲಿ ಚೈತನ್ಯವೇ ಇಲ್ಲ. ವ್ರತ ಮಾಡಬೇಕಿದೆ. ಕೆಲವೊಂದು ಸಲವಂತೂ ಆಕೆ ದಿನವಿಡೀ ಒಂದೇ ಒಂದು ಹನಿ ನೀರು ಸಹ ಕುಡಿಯುವುದಿಲ್ಲ. ಇದರ ಹಿಂದಿರುವ ರೀತಿ ರಿವಾಜು ಜನರ ಮನಸ್ಸಿನಲ್ಲಿ ಎಂತಹದೊಂದು ಭಯವನ್ನು ಹುಟ್ಟುಹಾಕಿದೆಯೆಂದರೆ, ಮಹಿಳೆ ಉಪವಾಸವ್ರತ ತೊರೆದರೆ ಆಕೆಯ ತಾಳಿಗೆ ಕುತ್ತು ಎಂದು ಹೆದರಿಸುತ್ತಾರೆ.

ಮೂಢನಂಬಿಕೆಯ ಈ ಭಯ ಮಹಿಳೆಯ ಜೀವನಕ್ಕೆ ಬಹುದೊಡ್ಡ ಹೊರೆ ಎಂಬಂತೆ ಪರಿಣಮಿಸುತ್ತದೆ. ಹೀಗಾಗಿ ನಾವು ಯಾವುದೇ ರೀತಿ ರಿವಾಜಿನ ಬಗ್ಗೆ ಮನಸಾರೆ ಗಮನಿಸಬೇಕು. ನಮಗೆ ಸಿಕ್ಕ ಓದಿನಿಂದ ದೊರೆತ ಲಾಭವನ್ನು ಮನನ ಮಾಡಿಕೊಳ್ಳಬೇಕು. ಆಗಲೇ ನಮ್ಮ ಮೆದುಳು ತೆರೆದುಕೊಳ್ಳುತ್ತದೆ. ಆಗಲೇ ನಮಗೆ ಈ ಭಯದಿಂದ ಮುಕ್ತಿ ದೊರಕುತ್ತದೆ.

ಅದೇ ರೀತಿ ಪ್ರಾಕ್ಟಿಕಲ್ ಸಲ್ಯೂಷನ್‌ಹುಡುಕಬೇಕು. ಕುಟುಂಬದ ಖುಷಿಗಾಗಿ ಕೆಲವು ಆಚಾರ ವಿಚಾರಗಳನ್ನು ನಿಭಾಯಿಸಿ. ಆದರೆ ಅದಕ್ಕೆ ಸಂಬಂಧಪಟ್ಟ ಭಯಕ್ಕೆ ಅವಕಾಶ ಕೊಡಬೇಡಿ. ನಿಮ್ಮ ಮೇಲೆ ನಿಮಗೆ ವಿಶ್ವಾಸ ಹುಟ್ಟಲು ಪ್ರಯತ್ನಿಸಿ. ಹೊಸ  ದಾರಿಗಳನ್ನು ಶೋಧಿಸಿ ಯಾವುದೇ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂದಲ್ಲ. ಮನಸ್ಸಿನ ಬಲೆಗೆ ಸಿಲುಕಬೇಡಿ. ಹೃದಯ ನಮಗೆ ಮೂಢನಂಬಿಕೆಯನ್ನು ಒಪ್ಪಿಕೊಳ್ಳಲು ಪ್ರೇರೇಪಿಸುತ್ತದೆ. ಆದರೆ ಮೆದುಳು ನಮಗೆ ಸರಿಯಾದ ದಾರಿಯನ್ನು ತೋರಿಸುತ್ತದೆ. ಹಾಗಾಗಿ ಸರಿಯಾದ ದಾರಿಯನ್ನು ಆಯ್ದುಕೊಳ್ಳಿ.

ಉದಾಹರಣೆಗಾಗಿ ಕೋವಿಡ್‌ನ್ನೇ ತೆಗೆದುಕೊಳ್ಳಿ. ಇಂತಹ ಸಮಯದಲ್ಲಿ ಸಕಾರಾತ್ಮಕವಾಗಿ ಯೋಚನೆ ಇಟ್ಟಕೊಳ್ಳುವುದು ಮುಖ್ಯ. ಎಚ್ಚರಿಕೆ ವಹಿಸುವುದು ಕೂಡ ಅಷ್ಟೇ ಮುಖ್ಯ. ಭಯಪಟ್ಟುಕೊಳ್ಳುವುದು ಸರಿಯಲ್ಲ. ವಿಲ್ ‌ಪವರ್‌ನಿಂದ ಗುಣಮುಖರಾಗುವುದು ಸಾಧ್ಯವಾಗುತ್ತದೆ. ನಿಮ್ಮ ಮೇಲೆ ನೀವು ನಂಬಿಕೆ ಇಡಿ. ಆದರೆ ಮೂಢನಂಬಿಕೆ ಬೇಡ.

ಅವರಿವರ ಮಾತು ಬೇಡ

ನಾವು ಪ್ರಜಾಪ್ರಭುತ್ವ ಸಮಾಜದಲ್ಲಿದ್ದೇವೆ. ನಮಗೆ ಯಾರೊಂದಿಗಾದರೂ ಮನಸ್ಸಿನಲ್ಲಿರುವ ವಿಷಯವನ್ನು ತಿಳಿಸುವ ಹಕ್ಕಿದೆ. ಆದರೆ ಜನರು ಇದರ ದುರ್ಲಾಭ ಪಡೆದುಕೊಳ್ಳಲು ಏನೇನೊ ಹೇಳುತ್ತಾರೆ. ಅದು ಸಂಶೋಧನಾ ಆಧಾರ ಅಲ್ಲಿ ಎಂದು ಯೋಚಿಸಲು ಹೋಗುವುದಿಲ್ಲ. ನಾವು ನಮ್ಮ ಮಾತನ್ನು ಸ್ಟೀರಿಯೋ ಟೈಪ್‌ ಮಾಡಿಬಿಡುತ್ತೇವೆ. ಜನರು ನಮ್ಮ ಮಾತು ಆಲಿಸಬೇಕು, ನಮ್ಮನ್ನು ಜ್ಞಾನಿ ಎಂದು ತಿಳಿಯಬೇಕು ಎಂದು ಬಯಸುತ್ತೇವೆ. ಇದೇ ಮಾತು ನಮ್ಮ ಸಮಾಜ ಹಾಗೂ ರಾಜಕೀಯದ್ದು ಕೂಡ ಆಗಿದೆ.

ಯೋಚಿಸಬೇಕಾದ ಒಂದು ಸಂಗತಿಯೆಂದರೆ, ಓದು ನಮ್ಮನ್ನು ಎಷ್ಟು ತಿಳಿವಳಿಕೆಯುಳ್ಳವರನ್ನಾಗಿ ಮಾಡುತ್ತದೆ ಎಂಬುದು. ನಾವು ಓದಿ ಜ್ಞಾನವನ್ನೇನೊ ಪಡೆದುಕೊಳ್ಳುತ್ತೇವೆ. ಆದರೆ ಅದನ್ನು ಸರಿಯಾದ ಅರ್ಥದಲ್ಲಿ ಗ್ರಹಿಸಿಕೊಳ್ಳದಿದ್ದರೆ ಅದಕ್ಕೆ ಯಾವುದೇ ಅರ್ಥ ಇರುವುದಿಲ್ಲ.

ರಿಸ್ಕ್ ಬೇಕಾಗಿಲ್ಲ

ಜನರು ರಿಸ್ಕ್ ತೆಗೆದುಕೊಳ್ಳಲು ಹೆದರುತ್ತಾರೆ. ಅವರು ಅಪಾಯ ಎದುರಿಸಲು ಇಷ್ಟಪಡುವುದಿಲ್ಲ. ಒಂದು ವಾಸ್ತವ ಸಂಗತಿಯೆಂದರೆ, ಎಲ್ಲಿ ಸಂದೇಹಗಳಿರುತ್ತವೆ, ಅಲ್ಲಿಯೇ ಮೂಢನಂಬಿಕೆಗಳಿರುತ್ತವೆ. ಓದು ಬರಹ ಬಲ್ಲವರಾಗಿದ್ದೂ ಕೂಡ ನೀವು ಮೂಢನಂಬಿಕೆಗೆ ತುತ್ತಾಗಬಹುದು. ಅಂದಹಾಗೆ ನೀವು ಯಾವ ಸಮಾಜದಲ್ಲಿರುತ್ತೀರೊ, ಅಲ್ಲಿ ಮೂಢನಂಬಿಕೆಯುಳ್ಳವರು ಎಷ್ಟು ಜನ ಇರುತ್ತಾರೊ, ಅವರು ನಿಮ್ಮನ್ನು ಮೂಢನಂಬಿಕೆಗೆ ತಳ್ಳಲು ಸಾಕಷ್ಟು ಪ್ರಯತ್ನ ಮಾಡುತ್ತಿರುತ್ತಾರೆ.

ನಿಮಗೆ ಅನಾರೋಗ್ಯ ಉಂಟಾಗಿದೆ, ಮಕ್ಕಳು ಆಗುತ್ತಿಲ್ಲ, ಗಂಡನ ಜೊತೆಗೆ ಜಗಳ ಆಗುತ್ತಿದ್ದರೆ ನಿಮಗೆ ಜನರಿಂದ ಸಲಹೆಗಳು ದೊರೆಯಲು ಶುರುವಾಗುತ್ತದೆ. ಆ ಸ್ವಾಮೀಜಿ ಬಳಿ ಹೋಗು, ಆ ವ್ರತ ಮಾಡು, ಈ ದೇವಸ್ಥಾನಕ್ಕೆ ಹೋಗಿ ಇಂತಹ ಪೂಜೆ ಮಾಡಿಸು ಎಂದು ಅವರಿವರು ಸಾಕಷ್ಟು ಸಲಹೆ ಕೊಡುತ್ತಾರೆ.

ಇಂತಹ ಸಂದರ್ಭದಲ್ಲಿ ನಾವು ವಿವೇಚನೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು. ಶಿಕ್ಷಣ ಹಾಗೂ ಯೋಚನೆ ನಮ್ಮ ವರ್ತನೆಯಲ್ಲಿ ಕಂಡುಬರಬೇಕು. ಮೂಢನಂಬಿಕೆಯುಳ್ಳವರಾಗಿದ್ದು ಅದು ನಿಮ್ಮ ವ್ಯಕ್ತಿತ್ವಕ್ಕೆ ಹಾಗೂ ಕುಟುಂಬಕ್ಕೆ ಹಾನಿಯುಂಟು ಮಾಡುತ್ತಿದ್ದರೆ ಅದು ತಪ್ಪು. ಕಣ್ಮುಚ್ಚಿಕೊಂಡು ಯಾರದ್ದೇ ಮಾತುಗಳನ್ನು ನಂಬಬೇಡಿ. ಮೂಢನಂಬಿಕೆಯುಳ್ಳ ವ್ಯಕ್ತಿ ವಾಸ್ತವದಲ್ಲಿ `ಪ್ಯಾರಾಸೈಟ್‌ಪರ್ಸನಾಲಿಟಿ’ಯವನಾಗಿರುತ್ತಾನೆ. ಆತ ಒಂದೇ ಸಂಗತಿಯ ಮೇಲೆ ವಿಶ್ವಾಸವಿಡುತ್ತಾನೆ. ನೀವು ಹೀಗಾಗಬಾರದು.

ಬಾಬಾಗಳು, ಕಂದಾಚಾರಿಗಳು ವಾಸ್ತವವನ್ನು ಅರಿತುಕೊಳ್ಳಿ. ನೀವು ಸಮಸ್ಯೆಯಿಂದ ಹೊರಬರಲು ಏನು ಮಾಡಬೇಕೊ ಎಂಬುದನ್ನು ಮನಸ್ಸಿನಿಂದ ಯೋಚಿಸಿ. ನಮ್ಮ ಕೋವಿಡ್‌ ಸಮಸ್ಯೆಯಿಂದ ಪಾರಾಗಲು ಹತ್ತು ಹಲವು ದಾರಿಗಳಿರುತ್ತವೆ. ಭಾರತದಲ್ಲಿ ಕೆಲವು ಮಹಿಳೆಯರು ಈ ನಿಟ್ಟಿನಲ್ಲಿ ನಮಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.

ಭಾರತದ ಆ ಐವರು ಮಹಿಳೆಯರು ಕೋವಿಡ್‌ನ ನೇತೃತ್ವ ವಹಿಸಿದ್ದು, ಅವರು ವಾರದ ಎಲ್ಲ ದಿನಗಳಲ್ಲೂ ಈ ಯುದ್ಧದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.

ಪ್ರೀತಿ ಸುದಾನ್‌ ಆಂಧ್ರಪ್ರದೇಶ ಕೆಡರ್‌ನ 1983ರ ಐಎಎಸ್‌ಅಧಿಕಾರಿ ಪ್ರೀತಿ ಸುದಾನ್‌ ರಾತ್ರಿ ತಡವಾಗಿ ತಮ್ಮ ಕಛೇರಿಯಿಂದ ಹೊರಗೆ ಬರುತ್ತಾರೆ. ಅವರು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ. ಅವರು ರೋಗ ತಡೆಗಟ್ಟಲು ಸರ್ಕಾರದ ನಿಯಮಗಳನ್ನು ಜಾರಿಗೊಳಿಸಲು ಎಲ್ಲ ಇಲಾಖೆಗಳ ಜೊತೆ ಸಮನ್ವಯ ಮಾಡುವ ಕೆಲಸ ಮಾಡುತ್ತಾರೆ. ಅವರು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಿದ್ಧತೆಗಳ ಬಗ್ಗೆ ನಿಯಮಿತವಾಗಿ ಸಮೀಕ್ಷೆ ಮಾಡುತ್ತಾರೆ.

– ಡಾ. ನಿವೇದಿತಾ ಗುಪ್ತ

ಇಂಡಿಯನ್‌ ಕೌನ್ಸಿಲ್ ‌ಆಫ್‌ ಮೆಡಿಕಲ್ ರಿಸರ್ಚ್‌ನ ಹಿರಿಯ ವಿಜ್ಞಾನಿಯಾಗಿರುವ ಡಾ. ನಿವೇದಿತಾ ದೇಶಕ್ಕಾಗಿ ಚಿಕಿತ್ಸೆ ಮತ್ತು ಪರೀಕ್ಷೆಯ ಪ್ರೊಟೊಕಾಲ್ ‌ಸಿದ್ಧಪಡಿಸುವಲ್ಲಿ ವ್ಯಸ್ತರಾಗಿರುತ್ತಾರೆ.

ರೇಣು ಸ್ವರೂಪ್

ಅವರು ಕಳೆದ 30 ವರ್ಷಗಳಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಡಿಬಿಟಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಏಪ್ರಿಲ್ ‌ರ ತನಕ ಅವರಿಗೆ ವಿಜ್ಞಾನಿಯಾಗಿ `ಎಚ್‌’ ದರ್ಜೆ ಹುದ್ದೆ ದೊರಕಿದೆ. ಅದು ತಜ್ಞ ವಿಜ್ಞಾನಿಯಾಗಿರುವುದರ  ಸಂಕೇತ. ಆ ಬಳಿಕ ಅವರನ್ನು ಕಾರ್ಯದರ್ಶಿ ಹುದ್ದೆಗೆ ನೇಮಿಸಲಾಯಿತು. ರೇಣು ಈಗ ಕೊರೋನಾ ವೈರಸ್‌ ವ್ಯಾಕ್ಸಿನ್‌ ತಯಾರಿಸುವುದರಲ್ಲಿ ನಿರತರಾಗಿದ್ದಾರೆ.

ಪ್ರಿಯಾ ಅಬ್ರಹಾಂ

ಅವರು ಈಗ ನ್ಯಾಶನಲ್ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿಯ ನೇತೃತ್ವ ವಹಿಸಿದ್ದಾರೆ. ಅದು ಐಸಿಎಂಆರ್‌ಗೆ ಸಂಬಂಧಿಸಿದ್ದಾಗಿದೆ. ಎನ್‌ಐವಿ ಆರಂಭದಲ್ಲಿ ಕೋವಿಡ್‌ಗಾಗಿ ದೇಶದ ಏಕೈಕ ಪರೀಕ್ಷಾ ಕೇಂದ್ರವಾಗಿತ್ತು.

ಮೀರಾ ರಾಜೇಶ್

ತಮಿಳುನಾಡಿನ ಆರೋಗ್ಯ ಕಾರ್ಯದರ್ಶಿಯಾಗಿ ಅವರು ಸವಾಲನ್ನು ಸ್ವೀಕರಿಸುವಲ್ಲಿ ಮುಂದಿದ್ದರು. ವೈರಸ್‌ ಯಾರನ್ನಾದರೂ ಭಾದಿಸಬಹುದು ಎಂಬ ಕಾರಣಕ್ಕೆ ಅವರನ್ನು ಆ ಹುದ್ದೆಗೆ ಆಯ್ಕೆ ಮಾಡಲಾಗಿತ್ತು. ಪರಸ್ಪರರ ಬಗ್ಗೆ ಸಂವೇದನಾಶೀಲರಾಗಿರಿ ಹಾಗೂ ಕೋವಿಡ್‌ ವಿರುದ್ಧದ ಯುದ್ಧದಲ್ಲಿ ಜಯಶಾಲಿಗಳಾಗಬೇಕು ಎಂದು ಹೇಳುತ್ತಿದ್ದರು. ಆ ಬಳಿಕ ಅವರನ್ನು ಆರೋಗ್ಯ ಸಚಿವಾಲಯದಿಂದ ವಾಣಿಜ್ಯ ತೆರಿಗೆ ಹಾಗೂ ರಿಜಿಸ್ಟ್ರೇಶನ್‌ ವಿಭಾಗದ ಕಾರ್ಯದರ್ಶಿಯಾಗಿ ನೇಮಿಸಲಾಯಿತು.

– ಶ್ರೀಲತಾ  

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ