`ಓಹ್‌ ಮೈ ಗಾಡ್‌' ಸಿನಿಮಾದಲ್ಲಿ ದೇವರನ್ನು ತಮಾಷೆ ಮಾಡಿದ್ದಕ್ಕಾಗಿ ಭಾರಿ ಗೊಂದಲವೇ ಉಂಟಾಗಿತ್ತು. ಈ ಚಿತ್ರದಲ್ಲಿ ಪರೇಶ್‌ರಾವ್ ಪಾತ್ರಧಾರಿಯು ದೇವಿ ಪ್ರಕೋಪ ಅಂದರೆ ಭೂಕಂಪದಿಂದ ಆದ ಹಾನಿಗಾಗಿ ದೇವರ ಮೇಲೆಯೇ ಮೊಕದ್ದಮೆ ದಾಖಲಿಸುತ್ತಾನೆ. ಅಷ್ಟೇ ಅಲ್ಲ, ದೇವರ ಅಸ್ತಿತ್ವ ಮತ್ತು ಶಕ್ತಿಗಳ ಕುರಿತಾಗಿಯೂ ಧರ್ಮದ ಪೊಳ್ಳುತನ ಹಾಗೂ ಅದರ ಪ್ರಚಾರಕರನ್ನು ಫಜೀತಿಗೀಡು ಮಾಡುತ್ತಾನೆ.

ಇದಂತೂ ಸಿನಿಮಾದ ಮಾತು. ವಾಸ್ತವದಲ್ಲೂ ಹೀಗಾಗಿದ್ದರೆ ದೇವರಿದ್ದಾನೆಂದು ಹೇಳಲಾಗುವ ದೇವಾಲಯಗಳು, ಆಶ್ರಮಗಳು, ತೀರ್ಥ ಸ್ಥಳಗಳು ಹಾಗೂ ರಥಯಾತ್ರೆಯ ಸಂದರ್ಭದಲ್ಲಿ ನಡೆದ ದುರ್ಘಟನೆಗಳಿಗೆ ಅವನ ಮೇಲೆ ಮೊಕದ್ದಮೆ ಹೂಡಬಹುದಿತ್ತು. ಆದರೆ ಹಾಗಾಗುವುದಿಲ್ಲ. ಧಾರ್ಮಿಕ ಸ್ಥಳಗಳಲ್ಲಿ ಮುಗ್ಧ ಜನರು ನೂಕುನುಗ್ಗಲಿಗೆ ಸಿಕ್ಕಿ ಸಾಯುತ್ತಿರುವುದನ್ನು ನೋಡಿದರೆ ಇವರಿಗೆ ನ್ಯಾಯವಂತೂ ಸಿಗಲೇಬೇಕು ಎನಿಸುತ್ತದೆ.

ಯಾರು ಈ ಘಟನೆಗೆ ಹೊಣೆಯಾಗಿರುತ್ತಾರೊ, ಅವರಿಗೆ ಶಿಕ್ಷೆ ನೀಡಬೇಕು. ಅಂದರೆ ದೇಗುಲದ ಪೂಜಾರಿ, ದೇವರ ಹೆಸರಿನಲ್ಲಿ ಕೋಟ್ಯಂತರ ರೂ.ಗಳ ದಾನವನ್ನು ಜೇಬಿಗಿಳಿಸುತ್ತಿರುವ ಟ್ರಸ್ಟಿಗಳು ಹಾಗೂ ಧರ್ಮದ ಲಾಭ ಹೊಡೆಯುತ್ತಿರುವ ಧರ್ಮಪ್ರಚಾರಕರು ಇವರೆಲ್ಲರನ್ನು ಕೋರ್ಟಿಗೆಳೆಯಬೇಕು.

ಯಾವ ರೀತಿ ಯೋಜನಾಬದ್ಧವಾಗಿ ನಡೆಸುವ ಸ್ಛೋಟದ ಪ್ರಕರಣಗಳು ಹಾಗೂ ಗಲಭೆಗಳಲ್ಲಿ ಮುಗ್ಧರು ಜೀವ ಕಳೆದುಕೊಳ್ಳುತ್ತಾರೊ, ಅದೇ ರೀತಿ ಆಗಾಗ ದೇವಾಲಯಗಳಲ್ಲಿ ನೂಕುನುಗ್ಗಲಿಗೆ ಸಿಕ್ಕಿ ಅನೇಕರು ಪ್ರಾಣ ಕಳೆದುಕೊಳ್ಳುತ್ತಾರೆ. ಕಳೆದ ವರ್ಷ ಮಥುರಾದ ಬರ್ಸಾನಾ, ದೇವಘರ್‌, ಕಾನ್‌ಪುರದ ಮಂದಿರಗಳಲ್ಲಿ ಉಂಟಾದ ನೂಕು ನುಗ್ಗಲಿನಿಂದಾಗಿ ಎಷ್ಟೋ ಜನ ಕಾಲ್ತುಳಿತಕ್ಕೆ ಸಿಕ್ಕಿ ಸತ್ತುಹೋದರು. ಈ ಮೂರು ಘಟನೆಗಳು ಅದೆಷ್ಚೋ ಕುಟುಂಬಗಳನ್ನು ನಿರ್ಗತಿಕರನ್ನಾಗಿ ಮಾಡಿದವು.

ಭಾರತದಲ್ಲಿ ಪ್ರತಿ ವರ್ಷ ರಸ್ತೆ ಅಪಘಾತ, ಪರಸ್ಪರ ಹೊಡೆದಾಟ, ಭಯೋತ್ಪಾದನಾ ಚಟುವಟಿಕೆಗಳಿಂದ ಎಷ್ಟು ಜನ ಸಾಯುತ್ತಾರೋ, ಅದಕ್ಕಿಂತಲೂ ಹೆಚ್ಚು ಜನ ಧರ್ಮದ ಹೆಸರಿನಲ್ಲಿ ಸಾವಿಗೀಡಾಗುತ್ತಿದ್ದಾರೆ. ದೇವಸ್ಥಾನಗಳಲ್ಲಿ ನಡೆದ ಕಾಲ್ತುಳಿತದಲ್ಲಿ 16 ಜನ, ಕೇರಳದ ಅಯ್ಯಪ್ಪ ದೇಗುಲದಲ್ಲಿ 102 ಜನ, ಭಕ್ತಿಧಾಮದಲ್ಲಿ 63 ಜನ ಮಹಿಳೆಯರು, ಮಕ್ಕಳು ಸತ್ತುಹೋದರು.

ಜೋಧಪುರದ ಚಾಮುಂಡಾ ದೇವಿಯ ಮಂದಿರದಲ್ಲಿ ನಡೆದ ನೂಕುನುಗ್ಗಲಿನಲ್ಲಿ 250 ಜನ, ಹಿಮಾಚಲಪ್ರದೇಶದ ನೈನೈದೇವಿ ಮಂದಿರದಲ್ಲಿ 162 ಜನ, ಮಹಾರಾಷ್ಟ್ರದ ಮಾದ್ರಾದೇವಿ ಮಂದಿರದಲ್ಲಿ 340 ಜನ ಕಾಲ್ತುಳಿತಕ್ಕೆ ಸಿಕ್ಕಿ ನಲುಗಿಹೋದರು. ಇವು ಕೆಲವು ಉದಾಹರಣೆಗಳು ಅಷ್ಟೆ. ಈ ದುರ್ಘಟನೆಗಳಿಗೆ ಪೊಲೀಸರು ಹಾಗೂ ಜಿಲ್ಲಾ ಆಡಳಿತವನ್ನು ದೂಷಿಸಿ ಪ್ರಕರಣಗಳನ್ನು ಮುಚ್ಚಿಬಿಡಲಾಯಿತು. ಯಾರ ವಿರುದ್ಧ ಪ್ರಕರಣ ದಾಖಲಾಗಲಿಲ್ಲ, ಶಿಕ್ಷೆಯೂ ಆಗಲಿಲ್ಲ.

ಪೊಲೀಸ್ಇಲಾಖೆಯ ಮೌನ

ಒಂದು ದುಃಖದ ಸಂಗತಿಯೆಂದರೆ, ಸಾಮಾನ್ಯ ಅಪಘಾತ, ಜಗಳ ಅಥವಾ ಭಯೋತ್ಪಾದನಾ ಘಟನೆಗಳಲ್ಲಿ ಪೊಲೀಸರಿಗೆ ತಕ್ಷಣವೇ ಕ್ರಮ ತೆಗೆದುಕೊಳ್ಳಲು ಆರೋಪಿಗಳಿರುತ್ತಾರೆ. ಆದರೆ ಮಂದಿರ ಅಥವಾ ತೀರ್ಥಸ್ಥಳಗಳಲ್ಲಿ ಸಂಭವಿಸಿದ ಘಟನೆಗಳನ್ನು `ದೇವರ ಇಚ್ಛೆ' ಎಂದು ತಿಳಿದು ಅದನ್ನು ಮುಚ್ಚಿ ಹಾಕಲಾಗುತ್ತದೆ. ಧರ್ಮದ ವ್ಯಾಪಾರಿಗಳು ಈ ಘಟನೆಯ ಕುರಿತಂತೆ ದೇವರಿಗೆ ಶಿಕ್ಷೆ ಕೊಡಲು ಸಾಧ್ಯವೇ ಇಲ್ಲ ಎಂಬುದನ್ನು ಚೆನ್ನಾಗಿ ಅರಿತಿರುತ್ತಾರೆ. ಇನ್ನುಳಿದಂತೆ ದೇವಸ್ಥಾನದ ಪೂಜಾರಿ, ಪುರೋಹಿತರು ದೇವರ ಏಜೆಂಟರುಗಳು. ಹೀಗಾಗಿ ಅವರ ಅಪರಾಧಗಳನ್ನು `ಮಾಫ್‌' ಮಾಡಲಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ