ಇಂದಿನ ದಿನಗಳಲ್ಲಿ ಸಂಗೀತ ಕ್ಷೇತ್ರ ಸಹ ಇತರೆ ಎಲ್ಲಾ ಕ್ಷೇತ್ರಗಳಂತೆಯೇ ವೇಗವಾಗಿ ಬೆಳೆಯುತ್ತಿದೆ. ಉದಯೋನ್ಮುಖ ಗಾಯಕರು, ವಾದ್ಯಗಾರರೂ ನಮ್ಮ ನಡುವೆ ಪ್ರಕಟವಾಗುತ್ತಿದ್ದಾರೆ. ಹೊಸ ಪ್ರಯೋಗಗಳೊಂದಿಗೆ ಹಳೆಯ ಸಾಂಪ್ರದಾಯಿಕತೆಯೂ ಸೇರಿಕೊಂಡಿರುವ ಅವರ ಹಾಡುಗಾರಿಕೆ ಹಾಗೂ ಪಕ್ಕವಾದ್ಯ ಸಂಗೀತಗಳು ಸಹೃದಯ ಮನಸ್ಸುಗಳಿಗೆ ಆನಂದದ ರಸಾನುಭೂತಿಯನ್ನು ಉಂಟು ಮಾಡುತ್ತದೆ. ಇಂತಹ ಹಲವಾರು ಸಂಗೀತ ಕಲಾವಿದರ ಪೈಕಿ ವಿ. ನಳಿನಾ ಮೋಹನ್‌ಅವರೂ ಒಬ್ಬರು. ಪದ್ಮಭೂಷಣ ಡಾ. ಆರ್‌.ಕೆ. ಶ್ರೀಕಂಠನ್‌ ಅವರ ಶಿಷ್ಯೆಯಾಗಿದ್ದು ದೇಶ ವಿದೇಶಗಳಲ್ಲಿ ತಮ್ಮ ಪಿಟೀಲು ವಾದನದ ಮೂಲಕ ಮನೆ ಮಾತಾಗಿದ್ದಾರೆ. ಆಕಾಶವಾಣಿ ಹಾಗೂ ದೂರದರ್ಶನದ `ಎ' ದರ್ಜೆಯ ಸಂಗೀತಾಗಾರರೂ ಆದ ನಳಿನಾ ಮೋಹನ್‌ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿನಲ್ಲಿ ಇಪ್ಪತ್ತಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತರಾದರೆಂದರೆ ಅಚ್ಚರಿ ಆಗದೆ ಇರದು.

ಅಮೆರಿಕಾ, ಕೆನಡಾ ಫ್ರಾನ್ಸ್, ಶ್ರೀಲಂಕಾ ದೇಶಗಳಲ್ಲಿ ಅನೇಕ ಬಾರಿ ಪ್ರವಾಸ ನಡೆಸಿ ಸಾಕಷ್ಟು ಸಂಖ್ಯೆಯಲ್ಲಿ ಕಚೇರಿ ನಡೆಸಿರುವ ನಳಿನಾ ಅವರು ಪಿಟೀಲು ವಾದನದಲ್ಲಿ ತಮ್ಮದೇ ಆದ ಶೈಲಿಯನ್ನು ರೂಢಿಸಿಕೊಂಡಿದ್ದಾರೆ. ಭಾವಪೂರ್ಣವಾದ, ಉತ್ಕೃಷ್ಟವಾದ ಇವರ ಪಿಟೀಲು ವಾದನ ಸಂಗೀತ ಪ್ರೇಮಿಗಳ, ವಿದ್ವಾಂಸರ ಮೆಚ್ಚುಗೆಗೆ ಪಾತ್ರವಾಗಿದೆ. ಪಿಟೀಲು ತನಿ ಕಚೇರಿ ನೀಡುವುದರಲ್ಲಿಯೂ ಪ್ರೌಢಿಮೆಯನ್ನು ಸಾಧಿಸಿರುವ ಇವರು, ಇಂದು ರಾಷ್ಟ್ರದ ಅತ್ಯಂತ ಬೇಡಿಕೆಯ ಪಕ್ಕವಾದ್ಯಗಾರ್ತಿಯಾಗಿದ್ದಾರೆ. ಇಂತಹ ಪ್ರತಿಭಾವಂತ ಸಂಗೀತ ಕಲಾವಿದೆಯೊಂದಿಗೆ `ಗೃಹಶೋಭಾ' ನಡೆಸಿದ ವಿಶೇಷ ಸಂದರ್ಶನದ ಪೂರ್ಣ ವಿವರನ್ನು ಕೆಳಗೆ ನೀಡಲಾಗಿದೆ.

ನಿಮಗೆ ಪಿಟೀಲು ಕಲಿಯಲು ಆಸಕ್ತಿ ಹೇಗೆ ಹುಟ್ಟಿತು? ಬಾಲ್ಯದ ದಿನಗಳಲ್ಲಿಯೇ ಕುರಿತು ಆಲೋಚಿಸಿದ್ದಿರಾ? ನಾನು ಆಗ ಚೆನ್ನಪಟ್ಟಣದಲ್ಲಿದ್ದೆ. ನಮ್ಮದು ಸಂಪ್ರದಾಯಸ್ಥ ಮನೆತನ. ನನ್ನ ತಾಯಿ ರಾಜಲಕ್ಷ್ಮಿ ಪುರಾಣಿಕ್‌ ಅವರೂ ಕೂಡ ಹಾರ್ಮೋನಿಯಂ ನುಡಿಸುತ್ತಿದ್ದರು. ಖ್ಯಾತ ಸಂಗೀತಗಾರರಾಗಿದ್ದ ಬಿಡಾರಂ ಕೃಷ್ಣಪ್ಪನವರ ಶಿಷ್ಯರಾದ ಕೊಳ್ಳೇಗಾಲದ ಎಂ.ಡಿ. ನಾರಾಯಣಸ್ವಾಮಿಯವರಿಂದ ಹಾರ್ಮೋನಿಯಂ ಹಾಗೂ ಸಂಗೀತವನ್ನು ಅಭ್ಯಾಸ ಮಾಡಿದ್ದರು. ಇನ್ನು ನನ್ನ ತಂದೆ ಸಹ ಸಾಮೀದ ಪಾರಂಗತರಾಗಿದ್ದ ವೆಂಕಟರಾಮ ಪುರಾಣಿಕ್‌. ಹೀಗಾಗಿ ಮನೆಯಲ್ಲಿ ಸಂಗೀತಮಯ ವಾತಾವರಣವೇ ಇತ್ತು. ಆಗ ನನ್ನ ಅಕ್ಕ ಭಾಗ್ಯಲಕ್ಷ್ಮಿ ಸಹ ಸಂಗೀತದ ಅಭ್ಯಾಸ ನಡೆಸುತ್ತಿದ್ದರು. ಅವರ ಸಂಗೀತಾಭ್ಯಾಸವನ್ನು ನೋಡಿ ನನಗೂ ಸಂಗೀತ ಕಲಿಯಬೇಕೆನ್ನುವ ಆಸಕ್ತಿ ಮೂಡಿತ್ತು. ನಾನೂ ಸಂಗೀತದ ಅಭ್ಯಾಸದಲ್ಲಿ ತೊಡಗಿದೆ. ನಂತರದ ದಿನಗಳಲ್ಲಿ ನಮ್ಮ ಕುಟುಂಬ ಬೆಂಗಳೂರಿನಲ್ಲಿ ಬಂದು ನೆಲೆಸಿತು. ಪ್ರಾರಂಭದಲ್ಲಿ ನನಗೆ ವೀಣೆ ಕಲಿಯಲು ಆಸಕ್ತಿ ಇತ್ತಾದರೂ ನಮ್ಮ ಮನೆಯಲ್ಲಿ ಅದಕ್ಕೆ ತಕ್ಕ ಪ್ರೋತ್ಸಾಹ ದೊರೆಯಲಿಲ್ಲ. ಸಂಗೀತ ಹಾಡುಗಾರಿಕೆ ಅಭ್ಯಾಸವನ್ನೇ ಮುಂದುವರಿಸುವಂತೆ ತಾಯಿಯವರು ಸೂಚಿಸಿದರು.

ಆನಂತರದಲ್ಲಿ ನನ್ನ ಅಕ್ಕ ಖ್ಯಾತ ಗಮಕ ವಿದ್ವಾನ್‌ ಆದ ಕಡಬ ಸುಬ್ರಹ್ಮಣ್ಯ ಅವರನ್ನು ವಿವಾಹವಾದರು. ನನಗೆ ನನ್ನ ಅಕ್ಕ ಭಾವನವರಿಂದ ಒಳ್ಳೆಯ ಪ್ರೋತ್ಸಾಹ ಸಿಕ್ಕಿತು. ಮನೆಯಲ್ಲಿ ಎಲ್ಲರೂ ಸಂಗೀತವನ್ನೇ ಕಲಿತವರಾದ ಕಾರಣ ಭಾವನವರು ನನಗೆ ಪಿಟೀಲು ಕಲಿಯುವಂತೆ ಸೂಚಿಸಿದರು. ಅವರೇ ನನ್ನನ್ನು ಆರ್‌.ಆರ್‌. ಕೇಶವಮೂರ್ತಿಗಳ ಬಳಿ ಪಿಟೀಲು ಅಭ್ಯಾಸಕ್ಕೆಂದು ಸೇರಿಸಿದರು. ಹೀಗೆ ನನ್ನ ಹದಿನೈದನೇ ವಯಸ್ಸಿನಲ್ಲಿ ಪಿಟೀಲು ವಾದನದ ಅಭ್ಯಾಸ ಪ್ರಾರಂಭವಾಯಿತು. ಸುಮಾರು 8-9 ವರ್ಷಗಳ ಕಾಲ ಆರ್‌.ಆರ್‌. ಕೇಶವಮೂರ್ತಿಯವರ ಬಳಿ ವಿದ್ಯಾಭ್ಯಾಸ ನಡೆಸಿದೆ. ಮುಂದೆ ಗಾನಕಲಾ ಭೂಷಣ ಆನೂರು ಎಸ್‌. ರಾಮಕೃಷ್ಣರವರಲ್ಲಿ ಹೆಚ್ಚಿನ ಶಿಕ್ಷಣ ಪಡೆದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ