ಅಂಗವೈಕಲ್ಯವನ್ನು ದೊಡ್ಡ ಕೊರತೆಯಾಗಿ ಭಾವಿಸದೇ ಧನಲಕ್ಷ್ಮಿ ತಮ್ಮಂತೆಯೇ ಇರುವ ಇತರ ಅನೇಕ ವಿಕಲಚೇತನರಿಗೆ ಹೇಗೆ ಆಸರೆಯಾಗಿ ನಿಂತು ಆತ್ಮವಿಶ್ವಾಸದಿಂದ ಈ ಸಮಾಜವನ್ನು ಎದುರಿಸುತ್ತಿದ್ದಾರೆಂದು ವಿವರವಾಗಿ ತಿಳಿಯೋಣವೇ?

ಹದಿಹರೆಯ.....  ಮನದಲ್ಲಿ ನೂರಾರು ಆಸೆ.... ಸಾವಿರಾರು ಕಲ್ಪನೆ..... ಕನಸನ್ನೆಲ್ಲಾ ನನಸನ್ನಾಗಿಸಿಕೊಳ್ಳುವ ಹಂಬಲ. ಒಬ್ಬೊಬ್ಬರಿಗೂ ಒಂದೊಂದು ರೀತಿಯ ಹಸಿವು. ಪ್ರೀತಿ, ಪ್ರೇಮ, ಪ್ರಣಯ ಎನ್ನುವರು, ಓದಿನ ಹಂಬಲದವರು,  ಹಣ ಗಳಿಕೆ/ಕೆಲಸದ ಹಂಬಲ ಹೀಗೇ ಜೀವನದ ಪ್ರಮುಖ ಘಟ್ಟಗಳೆಡೆಗೆ ಗುರಿ ಸಾಗುತ್ತಿರುತ್ತದೆ. ಆದರೆ ಇದಕ್ಕೂ ಮೀರಿ ಕೆಲವೊಂದು ನಿರ್ಧಾರಗಳನ್ನು ಯುವಜನತೆ ತೆಗೆದುಕೊಂಡಾಗ ಅವರ ಮೇಲೆ ಹೆಮ್ಮೆ ಅಭಿಮಾನ ಹೆಚ್ಚುತ್ತೆ.... ಗೌರವ ಹುಟ್ಟುತ್ತದೆ. ಇಂತಹ ಕಾರ್ಯಕ್ಕಾಗಿ ಅಡಿಯಿಟ್ಟ ಹೆಮ್ಮೆಯ ಯುವತಿ ಧನಲಕ್ಷ್ಮಿ.

ಈಗ್ಗೆ 28 ವರ್ಷದ ಕೆಳಗೆ, ಮಂಡ್ಯದ ಕೆ.ಆರ್‌. ಪೇಟೆಯಲ್ಲಿ ಸರಸ್ವತಿಬಾಯಿ ಹಾಗೂ ರಾಮರಾಯರ ಪುತ್ರಿಯಾಗಿ, ನಾಲ್ಕು ಹೆಣ್ಣುಮಕ್ಕಳ ಪೈಕಿ ಮೂರನೆಯವರಾಗಿ ಜನಿಸಿದರು. ತಂದೆತಾಯಿ ನಾಲ್ಕೂ ಹೆಣ್ಣುಮಕ್ಕಳನ್ನು ಬಹಳ ಪ್ರೀತಿ ಹೆಮ್ಮೆಗಳಿಂದ ಸಾಕತೊಡಗಿದರು. ತಂದೆ ಬೆಳ್ಳಿ ಕಾಯಿನ್‌ ವ್ಯಾಪಾರ ಮಾಡುತ್ತಿದ್ದರು. ತಾಯಿ ಗೃಹಿಣಿ. ಹುಟ್ಟಿದ ಒಂದೂವರೆ ವರ್ಷಕ್ಕೆ ಜ್ವರ ಬಂದಿತು. ಅದು ಪೋಲಿಯೋಗೆ ತಿರುಗಿತು. ಮಗುವನ್ನು 3 ವರ್ಷ ಸತತ ಐಸಿಯುನಲ್ಲಿ ಅಡ್ಮಿಟ್‌ ಮಾಡಿದ್ದಾಯಿತು. ತಂದೆ ತಾಯಿ ಇದ್ದ ಆಸ್ತಿಯನ್ನು ಮಾರಿ ಮಗುವನ್ನು ಉಳಿಸಿಕೊಳ್ಳಲು ಶತಪ್ರಯತ್ನ ಮಾಡಿದ್ದಾಯಿತು. ಮಗುವಿಗಾಗಿ ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ. ಆದರೂ ಮಗು ಆಸ್ಪತ್ರೆಯಿಂದ ಹೊರಬಂದಾಗ ನಾರ್ಮಲ್ ಆಗಿ ಬರಲಿಲ್ಲ. ಪೋಲಿಯೋ ಪೀಡಿತ ಮಗುವಾಗಿ ಹೊರಬಂತು.  ತಂದೆ ತಾಯಿಗೆ ಆಘಾತವೇ ಆಯಿತು.

ಹೆಣ್ಣು ಮಗು ಬೇರೆ.... ಹೇಗೆ ಮುಂದಿನ ಜೀವನ? ಅದರ ಭವಿಷ್ಯ? ಬೆಟ್ಟದಷ್ಟು ಚಿಂತೆ ಮನದಲ್ಲಿ ಮನೆ ಮಾಡಿತು.

10ನೇ ತರಗತಿಯವರೆಗೂ ಮಗುವನ್ನು ಓದಿಸಿ ಬೆಳೆಸಿದರು. ಉತ್ತಮ ಅಂಕಗಳೊಟ್ಟಿಗೆ ಪಾಸಾಗುತ್ತ ಬೆಳೆಯುತ್ತ ಸಾಗಿದರು ಧನಲಕ್ಷ್ಮಿ. ಇವರ ಆತ್ಮೀಯ ಗೆಳತಿ ನಮಿತಾಂಜಲಿ. ಆಕೆಯೂ ಸಹ ಪಾರ್ಷಿಯಲ್ ಬ್ಲೈಂಡ್‌. ಇಬ್ಬರ ಸ್ನೇಹ ಬಹಳ ಗಾಢವಾಗಿತ್ತು. ತಮ್ಮ ಮನದಾಳದ ಮಾತುಗಳನ್ನು ಪರಸ್ಪರ ಶೇರ್‌ ಮಾಡಿಕೊಳ್ಳುತ್ತಿದ್ದರು. ಇಬ್ಬರ ಮನದಾಸೆಯೂ ಒಂದೇ ಆಗಿತ್ತು. ನಾವೀಗ ಅಂಗವಿಕಲರಾಗಿ ಏನೆಲ್ಲಾ ನೋವು ಅನುಭವಿಸುತ್ತಿರುವೆವೋ ನಮ್ಮನ್ನು ಜನ ನೋಡುವ ರೀತಿಯೇ ವಿಭಿನ್ನ. ಅದರಲ್ಲೂ ಹಳ್ಳಿಗಾಡಿನಲ್ಲಂತೂ ಇನ್ನೂ ವಿಭಿನ್ನ.

ಹಾಗಾಗಿ ನಮ್ಮಂತಿರುವ ಹಲವಾರು ಮಕ್ಕಳಿಗೆ ನಾವು ದಾರಿದೀಪವಾಗೋಣವೇ ಎಂದು ಕನಸು ಕಾಣುತ್ತಾ ಕೂರುತ್ತಿದ್ದರು ಈ ಇಬ್ಬರು ಮುಗ್ಧ ಹುಡುಗಿಯರು. ಬಹಳ ಚಿಕ್ಕವಯಸ್ಸಿನಲ್ಲೇ ಈ ಆಸೆಗಳು ಚಿಗುರೊಡೆದದ್ದು ವಿಶೇಷವೇ ಹೌದು. ಅದೊಂದು ದಿನ ಧನಲಕ್ಷ್ಮಿಗೇ ದೊಡ್ಡ ಆಘಾತವೇ ಆಯಿತು. ಮನೆಯಲ್ಲಿನ ಕೆಲವು ಚುಚ್ಚು ಮಾತುಗಳು, ಹಿಂಸೆ ತಾಳಲಾರದೆ ಆತ್ಮೀಯ ಗೆಳತಿ ನಮಿತಾಂಜಲಿ ಆತ್ಮಹತ್ಯೆಗೆ ಶರಣಾದಳು. ಇದರಿಂದ ಧನಲಕ್ಷ್ಮಿ ಅಪಾರ ನೋವು ಅನುಭವಿಸಿದಳು. ಇಂದು ಗೆಳತಿ ದೈಹಿಕವಾಗಿ ನನ್ನೊಂದಿಗಿಲ್ಲ. ಆದರೆ ನನ್ನ ಮನದಲ್ಲಿ ಸದಾ ನೆಲೆಸಿದ್ದಾಳೆ. ಅವಳ ಆಸೆಗಳನ್ನು ಕನಸುಗಳನ್ನು ನಾನು ನೆರವೇರಿಸುತ್ತೇನೆ, ಎನ್ನುತ್ತಾ ಆ ಯಶಸ್ಸಿನ ಹಾದಿಯ ಹಿಂದೆ ಸಾಗುತ್ತಿದ್ದಾರೆ ಧನಲಕ್ಷ್ಮಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ