ಈ ನಗೆಹನಿ ಸುಮಾರು 35-40 ವರ್ಷಗಳಷ್ಟು ಹಳೆಯದು. ಆದರೂ ಇಂದಿಗೂ ಪ್ರಸ್ತುತವಾಗಿದೆ. ಒಂದು ತರಕಾರಿ ಅಂಗಡಿಯಲ್ಲಿ ಆಧುನಿಕ ಪೋಷಾಕು ತೊಟ್ಟ ಒಬ್ಬ ಮಹಿಳೆ ತರಕಾರಿ ಖರೀದಿಸಿ ಬ್ಯಾಗಿನಲ್ಲಿ ಹಾಕಿಕೊಂಡರು. ಅಂಗಡಿಯವಳು, ``ಮೇಡಂ, ನೀವು ತುಂಬಾ ಓದಿದವರಂತೆ ಕಾಣ್ತೀರಿ,'' ಎಂದಳು.

ಆ ಮಹಿಳೆ ಹೆಮ್ಮೆಯಿಂದ, ``ಹೌದು. ನಾನು ಎಂ.ಎ. ಓದಿದ್ದೀನಿ. ನಿನಗೆ ಹೇಗೆ ಗೊತ್ತಾಯ್ತು?'' ಎಂದಳು.

ಅದಕ್ಕೆ ಅಂಗಡಿಯವಳು, ``ನೀವು ಟೊಮೇಟೊ ಮೇಲೆ ಕುಂಬಳಕಾಯಿ ಇಟ್ಟಾಗ್ಲೇ ಗೊತ್ತಾಯ್ತು. ನೀವು ತುಂಬಾ ಓದಿದ್ದೀರೀಂತ,'' ಎಂದಳು.

ಉಚ್ಚ ಶಿಕ್ಷಣ ಪಡೆದವರ ಬುದ್ಧಿಗೆ ಕನ್ನಡಿ ಹಿಡಿಯುವ ಇದು ಕಠೋರ ವ್ಯಂಗ್ಯ ಹೌದು. ಉಚ್ಚ ಶಿಕ್ಷಣ ಪಡೆದ ವ್ಯಕ್ತಿ ಬುದ್ಧಿವಂತನಾಗಿರಲೇ ಬೇಕೆಂದಿಲ್ಲ. ಓದುವವರ ಸಂಖ್ಯೆ ಒಂದೇ ಸಮನೆ ಹೆಚ್ಚುತ್ತಿದೆ. ಈ ಮಾತು ಕೊಂಚ ನೆಮ್ಮದಿ ಕೊಡುತ್ತದೆ. ಆದರೆ ನೆಮ್ಮದಿ ಹಾಳು ಮಾಡುವ ಸಂಗತಿಗಳು ದಿನನಿತ್ಯ ನಡೆಯುವ ಸಣ್ಣಪುಟ್ಟ ದುರ್ಘಟನೆಗಳಿಂದ ಉತ್ಪನ್ನವಾಗುತ್ತವೆ. ಶಿಕ್ಷಿತರಲ್ಲಿ ಯಾವುದಕ್ಕೂ ಸಹನೆ ಇಲ್ಲ.

ಇದಕ್ಕೆ ಏನೇ ಕಾರಣಗಳಿರಲಿ ಅವರಲ್ಲಿ ಅಕಾರಣ ವ್ಯಾಕುಲತೆ ಆಗಾಗ್ಗೆ ಪ್ರದರ್ಶಿತವಾಗುತ್ತಿರುತ್ತದೆ.

ವ್ಯಾಕುಲತೆಯ ಪರಿಣಾಮ

ಕಳೆದ ವರ್ಷದ ಡಿಸೆಂಬರ್‌ನಲ್ಲಿ ನಡೆದ ಒಂದು ದುರ್ಘಟನೆಯಲ್ಲಿ ಜೆಪಿ ಪವರ್‌ ಪ್ಲ್ಯಾಂಟ್‌ನ ಕಾರ್ಯಕಾರಿ ಅಧ್ಯಕ್ಷ ರಾಜೀವ್ ‌ಗೌಡ್‌ರವರು ರೈಲು ಅಪಘಾತದಲ್ಲಿ ನಿಧನರಾದರು. ಅಂದು ರಾಜೀವ್ ‌ಬೀನಾದಿಂದ ಭೂಪಾಲ್‌ಗೆ ಹೋಗಬೇಕಿತ್ತು. ಅವರು ಹವಾ ನಿಯಂತ್ರಿತ ಭೋಗಿಯಲ್ಲಿ ನಿಜಾಮುದ್ದೀನ್‌ನಿಂದ ಹೈದರಾಬಾದ್‌ಗೆ ಹೋಗುವ ಸೌತ್‌ ಎಕ್ಸ್ ಪ್ರೆಸ್‌ನಲ್ಲಿ ರಿಸರ್ವ್ ಮಾಡಿಸಿದ್ದರು.

ರಾಜೀವ್ ‌ಒಬ್ಬ ಮಹತ್ವಪೂರ್ಣ ಹಾಗೂ ವ್ಯಸ್ತ ವ್ಯಕ್ತಿಯಾಗಿದ್ದರೂ ಟ್ರೇನ್‌ನಲ್ಲಿ ತೂಗಾಡಿಕೊಂಡು ಪ್ರಯಾಣಿಸುವ ಅತ್ಯಂತ ಬಾಲಿಶ ನಿರ್ಧಾರ ತೆಗೆದುಕೊಂಡರು. ಅದು ಅವರ ದಿಢೀರ್‌ ಸಾವಿಗೆ ಕಾರಣವಾಯಿತು. ಅವರು ಬೀನಾ ಬದಲು ಅದರ ಮುಂದಿನ ಸ್ಟೇಷನ್‌ ಮಂಡಿ ಬಾಮೌರಾದಲ್ಲಿ ಈ ಟ್ರೇನ್‌ ಹತ್ತಿದ್ದರು. ಮಂಡಿ ಬಾಮೌರಾ ಒಂದು ಪುಟ್ಟ ಸ್ಟೇಷನ್‌ ಆಗಿದ್ದು, ಬೋಗಿಗಳ ಬಗ್ಗೆ ಡಿಸ್‌ಪ್ಲೇ ಇರಲಿಲ್ಲ. ಅಲ್ಲಿ ಟ್ರೇನ್‌ 2 ನಿಮಿಷ ನಿಲ್ಲುತ್ತಿತ್ತು. ಎಷ್ಟು ತಟ್ಟಿದರೂ ಕೋಚ್‌ ತೆರೆಯಲಿಲ್ಲ. ರಾಜೀವ್ ‌ಅವಸರದಲ್ಲಿ ಒಳಗೆ ಕುಳಿತಿದ್ದ ಪ್ರಯಾಣಿಕರು ಬಾಗಿಲು ತೆರೆಯಬಹುದೆಂಬ ಭರವಸೆಯಿಂದ ಬಾಗಿಲಿಗೆ ನೇತಾಡಿದರು.

ಆದರೆ ಒಳಗೆ ಯಾರೂ ಇರಲಿಲ್ಲ. ಏಕೆಂದರೆ ಅದು ಸ್ಪೇರ್‌ ಎ.ಸಿ ಕೋಚ್‌ ಆಗಿದ್ದು ಹೈದರಾಬಾದ್‌ಗೆ ಕಳುಹಿಸಲಾಗುತ್ತಿತ್ತು. ಬೆಳಗ್ಗೆ ಸುಮಾರು ಒಂಬತ್ತೂ ಕಾಲು ಗಂಟೆಗೆ ವಿಪರೀತ ಚಳಿ ಇತ್ತು. ಟ್ರೇನ್‌ನ ಸ್ಪೀಡ್‌ ಹೆಚ್ಚಿದಾಗ ಅವರಿಗೆ ಗಾಬರಿಯಾಯಿತು. ಏಕೆಂದರೆ ಅವರು ಈಗ ಕೆಳಗೆ ದುಮುಕಲೂ ಸಾಧ್ಯವಿರಲಿಲ್ಲ.

ಕೊನೆಗೆ 11 ಕಿ.ಮೀ. ದೂರದವರೆಗೆ ನೇತಾಡಿದ ನಂತರ ಬಾಗಿಲಿನಿಂದ ಅವರ ಕೈ ಜಾರಿ ಅವರು ಟ್ರೇನ್‌ ಕೆಳಗೆ ಬಿದ್ದರು. ಅಲ್ಲೇ ದುರಂತ ಮರಣ ಹೊಂದಿದರು. ಅವರನ್ನು ಬಿಡಲು ಬಂದಿದ್ದ ಅವರ ಸೆಕ್ಯೂರಿಟಿ ಗಾರ್ಡ್‌ ರಾಮ್ ಚಂದ್‌ ಗುರ್ಜರ್‌ ಮಂಡಿ ಬಾಮೌರಾ ರೈಲ್ವೇ ಸ್ಟೇಷನ್‌ನ ಸಹಾಯಕ ಸ್ಟೇಷನ್‌ ಮಾಸ್ಟರ್‌ ಅರವಿಂದ ಕುಮಾರ್‌ ಸಾಹೂರಿಗೆ ತನ್ನ ಯಜಮಾನ ಟ್ರೇನಿಗೆ ನೇತುಬಿದ್ದಿರುವ ಬಗ್ಗೆ ತಿಳಿಸಿದ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ