ಚಿಕ್ಕಮಗಳೂರಿನ ದಿ. ಹಠಯೋಗಿ ಟಿ.ಎನ್‌. ಸಿಂಹರವರ ಮೊಮ್ಮಗಳು ನಿವೇದಿತಾ. ಜನಿಸಿದ್ದು 11.02.1989 ರಲ್ಲಿ ಹೈದರಾಬಾದಿನಲ್ಲಿ. ಹುಟ್ಟುತ್ತಲೇ ಶಸ್ತ್ರಚಿಕಿತ್ಸೆಗೆ ಗುರಿಯಾಗಿ ಮಾನಸಿಕ ಹಾಗೂ ದೈಹಿಕವಾಗಿ ಅಸ್ವಸ್ಥಗೊಂಡಳು. ಈಕೆಗೆ ಶ್ರವಣ, ವಾಚಕ, ಸ್ಪ್ಯಾಸ್ಟಿಕ್‌ ಹಾಗೂ ಬುದ್ಧಿಮಾಂದ್ಯತೆಯ ಕಾರಣ `ವಿಶೇಷ ಅಗತ್ಯವುಳ್ಳ ಮಕ್ಕಳ' ಸಾಲಿಗೆ ಸೇರಬೇಕಾದ ಅನಿವಾರ್ಯತೆ ಉಂಟಾಯಿತು.

28ರ ಹರೆಯದ ನಿವೇದಿತಾರಿಗೆ ಏನೇನೂ ಕಿವಿ ಕೇಳಿಸದು. ಎಡ ಪಾರ್ಶ್ವ ಸ್ವಲ್ಪ ಮಟ್ಟಿಗೆ ಬಲಹೀನವಾಗಿದೆ. ನಿವೇದಿತಾ ಪ್ರಖ್ಯಾತ ಗಾಯಕಿ ರಮಾ ಜಗನ್ನಾಥ್‌ (ಹೆಸರಾಂತ ಆಂಧ್ರ ನಾಟ್ಯ ಕೂಚಿಪುಡಿ ಮತ್ತು ಭರತನಾಟ್ಯ ಕಲಾವಿದರ ನೃತ್ಯಕ್ಕೆ ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ) ಹಾಗೂ ಇ.ಎಸ್‌.ಐ ಕಾರ್ಪೋರೇಷನ್‌, ಬೆಂಗಳೂರು ಕೇಂದ್ರ ಕಛೇರಿಯಲ್ಲಿ ಉದ್ಯೋಗಿಯಾಗಿರುವ ಟಿ.ಎನ್‌. ಜಗನ್ನಾಥರಾವ್‌ರವರ ಜ್ಯೇಷ್ಠ ಪುತ್ರಿ. ನಿವೇದಿತಾ ಜೆ.ಎಸ್‌.ಎಸ್‌. `ಸಹನಾ' ವಿಶೇಷ ಶಾಲೆಯಲ್ಲಿ ತನ್ನ ವಿದ್ಯಾಭ್ಯಾಸವನ್ನು 4ನೇ ತರಗತಿಯವರೆಗೆ ಓದಿದ್ದಾಳೆ. ಇವಳ ಶಾಲೆಯಲ್ಲಿ ದೊರೆತ ಪ್ರೋತ್ಸಾಹದಿಂದ ನಿವೇದಿತಾ ಈ ಹಂತಕ್ಕೆ ತಲುಪಿದ್ದಾಳೆ.

ನಿವೇದಿತಾಗೆ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ನೃತ್ಯದ ಒಲವು ಹಾಗೂ ಆಸಕ್ತಿ. ರಮಾ ಜಗನ್ನಾಥ್‌ ನಿವೇದಿತಾರನ್ನು ತಾವು ಭಾಗಹಿಸುತ್ತಿದ್ದ ನೃತ್ಯ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ನೃತ್ಯವನ್ನು ನೋಡಿ ಹಾಗೂ ಸಹ ನೃತ್ಯದ ಅನುಕರಣೆ ಮಾಡುತ್ತಿದ್ದರು. ಅತ್ತೆ ಸುಭದ್ರಾ ಪ್ರಭು (ದಿ. ಹಠಯೋಗಿ ಟಿ.ಎನ್‌. ಸಿಂಹರ ಮಗಳು) ತಮ್ಮ ಬೆಂಗಳೂರು ನಟರಾಜ ನೃತ್ಯಕಲಾ ಮಂದಿರದಲ್ಲಿ ನೃತ್ಯ ಶಿಕ್ಷಣವನ್ನು 2-3 ವರ್ಷಗಳಿಂದ ನೀಡುತ್ತಾ ಬಂದಿದ್ದಾರೆ.

ನಿವೇದಿತಾ ಚಿಕ್ಕ ವಯಸ್ಸಿನಿಂದಲೂ ನೃತ್ಯಾಭ್ಯಾಸ ನಡೆಸುತ್ತಿರುವ ಸ್ಥಳಕ್ಕೆ ಬಂದು ನೃತ್ಯವನ್ನು ನೋಡಿ ಅದರ ನಕಲು ಮಾಡುತ್ತಿದ್ದರು. ಇದನ್ನು ಗಮನಿಸಿದ ತಾಯಿ ರಮಾ ಜಗನ್ನಾಥ್‌ ಹಾಗೂ ಅತ್ತೆ ಇಬ್ಬರೂ ಉತ್ತೇಜನ ನೀಡಿ ಪ್ರೋತ್ಸಾಹಿಸಿ ಅವಳಲ್ಲಿರುವ ಪ್ರತಿಭೆಯನ್ನು ಬೆಳೆಸಿದರು. 90% ಶ್ರವಣದ ನ್ಯೂನತೆ ಇದ್ದರೂ ಈಕೆ ಹೇಗೆ ನರ್ತಿಸಲು ಸಾಧ್ಯ ಎಂದು ಊಹಿಸಬಲ್ಲಿರಾ? ಈಕೆ ಅತ್ಯಂತ ಭಾವನಪೂರ್ಣಾವಾಗಿ ಎಲ್ಲಾ ಸಹಜ ಮಕ್ಕಳಂತೆ ನರ್ತಿಸಬಲ್ಲರು. ದಿನನಿತ್ಯ ಗಾನದ ನಿನಾದ, ಗೆಜ್ಜೆಯ ಝೇಂಕಾರ ತುಂಬಿರುವಂತಹ ಮನೆಯಲ್ಲಿ ನಿವೇದಿತಾ ಜನಿಸಿರುವುದು ಅವಳ ಅದೃಷ್ಟವೇ ಸರಿ.

ನಿವೇದಿತಾ ದಿನಾಂಕ 2007ರ ಏಪ್ರಿಲ್‌ನಲ್ಲಿ ಭರತನಾಟ್ಯ ರಂಗಪ್ರವೇಶ ಮಾಡಿದರು.

ಇವರ ತಮ್ಮನ ಹೆಸರು ಟಿ.ಜೆ. ಅಜಯ್‌ ಸಿಂಹ, ಸಿ.ಎ. ವ್ಯಾಸಂಗ ಮಾಡುತ್ತಿದ್ದಾರೆ. ಜೆ.ಎಸ್‌.ಎಸ್‌. ಸಹನಾ ವಿಶೇಷ ಶಾಲೆಯ ಅಧ್ಯಾಪಕರ ವರ್ಗದವರ ಸಹಕಾರ, ವಾಕ್‌ ಶ್ರವಣ ಶಿಕ್ಷಕಿ ಇವರುಗಳ ಪ್ರೋತ್ಸಾಹ ಮರೆಯಲು ಅಸಾಧ್ಯ. ನಿವೇದಿತಾರ ಶಾಲೆಯ ಗುರುಗಳು, ಆಕೆಯ ಅತ್ತೆ, ಶಿಕ್ಷಕಿ ಅಂಬುಜಮ್ಮ, ತಾಯಿಯ ಮಾರ್ಗದರ್ಶನ, ಸಾರ್ವಜನಿಕರ ಆಶೀರ್ವಾದ ಮತ್ತು ಭಗವಂತನ ಕೃಪೆ ಎಲ್ಲ ನಿವೇದಿತಾರ ಸಾಧನೆಗೆ ಪ್ರೇರಕ, ಅಂಗೈಕಲ್ಯವನ್ನು ಮೆಟ್ಟಿ ನಿಂತು, ಭರತನಾಟ್ಯದಲ್ಲಿ ಅನನ್ಯ ಸಾಧನೆಯ ಹಾದಿಯತ್ತ ಮುನ್ನುಗ್ಗುತ್ತಿರುವ ನಿವೇದಿತಾರಿಗೆ ಗೃಹಶೋಭಾಳ ಶುಭ ಹಾರೈಕೆಗಳು!

- ಬಿ. ಬಸವರಾಜು

ನಿವೇದಿತಾಗೆ ಸಂದ ಪ್ರಶಸ್ತಿ, ಬಹುಮಾನಗಳು 

ಅಖಿಲ ಭಾರತ ಎಬಿಲಿಟಿ ಉತ್ಸವ 2000, ನವದೆಹಲಿ, ಭರತನಾಟ್ಯದಲ್ಲಿ 2ನೇ ಸ್ಥಾನ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ