ಸಮಸ್ತ ಹಿಂದೂಗಳ ಹೃದಯ ಸಾಮ್ರಾಟ, ಮರ್ಯಾದ ಪುರುಶೋತ್ತಮ, ದಶರಥ ಪುತ್ರ, ಶ್ರೀ ರಾಮಚಂದ್ರ ಪ್ರಭು ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ತ್ರೇತಾಯುಗದಲ್ಲಿ ಸರಯೂ ನದಿ ತಟದ ಅಯೋಧ್ಯೆಯಲ್ಲಿ ಜನಿಸಿದ ದಿನ. ಈ ದಿನವನ್ನು ದೇಶಾದ್ಯಂತ ಭಕ್ತಿಭಾವದಿಂದ, ಶ್ರಧ್ಧಾ ಪೂರ್ವಕವಾಗಿ ಬಹಳ ಸಂಭ್ರಮದಿಂದ ಹಬ್ಬವಾಗಿ ಆಚರಿಸುತ್ತಾರೆ.

ಅಯೋಧ್ಯಾ ನಗರದ ಸೂರ್ಯ ವಂಶ ಇಲ್ಲವೇ ಇಕ್ಷ್ವಾಕು ವಂಶ ಅಥವಾ ರಘು ವಂಶದ ರಾಜ ದಶರಥನಿಗೆ ಕೌಸಲ್ಯೆ, ಸುಮಿತ್ರ ಮತ್ತು ಕೈಕೇಯಿ ಎಂಬ ಮೂವರು ರಾಣಿಯರಿದ್ದರೂ, ಆತನಿಗೆ ಮಕ್ಕಳಾಗದೇ ಹೋದಾಗ, ತನ್ನ ವಂಶೋದ್ಧಾರಕರನ್ನು ಪಡೆಯುವ ಸಲುವಾಗಿ ಆಸ್ಥಾನ ಪುರೋಹಿತರಾದ ವಶಿಷ್ಠ ಮಹರ್ಷಿಗಳ ಆಣತಿಯಂತೆ ಋಷಿ ಋಷ್ಯಶೃಂಗರೊಡನೆ ಸರಯು ನದಿಯ ತಟದಲ್ಲಿ ಪುತ್ರಕಾಮೇಷ್ಟಿ ಯಾಗವನ್ನು ಬಹಳ ಶ್ರದ್ಧೆಯಿಂದ ಮಾಡಿದ್ದಕ್ಕೆ ಭಗವಂತನು ಸಂತೃಷ್ಟಗೊಂಡು ಅಗ್ನಿಯ ಮೂಲಕ ಪಾಯಸ ತುಂಬಿದ್ದ ಪಾತ್ರೆಯನ್ನು ನೀಡಿ ಅದನ್ನು ಆವರ ರಾಣಿಯರಿಗೆ ಸೇವಿಸಲು ತಿಳಿಸುತ್ತಾನೆ. ಅಗ್ನಿ ದೇವರ ಅನುಗ್ರದಂತೆ ಆ ಪಾಯಸವನ್ನು ತನ್ನ ರಾಣಿಯರಿಗೆ ಕೊಟ್ಟ ಪರಿಣಾಮ ಚೈತ್ರ ಮಾಸದ ನವಮಿಯಂದು ಅಥಾತ್ ಚೈತ್ರ ಶುಕ್ಲ ನವಮಿಯಂದು ರಾವಣನ ಸಂಸಾರ ಮಾಡುವ ಸಲುವಾಗಿ ಕೌಸಲ್ಯಾ ದೇವಿಗೆ ಭಗವಾನ್ ವಿಷ್ಣುವಿನ ಹತ್ತು ಅವತಾರಗಳಲ್ಲಿ ಏಳನೇ ಅವತಾರವಾಗಿ ಶ್ರೀರಾಮನ ಜನನವಾಗುತ್ತದೆ. ನಂತರ ಸುಮಿತ್ರಾ ದೇವಿಗೆ ಲಕ್ಷ್ಮಣ ಮತ್ತು ಶತ್ರುಘ್ಞ ಎಂಬ ಮಕ್ಕಳು ಮತ್ತು ಕೈಕೇಯಿಗೆ ಭರತ ಎಂಬ ಪುತ್ರನ ಜನನವಾಗುತ್ತದೆ.

ಬಹಳ ವರ್ಷಗಳ ನಂತರ ಅಯೋಧ್ಯಾ ನಗರಿಗೆ ಶ್ರೀ ರಾಮಚಂದ್ರನ ಮೂಲಕ ವಾರಸುದಾರ ಜನನವಾಗಿದ್ದು ಇದು ಅಧರ್ಮದ ಮೇಲೆ ಧರ್ಮದ ವಿಜಯವನ್ನು ಸೂಚಿಸುತ್ತದೆ ಎಂಬ ನಂಬಿಕೆಯಿಂದ ಅಂದು ಅಯೋಧ್ಯೆ ಇಡೀ ಸಂಗೀತ, ನೃತ್ಯ ಮತ್ತು ವಿವಿಧ ಅಲಂಕರಾಗಳನ್ನೊಳಗೊಂಡ ಭವ್ಯ ರಥೋತ್ಸವಗಳೊಂದಿಗೆ ರಾಮನ ಜನನವನ್ನು ಸಡಗರದಿಂದ ಸಂಭ್ರಮಿಸಿದ್ದರು. ತ್ರೇತಾಯುಗ ಕಳೆದು, ದ್ವಾಪರಯುಗವಾಗಿ ಈಗ ಕಲಿಯುಗದಲ್ಲೂ ಸಹಾ ಅಂದು ರಾಮನ ಜನನ್ವನ್ನು ಸಡಗರದಿಂದ ಸ್ವಾಗತಿಸಿದಂತೆಯೇ ಇಂದಿಗೂ ಸಹಾ ಪ್ರಪಂಚಾದ್ಯಂತ ಮಾಸದ ಒಂಬತ್ತೂ ದಿನಗಳನ್ನು ನವರಾತ್ರಿ ಎಂದು ಉಪವಾಸ ಮಾಡುತ್ತಾ, ಭಕ್ತಿಯಿಂದ ರಾಮನ ಪೂಜೆ ಮತ್ತು ಭಜನೆಗಳನ್ನು ಮಾಡಿ ಒಂಭತ್ತನೆಯ ದಿನ ಅರ್ಥಾತ್ ರಾಮನವಮಿಯಂದು, ಬಾಲ ರಾಮನ ವಿಗ್ರಹಕ್ಕೆ ಸ್ನಾನ ಮಾಡಿಸಿ ಶುಚಿರ್ಭೂತಗೊಳಿಸಿ, ಹೊಸಾ ಬಟ್ಟೆಯನ್ನು ತೊಡಿಸಿ, ತೊಟ್ಟಿಲಲ್ಲಿ ಮಲಗಿಸಿ ವಿವಿಧ ಭಜನೆಗಳು ಮತ್ತು ಕೀರ್ತನೆಗಳನ್ನು ಗಾಯನ ಮಾಡಿದರೆ ಇನ್ನೂ ಕೆಲವೆಡೆ ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮಂತನ ವಿಗ್ರಹಗಳನ್ನು ಒಳಗೊಂಡ ಭವ್ಯ ಮೆರವಣಿಗೆ ಅರ್ಥಾತ್ ಶೋಭಾ ಯಾತ್ರೆಗಳನ್ನು ಮಾಡಲಾಗುತ್ತದೆ

ಕರ್ನಾಟಕದ ಬಹಳಷ್ಟು ಮನೆಗಳಲ್ಲಿ ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯ ಅಂದರೆ ಯುಗಾದಿ ದಿನದಿಂದ ಮುಂದಿನ ಒಂಭತ್ತು ದಿನ ಅಂದರೆ ನವಮಿ, ರಾಮ ನವಮಿಯವರೆಗೆ ಪ್ರತೀ ದಿನ ರಾಮಾಯಣ ಪಾರಾಯಣ ಮಾಡಿ, ನವಮಿ ದಿನದಂದು ರಾಮ ಪಟ್ಟಾಭಿಷೇಕ ಪಾರಾಯಣ ಮಾಡಿ ಬಂಧು ಮಿತ್ರರ ಒಡಗೂಡಿ ರಾಮೋತ್ಸವ ಮಾಡಿ ಹಬ್ಬವನ್ನು ಆಚರಿಸುತ್ತಾರೆ.

ramanavami7

ಉತ್ತರ ಕರ್ನಾಟಕದ ಕಡೆ ರಾಮ ನವಮಿಯಂದು ರಾಮನ ವಿಗ್ರಹವನ್ನು ತೊಟ್ಟಿಲಲ್ಲಿಟ್ಟು ಆರತಿ ಬೆಳಗಿ ಮನೆಯ ಹೆಂಗಳೆಯರೆಲ್ಲರೂ ತೊಟ್ಟಿಲು ತೂಗುವ ಸಂಪ್ರದಾಯವೂ ರೂಢಿಯಲ್ಲಿದೆ.

WhatsApp Image 2020-03-28 at 10.08.24 AM

ಇನ್ನು ದೇವಸ್ಥಾನ ಮತ್ತು ಸಾರ್ವಜನಿಕವಾಗಿ ರಾಮ, ಸೀತೆ, ಲಕ್ಷಣ ಮತ್ತು ಆಂಜನೇಯರನ್ನು ಒಳಗೊಂಡ ರಾಮ ಪಟ್ಟಾಭಿಷೇಕದ ವಿಗ್ರಹವನ್ನೋ ಇಲ್ಲವೇ ಫೋಟೋವನ್ನು ಇಟ್ಟು ಷೋಡಶೋಪಚಾರದಿಂದ ಪೂಜೆಮಾಡಿ ಊರ ತುಂಬಾ ವಿಜೃಂಭಣೆಯಿಂದ ಮೆರವಣಿಗೆ ಮಾಡಿ ನಂತರ ನೆರೆದಿದ್ದ ಎಲ್ಲರಿಗೂ ಪಾನಕ ಕೋಸಂಬರಿ, ಹಣ್ಣಿನ ರಸಾಯನ ಮತ್ತು ಹುಳಿಯವಲಕ್ಕಿ (ಗೊಜ್ಜವಲಕ್ಕಿಯ) ಪ್ರಸಾದ ಹಂಚುವುದರೊಂದಿಗೆ ಸಂಭ್ರಮದಿಂದ ಆಚರಿಸುತ್ತಾರೆ. ಇನ್ನು ಸಂಜೆ ಎಲ್ಲಾ ದೇವಾಲಯಗಳಲ್ಲಿ ರಾಮನ ಭಜನೆ, ಭಕ್ತಿಗೀತೆಗಳು ಇಲ್ಲವೇ ಸಂಗೀತ ಕಾರ್ಯಕ್ರಮದ ಮೂಲಕ ರಾಮನ ಧ್ಯಾನ ಮಾಡುತ್ತಾರೆ.

ramnavami7

ಸಂಗೀತ ಪ್ರಿಯರಿಗಂತೂ ರಾಮ ನವಮಿ ಬಂದಿತೆಂದರೆ ಸಂಗೀತದ ರಸದೌತಣ. ದಕ್ಷಿಣ ಭಾರತದ ಬಹುತೇಕ ದೊಡ್ಡ ನಗರಗಳಲ್ಲಿ ದೊಡ್ಡ ದೊಡ್ಡ ರಾಮನಮಮಿ ಪೆಂಡಾಲ್ ಹಾಕಿಸಿ ರಾಮ ನವಮಿ ಸಂಗೀತ ಕಛೇರಿಗಳು ಕೆಲವು ಕಡೆ ವಾರಗಟ್ಟಲೆ ನಡೆದರೆ, ಹಲವಾರು ಕಡೆ ತಿಂಗಳುಗಟ್ಟಲೆ ಕಛೇರಿ ನಡೆಯುತ್ತದೆ. ಇಂತಹ ಸಭಾ ಕಛೇರಿಗಳಲ್ಲಿ ಹಾಡಲು ಅವಕಾಶ ಸಿಗುವುದೇ ಹೆಮ್ಮೆಯ ಸಂಗತಿ ಎಂದು ತಿಳಿದ ಹೆಸರಾಂತ ಸಂಗೀತಗಾರರು, ಅತ್ಯಂತ ಶ್ರಧ್ಧೆಯಿಂದ ತಿಂಗಳಾನು ಗಟ್ಟಲೆ ತಾಲೀಮ್ ನಡೆಸಿ ಅವಕಾಶ ಸಿಕ್ಕಂದು ಹೃದಯ ಬಿಚ್ಚಿ ಹಾಡುತ್ತಾ , ಸಂಗೀತರಸಿಕರ ಮನಸ್ಸನ್ನು ತಣಿಸುತ್ತಾರೆ. ಮೈಸೂರಿನ ಅರಮಮನೆಯ ಸಂಗೀತ ಕಛೇರಿ ಮತ್ತು ಬೆಂಗಳೂರಿನ ಚಾಮರಾಜಪೇಟೆ ರಾಮ ಸೇವಾ ಮಂಡಳಿಯವರ ರಾಮ ನವಮಿ ಸಂಗೀತ ಕಛೇರಿಗಳು ಹೆಸರುವಾಸಿಯಾಗಿವೆ.

ramnavami8

ಇನ್ನು ಉತ್ತರ ಭಾರತದಲ್ಲಿ ಈ ಒಂಭತ್ತೂ ದಿನಗಳನ್ನು ನವರಾತ್ರಿ ಎಂದು ಕರೆದು ಬಹುತೇಕರು ಒಂಭತ್ತು ದಿನಗಳೂ ಉಪವಾಸ ವ್ರತ (ಬೆಳಗಿನಿಂದ ರಾತ್ರಿಯವರೆಗೂ ಉಪವಾಸ. ರಾತ್ರಿ ಫಲಾಹಾರ ಇಲ್ಲವೇ ಸ್ವಾತಿಕ ಆಹಾರ) ಮಾಡುತ್ತಾ ಅತ್ಯಂತ ಭಕ್ತಿ ಮತ್ತು ಭಕ್ತಿಪೂರ್ವಕವಾಗಿ ಆಚರಿಸುತ್ತಾರೆ. ಇನ್ನು ನಮಮಿಯಂದು ರಾಮನ ಮೂರ್ತಿಗಳನ್ನು ಮತ್ತು ಮಕ್ಕಳಿಗೆ ರಾಮನ ವೇಷಭೂಷಣಗಳನ್ನು ತೊಡಿಸಿ ಬಾರೀ ಅದ್ದೂರಿಯಾಗಿ ನಗರಾದ್ಯಂತ ಬಾಜಾ ಭಜಂತ್ರಿಯೊಂದಿಗೆ ಊರ ತುಂಬಾ ಮೆರವಣಿಗೆ ಮಾಡಿ ಸಂಭ್ರಮಿಸುತ್ತಾರೆ.

ನಮ್ಮ ಬಹುತೇಕ ಹಬ್ಬಗಳು ಮನೆಯ ನಾಲ್ಕು ಗೋಡೆಗಳ ಮಧ್ಯೆ ಕೇವಲ ಕುಟುಂಬಸ್ತರ ಸಮ್ಮುಖದಲ್ಲಿ ಆಚರಿಸಲ್ಪಟ್ಟರೆ, ಗಣೇಶೋತ್ಸವ, ಕನ್ನಡ ರಾಜ್ಯೋತ್ಸವ ಮತ್ತು ರಾಮ ನವಮಿ ಹಬ್ಬಗಳು ಮಾತ್ರ ಇದಕ್ಕೆ ತದ್ವಿರುದ್ದವಾಗಿ ಯಾವುದೇ ಜಾತಿ, ಧರ್ಮ, ಭಾಷೆಗಳ ಗೊಡವೆಯಿಲ್ಲದೆ ಎಲ್ಲರೂ ಒಗ್ಗೂಡಿ ಆಚರಿಸುವ ಹಬ್ಬವಾಗಿದೆ ಎಂದರೆ ತಪ್ಪಾಗಲಾರದು. ಕೂಲಿ ಕಾರ್ಮಿಕರು, ಆಟೋ ಡ್ರೈವರ್ಗಳು ಎಲ್ಲರೂ ತಮ್ಮ ಕೈಲಾದ ಮಟ್ಟಿಗೆ ಹಣ ಸಂಗ್ರಹಣೆ ಮಾಡಿ ರಸ್ತೆ ಬದಿಯಲ್ಲೇ ತಳಿರು ತೋರಣ ಕಟ್ಟಿ ರಾಮನ ಫೋಟೋ ಇಟ್ಟು ಭಕ್ತಿಯಿಂದ ಶ್ರೀರಾಮನ ಪೂಜೆ ಮಾಡುತ್ತಾರೆ. ನಂತರ ಸುಡುವ ಬೇಸಿಗೆಯ ಬಿಸಿಲಿಗೆ ತಂಪು ಮಾಡುವಂತೆ ತಂಪಾದ ಬೇಲದ ಹಣ್ಣಿನ ಪಾನಕ. ಈಗ ಬೇಲದ ಹಣ್ಣು ಯಥೇಚ್ಚವಾಗಿ ಸಿಗದ ಕಾರಣ ನಿಂಬೇಹಣ್ಣು ಇಲ್ಲವೇ ಕರ್ಬೂಜ ಹಣ್ಣಿನ ಪಾನಕ. ಜೊತೆಗೆ ಕೊತ್ತಂಬರಿ, ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿದ ನೀರು ಮಜ್ಜಿಗೆ ಹೇಳಿ ಮಾಡಿಸಿದ ಹಾಗಿರುತ್ತದೆ. ಇದರ ಜೊತೆ ಕಡಲೇ ಬೇಳೆ ಇಲ್ಲವೇ ಹೆಸರು ಬೇಳೆಯ ಜೊತೆಗೆ, ಸೌತೇಕಾಯಿ ಇಲ್ಲವೇ ಕ್ಯಾರೆಟ್ ತುರಿ ಬೆರೆಸಿ ರುಚಿ ಮತ್ತು ಘಂ ಎನ್ನುವ ಸುವಾಸನೆ ಬರಲು ಇಂಗು ಮತ್ತು ತೆಂಗಿನ ಒಗ್ಗರಣೆ ಹಾಕಿದ ಕೊಸಂಬರಿಯನ್ನು ಪ್ರಸಾದ ರೂಪದಲ್ಲಿ ಹಂಚಿ ಸಂಭ್ರಮದಿಂದ ಸಡಗದಿಂದ ರಾಮನವಮಿಯನ್ನು ಎಲ್ಲರೊಡಗೂಡಿ ಆಚರಿಸುವುದನ್ನು ಹೇಳುವುದಕ್ಕಿಂತ ಆ ಆಚರಣೆಯಲ್ಲಿ ಭಾಗಿಯಾಗಿ ಅದನ್ನು ಅನುಭವಿಸಿದರೇ ಸಿಗುವ ಮಜವೇ ಬೇರೆ.

ನಮ್ಮ ಸಹಿಷ್ಣುತೆಯೇ ನಮ್ಮ ದೌರ್ಬಲ್ಯವೆಂದು ತಿಳಿದು ನಮ್ಮ ದೇಶದ ಮೇಲೆ ಹಲವಾರು ವಿದೇಶಿಯರು ಆಕ್ರಮಣ ಮಾಡಿ ನಮ್ಮ ದೇವಾಲಯಗಳು, ಧಾರ್ಮಿಕ ಕೇಂದ್ರಗಳನ್ನು ನಾಶ ಪಡಿಸಿದ್ದಾರೆ ಮತ್ತು ನಮ್ಮ ಸಂಸ್ಕೃತಿಯನ್ನು ಬದಲಾಯಿಸಲು ಪ್ರಯತ್ನಿಸಿ ಸ್ವಲ್ಪ ಮಟ್ಟಿಗೆ ಯಶಸ್ವಿಯನ್ನು ಪಡೆದಿದ್ದಾರೆ. ಅದರೆ ನಮ್ಮ ಸನಾತನ ಸಂಸ್ಕೃತಿಯ ತಳಹದಿ ಸುಭದ್ರವಾಗಿಗುವ ಕಾರಣ ಇಂದಿಗೂ ನಮ್ಮ ಆಚಾರ ವಿಚಾರಗಳು ಸಮಯ ಸಂಧರ್ಭಕ್ಕೆ ತಕ್ಕಂತೆ ಅಲ್ಪ ಸ್ವಲ್ಪ ಬದಲಾಗಿದ್ದರೂ ಮೂಲ ಉದ್ದೇಶದಲ್ಲಿ ಯಾವುದೇ ಬದಲಾವಣೆ ಇಲ್ಲದೆ ಚಾಚೂ ತಪ್ಪದೆ ಆಚರಿಸಿಕೊಂಡು ಬರುತ್ತಿದ್ದೇವೆ.

ಇದೇ 2024ರ ಜನವರಿ 22ರಂದು 500 ವರ್ಷಗಳ ದಾಸ್ಯದ ಸಂಕೋಲೆಯನ್ನು ಕಳಚಿ, ವಿಶ್ವಾದ್ಯಂತ ಇರುವ ಹಿಂದುಗಳ ತನು,‌ ಮನ‌, ಧನಗಳ ಸಹಾಯದಿಂದ ಅಯೋಧ್ಯೆಯಲ್ಲಿ ಭವ್ಯವಾದ ಪ್ರಭು ಶ್ರೀರಾಮಚಂದ್ರನ ಮಂದಿರ ಉದ್ಘಾಟನೆ ಆದ ಮೇಲಂತೂ ನಾಡಿನಾದ್ಯಂತ ರಾಮ ನವಮಿಯ ಆಚರಣೆಗೆ ಮತ್ತೊಂದು ಕಳೆ ಬಂದಿದೆ ಎಂದರೂ ತಪ್ಪಾಗದು. ನಮ್ಮೆಲ್ಲರಿಗೂ ಕಷ್ಟಗಳು ಎದುರಾದಾಗ, ಅದರಿಂದ ನಾವುಗಳು ಹೇಗೆ ಪಾರಾಗಬೇಕು ಎಂಬುವುದಕ್ಕೆ ಪ್ರಭು ಶ್ರೀರಾಮನೇ‌ ನಮೆಗೆಲ್ಲರಿಗೂ ಆದರ್ಶ. ಶ್ರೀ ರಾಮಚಂದ್ರನ ವ್ಯಕ್ತಿತ್ವ ನೋಡಿ ಕಲಿತರೆ ಸಾಕು. ನಾವುಗಳು ಎಂತಹ ಕಷ್ಟಗಳಿಂದಲೂ ಪಾರಾಗಬಹುದಾಗಿದೆ. ವಸುದೈವ ಕುಟುಂಬಕಂ ಅಂದರೆ ಇಡೀ ವಿಶ್ವವೇ ಒಂದು ಕುಟುಂಬ ಎಂಬುದನ್ನು ಜಗತ್ತಿಗೆ ಸಾರಿ ಹೇಳಲು ಇಂತಹ ಹಬ್ಬಗಳು ಮಹತ್ವ ಪೂರ್ಣವಾಗಿವೆ ಎಂದರೂ ತಪ್ಪಾಗದು ಅಲ್ವೇ?

ramanavami9

ಪ್ರಭು ಶ್ರೀ ರಾಮನ 108 ಹೆಸರುಗಳು ಈ ರೀತಿಯಾಗಿವೆ.

          1. ಶ್ರೀರಾಮ
          2. ರಾಮಭದ್ರಾಯ
          3. ರಾಮಚಂದ್ರ
          4. ಶಶ್ವತಾಯ
          5. ರಾಜೀವಲೋಚನಾಯ
          6. ಶ್ರೀಮತೆ
          7. ರಾಜೇಂದ್ರಯ
          8. ರಘುಪುಂಗವಾಯ
          9. ಜನಕಿ ವಲ್ಲಭಯ
          10. ಜೈತ್ರಯ
          11. ಜಿತಾಮಿತ್ರಾಯ
          12. ಜನಾರ್ದನಾಯ
          13. ವಿಶ್ವಮಿತ್ರ ಪ್ರಿಯ
          14. ದಂತಾಯ
          15. ಶರಣಾತ್ರನಾ ತತ್ಪರಾಯ
          16. ಬಲಿಪ್ರಮಥನಾಯ
          17. ವಾಗ್ಮಿನ್
          18. ಸತ್ಯವಾಚೆ
          19. ಸತ್ಯವಿಕ್ರಮಯ
          20. ಸತ್ಯವ್ರತಾಯ
          21. ವ್ರತಾಧರಯ
          22. ಸದಾ ಹನುಮದಾಶ್ರಿತಾಯ
          23. ಕೌಸಲೆಯಾಯ
          24. ಖಾರಧ್ವಂಸಿನ್
          25. ವಿರಾಧವಪಾಂಡಿತಾಯ
          26. ವಿಭೀಷಣ ಪರಿತ್ರತ್ರ
          27. ಕೊದಂಡ ಖಂಡನಾಯ
          28. ಸಪ್ತತಲ ಪ್ರಭೇದ್ರೆ
          29. ದಶಗ್ರೀವ ಶಿರೋಹರಾಯ
          30. ಜಮದ್ಗನ್ಯಾ ಮಹಾದರಪಯ
          31. ತತಕಂತಕಾಯ
          32. ವೇದಾಂತ ಸರಯ
          33. ವೇದತ್ಮನೆ
          34. ಭಾವರೋಗಸ್ಯ ಭೇಷಜಯ
          35. ದುಷನಾತ್ರಿ ಶಿರೋಹಂತ್ರ
          36. ತ್ರಿಮೂರ್ತಾಯ
          37. ತ್ರಿಗುನಾತ್ಮಕಾಯ
          38. ತ್ರಿವಿಕ್ರಮಯ
          39. ತ್ರಿಲೋಕತ್ಮನೆ
          40. ಪುನ್ಯಾಚರಿತ್ರ ಕೀರ್ತನಾಯ ನಮಹ
          41. ತ್ರಿಲೋಕರಾಕ್ಷಕಾಯ
          42. ಧನ್ವೈನ್
          43. ದಂಡಕರನ್ಯ ಕಾರ್ತನಾಯ
          44. ಅಹಲ್ಯಾ ಶಾಪ ಶಮಾನಾಯ
          45. ಪಿಟ್ರು ಭಕ್ತಾಯ
          46. ವರ ಪ್ರದಾಯ
          47. ಜಿತೇಂದ್ರಯ್ಯ
          48. ಜಿತಕ್ರೋಧಯ
          49. ಜಿತಾಮಿತ್ರಾಯ
          50. ಜಗದ್ ಗುರವೆ
          51. ರಿಕ್ಷಾ ವನಾರ ಸಂಘಟೈನ್
          52. ಚಿತ್ರಕುಟ ಸಮಾಶ್ರಾಯ
          53. ಜಯಂತ ತ್ರಾನ ವರದಾಯ
          54. ಸುಮಿತ್ರ ಪುತ್ರ ಸೆವತಾಯ
          55. ಸರ್ವಾ ದೇವಧಿ ದೇವಯ
          56. ಮೃತರವನ ಜೀವನಾಯ
          57. ಮಾಯಮರಿಚ ಹಂತ್ರ
          58. ಮಹಾದೇವಯ
          59. ಮಹಾಭುಜಯ
          60. ಸರ್ವದೇವ ಸ್ಟುತಾಯ
          61. ಸೌಮ್ಯಾಯ
          62. ಬ್ರಹ್ಮಣ್ಯ
          63. ಮುನಿ ಸಂಸ್ತುತಾಯ
          64. ಮಹಾಯೋಗಿನ್
          65. ಮಹಾದಾರಾಯ
          66. ಸುಗ್ರಿವೆಪ್ಸಿತಾ ರಾಜಯದೇ
          67. ಸರ್ವ ಪುಣ್ಯಾಧಿ ಕಫಾಲಯ
          68. ಸ್ಮೃತಾ ಸರ್ವಘ ನಶನಾಯ
          69. ಆದಿಪುರುಷಾಯ
          70. ಪರಮಪುರುಷಾಯ
          71. ಮಹಾಪುರುಷಯ
          72. ಪುಣ್ಯೋದಯ
          73. ದಯಾಸರಾಯ
          74. ಪುರಾಣ ಪುರುಷೋತ್ತಮಯ
          75. ಸ್ಮಿತಾ ವಕ್ತ್ರಯ
          76. ಮಿತಾ ಭಾಶೈನ್
          77. ಪೂರ್ವ ಭಶಿನ್
          78. ರಾಘವಾಯ
          79. ಅನಂತ ಗುಣಗಂಭೀರ
          80. ಧಿರೋದತ್ತ ಗುಣತ್ತಮಯ
          81. ಮಾಯಾ ಮನುಷಾ ಚರಿತ್ರಾಯ
          82. ಮಹಾದೇವಡಿ ಪುಜಿತಾಯ
          83. ಸೆತುಕ್ರೈಟ್
          84. ಜೀತಾ ವರಶಾಯೆ
          85. ಸರ್ವ ತೀರ್ಥಮಯ
          86. ಹರಾಯೆ
          87. ಶ್ಯಾಮಂಗಯ
          88. ಸುಂದರಾಯ
          89. ಸುರಾಯ
          90. ಪಿತವಾಸಸ
          91. ಧನುರ್ಧರಾಯ
          92. ಸರ್ವ ಯಜ್ಞಾಧಿಪಯ
          93. ಯಜ್ವಿನ್
          94. ಜರಾಮರಣ ವರ್ಜಿತಾಯ
          95. ವಿಭೀಷಣ ಪ್ರತಿಷ್ಠಾತ್ರ
          96. ಸರ್ವಭಾರಣ ವರ್ಜಿತಾಯ
          97. ಪರಮತ್ಮನೆ
          98. ಪರಬ್ರಹ್ಮನೆ
          99. ಸಚಿದಾನಂದ ವಿಗ್ರಹಯ
          100. ಪರಸ್ಮಾಯಿ ಜ್ಯೋತಿಶೆ
          101. ಪರಸ್ಮಾಯಿ ಧಮ್ನೆ
          102. ಪರಕಾಶಾಯ
          103. ಪರತ್ಪಾರಾಯ
          104. ಪರೇಶಾಯ
          105. ಪರಕಾಯ
          106. ಪಾರಾಯ
          107. ಸರ್ವ ದೇವತ್ಮಕಾಯ
          108. ಪರಸ್ಮಾಯಿ

 

ಏನಂತೀರಿ ?

 

ನಿಮ್ಮವನೇ

ಉಮಾಸುತ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ