ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಕಪ್ ನಮ್ದು ಗುರು ಎಂಬ ಘೋಷಣೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂಜಾಬ್ ತಂಡವನ್ನು 6 ರನ್ಗಳಿಂದ ಸೋಲಿಸುವ ಮೂಲಕ ಆರ್ಸಿಬಿಯು ಹದಿನೆಂಟು ವರ್ಷ, ನೂರಾರು ಆಟಗಾರರು, ಕೋಟ್ಯಂತರ ಅಭಿಮಾನಿಗಳ ಕಾಯುವಿಕೆಯನ್ನು ಅಂತ್ಯಗೊಳಿಸಿದ್ದು, ಚೊಚ್ಚಲ ಬಾರಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.ವಿರಾಟ್ ಕೊಹ್ಲಿ ಅದ್ಭುತ ಆಟ, ಸಾಥ್ ನೀಡಿದ ಬ್ಯಾಟರ್ಗಳು, ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ತೋರಿಸಿದ ಅವರ ಪ್ರದರ್ಶನದ ಫಲವಾಗಿ ಇದೀಗ 18 ವರ್ಷಗಳ ಕನಸು ನನಸಾಗಿದೆ. ಆಟಗಾರರು ಸಂಘಟಿತವಾಗಿ ಅದ್ಭುತ ಪ್ರದರ್ಶನ ತೋರುವ ಮೂಲಕ ಕಪ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ.
ಅದ್ಭುತ ನಾಯಕತ್ವ: ಆರ್ಸಿಬಿಯ ನಾಯಕತ್ವವನ್ನು ಮೊದಲ ಬಾರಿಗೆ ವಹಿಸಿಕೊಂಡಿದ್ದ ರಜತ್ ಪಾಟೀಕರ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಚಾಣಾಕ್ಷತನದಿಂದ ತಂಡವನ್ನು ಮುನ್ನಡೆಸಿದ್ದು, ತಮ್ಮ ಮೊದಲ ನಾಯಕತ್ವದಲ್ಲೇ ತಂಡವು ಚಾಂಪಿಯನ್ ಆಗುವಂತೆ ಮಾಡಿದ್ದಾರೆ. ಕೊಹ್ಲಿ ಹಾಗೂ ಎರಡು ಪಂದ್ಯಗಳಲ್ಲಿ ಕ್ಯಾಪ್ಟನ್ ಆಗಿದ್ದ ಜಿತೇಶ್ ಶರ್ಮಾ ಸಹ ಸಾಥ್ ಅದ್ಭುತವಾಗಿ ಸಾಥ್ ನೀಡಿದ್ದರು.
ಉತ್ತಮ ಫೈಟ್: ಪಂದ್ಯದುದ್ದಕ್ಕೂ ಉತ್ತಮ ಫೈಟ್ ನೀಡಿದ್ದ ಪಂಜಾಬ್ ಕಿಂಗ್ಸ್ ತಂಡವು ಫೈನಲ್ನಲ್ಲಿ ಮೊದಲ ಬಾರಿಗೆ ಟ್ರೋಫಿ ಗೆಲ್ಲುವ ಕನಸನ್ನು ನನಸಾಗಿಸಿಕೊಳ್ಳಲು ವಿಫಲವಾಯಿತು. ಶ್ರೀಯಸ್ ಅಯ್ಯರ್ ನಾಯಕತ್ವ, ಪ್ರಿಯಾಂಶ್ ಆರ್ಯ, ಆರ್ಷ್ದೀಪ್ ಸಿಂಗ್ ಅವರಂತಹ ಯುವ ಪಡೆಯುವಂದಿಗೆ ಉತ್ತಮವಾದ ಫೈಟ್ ನೀಡಿದ್ದರೂ, ಫೈನಲ್ನಲಲ್ಲಿ ಹಿನ್ನಡೆ ಅನುಭವಿಸಿತು.
ಗಡಿ ಮೀರಿದ ಅಭಿಮಾನ: ಮಂಗಳವಾರ ನಡೆದ ಐಪಿಎಲ್ 18ನೇ ಆವೃತ್ತಿಯು ದೇಶ, ರಾಜ್ಯ, ಭಾಷೆಗಳ ಗಡಿ ಮೀರಿ ಜನರನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಯಿತು. ಬೆಂಗಳೂರು, ಪಂಜಾಬ್ ಮಾತ್ರವಲ್ಲ, ಹೊಸದಿಲ್ಲಿ, ಹೈದರಾಬಾದ್, ಚೆನ್ನೈ, ಮುಂಬೈ, ಕೋಲ್ಕತ್ತಾ ಸೇರಿದಂತೆ ದೇಶ ವಿದೇಶಗಳ ಅಭಿಮಾನಿಗಳು ಫೈನಲ್ ಪಂದ್ಯ ವೀಕ್ಷಣೆಗಾಗಿ ಅಹಮದಾಬಾದ್ಗೆ ಲಗ್ಗೆಯಿಟ್ಟಿದ್ದರು. ಮಕ್ಕಳಿಂದ ಹಿಡಿದ ಹಿರಿಯ ನಾಗರಿಕರವರೆಗೂ ಕೋಟ್ಯಂತರ ಮಂದಿ ಟಿವಿ ಮುಂದೆ ಜಮಾಯಿಸಿ, ಆರ್ಸಿಬಿ… ಆರ್ಸಿಬಿ ಎಂಬ ಘೋಷಣೆಗಳು ಮುಗಿಲು ಮುಟ್ಟಿದವು.
ಬಾವುಕರಾದ ಕೊಹ್ಲಿ: 18 ವರ್ಷದ ಬಳಿಕ ಆರ್ಸಿಬಿ ಚೊಚ್ಚಲ ಟ್ರೋಫಿ ಗೆದ್ದ ಸಂತೋಷಕ್ಕೆ ವಿರಾಟ್ ಕೊಹ್ಲಿ ಕಣ್ಣುಗಳಲ್ಲಿ ತುಂಬಿಬಂದವು. ಫೈನಲ್ ಓವರ್ನಲ್ಲಿ ಭಾವುಕರಾದ ಕೊಹ್ಲಿ, ಒತ್ತರಿಸಿ ಬರುತ್ತಿದ್ದ ಕಣ್ಣೀರನ್ನು ತಡೆಯಲ್ಲಿ ಕಷ್ಟಪಟ್ಟರು. ಮ್ಯಾಚ್ ಮುಗಿದು ಮಾದ್ಯಮಗಳಿಗೆ ಪ್ರತಿಕ್ರಿಯಿಸುವಾಗಲೂ ಕೊಹ್ಲಿ ಕಣ್ಣೀರು ಹಾಕಿದರು.