ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಮೊದಲ ಬಾರಿಗೆ ಐಪಿಎಲ್​ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಕಪ್​ ನಮ್ದು ಗುರು ಎಂಬ ಘೋಷಣೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂಜಾಬ್​ ತಂಡವನ್ನು 6 ರನ್​ಗಳಿಂದ ಸೋಲಿಸುವ ಮೂಲಕ ಆರ್​ಸಿಬಿಯು ಹದಿನೆಂಟು ವರ್ಷ, ನೂರಾರು ಆಟಗಾರರು, ಕೋಟ್ಯಂತರ ಅಭಿಮಾನಿಗಳ ಕಾಯುವಿಕೆಯನ್ನು ಅಂತ್ಯಗೊಳಿಸಿದ್ದು, ಚೊಚ್ಚಲ ಬಾರಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.ವಿರಾಟ್​ ಕೊಹ್ಲಿ ಅದ್ಭುತ ಆಟ, ಸಾಥ್​ ನೀಡಿದ ಬ್ಯಾಟರ್​ಗಳು, ಬೌಲಿಂಗ್ ಹಾಗೂ ಬ್ಯಾಟಿಂಗ್​ನಲ್ಲಿ ತೋರಿಸಿದ ಅವರ ಪ್ರದರ್ಶನದ ಫಲವಾಗಿ ಇದೀಗ 18 ವರ್ಷಗಳ ಕನಸು ನನಸಾಗಿದೆ. ಆಟಗಾರರು ಸಂಘಟಿತವಾಗಿ ಅದ್ಭುತ ಪ್ರದರ್ಶನ ತೋರುವ ಮೂಲಕ ಕಪ್​ ಅನ್ನು ತಮ್ಮದಾಗಿಸಿಕೊಂಡಿದ್ದಾರೆ.

ಅದ್ಭುತ ನಾಯಕತ್ವಆರ್​ಸಿಬಿಯ ನಾಯಕತ್ವವನ್ನು ಮೊದಲ ಬಾರಿಗೆ ವಹಿಸಿಕೊಂಡಿದ್ದ ರಜತ್​ ಪಾಟೀಕರ್​ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಚಾಣಾಕ್ಷತನದಿಂದ ತಂಡವನ್ನು ಮುನ್ನಡೆಸಿದ್ದು, ತಮ್ಮ ಮೊದಲ ನಾಯಕತ್ವದಲ್ಲೇ ತಂಡವು ಚಾಂಪಿಯನ್ ಆಗುವಂತೆ ಮಾಡಿದ್ದಾರೆ. ಕೊಹ್ಲಿ ಹಾಗೂ ಎರಡು ಪಂದ್ಯಗಳಲ್ಲಿ ಕ್ಯಾಪ್ಟನ್​ ಆಗಿದ್ದ ಜಿತೇಶ್​ ಶರ್ಮಾ ಸಹ ಸಾಥ್​ ಅದ್ಭುತವಾಗಿ ಸಾಥ್ ನೀಡಿದ್ದರು.

ಉತ್ತಮ ಫೈಟ್ಪಂದ್ಯದುದ್ದಕ್ಕೂ ಉತ್ತಮ ಫೈಟ್​ ನೀಡಿದ್ದ ಪಂಜಾಬ್​ ಕಿಂಗ್ಸ್​ ತಂಡವು ಫೈನಲ್​ನಲ್ಲಿ ಮೊದಲ ಬಾರಿಗೆ ಟ್ರೋಫಿ ಗೆಲ್ಲುವ ಕನಸನ್ನು ನನಸಾಗಿಸಿಕೊಳ್ಳಲು ವಿಫಲವಾಯಿತು. ಶ್ರೀಯಸ್​ ಅಯ್ಯರ್ ನಾಯಕತ್ವ, ಪ್ರಿಯಾಂಶ್​ ಆರ್ಯ, ಆರ್ಷ್​ದೀಪ್​ ಸಿಂಗ್ ಅವರಂತಹ ಯುವ ಪಡೆಯುವಂದಿಗೆ ಉತ್ತಮವಾದ ಫೈಟ್​ ನೀಡಿದ್ದರೂ, ಫೈನಲ್​ನಲಲ್ಲಿ ಹಿನ್ನಡೆ ಅನುಭವಿಸಿತು.

ಗಡಿ ಮೀರಿದ ಅಭಿಮಾನಮಂಗಳವಾರ ನಡೆದ ಐಪಿಎಲ್  18ನೇ ಆವೃತ್ತಿಯು ದೇಶ, ರಾಜ್ಯ, ಭಾಷೆಗಳ ಗಡಿ ಮೀರಿ ಜನರನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಯಿತು. ಬೆಂಗಳೂರು, ಪಂಜಾಬ್​ ಮಾತ್ರವಲ್ಲ, ಹೊಸದಿಲ್ಲಿ, ಹೈದರಾಬಾದ್​, ಚೆನ್ನೈ, ಮುಂಬೈ, ಕೋಲ್ಕತ್ತಾ ಸೇರಿದಂತೆ ದೇಶ ವಿದೇಶಗಳ ಅಭಿಮಾನಿಗಳು ಫೈನಲ್ ಪಂದ್ಯ ವೀಕ್ಷಣೆಗಾಗಿ ಅಹಮದಾಬಾದ್​ಗೆ ಲಗ್ಗೆಯಿಟ್ಟಿದ್ದರು. ಮಕ್ಕಳಿಂದ ಹಿಡಿದ ಹಿರಿಯ ನಾಗರಿಕರವರೆಗೂ ಕೋಟ್ಯಂತರ ಮಂದಿ ಟಿವಿ ಮುಂದೆ ಜಮಾಯಿಸಿ, ಆರ್​ಸಿಬಿ… ಆರ್​ಸಿಬಿ ಎಂಬ ಘೋಷಣೆಗಳು ಮುಗಿಲು ಮುಟ್ಟಿದವು.

ಬಾವುಕರಾದ ಕೊಹ್ಲಿ: 18 ವರ್ಷದ ಬಳಿಕ ಆರ್​ಸಿಬಿ ಚೊಚ್ಚಲ ಟ್ರೋಫಿ ಗೆದ್ದ ಸಂತೋಷಕ್ಕೆ ವಿರಾಟ್​ ಕೊಹ್ಲಿ ಕಣ್ಣುಗಳಲ್ಲಿ ತುಂಬಿಬಂದವು. ಫೈನಲ್ ಓವರ್​ನಲ್ಲಿ ಭಾವುಕರಾದ ಕೊಹ್ಲಿ, ಒತ್ತರಿಸಿ ಬರುತ್ತಿದ್ದ ಕಣ್ಣೀರನ್ನು ತಡೆಯಲ್ಲಿ ಕಷ್ಟಪಟ್ಟರು. ಮ್ಯಾಚ್​ ಮುಗಿದು ಮಾದ್ಯಮಗಳಿಗೆ ಪ್ರತಿಕ್ರಿಯಿಸುವಾಗಲೂ ಕೊಹ್ಲಿ ಕಣ್ಣೀರು ಹಾಕಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ