ಯಶೋದಾ ನಾಗರಾಜ್   ಆಶಾಜ್ಯೋತಿಯ ಸಂಸ್ಥಾಪಕಿ

ಬದುಕಿನಲ್ಲಿ ಎದುರಾಗುವ ಕಷ್ಟಗಳಿಗೆ ಹೆದರದೆ, ಬೇರೆಯವರ ಬದುಕಿಗೂ ದೂರದಿಂದಲೇ ಸ್ಛೂರ್ತಿಯಾಗಬುಹುದು ಎಂಬುದಕ್ಕೆ ಇವರ ಬದುಕಿನ ಪುಟಗಳೇ ಸಾಕ್ಷಿ........!

ಬದುಕೆಂದ ಮೇಲೆ ಕಷ್ಟಗಳು ಇದಿದ್ದೇ. ಬದುಕಿನಲ್ಲಿ ಎದುರಾಗುವ ಇಂತಹ ಕಷ್ಟಗಳಿಗೆ ಕೊರಗದೆ, ಅದನ್ನು ಧೈರ್ಯದಿಂದ ಎದುರಿಸಿ, ಕಷ್ಟವೇ ಕರಗಿ ಹೋಗುವಂತೆ ಬದುಕುವ ಬಗೆ ಹೇಗೆ ಎನ್ನುವುದಕ್ಕೆ ನಿಮಗೊಂದು ನಿದರ್ಶನ ಬೇಕೆಂದರೆ, ನೀವೊಮ್ಮೆ ಬೆಂಗಳೂರಿನ ಯಶೋದಾ ನಾಗರಾಜ್‌ ರ ಪುಟಗಳನ್ನು ಓದಬೇಕು.

ಹೌದು, ಯಶೋದಾ ನಾಗರಾಜ್‌ ತಮ್ಮ ಪತಿ ನಾಗರಾಜ್‌ ರಿಗೆ ಅಂಟಿದ್ದ ಕುಡಿತದ ಚಟವನ್ನು ಬಿಡಿಸಿದ್ದೇ ಒಂದು ಸಾಹಸದ ಕಥೆಯಾದರೆ, ಆನಂತರ ಕುಡಿತದಿಂದ ಹೊರಬಂದ ನಾಗರಾಜ್‌ಮದ್ಯವ್ಯಸನ ಮುಕ್ತ ಕೇಂದ್ರವನ್ನು ಆರಂಭಿಸಿದ್ದು, ಅದಕ್ಕೆ ಯಶೋದಾ ಜೊತೆಯಾದದ್ದು, ಸಾವಿರಾರು ಜನರನ್ನು ಕುಡಿತದಿಂದ ಹೊರತಂದಿದ್ದು, ಈ ನಡುವೆ ಕಾಣಿಸಿಕೊಂಡ ಸ್ತನ ಕ್ಯಾನ್ಸರ್ ನ್ನು ಕೂಡಾ ಮಣಿಸಿ ಹೊಸ ಹೆಜ್ಜೆ ಇಟ್ಟು, ಮಾಡುತ್ತಿದ್ದ  ಕೆಲಸದಿಂದ ಸ್ವಂತ ನಿವೃತ್ತಿ ಪಡೆದುಕೊಂಡು ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡರು.

ಯಶೋದಾ ನಾಗರಾಜ್‌ ಮೂಲತಃ ಬೆಂಗಳೂರಿನವರು. 1983ರಲ್ಲಿ  ಡಿ. ಫಾರ್ಮಾ ಮುಗಿಸಿದ ಕೂಡಲೇ ಕನನಕಪುರ ಸಮೀಪದ ಟಿ. ಹೊಸಹಳ್ಳಿಯ ಗೌರವಾನ್ವಿತ ಕುಟುಂಬದ ನಾಗರಾಜ್‌ ಅವರೊಂದಿಗೆ ಸಪ್ತಪದಿ ತುಳಿದರು. ಎರಡು ಅವಳಿ ಮಕ್ಕಳು. ನಂತರ ಅವರಿಗೆ ಕಿದ್ವಾಯಿ ಆಸ್ಪತ್ರೆಯ ಔಷಧ ವಿಭಾಗದಲ್ಲಿ ಕೆಲಸ ಸಿಕ್ಕಿತು. 1986ರಲ್ಲಿ ನಾಗರಾಜ್‌ ರಿಗೆ ಬೆನ್ನುಮೂಳೆ ಆಪರೇಷನ್ ಆಯಿತು. ಅವರು ನಿಧಾನವಾಗಿ ಮದ್ಯ ಸೇವಿಸಲಾರಂಭಿಸಿದರು. ಕ್ರಮೇಣ ಅದು ಅವರ ಬೆನ್ನೇರಿತು.

ಕೆಲಸ, ಕುಟುಂಬ, ಜೊತೆಗೆ ಪತಿಯ ಬಿಸ್‌ ನೆಸ್‌ ನೋಡಿಕೊಳ್ಳಬೇಕಾದ ಹೊಣೆ ಯಶೋದಾರ ಹೆಗಲಿಗೇರಿತು. ಜೊತೆಗೆ ಪತಿಯ ಕುಡಿತದಿಂದಾಗಿ ಸವಾಲಗಳು ಹೆಚ್ಚಲಾರಂಭಿಸಿದವು. ಹೆಣ್ಣು ಮಕ್ಕಳಿಬ್ಬರಿಗೆ ಮದುವೆ ಮಾಡಿಸಿದ ಯಶೋದಾ, ಗಂಡನ ಕುಡಿತದ ಚಟವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲದೆ ವಿಚ್ಛೇದನವೇ ದಾರಿ ಎಂದು ನಿರ್ಧರಿಸಿದರು. ಈ ನಿರ್ಧಾರದ ಅಂತಿಮ ಹೆಜ್ಜೆ ಇಡುವ ಮೊದಲು ಆಪ್ತ ಸಮಾಲೋಚನೆಗೆಂದು ಬಂಜಾರಾ ಅಕಾಡೆಮಿಗೆ ಹೋದಾಗ, ಅಲ್ಲಿನ ಆಪ್ತಸಮಾಲೋಚಕರು ಪತಿಗೂ ಆಪ್ತಸಮಾಲೋಚನೆ ಮಾಡಿಸುವಂತೆ ಹೇಳಿದರು.

ಅದಕ್ಕೆ ಒಪ್ಪಿದ ಯಶೋದಾ, `ಆಲ್ಕೋಹಾಲಿಕ್‌ ಅನಾನಿಮಸ್‌' ಗುಂಪಿಗೆ ಪತಿಯನ್ನು ಸೇರಿಸಿದರು. ಇದರಿಂದ ನಾಗರಾಜ್‌ ಬದಲಾಗಿ 20 ವರ್ಷಗಳ ಕುಡಿತದ ಚಟದಿಂದ ಸಂಪೂರ್ಣವಾಗಿ ಬಿಡುಗಡೆ ಹೊಂದಿದರು.

ಮನೆಯಲ್ಲಿ ಮತ್ತೆ ಮೊದಲಿನ ಸಂತಸ ಸಂಭ್ರಮ! ಕುಡಿತ ಕೇವಲ ಚಟವಲ್ಲ, ಅದೊಂದು ಅಮಲು ರೋಗ, ಬೇರೆ ರೋಗಿಗಳಿಗೆ ಸಹಾನುಭೂತಿಯಿಂದ ಆರೈಕೆ ಮಾಡುವಂತೆ ಅವರನ್ನು ಅನುಕಂಪ, ಪ್ರೀತಿ, ಕರುಣೆಯಿಂದ ನೋಡಿಕೊಂಡರೆ ಅವರು ಕೂಡಾ ಬದಲಾಗುತ್ತಾರೆ ಎಂದು ಯಶೋದಾರಿಗೆ ಅರ್ಥವಾಗಿತ್ತು. ಇದು ತನ್ನೊಬ್ಬಳ ಕಷ್ಟವಲ್ಲ, ತನ್ನಂತೆಯೇ ಅದೆಷ್ಟೋ ಹೆಣ್ಣುಮಕ್ಕಳು ತಮ್ಮ ಕುಟಂಬಗಳೊಂದಿಗೆ ಕಷ್ಟ ಅನುಭವಿಸುತ್ತಿದ್ದಾರೆ ಎಂದು ಯೋಚಿಸಿದ ಯಶೋದಾ ಅಂತಹ ಕುಟುಂಬಗಳ ನೆರವಿಗೆ ನಿಂತು ಅವರ ಮನಸ್ಸುಗಳಲ್ಲಿ ನೆಮ್ಮದಿ ಮೂಡಿಸಬೇಕೆಂದು ನಿರ್ಧರಿಸಿದರು.

ಇದರಿಂದ ತಾವೇ ಕೌನ್ಸೆಲಿಂಗ್‌ ತರಬೇತಿ ಪಡೆದರು. ಭಾನುವಾರ ಸೇರಿದಂತೆ ಇತರ ರಜೆಯ ದಿನಗಳಲ್ಲಿ ಕುಡಿತದ ಚಟಕ್ಕೆ ಬಿದ್ದವರಿಗೆ ಮತ್ತು ಅವರ ಕುಟುಂಬದವರಿಗೆ ಆಪ್ತ ಸಮಾಲೋಚನೆ ನೀಡಲಾರಂಭಿಸಿದರು. ಅವರು ಮಾಡುತ್ತಿದ್ದ ಕೆಲಸ ಪತಿಗೆ ಸ್ಛೂರ್ತಿ ತುಂಬಲಾರಂಭಿಸಿತು. ಪತ್ನಿಯ ನೆರವಿಗೆ ನಿಂತ ಅವರು ಅಮಲು ರೋಗಿಗಳ ಚಟ ಬಿಡಿಸುವ ಸಲುವಾಗಿ ಕ್ಯಾಂಪ್ ಆರಂಭಿಸುವ ಯೋಚನೆ ಮಾಡಿದರು. ಗಂಡನ ಯೋಚನೆ ಯಶೋದಾರಿಗೆ ಸಹಜವಾಗಿ ಖುಷಿ ತಂದಿತ್ತು. ಅವರೂ ಪತಿಗೆ ಸಂಪೂರ್ಣ ಪ್ರೋತ್ಸಾಹ ನೀಡಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ