ಭಕ್ತಿಯ ಹೆಸರಲ್ಲಿ ಜನ ಮರುಳೋ, ಜಾತ್ರೆ ಮರುಳೋ ಎಂದು ದೊಂಬಿ ಎಬ್ಬಿಸಿ, ಜನಸಾಗರ ಒಂದೇ ಕಡೆ ಸೇರಿದರೆ, ಅದರಿಂದ ಆ ದೇವರಿಗೆ ಏನಾಗುತ್ತದೋ ಬಿಡುತ್ತದೋ, ಈ ಭಕ್ತರ ಸ್ಥಿತಿಯಂತೂ ಅಯೋಮಯ! ಅದರಿಂದಾಗುವ ಅವಘಡ, ಅಪಘಾತ, ಸಾವುನೋವುಗಳಿಗೆ ಎಣೆಯುಂಟೇ.....?

ಕಳೆದ 2021ರಲ್ಲಿ ಅಮರ್‌ ನಾಥ್‌ ಯಾತ್ರೆಗೆ ಹೊರಟಿದ್ದ ಭಕ್ತಾದಿಗಳ ತಂಡ ಒಂದು ಭಯಂಕರ ಅಪಘಾತಕ್ಕೆ ಸಿಲುಕಿತ್ತು. ಇದ್ದಕ್ಕಿದ್ದಂತೆ ಹಿಮಪಾತವಾಗಿ ಉ.ಭಾರತದ ಈ ಪ್ರಾಂತ್ಯ ಪ್ರಕೃತಿಯ ಭಯಂಕರ ವಿಕೋಪಕ್ಕೆ ಗುರಿಯಾಯಿತು. ಮೀಡಿಯಾದವರು ಬಂದು ಸುದ್ದಿಗಳ ಸುಗ್ಗಿ ಮಾಡಿಕೊಂಡರು. ಎಲ್ಲೆಲ್ಲೂ ಮರಣ ಮೃದಂಗ ಮೊಳಗಿತ್ತು. ಅವಳು, ನೋವು, ಆಕ್ರಂದನ ಮುಗಿಲು ಮುಟ್ಟಿತ್ತು! ಸಾವುನೋವುಗಳಿಗೆ ಲೆಕ್ಕ ಹುಡುಕುವುದೇ ಕಷ್ಟವಾಯಿತು. ಹಸಿವು, ಬಾಯಾರಿಕೆ.... ರುದ್ರತಾಂಡವ ಆಡುತ್ತಿತ್ತು. ಭಾರತದ ಭೂಸೇನೆಯ ಸಾವಿರಾರು ಯೋಧರು ತಮ್ಮ ಜೀವವನ್ನು ಪಣಕ್ಕೊಡ್ಡಿ, ಈ ಅಮರ್‌ ನಾಥ್ ತೀರ್ಥಯಾತ್ರೆಗೆಂದು ಬಂದಿದ್ದ ಭಕ್ತಾದಿಗಳ ಜೀವ ಕಾಪಾಡಿದರು. ಅವರುಗಳನ್ನು ಸುರಕ್ಷಿತ ತಾಣ ತಲುಪಿಸುವಲ್ಲಿ ಯಶಸ್ವಿಯಾದರು. ದೇಶವಿಡೀ ಜನತೆ ಟಿವಿಯಲ್ಲಿ ಈ ಭೀಕರ ಸಾವಿನ ಆಟ ನೋಡಿ, ಜೀವನದ ಕ್ಷಣಭಂಗುರತೆಯ ಬಗ್ಗೆ ನಾನಾ ಚರ್ಚೆ ಮಾಡುತ್ತಾ, ತೋಚಿದ ಸಲಹೆ ನೀಡುತ್ತಾ, ಇಷ್ಟೊಂದು ಜನರನ್ನು ಒಮ್ಮೆಲೇ ಇಲ್ಲಿ ಸೇರಿಸಿದ್ದು ಏಕೆಂದು ಗೊಣಗಿಕೊಂಡಿತು. ಟಿವಿ, ಸಿನಿಮಾಗಳಲ್ಲಿ ತೋರಿಸುವಂತೆ ಯಾವ ಧರ್ಮದ ಯಾವ ದೇವರೂ ಆಕಾಶದಿಂದ ಇಳಿದು ಬಂದು ಇವರನ್ನು ರಕ್ಷಿಸಲಿಲ್ಲ!

ಈ ಹಗರಣದಲ್ಲಿ ನೂರಾರು ಜನ ಸತ್ತರು, ಸಾವಿರಕ್ಕೂ ಹೆಚ್ಚು ಗಾಯಗೊಂಡರು, 40-50 ಜನ ಹಿಮದ ಮಧ್ಯೆ ಕಣ್ಮರೆಯಾದರು. ಈ ಜವಾಬ್ದಾರಿಯನ್ನು ಆಸ್ತಿಕರು ದೇವರ ಮೇಲೆ ಹಾಕಲು ಸಾಧ್ಯವೇ? ಹೀಗಾಗಿ ಇದರ ಸಮಸ್ತ ಲೋಪದೋಷಗಳ ಹಣೆಪಟ್ಟಿಯನ್ನು ಅಲ್ಲಿಯ ಸ್ಥಳೀಯ ಅಮರ್‌ ನಾಥ್‌ ಶ್ರೈನ್‌ ಬೋರ್ಡ್‌ ಗೆ ಅಂಟಿಸಲಾಯಿತು. ಆ ಮಂಡಳಿಯ ನಿರ್ಲಕ್ಷ್ಯದಿಂದಲೇ ಇಷ್ಟೆಲ್ಲ ಆಯಿತು ಎಂದು ಘಂಟಾಘೋಷವಾಗಿ ಸಾರಲಾಯಿತು.

ಆದರೆ ಅಸಲಿಗೆ ತಪ್ಪಿನ ಹೊಣೆ, ದೇವರನ್ನು ನಂಬಿಕೊಂಡು ಅಲ್ಲಿ ಜಮಾಯಿಸಿದ್ದ ಆ ಮೂಢ ಜನರದ್ದು ಎಂದು ಯಾರು ತಾನೇ ಆ ಸಂದರ್ಭದಲ್ಲಿ ಚರ್ಚಿಸಲು ಸಾಧ್ಯ? ಅಂಥ ದುರ್ಗಮ ಪರ್ವತ ಪ್ರದೇಶದಲ್ಲಿ ಆ ಕಿಷ್ಕಿಂದಾ ಜಾಗದಲ್ಲಿ ಒಮ್ಮೆಲೇ ಅಷ್ಟು ಜನ ಹಿಮಪಾತಕ್ಕೆ ಸಿಲುಕಿದರೆ ಗತಿ ಏನಾದೀತು? ಹೀಗಾಗಿಯೇ ಅಲ್ಲಿನ ಹವಾಮಾನ ಇಲಾಖೆಯರು ಮತ್ತೆ ಮತ್ತೆ ಈ ಕುರಿತು ಎಚ್ಚರಿಕೆ ನೀಡಿದ್ದರೂ ಈ ಆಸ್ತಿಕರು ಇದನ್ನು ನಿರ್ಲಕ್ಷಿಸಿದರು.

ಇಂಥ ಪರಿಸ್ಥಿತಿಯಲ್ಲಿ ಅಲ್ಲಿಗೆ ಹೋದರೆ ಅದು ಆತ್ಮಹತ್ಯೆಗೆ ಸಮ ಎಂದು ಅರಿವಾಗಲಿಲ್ಲವೇ? ಅಲ್ಲಿನ ಬೋರ್ಡ್‌ ಈ ಕಾರಣವೊಡ್ಡಿ, ಈ ಜನರ ಯಾತ್ರೆ ರದ್ದುಗೊಳಿಸಿದ್ದರೆ, ಎಲ್ಲರೂ ಸೇರಿ ಬೇಕೆಂದೇ ತಮ್ಮನ್ನು ತಡೆಹಿಡಿಯುತ್ತಿದ್ದಾರೆ, ಪವಿತ್ರ ಯಾತ್ರೆ ರದ್ದು ಪಡಿಸುತ್ತಾರೆ ಎಂದು ಹುಯಿಲೆಬ್ಬಿಸುವರು.

ಆ ವರ್ಷ 30ನೇ ಜೂನ್‌ ನಿಂದ ಅಮರ್‌ ನಾಥ್‌ ಯಾತ್ರೆ ಶುರುವಾಗಿತ್ತು. ಪ್ರತಿ ವರ್ಷದಂತೆ 2 ಆತಂಕಗಳನ್ನು ವಿಶೇಷವಾಗಿ ಪ್ರಸ್ತಾಪಿಸಲಾಗಿತ್ತು. ಮೊದಲನೆಯದು, ಭಯೋತ್ಪಾದಕರ ಹಲ್ಲೇ, ಆಕ್ರಮಣದ ಆತಂಕ. ಎರಡನೆಯದು, ಹವಾಮಾನ ಕಂಗೆಟ್ಟು ಯಾವಾಗ ಬೇಕಾದರೂ ಭೂಕುಸಿತ, ಹಿಮಪಾತದ ಅಪಾಯ! ಮೊದಲ ಆತಂಕ ನಿವಾರಿಸಲು, ಕೇಂದ್ರ ಸರ್ಕಾರ ಹೆಚ್ಚಿನ ಸುರಕ್ಷತೆಗಾಗಿ 1 ಲಕ್ಷಕ್ಕೂ ಹೆಚ್ಚು ಮಂದಿ ಸೈನಿಕರನ್ನು ಅಲ್ಲಿನ ಕಾವಲಿಗೆ ಕಳುಹಿಸಿತು. ಆದರೆ ಹವಾಮಾನದ ನಿಯಂತ್ರಣವಂತೂ ಸರ್ಕಾರದ ಕೈಯಲ್ಲಿಲ್ಲವಲ್ಲ? ಹೀಗಾಗಿ ಭಕ್ತರನ್ನು ಭಗವಂತನೇ ಕಾಪಾಡಿಕೊಳ್ಳಲಿ ಎಂದು ಯಾತ್ರೆ ರದ್ದು ಪಡಿಸಲಿಲ್ಲ. ಕೊರೋನಾ ಮಹಾಮಾರಿಯ ಕಾಟದಿಂದ 2 ವರ್ಷ ರದ್ದಾಗಿದ್ದ ಈ ಯಾತ್ರೆ, 2021ರಲ್ಲಿ ಹೆಚ್ಚಿನ ಹುಮ್ಮಸ್ಸಿನೊಂದಿಗೆ ಗರಿಗೆದರಿತ್ತು. ಆ ಕಾರಣದಿಂದ ಲಕ್ಷಾಂತರ ಮಂದಿ ಈ ಯಾತ್ರೆಗಾಗಿ ರಿಜಿಸ್ಟ್ರೇಷನ್‌ ಮಾಡಿಸಿದ್ದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ