ಕಥೆ- ಕೌಸಲ್ಯಾ ರಾವ್

ಬೆಳಕಾಗಿತ್ತು. ರಕ್ಷಿತ್‌ ಕೋಣೆಯ ಕಿಟಕಿ ಪರದೆ ದೂರ ಸರಿಸಿದಾಗ ಸೂರ್ಯನ ಕಿರಣಗಳು ದೀಪಾಳ ಮುಖದ ಮೇಲೆ ಬಿದ್ದವು. ಆದರೂ ಅವಳು ಮಗ್ಗಲು ಬದಲಾಯಿಸಿ ಮಲಗಿಕೊಂಡಳು. ಆಗ ರಕ್ಷಿತ್‌ ಕಾಫಿ ಟ್ರೇಯನ್ನು ಟೀಪಾಯ್‌ ಮೇಲಿಟ್ಟು ಬೆಡ್‌ಶೀಟ್‌ ಎಳೆಯುತ್ತಾ, ``ಮೇಡಂ ಕಣ್ಣು ಬಿಡಿ. ಬಿಸಿ ಬಿಸಿ ಕಾಫಿ ಕುಡೀರಿ....'' ಎಂದ.

ರಕ್ಷಿತ್‌ ಹೇಳಿದ್ದು ದೀಪಾಳ ಮೇಲೆ ಏನೂ ಪರಿಣಾಮ ಬೀರಲಿಲ್ಲ. ಅವಳನ್ನು ನೋಡಿದರೆ ಬೇಗನೆ ಏಳುವ ಹಾಗಿರಲಿಲ್ಲ. ದೀಪಾ ಏಳದಿದ್ದುದನ್ನು ಕಂಡು ಅವಳನ್ನು ತಟ್ಟಿ ಎಬ್ಬಿಸುತ್ತಾ,

``ನಿನ್ನ ಎಡಿಟರ್‌ ಸಾಹೇಬರು ಫೋನ್‌ ಮಾಡಿದ್ದರು. ಬಹುಶಃ ಅವರಿಗೆ ಎಲ್ಲಿಂದಲೋ ಯಾವುದೋ ಸ್ಟೋರಿ ವಾಸನೆ ಬಂದಿರಬೇಕು. ಅದಕ್ಕೆ ನಿನ್ನನ್ನು ಕರೀತಿದ್ದಾರೆ,'' ಎಂದ.

ದೀಪಾ ಆಕಳಿಸುತ್ತಾ, ಕೈ ಕಾಲು ಜಾಡಿಸಿ ಎಚ್ಚರ ಮಾಡಿಕೊಂಡಳು. ನಂತರ ಎದ್ದು ಕುಳಿತು ಹೇಳಿದಳು, ``ಈ ಎಡಿಟರ್‌ ಸಾಹೇಬ್ರಿಗೆ ನಿದ್ದೇನೇ ಬರಲ್ವಾ? ಬೆಳಗ್ಗೆ ಬೆಳಗ್ಗೇನೇ ಫೋನ್‌ ಮಾಡಿಬಿಡ್ತಾರೆ....'' ಎನ್ನುತ್ತಾ ದೀಪಾ ಆರಾಮವಾಗಿ ಎದ್ದು ಬೇಸಿನ್‌ನಲ್ಲಿ ಹಲ್ಲುಜ್ಜಿ, ಮುಖ ತೊಳೆದು ಕಾಫಿ ಕುಡಿಯತೊಡಗಿದಳು.

``ಈ ನಿನ್ನ ಎಡಿಟರ್‌ ನನ್ನ ನಿದ್ದೇನೂ ಹಾಳು ಮಾಡ್ತಾರೆ. ಫೋನ್‌ ನಿನಗೆ, ಬೇಸರ ನನಗೆ,'' ಎನ್ನುತ್ತಾ ರಕ್ಷಿತ್‌ ಕಾಫಿ ಕಪ್‌ ಹಿಡಿದುಕೊಂಡು ಟೋಸ್ಟರ್‌ನಲ್ಲಿ ಟೋಸ್ಟ್ ಹಾಕಿದ. ನಂತರ ಫ್ರಿಜ್‌ನಿಂದ ಬೆಣ್ಣೆ ತೆಗೆದ.

ಈ ನವವಿವಾಹಿತ ದಂಪತಿಗಳ ಬೆಳಗು ಸಾಮಾನ್ಯವಾಗಿ ಹೀಗೇ ಇರುತ್ತಿತ್ತು. ಇಬ್ಬರಲ್ಲೂ ಪ್ರೀತಿ ಬೆಳೆದಾಗ ತಂದೆತಾಯಿಯರ ಒಪ್ಪಿಗೆ ಪಡೆದು ಆರ್ಯಸಮಾಜದ ಪದ್ಧತಿಯಲ್ಲಿ ಮದುವೆಯಾಗಿದ್ದರು. ತಮ್ಮ ಮುಂದಿನ ಬದುಕನ್ನು ಹೇಗೆ ಸಾಗಿಸಬೇಕು ಎಂದು ಅವರೇನೂ ಯೋಚಿಸಿರಲಿಲ್ಲ. ಆದರೆ ಎಲ್ಲ ತಾನಾಗಿ ವ್ಯವಸ್ಥಿತವಾಯಿತು. ಬೆಳಗ್ಗೆ ಬೇಗ ಏಳುವುದು ದೀಪಾಗೆ ಹಿಂಸೆಯಾಗಿತ್ತು. ಆದರೆ ರಕ್ಷಿತ್‌ ಬೆಳಗ್ಗೆ ಬೇಗನೆ ಏಳುತ್ತಿದ್ದ. ತಡವಾಗಿ ಏಳುವ ದೀಪಾಳ ತಲೆಯ ಬಳಿ ಮ್ಯೂಸಿಕ್‌ ಸಿಸ್ಟಂ ಆನ್‌ ಮಾಡುತ್ತಿದ್ದ, ಕಿಟಿಕಿಗಳನ್ನು ತೆರೆದುಬಿಡುತ್ತಿದ್ದ. ಆದರೂ ದೀಪಾ ಎರಡೂ ಕಿವಿಗಳಿಗೆ ದಿಂಬುಗಳನ್ನು ಇಟ್ಟುಕೊಂಡು ಮಲಗಿರುತ್ತಿದ್ದಳು. ರಕ್ಷಿತ್‌ ಬೇಗನೆ ಎದ್ದು ಮನೆಯ ಕೆಲಸಗಳಲ್ಲಿ ತೊಡಗಿರುತ್ತಿದ್ದ. ಹಾಲು ತಂದು ಬಿಸಿ ಮಾಡುತ್ತಿದ್ದ. ಪೇಪರ್‌ ತಂದು ಕಣ್ಣಾಡಿಸಿ ನಂತರ ಒಳ್ಳೆಯ ಕಾಫಿ ಮಾಡುತ್ತಿದ್ದ. ತಾನೊಂದು ಕಪ್‌ ಕುಡಿದು ಇನ್ನೊಂದು ಕಪ್‌ ಕಾಫಿಯನ್ನು ದೀಪಾಳ ಬೆಡ್‌ ಪಕ್ಕದ ಟೀಪಾಯ್‌ ಮೇಲಿಟ್ಟು, ``ಏಳಿ ಮೇಡಂ, ಬಿಸಿ ಬಿಸಿ ಕಾಫಿ ಕುಡೀರಿ,'' ಎನ್ನುತ್ತಿದ್ದ.

ಮದುವೆಗೆ ಮೊದಲು ಹೆಚ್ಚಿನ ಪುರುಷರಂತೆ ರಕ್ಷಿತ್‌ ಎಂದೂ ಅಡುಗೆಮನೆಯಲ್ಲಿ ಕಾಲಿಟ್ಟಿರಲಿಲ್ಲ. ಅಮ್ಮನಂತೂ ಅವನಿಗೆ ಯಾವ ಕೆಲಸವನ್ನೂ ಹೇಳುತ್ತಿರಲಿಲ್ಲ. ರುಚಿರುಚಿಯಾದ  ಅಡುಗೆ ಮಾಡುತ್ತಿದ್ದರು. ಅಡುಗೆ ಮಾಡಲು ಅವರಿಗೆ ಆಲಸ್ಯವೆಂಬುದೇ ಇರಲಿಲ್ಲ. ಗಂಡ ಹಾಗೂ ಮಕ್ಕಳಿಗೆ ದಿನ ಹಬ್ಬದಡಿಗೆ ಮಾಡುತ್ತಿದ್ದರು. ಏನಾದರೂ ಸಹಾಯ ಮಾಡಬೇಕಾ ಎಂದು ಕೇಳಿದರೆ, ``ಏನೂ ಬೇಡ, ನೀವು ಗಂಡಸರು ಇದರ ಬಗ್ಗೆ ನಿಮಗೇನು ಗೊತ್ತು?'' ಎನ್ನುತ್ತಿದ್ದರು.

ರಕ್ಷಿತ್‌ನ ಅಣ್ಣ ಶ್ರೇಯಸ್‌ ಗ್ರೀನ್‌ಕಾರ್ಡ್‌ ಇದ್ದ ಹುಡುಗಿಯನ್ನು  ಮದುವೆಯಾಗಿ ಅಮೆರಿಕಾಗೆ ಹೊರಟುಹೋಗಿದ್ದ. ಆಗಿನಿಂದ ಅಪ್ಪ ಅಮ್ಮ ಕೊಂಚ ದುಃಖದಲ್ಲಿರುತ್ತಿದ್ದರು. ಚಿಕ್ಕ ಮಗ ರಕ್ಷಿತ್‌ ತಮ್ಮ ಬಳಿಯಲ್ಲೇ ಇರಲಿ, ತಮ್ಮದೇ ಜಾತಿಯ ಸಂಸ್ಕಾರವಂತ ಹುಡುಗಿಯನ್ನು ಮದುವೆಯಾಗಲಿ ಎಂದು ಅಮ್ಮ ಶೈಲಜಾ ಬಯಸುತ್ತಿದ್ದರು. ಮಗ ಮುಂದೆ ತಮ್ಮ ವ್ಯಾಪಾರವನ್ನೇ ಮುಂದುವರಿಸಿಕೊಂಡು ಹೋಗಲಿ ಎಂದು ತಂದೆ ಬಯಸಿದ್ದರು. ಆದರೆ ರಕ್ಷಿತ್‌ಗೆ ತಂದೆಯ ವ್ಯಾಪಾರದಲ್ಲಿ ಆಸಕ್ತಿ ಇರಲಿಲ್ಲ. ಅವನಿಗೆ ಪತ್ರಿಕೆಗಳು ಮತ್ತು ಪುಸ್ತಕಗಳಲ್ಲಿ ಆಸಕ್ತಿ ಹೆಚ್ಚಾಗಿತ್ತು. ರಾತ್ರಿ ಅವನು ಯಾವುದಾದರೂ ಪುಸ್ತಕ ಓದುತ್ತಿದ್ದಾಗ ತಂದೆ ಮಗನ ಬಳಿ ಕುಳಿತು ವ್ಯಾಪಾರದ ಬಗ್ಗೆ ಮಾತನಾಡೋಣ ಎಂದುಕೊಳ್ಳುತ್ತಿದ್ದರು. ಆದರೆ ಮಗನ ಮೂಡ್‌ ಕಂಡು ಸುಮ್ಮನಾಗುತ್ತಿದ್ದರು. ಅವರ ಚಿಂತೆ ಕಂಡು ಶೈಲಜಾ, ``ಏಕೆ ಯೋಚಿಸ್ತೀರಿ. ಅವನು ಓದೋ ಹಾಗಿದ್ರೆ ಓದಲಿ ಬಿಡಿ. ಅವನು ನಿಮ್ಮ ರಕ್ತ. ಒಂದಲ್ಲಾ ಒಂದು ದಿನ ನಿಮ್ಮ ವ್ಯಾಪಾರ ಸಂಭಾಳಿಸುತ್ತಾನೆ,'' ಎಂದು ಸಮಾಧಾನ ಹೇಳುತ್ತಿದ್ದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ