ನೀಳ್ಗಥೆ - ಶೇಖರಗೌಡ ವೀ..

ಎಲ್ಲಾ ಯುವ ಜೋಡಿಗಳಂತೆ ಪ್ರೀತಿ ಪ್ರೇಮ ಪ್ರಣಯ ಎನ್ನುತ್ತಾ ಸರಸ ಸಲ್ಲಾಪದಲ್ಲಿ ಮುಳುಗಿದ್ದ ಪ್ರತ್ಯಕ್ಷ ಜಾಹ್ನವಿಯವರ ನಡುವೆ ಮುಂದೊಂದು ದಿನ ಬಿರುಕು ಬಂದದ್ದಾದರೂ ಏಕೆ......?

ಪ್ರತಿಷ್ಠಿತ ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ಪ್ರತ್ಯಕ್ಷ ಅಧಿಕಾರಿಯಾಗಿದ್ದ. ನೇರ ನೇಮಕಾತಿಯಲ್ಲಿ ಪ್ರೊಬೆಶನರಿ ಆಫೀಸರ್‌ ಎಂದು ನೇಮಕಗೊಂಡನು. ಲಿಖಿತ ಮತ್ತು ಮೌಖಿಕ ಪರೀಕ್ಷೆಯಲ್ಲಿ ಸ್ವಯಂ ಪ್ರತಿಭೆಯಿಂದ ಯಶಸ್ಸು ಗಳಿಸಿದನು. ಧಾರವಾಡದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಕೃಷಿ, ಎಂಎಸ್ಸಿ ಕೃಷಿ ಮಾಡಿಕೊಂಡನು. ಕಾಲೇಜು, ವಿಶ್ವವಿದ್ಯಾಲಯದಲ್ಲಿ ಗೋಲ್ಡ್ ಮೆಡಲಿಸ್ಟ್. ಪ್ರೌಢಶಾಲೆಯ ವಿದ್ಯಾಭ್ಯಾಸದಿಂದಲೇ ಪ್ರಾಮಾಣಿಕ ಸೇವೆ ಮಾಡಬೇಕೆಂಬ ಆದರ್ಶ ಮೈಗೂಡಿಸಿಕೊಂಡನು.

ಬ್ಯಾಂಕ್‌ ನಲ್ಲಿ ಸೇವೆ ಮಾಡಬೇಕೆಂಬ ಗುರಿಯನ್ನೂ ಹೊಂದಿದ್ದ. ಅವನಿಷ್ಟದಂತೆ ಬ್ಯಾಂಕ್‌ ನಲ್ಲಿ ಕೆಲಸ ಸಿಕ್ಕಿತು. ಖುಷಿ ಖುಷಿಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದ. ಎರಡು ವರ್ಷಗಳ ಪ್ರೊಬೆಶನರಿ ಅವಧಿಯಲ್ಲಿ ಮ್ಯಾನೇಜ್‌ ಮೆಂಟ್‌ ನವರು ಡೆಲ್ಲಿ, ಮುಂಬೈ, ಬೆಂಗಳೂರು, ಚೆನ್ನೈ, ಗಂಗಾವತಿಯಂತಹ ಸ್ಥಳಗಳಿಗೆ ಸುತ್ತಾಡಿಸಿದರು. ಖುಷಿಖುಷಿಯಾಗಿಯೇ ಕರ್ತವ್ಯ ನಿಭಾಯಿಸಿದ. ಎರಡು ವರ್ಷಗಳ ಅವಧಿಯಲ್ಲಿ ಬ್ಯಾಂಕಿಂಗ್‌ ಸೆಕ್ಟರ್‌ ನ ಕಲಿಕೆ ಮತ್ತು ಕರ್ತವ್ಯ ಎರಡೂ ಇದ್ದವು. ಪ್ರತ್ಯಕ್ಷ ಹುಬ್ಬಳ್ಳಿ ಹುಡುಗ. ಎರಡು ವರ್ಷಗಳ ಪ್ರೊಬೆಶನರಿ ಅವಧಿಯ ನಂತರ ಅವನಿಗೆ ಪೋಸ್ಟಿಂಗ್‌ ಸಿಕ್ಕಿದ್ದು ಕರಾವಳಿ ಪ್ರದೇಶದ ಮಂಗಳೂರಿನ ಮುಖ್ಯ ಶಾಖೆಗೆ. ಮಂಗಳೂರಿನಲ್ಲಿ ಬ್ಯಾಂಕಿನ ಹನ್ನೊಂದು ಶಾಖೆಗಳಿದ್ದವು. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಅವನು ಮಂಗಳೂರಿನಲ್ಲಿ ಕರ್ತವ್ಯ ನಿಭಾಯಿಸಬೇಕಿತ್ತು. ಇದೀಗ ಮಂಗಳೂರು ಅವನ ಕಾರ್ಯಕ್ಷೇತ್ರ.

ಮಂಗಳೂರು ಎಂದ ಕೂಡಲೇ ಪ್ರತ್ಯಕ್ಷ ಒಂದಿಷ್ಟು ಅಧೀರನಾದದ್ದು ನಿಜ. ಏಕೆಂದರೆ ಮಂಗಳೂರು ಎಂದರೆ ಎರಡು ಧರ್ಮಗಳ ಕೋಮಿನವರ ನಡುವೆ ಯಾವಾಗಲೂ ಘರ್ಷಣೆ, ಹೊಡೆದಾಟ, ಬಡಿದಾಟ ಇದ್ದೇ ಇರುತ್ತಿದ್ದವು. ಕೆಲವೊಂದು ಪ್ರಕರಣಗಳು ಕೊನೆಯಲ್ಲೂ ಅಂತ್ಯವಾಗಿರುವುದು ತಿಳಿದ ವಿಷಯವೇ. ಅದೂ ಅಲ್ಲದೇ, ಅಲ್ಲಿ ಹಿಂದೂಗಳ ಜೊತೆ ಜೊತೆಗೆ ಮುಸ್ಲಿಂ ಮತ್ತು ಕ್ರಿಶ್ಚಿಯನ್‌ ಧರ್ಮದವರ ಜನಸಂಖ್ಯೆಯೂ ಹೆಚ್ಚಾಗಿಯೇ ಇದೆ.

ಕರಾವಳಿಯ ಕೆಲವೊಂದು ಪ್ರದೇಶಗಳು ಸಂಬಾರು ಪದಾರ್ಥಗಳಾದ ಏಲಕ್ಕಿ, ಕರಿಮೆಣಸು, ಲವಂಗ, ಧನಿಯಾ, ಚಕ್ಕೆ, ಸ್ಟಾರ್ ಅನೀಸ್‌ ಮುಂತಾದ ಬೆಳೆಗಳಿಗೆ ಪ್ರಸಿದ್ಧಿಯಾದವುಗಳು. ಅರಬ್ಬಿ ಸಮುದ್ರದ ಮೂಲಕವೇ  ಹದಿನಾರನೇ ಶತಮಾನದಿಂದ ಇಪ್ಪತ್ತನೇ ಶತಮಾನದವರೆಗೆ ಹಡಗಿನ ಮೂಲಕ ಸಂಬಾರ ಪದಾರ್ಥಗಳು ವಿದೇಶಗಳಿಗೆ ರಫ್ತಾಗುತ್ತಿದ್ದವು. ಕೆಳದಿ ಇಕ್ಕೇರಿ ಅರಸರ ಕಾಲದಲ್ಲೂ ವಿದೇಶಿಗರು ಸಂಬಾರ ಪದಾರ್ಥಗಳ ಖರೀದಿಗೆ ಹಡಗಿನ ಮೂಲಕ ಬರುತ್ತಿದ್ದರು.

ವಿದೇಶದಿಂದ ಬಂದವರಲ್ಲಿ ಮುಸಲ್ಮಾನರು, ಇಂಗ್ಲಿಷರು, ಪೋರ್ಚುಗೀಸರು, ಡಚ್ಚರು ಮುಂತಾದವರು. ವ್ಯಾಪಾರಕ್ಕೆಂದು ಬಂದವರು ತಮ್ಮತಮ್ಮ ಧರ್ಮದ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಉಮೇದಿನಲ್ಲಿದ್ದರು. ಹಿಂದೂ ಮತ್ತು ಇನ್ನೊಂದು ಧರ್ಮದ ಕೋಮಿನವರ ಜೊತೆಗೆ ಆಗಾಗ ಗಲಭೆ, ಸಂಘರ್ಷ, ಹೊಡೆದಾಟ ಬಡಿದಾಟ ನಡೆಯುತ್ತಿದ್ದುದರಿಂದ ನಾಗರಿಕರ ಎದೆಯಲ್ಲಿ ಆತಂಕ ಮೂಡಿಸುತ್ತಿದ್ದವು. ಅಂತಹ ಪ್ರದೇಶಕ್ಕೆ ಹೋಗಿ ಕರ್ತವ್ಯ ನಿಭಾಯಿಸಲು ಪ್ರತ್ಯಕ್ಷನ ಮನಸ್ಸೇಕೋ ಹಿಂದೇಟು ಹೊಡೆಯತೊಡಗಿತು. ಅದೂ ಅಲ್ಲದೇ ಅಲ್ಲಿ ಕನ್ನಡಕ್ಕಿಂತ ಕೊಂಕಣಿ, ತುಳು ಭಾಷೆ ಮಾತನಾಡುವ ಅನ್ಯಭಾಷಿಗರೇ ಬಹಳ ಎಂಬ ಮಾಹಿತಿಯೂ ಸಿಕ್ಕಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ