ಬೆಳಗ್ಗೆ ಸೈಯದ್‌ ಹಫೀಜ್‌ ಗಾರ್ಡನ್‌ನಲ್ಲಿ ಗಿಡಗಳಿಗೆ ನೀರು ಹಾಕುತ್ತಿದ್ದರು. ಮಲ್ಲಿಗೆ, ಸಂಪಿಗೆ, ಚೆಂಡುಹೂಗಳು, ಬೋಗನ್‌ ವಿಲಾ, ಗುಲ್‌ಮೊಹರ್‌ ಹಾಗೂ ಗುಲಾಬಿಯ ತಾಜಾ ಹೂಗಳ ಸೌಂದರ್ಯ ಅನುಪಮವಾಗಿತ್ತು. ಗುಲಾಬಿ ಹೂಗಳ ಮೇಲೆ ಬಿದ್ದ ಮಂಜಿನ ಹನಿಗಳು ವಜ್ರದ ಕಣಗಳಂತೆ ಹೊಳೆಯುತ್ತಿದ್ದವು.

ಹಫೀಜ್‌ ನೀರು ಹಾಕುತ್ತಿದ್ದಾಗ ಒಳಗಿನ ಕೋಣೆಯಲ್ಲಿ ಫೋನ್‌ ರಿಂಗ್‌ ಆಯ್ತು. ಅವರು ಒಳಗೆ ಹೋದಾಗ ವಹೀದಾ ರಿಸೀವರ್ ಎತ್ತಿದ್ದರು. ಅವರು ಬಂದುದನ್ನು ಕಂಡು ರಿಸೀವರ್‌ ಅವರ ಕೈಗೆ ಕೊಟ್ಟು ನಗುತ್ತಾ, ``ನೂರುನ್ನೀಸಾ ಮಾಡಿರೋದು. ವೆಡಿಂಗ್ ಆ್ಯನಿವರ್ಸರಿಗೆ ವಿಶ್‌ ಮಾಡ್ತಿದ್ದಾಳೆ. ತಗೊಳ್ಳಿ, ಮಾತಾಡಿ,'' ಎಂದರು.

ಆ ಹೆಸರು ಕೇಳಿದ ಕೂಡಲೇ ಹಫೀಜ್‌ರ ಮುಖ ಅರಳಿತು. ಅವರು ಕೊಂಚ ಸಂಕೋಚದಿಂದ ರಿಸೀವರ್‌ ತೆಗೆದುಕೊಂಡರು. ನೂರುನ್ನೀಸಾ ನಂತರ ಅವಳ ಗಂಡ ಬಷೀರ್‌ ಕೂಡ ತಂದೆಗೆ ವಿಶ್‌ ಮಾಡಿ ಆರೋಗ್ಯ ವಿಚಾರಿಸಿದ. ಮಾತುಕಥೆ ಬೇಗ ಮುಗಿಯಿತು. ಆದರೆ ಗಾಳಿಯ ಹೊಯ್ದಾಟದಂತೆ ಕಳೆದುಹೋದ ದಿನಗಳ ಪುಟಗಳು ತೆರೆದುಕೊಂಡವು.

ಸೈಯದ್‌ ಹಫೀಜ್‌ರಿಗೆ ನೂರುನ್ನೀಸಾ ಬರೀ ಸೊಸೆಯಲ್ಲ. ಪ್ರಕೃತಿ  ತನಗಿತ್ತ ವರ ಎಂದು ಸಂಪೂರ್ಣ ವಿಶ್ವಾಸವಿತ್ತು. ಸಮಾಜದ ಪ್ರಚಲಿತ ಪದ್ಧತಿಯಂತೆ ನಡೆಯುವ ಬದಲು ಅವಳು ತನ್ನದೇ ಆದ ದಾರಿ ಕಂಡುಕೊಂಡಿದ್ದಳು. ದೊಡ್ಡವರು, ಚಿಕ್ಕವರು ಎನ್ನದೇ ಅವಳು ಎಲ್ಲರನ್ನೂ ಸಮಾನವಾಗಿ ಗೌರವಿಸುತ್ತಿದ್ದಳು. ಧಾವಂತದ ಈ ಹೈಟೆಕ್‌ ಯುಗದಲ್ಲಿ  ದೊಡ್ಡವರನ್ನು ಯಾರು ಗೌರವಿಸುತ್ತಾರೆ? ತಂದೆತಾಯಿ ಬಹಳ ಪರಿಶ್ರಮದಿಂದ ತಮ್ಮ ಮಕ್ಕಳ ಉಚ್ಚ ಶಿಕ್ಷಣ, ಭವ್ಯ ಭವಿಷ್ಯ ಹಾಗೂ ಸಂತಸಕರ ಜೀವನಕ್ಕಾಗಿ ತಮ್ಮದೆಲ್ಲವನ್ನೂ ತ್ಯಾಗ ಮಾಡಿಬಿಡುತ್ತಾರೆ. ಆದರೆ ತಮ್ಮ ಜೀವನದ ಸಂಧ್ಯಾಕಾಲದಲ್ಲಿ ಅವರಿಗೆ ಉದಾಸತನ, ಅಸಹಾಯಕತೆ, ಏಕಾಂತ ಬಿಟ್ಟು ಬೇರೇನೂ ಸಿಗುವುದಿಲ್ಲ.

ಸೈಯದ್‌ ಹಫೀಜ್‌ರ ನೆರೆಹೊರೆಯಲ್ಲಿ ಇಂತಹ ಎಷ್ಟೊಂದು ದುಃಖಕರ ಉದಾಹರಣೆಗಳಿದ್ದವು. ವೆಂಕಟೇಶ್‌ರವರ ಇಬ್ಬರು ಮಕ್ಕಳು ಅಮೆರಿಕಾದಲ್ಲಿ ನೆಲೆಸಿದ್ದರು. ಅವರಿಗೆ ಸ್ವದೇಶಕ್ಕೆ ಮರಳಲು ಸಮಯವೇ ಸಿಗಲಿಲ್ಲ. ಅವರ ಹೆಂಡತಿಯಂತೂ ಮಗ ಸೊಸೆಯ ದಾರಿ ನಿರೀಕ್ಷಿಸುತ್ತಲೇ ಹೋಗೇಬಿಟ್ಟರು. ಈಗ ವೆಂಕಟೇಶ್‌ ತಮ್ಮ ಕೊನೆಯ ದಿನಗಳನ್ನು ನೌಕರನ ಆಸರೆಯಿಂದ ಕಳೆಯುತ್ತಿದ್ದಾರೆ. ಮಮ್ತಾಜ್‌ ಬೇಗಂ ತನ್ನ ಮಗಳು ಅಳಿಯನ ಜೊತೆ ಸಿಂಗಪುರ್‌ನಲ್ಲಿ ಇರಲು ಒಪ್ಪದಿದ್ದಾಗ ಮಗಳು ಅಳಿಯ ಅವರಿಗೆ ತಮ್ಮ ಫ್ಲ್ಯಾಟ್‌ ಮಾರುವಂತೆ ಪೀಡಿಸಿ ಎಲ್ಲ ಹಣ ತೆಗೆದುಕೊಂಡು ಹೊರಟುಹೋದರು. ಇಂದು ಮಮ್ತಾಜ್‌ ಬೇಗಂ ವೃದ್ಧಾಶ್ರಮದಲ್ಲಿ ತನ್ನ ಉಳಿದ ಆಯುಷ್ಯ ಕಳೆಯುತ್ತಿದ್ದಾರೆ. ಅವರ ಎದುರು ಮನೆಯಲ್ಲಿದ್ದ ರಾಜನ್‌ ತಮ್ಮ ಮಗ ಸೊಸೆಯ ದುರ್ವರ್ತನೆಯಿಂದ ಎಷ್ಟು ನೊಂದರೆಂದರೆ ತಮ್ಮ ದುಃಖವನ್ನು ಮನದಲ್ಲಿ ಅಡಗಿಸಿಕೊಂಡು ಒಂದು ದಿನ ಯಾರಿಗೂ ಹೇಳದೆ ಕೇಳದೆ ಮನೆ ಬಿಟ್ಟು ಹೊರಟರು ಮತ್ತೆಂದೂ ವಾಪಸ್‌ ಬರಲಿಲ್ಲ.

ಸಂಬಂಧಗಳ ಈ ಬದಲಾದ ಪರಿಭಾಷೆಯಲ್ಲಿ ಸಿಲುಕಿ ಕೊನೆಯುಸಿರು ಬಿಡುತ್ತಿರುವ ಮಾನವೀಯ ಮೌಲ್ಯಗಳನ್ನು ಕಂಡು ಸೈಯದ್‌ ಹಫೀಜ್‌ ತಮಗೂ ಇಂಥದೇ ಗತಿಯಾಗಬಹುದೆಂದು ಮನದಲ್ಲೇ ನಡುಗುತ್ತಿದ್ದರು. ಆದರೆ ಅವರ ಜೀವನದ ಅಂತಿಮ ಅಧ್ಯಾಯ ಅಷ್ಟೊಂದು ಸುಖಕರವಾಗಿ, ಸುಂದರವಾಗಿ ಆಗುವುದೆಂದು ಅವರು ಕನಸಿನಲ್ಲಿಯೂ ಯೋಚಿಸಿರಲಿಲ್ಲ. ಹಫೀಜ್‌ರ ಮಕ್ಕಳಿನ್ನೂ ಚಿಕ್ಕವರಾಗಿದ್ದಾಗಲೇ ಒಂದು ದುರ್ಘಟನೆಯಲ್ಲಿ ಹೆಂಡತಿ ಯಾಸ್ಮಿನ್‌ ಅವರನ್ನು ಒಂಟಿಯಾಗಿ ಬಿಟ್ಟು ಹೊರಟುಬಿಟ್ಟರು. ಆಗ ಹಫೀಜ್‌ ತಮ್ಮ ದುಃಖ ಮರೆತು ಮಕ್ಕಳ ಲಾಲನೆ ಪಾಲನೆಗಳಲ್ಲಿಯೇ ಸಂಪೂರ್ಣ ಸಮಯ ಕಳೆಯತೊಡಗಿದರು. ಮನೆಯವರು ಇನ್ನೊಂದು ಮದುವೆಯಾಗಲು ಬಹಳ ಒತ್ತಡ ಹೇರಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ