ನೀಳ್ಗಥೆ  -  ಡಾ. ಸುರೇಖಾ ಶರ್ಮ 

ಆಫೀಸಿನಿಂದ 2 ಬಸ್ಸು ಹಿಡಿದು ಮನೆ ತಲುಪುವಷ್ಟರಲ್ಲಿ 8 ಗಂಟೆ ದಾಟಿ ಚಿತ್ರಾಳಿಗೆ ಸಾಕು ಸಾಕಾಗಿತ್ತು. ಕಿರಣ್‌ ಬರುವಷ್ಟರಲ್ಲಿ 9 ದಾಟಿತ್ತು. ನಸುನಗುತ್ತಾ ಲವಲವಿಕೆಯಿಂದ ಇರುತ್ತಿದ್ದ ಪತ್ನಿ ಕಿರಣ್‌ನನ್ನು ಹಸನ್ಮುಖಳಾಗಿ ಸ್ವಾಗತಿಸುತ್ತಿದ್ದಳು. ಆದರೆ ಈ ದಿನ ಅದೇನೂ ಇರದೆ ದುಮುದುಮುಗುಡುತ್ತಾ ಬಾಗಿಲು ತೆರೆದವಳೇ, ಕಿರಣ್‌ ಒಳಬಂದಾಗ ಸಿಡಾರನೆ ಬಾಗಿಲು ಹಾಕಿದಳು. ಯಾಕೋ ಹವಾಮಾನ ಸರಿಯಿಲ್ಲ ಎಂದುಕೊಂಡ ಕಿರಣ್‌. ಇಡೀ ದಿನ ಆ ಕಾಲೋನಿಯಲ್ಲಿ ಏನೇನು ನಡೆಯಿತು, ಆಫೀಸ್‌ನಲ್ಲಿ ನಡೆದ ಜೋಕ್ಸ್ ಏನು ಎಂಬುದನ್ನೆಲ್ಲ ಹೇಳಿಕೊಳ್ಳದಿದ್ದರೆ ಅವಳಿಗೆ ಸಮಾಧಾನ ಇರುತ್ತಿರಲಿಲ್ಲ. ಕಾಫಿ ಮುಗಿಯುವಷ್ಟರಲ್ಲಿ ಹಲವು ಸ್ವಾರಸ್ಯಕರ ವಿಷಯಗಳು ಹೊರಬರುತ್ತಿದ್ದವು. ಅಂದಿನ ಪೇಪರ್‌ನ ಮುಖ್ಯಾಂಶಗಳಿಂದ ಹಲವು ಸುದ್ದಿಗಳು ತಿಳಿಯುತ್ತಿದ್ದವು. ಚಿತ್ರಾಳಿಗಿಂತ ತಾನು ತಡವಾಗಿ ಬಂದದ್ದರಿಂದಲೇ ಅವಳು ಮೂಡ್‌ ಕೆಡಿಸಿಕೊಂಡಿದ್ದಾಳೆ ಎಂದುಕೊಂಡ.

ಚಿತ್ರಾಳ ಕ್ಷಮೆ ಯಾಚಿಸುತ್ತಾ ಕಿರಣ್‌, ``ಸಾರಿ.... ನಾನು ಇವತ್ತು ನಿನಗೆ ಫೋನ್‌ ಮಾಡಲು ಆಗಲೇ ಇಲ್ಲ. ತಿಂಗಳ ಕೊನೆ, ಹೀಗಾಗಿ ನಮ್ಮ ಬ್ಯಾಂಕಿನಲ್ಲಿ ಇವತ್ತು ಕೆಲಸ ಜಾಸ್ತಿ ಇತ್ತು.''

``ನಿಮ್ಮ ಕೆಲಸದ ಒತ್ತಡ ಗೊತ್ತಿರುವ ವಿಷಯ ಬಿಡಿ. ಅದಕ್ಕಲ್ಲ ನನಗೆ ಬೇಜಾರಾಗಿರುವುದು..... ನನ್ನ ಚಿಂತೆಗೆ ಕಾರಣವೇ ಬೇರೆ ಇದೆ....''

``ಏನಪ್ಪ ಅದು ನಮ್ಮ ರಾಣಿ ಸಾಹೇಬರನ್ನು ಕಾಡಿಸುತ್ತಿರುವ ಚಿಂತೆ....?''

``ಮಧ್ಯಾಹ್ನ ಅಮೆರಿಕಾದಿಂದ ಲಲಿತಕ್ಕಾ ಫೋನ್‌ ಮಾಡಿದ್ದರು..... ಅತ್ತೆ ನಮ್ಮ ಮನೆಗೆ ಬರ್ತಿದ್ದಾರಂತೆ....''

``ಇದರಲ್ಲಿ ಚಿಂತೆಯ ಮಾತು ಎಲ್ಲಿ ಬಂತು? ಇದು ಅಮ್ಮನಿಗೂ ಮನೆಯೇ ಅಲ್ಲವೇ, ಲಹರಿ ಬಂದಾಗ ಅವರು ಈ ಕಡೆ ಬರ್ತಾರೆ,'' ಕಿರಣ್‌ಹೇಳಿದ.

``ಅಯ್ಯೋ... ನಾನು ಹೇಳಿದ್ದು ನಿಮಗೆ ಅರ್ಥ ಆಗಲಿಲ್ಲ..... ಅತ್ತೆಗೆ ಅಮೆರಿಕಾದ ಸಹವಾಸ ಸಾಕಾಗಿದೆಯಂತೆ, ಹೀಗಾಗಿ ನಮ್ಮಲ್ಲಿಯೇ ಬಂದು ಉಳಿದುಕೊಳ್ಳುತ್ತಾರಂತೆ.''

``ಅರೆ ಮಾರಾಯ್ತಿ..... ಒಳ್ಳೇದೇ ಆಯ್ತಲ್ಲ! ಮನೆಯಲ್ಲಿ ಒಬ್ಬರು ಹಿರಿಯರು ಇದ್ದರೆ ಎಷ್ಟು ಶ್ರೇಯಸ್ಸು ಅಲ್ಲವೇ? ದಿನನಿತ್ಯ ಬರೋ ಅತ್ತೆ ಸೊಸೆ ಧಾರಾವಾಹಿಗಳ ಬಗ್ಗೆ ನೀವಿಬ್ಬರೂ ಅತ್ತೆಸೊಸೆಯರು ಬೇಕಾದಷ್ಟು ಚರ್ಚಿಸಬಹುದಲ್ವಾ? ಅತ್ತೆಸೊಸೆಯರು ಪರಸ್ಪರ ಮಾತನಾಡಿ ಕೊಳ್ಳುತ್ತಾ ಬೇಕಾದ ಸಹಾಯ ಪಡೆಯಬಹುದಲ್ವಾ?'' ಕಿರಣ್‌ ತಮಾಷೆ ಮಾಡುತ್ತಾ ಹೇಳಿದ.

``ಬೆಕ್ಕಿಗೆ ಚೆಲ್ಲಾಟವಾದರೆ ಇಲಿಗೆ ಪ್ರಾಣಸಂಕಟ ಅಂತ ಆಗಿದೆ ನನ್ನ ಸ್ಥಿತಿ..... ನಿಮಗಿದರಲ್ಲಿ ತಮಾಷೆ ಬೇರೆ......''

``ಹಾಗಲ್ಲ ಚಿತ್ರಾ.... ಅತ್ತೆ ಸೊಸೆಯರ ಶೀತಲ ಯುದ್ಧದಲ್ಲಿ ನಾನು ಯಾರ ಪಕ್ಷ ವಹಿಸಲಪ್ಪ ಅಂತ ಚಿಂತೆ ಪಡಬೇಕಾದವನು ನಾನು, ಮತ್ತೆ ನೀನೇಕೆ ಈಗ ಅನಗತ್ಯ ಟೆನ್ಶನ್‌ ಪಡಬೇಕು? ನಾನು ಯಾರ ಪಕ್ಷ ವಹಿಸಿದರೂ ಇನ್ನೊಬ್ಬರಿಗೆ ದುಃಖ ಅನ್ನೋದು ಗೊತ್ತಿರೋದೇ ತಾನೇ?'' ಸ್ವಲ್ಪ ಹೊತ್ತು ಯೋಚಿಸಿ ಕಿರಣ್‌ ಮತ್ತೆ ನುಡಿದ, ``ನಾನು ನಿನಗೆ ಕೆಲವೊಂದು ಸಲಹೆ ಕೊಡಲು ಬಯಸುತ್ತೇನೆ. ಅದನ್ನು ನೀನು ಪರಿಪಾಲಿಸಿದರೆ ನಿನ್ನ ಎಲ್ಲಾ ಚಿಂತೆಗಳೂ ಒಂದು ಕ್ಷಣದಲ್ಲಿ ಮಾಯಾಗುತ್ತವೆ.''

``ನೀವು ಹೇಳಿದ್ದು ನಿಜ ಆಗುವುದಾದರೆ ಖಂಡಿತಾ ಹಾಗೇ ಮಾಡ್ತೀನಿ. ನನಗಂತೂ ಅತ್ತೆ ಮುನಿಸಿಕೊಳ್ಳದೆ ನಗುನಗುತ್ತಾ ಸಮಾಧಾನವಾಗಿದ್ದರೆ ಅಷ್ಟೇ ಸಾಕು. ನಿಮಗೆ ಗೊತ್ತೇ ಇದೆಯಲ್ಲ..... ಕಳೆದ ಸಲ ಬಂದವರು ಸಣ್ಣ ವಿಷಯ ದೊಡ್ಡದು ಮಾಡಿ ಕೋಪದಿಂದ ಊರಿಗೆ ಹೊರಟೇಹೋದರು.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ