ಅನಂತು ಜೊತೆ ಪದ್ಮಾರ ಮದುವೆ ನಿಶ್ಚಯವಾದಾಗ ಆಕೆಯ ತವರಿನವರು ಅದ್ಭುತವಾದ ಕೆಂಪು ಹರಳಿನ ಓಲೆ ಮಾಡಿಸಿಕೊಟ್ಟಿದ್ದರು. ಅದು ದಂಪತಿಗಳ ಪ್ರೀತಿಗೆ ಪ್ರಮುಖ ಸಾಕ್ಷಿಯಾಗಿತ್ತು. ಹೀಗಿರುವಾಗ ಆಕಸ್ಮಿಕವಾಗಿ ಹಬ್ಬದ ಗಡಿಬಿಡಿಯಲ್ಲಿ ಓಲೆ ಕಳೆದುಹೋಯಿತು. ಅದು ದಂಪತಿಗಳ ಜಗಳಕ್ಕೆ ಕಾರಣವಾಗಿ ಮಾತೇ ನಿಂತುಹೋಯಿತು. ಮುಂದೆ ಪದ್ಮಾರ ಮಗಳು ಸೀಮಂತಿನಿಯ ಮದುವೆ ನಿಶ್ಚಯಾದಾಗ, ಕಳೆದು ಹೋದ ಓಲೆ ಸಿಕ್ಕಿದ್ದನ್ನು ನೆನಪಿಸಿಕೊಂಡು ಮಗಳ ಬಳಿ ಹಳೆಯ ವೃತ್ತಾಂತ ಹೇಳುತ್ತಿದ್ದರು. ಮುಂದೆ ದಂಪತಿಗಳ ನಡುವಿನ ವೈಮನಸ್ಯ, ಮಗಳ ಮದುವೆ ನೆಪದಲ್ಲಿ ತಿಳಿಯಾದದ್ದು ಹೇಗೆ......?

ಇರುವ ಒಬ್ಬಳೇ ಮಗಳ ಮದುವೆ ನಿಶ್ಚಯವಾಗಲಿದೆ. ಅದನ್ನು ನೆನಸಿಕೊಂಡಾಗಲೇ ದಂಪತಿಗಳು ಇಬ್ಬರೂ ಸಂತಸ ಹೆಮ್ಮೆಯಿಂದ ಬೀಗುತ್ತಿದ್ದರು. ಇಬ್ಬರ ಕಾಲುಗಳು ನೆಲದ ಮೇಲೆ ನಿಲ್ಲುತ್ತಿರಲಿಲ್ಲ. ಮುದ್ದಿನ ಮೊದಲನೇ ಮಗಳು. ಅವಳು ಹುಟ್ಟಿದಾಗ ಅಜ್ಜ ಅಜ್ಜಿಗೂ ಬಲು ಆನಂದ, ``ಏನೋ ಅನಂತೂ...  ಒಂದು ರೂಪಾಂತ ಹೆಸರಿಡು, ಇಲ್ಲವೇ ಸೀಮಂತಿನಿ ಅಂತ ಹೆಸರಿಡು,'' ಎಂದು ಅವರೇ ಪ್ರೀತಿಯಿಂದ ಹೇಳಿದ್ದರು. ಕಡೆಗೆ ಸೀಮಂತಿನಿ ಎಂದೇ ಹೆಸರಿಟ್ಟರು.

ಮಗಳನ್ನು ಎಲ್ಲರೂ ತುಂಬಾ ಅಕ್ಕರೆಯಿಂದ ಬೆಳೆಸಿದ್ದರು. ಆದ್ದರಿಂದ ಅವಳಲ್ಲಿ ಒಳ್ಳೆಯ ಮಾನವೀಯ ಗುಣಗಳು ಮೈಗೂಡಿದ್ದವು. ಗುಣದ ಜೊತೆಗೆ ಅವಳು ಓದು, ಆಟೋಟಗಳಲ್ಲೂ ಮುಂದಿದ್ದಳು. ಜೊತೆಗೆ ಅಪ್ರತಿಮ ಸುಂದರಿ. ನಯ ವಿನಯ, ಹಿರಿಯರಿಗೆ ಗೌರವ, ಸಂಪ್ರದಾಯದ ಆಚಾರ ವಿಚಾರಗಳನ್ನು ಅರಿತಿದ್ದಳು. ಯಾರೇ ಆದರೂ ಮೆಚ್ಚಿ ಮದುವೆ ಮಾಡಿಕೊಂಡು ಹೋಗುತ್ತಾರೆ. ನೂಲಿನಂತೆ ಸೀರೆ ತಾಯಿಯಂತೆ ಮಗಳು ಎಂಬಂತೆ ನಮ್ಮ ಅನಂತುವಿನ ಮಗಳು ಯಾವುದರಲ್ಲಿ ಕಡಿಮೆ? ಜಾಸ್ತಿ ಓದಲಿಲ್ಲ ಅನ್ನುವುದೊಂದೇ. ಕಾಲ ಪರಿಸ್ಥಿತಿಯೂ ಹಾಗೆ ಇತ್ತು. ಊರು ಚಿಕ್ಕದು. ಶಿಕ್ಷಣಕ್ಕೆ ಸರಿಯಾದ ವ್ಯವಸ್ಥೆ ಇರಲಿಲ್ಲ. ಇದ್ದರೂ ಕೂಡ ಹುಡುಗಿಯರಿಗೆ ಶಿಕ್ಷಣ ಏಕೆ ಬೇಕು? ಸಹಿ ಮಾಡಲು ಬಂದರೆ ಸಾಕೆನ್ನುವವರೇ ಬಹಳ ಮಂದಿ ಇದ್ದರು.

ಮದುವೆ ವಿಷಯ ಬಂದಾಗ ಮಾತ್ರ, ಕಡಿಮೆ ಎಂದರೂ 10ರವರೆಗೆ ಓದಿರಬೇಕು. ಕಡಿಮೆ ಎಂದರೂ ಕನಿಷ್ಠ 7ನೇ ತರಗತಿ ಪಾಸಾಗಿರಬೇಕು ಅಂತ ಶುರುವಾಯಿತು. ಆಗ ವರದಕ್ಷಿಣೆ ಪಿಡುಗು ಪಸರಿಸಿತ್ತಾದರೂ ಕಲಿತ ಹುಡುಗಿಯರಿಗೆ ಕಂಡೀಶನ್‌ಮೇಲೆ ಸ್ವಲ್ಪ ರಿಯಾಯಿತಿ. ಮನಸ್ಸಿಗೆ ಬಂದಂತೆ ಕೇಳುತ್ತಿರಲಿಲ್ಲ. ಒಂದು ಹೆಣ್ಣು ಹುಟ್ಟಿದರೆ ಹುಣ್ಣು ಹುಟ್ಟಿದಂತೆ ಎನ್ನುವ ಕಾಲ ಅದಾಗಿತ್ತು.

ಅನಂತ ಭಟ್ಟರ ಹೆಂಡತಿ ಪದ್ಮಾ ಸೀಮಂತಿನಿಯ ತಾಯಿ ಕೂಡ ಏಳರವರೆಗೆ ಓದಿ ಅನಂತೂಗೆ ಮಾಲೆ ಹಾಕಿದ್ದು. ಅವಳಪ್ಪ ತುಂಬಾ ಸಿರಿವಂತರು. ಮಗಳಿಗೆ ಬೇಕಾದಷ್ಟು ಒಡವೆ ವಸ್ತ್ರ ಕೊಟ್ಟಿದ್ದರು.

`ಉಳ್ಳವರು ಶಿಲಾಲಯ ಮಾಡುವರು ನಾ ಏನು ಮಾಡಲಿ ಬಡವನಯ್ಯ' ಅನ್ನುವ ಸ್ಥಿತಿ ಭಟ್ಟರಿಗೇನೂ ಇರಲಿಲ್ಲ. ಆದರೂ ಪದ್ಮಾಳ ಅಪ್ಪ ಅಳಿಯನಿಗೆ ಕೈತುಂಬಾ ಕೊಟ್ಟು ದಿಬ್ಬಣ ಹೊರಡಿಸಿದ್ದರು. ಅಳಿಯ ಧಾರ್ಮಿಕ ಸದ್ಗುಣ ಸಂಪನ್ನ. ಜೊತೆಗೆ ಸುಂದರನಾಗಿದ್ದ. ಆದರೇನು ಅವಿಭಕ್ತ ಕುಟುಂಬ ಎಲ್ಲರೂ ಸಂತೋಷವಾಗಿದ್ದರು. ಮನೆ ನಂದಗೋಕುಲ ಎಂದೇ ಹೇಳಬಹುದು. ಹಳೇ ಸಂಪ್ರದಾಯದ ಮನೆಯನ್ನು ಇತ್ತೀಚೆಗೆ ಸ್ವಲ್ಪ ಮಟ್ಟಿಗೆ ಆಧುನಿಕ ಮನೆಯನ್ನಾಗಿ ಪರಿವರ್ತಿಸಿದ್ದರು. ಪೂರ್ತಿಯಾಗಿ ಬದಲಾಯಿಸಲು ಅಜ್ಜ ಒಪ್ಪಿರಲಿಲ್ಲ. ಅವರು ತುಂಬಾ ಸ್ಟ್ರಿಕ್ಟ್, ಜೊತೆಗೆ ಕೋಪಿಷ್ಟರು. ಅವರೆದುರು ನಿಂತು ಮಾತನಾಡುವ ಧೈರ್ಯ ಯಾರಿಗೂ ಇರಲಿಲ್ಲ. ಮನೆಯ ಎಲ್ಲ ಉಸ್ತುವಾರಿ ಅವರದೇ ಆಗಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ