ಹಂಚಿದಷ್ಟೂ ಪ್ರೀತಿ ಉಕ್ಕಿ ಹರಿಯುವ ಅಮೃತಧಾರೆ!

``ಅಮ್ಮಾ.... ಹೋಗಿ ಬರುತ್ತೇನೆ.....'' ಎಂದು ಹೇಳಿ ಅವಸರವಸರವಾಗಿ ಕೆಲಸಕ್ಕೆ ಹೊರಟು ನಿಂತಿದ್ದ ಮಗಳನ್ನು ಬಾಗಿಲಿನವರೆಗೂ ಬಂದು ನಿಂತು ಬೀಳ್ಕೊಂಡರು ಪಾರ್ವತಮ್ಮ. ನೀಳಕಾಯದ ಚೆಲುವಿನ ಮಗಳು.... ಸೆರಗನ್ನು ಬೀಸುತ್ತ ಸರಸರ ನಡೆದು ಹೋಗುವುದನ್ನೇ ಪ್ರೀತಿ ತುಂಬಿದ ಕಣ್ಣುಗಳಿಂದ ದಿಟ್ಟಿಸುತ್ತ ನಿಂತರು.

``ಪಾರೂ..... ಪಾರೂ....'' ಎಂದು ಒಳಗಿನಿಂದ ಪತಿ ಶಿವಮೂರ್ತಿಗಳು ಕರೆದಾಗಲೇ ಪಾರ್ವತಮ್ಮನಿಗೆ ಎಚ್ಚರವಾದುದು, ನಿಧಾನವಾಗಿ ನಡೆದು ಪತಿಯ ಬಳಿ ಬಂದರು.

ಮನಸ್ಸಿನ ತುಂಬ ಅವರಿಗೆ ಬೆಳೆದು ನಿಂತ ಮಗಳ ಆಲೋಚನೆಯೇ! ಮಗಳ ಮದುವೆಯ ಚಿಂತೆ ಬೆಳೆದು ಹೆಮ್ಮರವಾಗಿ ನಿಂತಿತ್ತು. ಅವರ ಪತಿ ಶಿವಮೂರ್ತಿಗಳೋ ಇಂಥ ವಿಷಯಗಳಲ್ಲಿ ವಿನಾಕಾರಣ ತಲೆಬಿಸಿ ಮಾಡಿಕೊಳ್ಳುವವರಲ್ಲ. ಅವರಿಗೆ ತಾವಾಯಿತು, ತಮ್ಮ ಪಾಡಾಯಿತು ಎಂಬಂಥ ಸ್ವಭಾವ. ಪಾರ್ವತಮ್ಮ ತಮ್ಮ ಮಾವನವರನ್ನು ನೋಡಿರಲಿಲ್ಲವಾದರೂ, ತಮ್ಮ ಮಗಳು ಹಠಮಾರಿತನದಲ್ಲಿ ತಾತನನ್ನೇ ಹೊತ್ತಿದ್ದಾಳೆ ಎಂದು ಪತಿಯಿಂದ ಕೇಳಿ ತಿಳಿದಿದ್ದರು. ನೀಳಕಾಯದ ವ್ಯಕ್ತಿತ್ವವನ್ನು ಮಾತ್ರವಲ್ಲದೆ ಸ್ವಭಾವದಲ್ಲೂ ತಾತನ ಹಾಗೆಯೇ ಸಿಟ್ಟು ಹಠಗಳನ್ನು  ಬೆಳೆಸಿಕೊಂಡಿದ್ದಳು.

ಅದೇ ತಮ್ಮ ಮಗಳು ಅರ್ಚನಾ ಗಂಡಾಗಿ ಹುಟ್ಟಿದ್ದಿದ್ದರೆ ಆಗ ಪರಿಸ್ಥಿತಿಯೇ ಬೇರೆಯಾಗಿರುತ್ತಿತ್ತು ಎಂದು ಪಾರ್ವತಮ್ಮ ನಿಡುಸುಯ್ದರು. ಆದರೆ ಅರ್ಚನಾಳೋ ಹೆಣ್ತನದ ಚೆಲುವನ್ನೆಲ್ಲಾ ಪಡೆದಿದ್ದರೂ, ಗುಂಡುಗೂಳಿಯ ಹಾಗೇ ಒರಟೊರಟಾಗೇ ನಡೆದುಕೊಳ್ಳುತ್ತಿದ್ದಳು.

ನಿವೃತ್ತ ಪೊಲೀಸ್‌ ಕಮೀಷನರ್‌ ಆಗಿದ್ದ ಶಿವಮೂರ್ತಿಗಳಿಗೆ, ಗಂಡು ಮಗನ ಸ್ವಭಾವ ಹೊತ್ತು, ತಮ್ಮ ಭುಜದೆತ್ತರಕ್ಕೂ ಬೆಳೆದು ನಿಂತಿದ್ದ ಮಗಳನ್ನು ಕಂಡರೆ, ವಿಪರೀತ ಹೆಮ್ಮೆ. ಮೊದಮೊದಲು ಪಾರ್ವತಮ್ಮ ತಮಗೆ ಒಂದೇ ಒಂದು ಹೆಣ್ಣಾಯಿತಲ್ಲ ಎಂದು ಕೊರಗಿದಾಗಲೆಲ್ಲ, ಶಿವಮೂರ್ತಿಗಳು ತಾವೇ ಠೇಂಕಾರದಿಂದ, ``ಅಲ್ವೇ...... ಪಾರೂ... ಅರ್ಚನಾ ಅಂಥ ಒಬ್ಬಳು ಮಗಳಿರುವಾಗ ನಮಗೇನೇ ಕೊರತೆ...?'' ಎಂದು ಅವಳನ್ನು ತಮ್ಮ ಮಗನಂತೆಯೇ ಬೆಳೆಸಿದ್ದರು. ಗಂಡು ಮಕ್ಕಳೇ ಕುಟುಂಬಕ್ಕೆ ಆಸ್ತಿ ಎಂಬ ವಿಷಯವನ್ನು ಅಲ್ಲಗಳೆಯುತ್ತಿದ್ದರು. ಪುಟ್ಟ ವಯಸ್ಸಿನಿಂದಲೇ ಅರ್ಚನಾ ತನಗೆ ಸರಿತೋರಿದ್ದನ್ನು ಮಾತ್ರ ಮಾಡುತ್ತ, ತನ್ನಿಷ್ಟದಂತೆಯೇ ಬೆಳೆದಳು. ಅವಳಿಗೆ ತಾನು ಮುಂದೆ ಗೃಹಿಣಿಯಾಗಿ ಬಾಳುವುದಕ್ಕಿಂತ ತನ್ನ ಸ್ವಂತ ಕಾಲ ಮೇಲೆ ನಿಂತು, ದುಡಿದು ಗಳಿಸಬೇಕು ಎಂದು ಆಶಿಸುತ್ತಿದ್ದಳು. ಸಣ್ಣ ವಯಸ್ಸಿನಿಂದಲೇ ಎಂದೆಂದೂ ಮದುವೆಯಾಗಬಾರದು ಎಂದು ನಿರ್ಧರಿಸಿದ್ದಳು. ಇದು ಪಾರ್ವತಮ್ಮನವರ ಚಿಂತೆಯನ್ನು ಮತ್ತಷ್ಟು ಹೆಚ್ಚಿಸಿತ್ತು. ಅರ್ಚನಾ ಓದಿನಲ್ಲಿ ಅಪಾರ ಶ್ರದ್ಧೆ ವಹಿಸಿ ತನ್ನಿಷ್ಟದಂತೆಯೇ ಸ್ನಾತಕೋತ್ತರ ಪದವಿಯಲ್ಲಿ ಸಾಹಿತ್ಯವನ್ನು ಆರಿಸಿಕೊಂಡು, ಕೊನೆಗೆ ಕಾಲೇಜೊಂದರಲ್ಲಿ ಲೆಕ್ಚರರ್‌ ಕೆಲಸಕ್ಕೆ ಸೇರಿ, ಜೀವನವನ್ನು ತನಗೆ ಬೇಕಾದಂತೆ ರೂಪಿಸಿಕೊಂಡಳು.

ಆ ದಿನ ಮತ್ತಷ್ಟು ಹೆಚ್ಚಾಗಿ ಮಗಳ ಬಗ್ಗೆ ಚಿಂತಿಸುತ್ತ, ಅವಳನ್ನು ಕಳುಹಿಸಿಕೊಟ್ಟು, ಬಾಗಿಲು ಹಾಕಿದ ನಂತರ, ಆರಾಮವಾಗಿ ದಿನಪತ್ರಿಕೆ ಓದುತ್ತ ಕುಳಿತಿದ್ದ ಪತಿರಾಯರ ಬಳಿ, ಸಿಡಿಮಿಡಿ ಎನ್ನುತ್ತ ಬಂದು ಕುಳಿತು.``ಏನೂಂದ್ರೆ.... ನನ್ನ ಮಾತು ಕೇಳ್ತಿದ್ದೀರಾ....?''

ತಮ್ಮ ಯೋಚನೆಗಳಿಗೆ ಸ್ವಲ್ಪವೂ ತಲೆ ಕೆಡಿಸಿಕೊಳ್ಳದೆ ನಿರಾಳವಾಗಿ, ಹರಟುತ್ತ, ಮಗಳನ್ನು ರೇಗಿಸುತ್ತ, ಮನೆ ಕ್ಲಬ್ಬು ಎಂದು ಸುತ್ತಿಕೊಂಡು ಹಾಯಾಗಿದ್ದ ಪತಿರಾಯರನ್ನು ಆಗಾಗ ಅವರು ಗದರಿಕೊಳ್ಳುತ್ತಿದ್ದುದುಂಟು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ