ಕಥೆ - ಮಾಲತಿ ಮೂರ್ತಿ 

``ನೀವು ನಿಮ್ಮ ನಿಮ್ಮ ಸೀಟ್‌ ಬೆಲ್ಟ್ ಗಳನ್ನು ಕಟ್ಟಿಕೊಳ್ಳಿರಿ. ವಿಮಾನ ಇನ್ನೇನು ಹೊರಡಲು ಸಿದ್ಧವಾಗಿದೆ,'' ಬೆಂಗಳೂರಿನಿಂದ ಅಮೆರಿಕಾದ ಕ್ಯಾಲಿಫೋರ್ನಿಯಾಗೆ ಹೊರಟಿದ್ದ ಏರ್‌ ಇಂಡಿಗೋ ವಿಮಾನದಲ್ಲಿದ್ದ ಪರಿಚಾರಕಿ ಮೈಕ್‌ನಲ್ಲಿ ಅನೌನ್ಸ್ ಮೆಂಟ್‌ ಮಾಡಿದಳು.

ಸಂಜನಾ ಏಕೋ ಮಂಕಾಗಿದದ್ದನ್ನು ಗಮನಿಸಿದ ಗೌರವ್, ``ನಿನಗೇಕೋ ಆಯಾಸವಾದಂತೆ ಕಾಣುತ್ತಿದೆ. ಸುಮ್ಮನೆ ಕಣ್ಣುಮುಚ್ಚಿ ಕುಳಿತುಕೋ, ಇಳಿಯಬೇಕಾದರೆ ನಾನೇ ಎಬ್ಬಿಸುವೆ,'' ಎಂದಾಗ ಸಂಜನಾ ಕಣ್ಣನ್ನೇನೋ ಮುಚ್ಚಿದಳು. ಆದರೆ ಅವಳಿಗೆ ಗೌರವ್ ಮತ್ತು ಅವರ ಮನೆಯವರ ಮುಖಗಳೇ ಎದುರು ಬಂದವು. ಸುರೇಶ್‌ ಮತ್ತು ಸುಲೋಚನಾ ಕುಟುಂಬಕ್ಕೆ ಸೇರಿದ ತಾನೇ ಧನ್ಯಳೆಂಬ ಭಾವನೆ ಅವಳಲ್ಲಿ ಮೂಡಿತ್ತು. ಸಂಜನಾ ತನ್ನಲ್ಲಿಯೇ ಆಲೋಚಿಸುತ್ತಿದ್ದಳು, ತಾನು ಇಂತಹ ಕುಟುಂಬಕ್ಕೆ ಸದಸ್ಯೆಯಾಗಿ ಬಂದದ್ದೇ ನನ್ನ ಪುಣ್ಯ. ನಾನು ಚಿಕ್ಕವಳಿದ್ದಾಗ ನನ್ನನ್ನು ಅವರ ಸಂಬಂಧಿಯೊಬ್ಬರಿಂದ ದತ್ತು ತೆಗೆದುಕೊಂಡಿದ್ದ ರಂತೆ. ಆದರೆ ನನ್ನ ಅಜ್ಜ, ಅಜ್ಜಿಯಾದಿಯಾಗಿ ಯಾರೂ ನನ್ನನ್ನು ಹೊರಗಿನವಳೆನ್ನುವಂತೆ ಕಂಡದ್ದೇ ಇಲ್ಲ. ಬದಲಾಗಿ ಎಲ್ಲರಿಗಿಂತ ತುಸು ಹೆಚ್ಚೇ ಎನ್ನಬಹುದಾದ ಪ್ರೀತಿಯನ್ನು ಈ ಕುಟುಂಬ ನನಗೆ ನೀಡಿದೆ.

ಸುರೇಶ್‌ ಮತ್ತು ಸುಲೋಚನಾ ದಂಪತಿಗಳಿಗೆ ನಾಲ್ವರು ಮಕ್ಕಳು. ಅವರಲ್ಲಿ ದೊಡ್ಡವಳಾದ ರೇಣುಕಾ ಮುಂಬೈನಲ್ಲಿದ್ದಳು. ಎರಡನೇ ಮಗಳು ಪ್ರಿಯಾಂಕಾ ಬೆಂಗಳೂರಿನಲ್ಲಿ ನೆಲೆಸಿದ್ದಳು. ಅಲ್ಲದೆ ಇನ್ನಿಬ್ಬರು ಗಂಡು ಮಕ್ಕಳು ತಂದೆಯ ವ್ಯವಹಾರಕ್ಕೆ ಸಹಾಯಕರಾಗಿದ್ದರು. ಸಂಜನಾಳನ್ನು ಕಂಡರೆ ಅವರೆಲ್ಲರಿಗೂ ಅಕ್ಕರೆ. ಅದರಲ್ಲಿಯೂ ರೇಣುಕಾಗಂತೂ ತುಂಬಾ ಪ್ರೀತಿ. ಅವಳು ಮುಂಬೈನಿಂದಲೇ ದಿನ ಕರೆ ಮಾಡಿ ಸಂಜನಾಳ ವಿದ್ಯಾಭ್ಯಾಸ, ಆರೋಗ್ಯ ಸೇರಿದಂತೆ ಅವಳ ಇಷ್ಟಾನಿಷ್ಟಗಳನ್ನು ತಿಳಿದುಕೊಳ್ಳುತ್ತಿದ್ದಳು.

ಇನ್ನೂ ಅಜಯ್‌ ಮತ್ತು ಅತುಲ್ ಚಿಕ್ಕಪ್ಪಂದಿರಂತೂ ಸಂಜನಾಳನ್ನು ಅತಿಯಾಗಿ ಹಚ್ಚಿಕೊಂಡಿದ್ದರು. ಅವರಿಗೆ ಮಕ್ಕಳಿದ್ದರೂ ಕೂಡ ಸಾಧ್ಯವಾದಾಗೆಲ್ಲಾ ನನ್ನನ್ನು ಶಾಲೆಗೆ ಕಳಿಸುವುದು, ಕರೆತರುವುದು ಮಾಡುತ್ತಿದ್ದರು. ಅವರ ಮಕ್ಕಳಾದ ಮಾನಸಿ ಮತ್ತು ಮಂಜರಿ ಸಹ ನನ್ನ ಆತ್ಮೀಯ ಒಡನಾಡಿಗಳಾಗಿದ್ದರು.

ಸಂಜನಾಗೆ, ಶೈಲಜಾ ಚಿಕ್ಕಮ್ಮ ಎಂದರೆ ಬಲು ಪ್ರೀತಿ. ಅವಳು ಯಾವಾಗಲೂ ಶೈಲಜಾ ಮತ್ತು ಅವಳ ಮಕ್ಕಳೊಂದಿಗೆ ಶಾಪಿಂಗ್‌, ಪಿಕ್‌ನಿಕ್‌, ಈಟ್‌ಔಟ್‌ ಎಂದೆಲ್ಲ ಹೊರಟುಬಿಡುತ್ತಿದ್ದಳು. ಹೀಗಾಗಿ ಶೈಲಜಾ ಸಂಜನಾಳ ಬಾಲ್ಯವನ್ನು ಇನ್ನಷ್ಟು ವರ್ಣಮಯವಾಗಿಸಿದ್ದಳು.

ಇನ್ನು ಇವರೆಲ್ಲರಿಗಿಂತಲೂ ಅತ್ಯಂತ ಮುಖ್ಯವಾದವರೆಂದರೆ ಕಿರಣ್‌ ಅಂಕಲ್. ಇವರು ನನ್ನ ಕುಟುಂಬಕ್ಕೆ ಸೇರಿದವರಲ್ಲ. ಆದರೆ ಹಿಂದಿನಿಂದಲೂ ನಮ್ಮ ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದರು. ನಮ್ಮ ಅಜಯ್‌ ಚಿಕ್ಕಪ್ಪನ ಸ್ನೇಹಿತ. ಇವರು ನನ್ನನ್ನು ನೋಡಲು ಆಗಾಗ ಬರುತ್ತಿದ್ದರು. ನನ್ನ ವಿದ್ಯಾಭ್ಯಾಸ ಕುರಿತಂತೆ ಯಾವುದೇ ರೀತಿಯ ತೀರ್ಮಾನ ತೆಗೆದುಕೊಳ್ಳಬೇಕಾದಲ್ಲಿ ಇವರು ಪ್ರಮುಖ ಪಾತ್ರವಹಿಸುತ್ತಿದ್ದರು. ಮುಂದೆ ನಾನು ಮೈಕ್ರೋ ಬಯಾಲಜಿ ಬಗ್ಗೆ ವ್ಯಾಸಂಗ ಮಾಡಬೇಕೆನ್ನುವುದಕ್ಕೂ ಇವರೇ ಕಾರಣ. ಜೊತೆಗೆ ಗೌರವ್ ನನ್ನು ಮದುವೆಯಾಗಬೇಕೆಂದು ನಿರ್ಧರಿಸಿದಾಗಲೂ ನನಗೆ ಕಿರಣ್‌ ಅಂಕಲ್ ಫುಲ್ ಸಪೋರ್ಟ್‌ ಮಾಡಿದ್ದರು. ಆಗೆಲ್ಲ ನನಗೆ ನನ್ನ ತಂದೆ ಇದ್ದಿದ್ದರೆ ಇವರಂತೆ ಇರುತ್ತಿದ್ದರೇನೋ? ಎನಿಸುತ್ತಿತ್ತು ಜೊತೆಗೆ ಇವರೇಕೆ ಒಬ್ಬರೇ ಇದ್ದಾರೆಂದು ಕೇಳಬೇಕೆನಿಸುತ್ತಿತ್ತು. ಇಂತಹ ಪ್ರೀತಿ ತೋರಿಸುವವರನ್ನೆಲ್ಲ ಬಿಟ್ಟು ನಾನು ಗೌರವ್ ನೊಂದಿಗೆ ಅಮೆರಿಕಾಗೆ ಹೊರಟಿರುವುದು ನನಗೆ ಬಹಳ ಬೇಸರವೆನಿಸುತ್ತಿದೆ. ಇದುವರೆಗೂ ನನ್ನದಾಗಿದ್ದ ಅಜ್ಜ ಅಜ್ಜಿಯವರೊಂದಿಗಿನ ಬೆಳಗಿನ ವಾಕಿಂಗ್‌, ಸೋದರ, ಸೋದರಿಯರೊಡನೆ ಆಟ, ಜಗಳ, ಕಿರಣ್‌ ಅಂಕಲ್‌ರ ಭೇಟಿ ಎಲ್ಲವನ್ನೂ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ ಎನಿಸಲಾರಂಭಿಸಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ