ಕಥೆ - ಭವಾನಿ ಪ್ರಸಾದ್‌ 

``ಭಕ್ತ ಬಂಧುಗಳೇ, ಈ ಶರೀರ ನಶ್ವರವಾದುದು. ಇದರಲ್ಲಿರುವ ಆತ್ಮ ಪರಮಾತ್ಮನೊಡನೆ ಒಂದಾದಾಗಲೇ ನಿಜವಾದ ಆನಂದ, ಪರಮಾನಂದ ದೊರೆಯುವುದು. ಆದರೆ ಕಾಮ, ಕ್ರೋಧ, ಲೋಭಗಳೆಂಬ ತೊಡಕುಗಳು ಈ ಸಾಧನಾ ಮಾರ್ಗದಲ್ಲಿ ಅಡ್ಡಿಯಾಗಿ ನಿಂತಿವೆ. ಈ ತೊಡಕುಗಳನ್ನು ನಿವಾರಿಸಿಕೊಂಡು ಮುನ್ನಡೆದಾಗ ನೀವು ಮುಕ್ತಿ ಪಡೆಯುವುದು ಖಂಡಿತ,'' ಸ್ವಾಮಿ ದಿವ್ಯಾನಂದರ ಓಜಸ್ವಿ ವಾಣಿಯು ಮೊಳಗುತ್ತಿತ್ತು.

ನಗರದ ಹವಾನಿಯಂತ್ರಿತ ಭವನದ ವೇದಿಕೆಯ ಮೇಲೆ ಸ್ವಾಮೀಜಿ ಕುಳಿತಿದ್ದರು. ಕಾಷಾಯ ರೇಷ್ಮೆ ವಸ್ತ್ರ, ಕೊರಳಲ್ಲಿ ರುದ್ರಾಕ್ಷಿ ಮಾಲೆ, ಹಣೆಯ ಮೇಲೆ ಚಂದನದ ತಿಲಕ ಇವುಗಳು ಸ್ವಾಮೀಜಿಯ ವ್ಯಕ್ತಿತ್ವಕ್ಕೆ ಮೆರುಗು ನೀಡಿದ್ದವು.

ನಗರದೆಲ್ಲೆಡೆ ಸ್ವಾಮೀಜಿಯ ದೊಡ್ಡ ಪೋಸ್ಟರ್‌ಗಳು ಕಂಡುಬರುತ್ತಿದ್ದವು. ಸ್ವಾಮೀಜಿ ಸಿದ್ಧಪುರುಷರೆಂದೂ, ಅವರ ಕೃಪಾದೃಷ್ಟಿ ಬಿದ್ದೊಡನೆ ಕಷ್ಟಗಳು ದೂರವಾಗುವುದೆಂದೂ ಪ್ರಚಾರ ಮಾಡಲ್ಪಟ್ಟಿತ್ತು. ಎಲ್ಲ ಕಡೆಯೂ ಜನರು ಸ್ವಾಮೀಜಿಯ ಮಹಿಮೆ ಬಣ್ಣಿಸುತ್ತಿದ್ದರು. ಅವರ ದರ್ಶನಕ್ಕಾಗಿ ಜನಸಾಗರವೇ ಹರಿದು ಬರುತ್ತಿತ್ತು.

ದಿನದಲ್ಲಿ ಬೆಳಗ್ಗೆ, ಮಧ್ಯಾಹ್ನ ಮತ್ತು ಸಾಯಂಕಾಲ ಹೀಗೆ 3 ಸಲ ಸ್ವಾಮೀಜಿ ಜನರಿಗೆ ದರ್ಶನ ದಯಪಾಲಿಸುತ್ತಿದ್ದರು. ಸಾಯಂಕಾಲದ ದರ್ಶನ ಪ್ರವಚನದ ನಂತರ ಇರುತ್ತಿತ್ತು. ಆಗಷ್ಟೇ ಅವರ ಪ್ರವಚನ ಮುಗಿದಿತ್ತು. ಪ್ರವಚನ ಮಂದಿರ ಬಣ್ಣಬಣ್ಣದ ಬಲ್ಬ್ ಗಳ ಬೆಳಕಿನಿಂದ ಕಂಗೊಳಿಸುತ್ತಿತ್ತು. ತಾಜಾ ಗುಲಾಬಿ ಹೂಗಳಿಂದ ಅಲಂಕೃತವಾಗಿದ್ದವು ವೇದಿಕೆಯ ಪರಿಮಳ ಆ ಹಾಲ್‌ತುಂಬ ಹರಡಿತ್ತು.

ಸ್ವಾಮೀಜಿಯ ಚರಣಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆಯಲು ಜನರು ಸಾಲುಗಟ್ಟಿ ನಿಂತಿದ್ದರು. ಆಶ್ರಮದ ಸ್ವಯಂಸೇವಕರು ಕಾಣಿಕೆ ನೀಡಿ ಆಶೀರ್ವಾದ ಪಡೆಯುವಂತೆ  ಭಕ್ತರನ್ನು ಪ್ರೇರೇಪಿಸುತ್ತಿದ್ದರು.

ಪ್ರವಚನ ಮತ್ತು ದರ್ಶನದ ಕಾರ್ಯಕ್ರಮ ರಾತ್ರಿ 9 ಗಂಟೆಗೆ ಮುಗಿಯಿತು. ಜನರೆಲ್ಲ ಸ್ವಾಮೀಜಿಯ ಗುಣಗಾನ ಮಾಡುತ್ತಾ ತೆರಳಿದರು. ಸ್ವಾಮೀಜಿಯು ತಮ್ಮ ವಿಶ್ವಾಸಪಾತ್ರ ಶಿಷ್ಯರಾದ ಸ್ವಾಮಿ ಶ್ರದ್ಧಾನಂದಜೀ ಮತ್ತು ಸ್ವಾಮಿ ಸತ್ಯಾನಂದಜೀ ಅವರೊಡನೆ ತಮ್ಮ ಕೋಣೆಗೆ ನಡೆದರು.

ಆಶ್ರಮದ ಸ್ವಯಂಸೇವಕರೆಲ್ಲ ತಮ್ಮ ತಮ್ಮ ಕೆಲಸ ಮುಗಿಸಿ ಹೊರಟ ನಂತರ ಈ ಇಬ್ಬರು ಆಪ್ತಶಿಷ್ಯರು ಕೋಣೆಯ ಬಾಗಿಲನ್ನು ಭದ್ರಪಡಿಸಿ ಕುಳಿತುಕೊಂಡರು.

``ಇಂದಿನ ಕಾಣಿಕೆ ಚೀಲವನ್ನು ಸುರಿಯಿರಿ. ಅದರ ಎಣಿಕೆ ಕೆಲಸ ಮುಗಿಸೋಣ,'' ಸ್ವಾಮಿ ಶ್ರದ್ಧಾನಂದಜೀ ತಮ್ಮ ಕಾಷಾಯ ಜುಬ್ಬಾದ ತೋಳನ್ನು ಮೇಲೇರಿಸುತ್ತಾ ಹೇಳಿದರು.

``ಬೆಳಗ್ಗೆಯಿಂದ ಈ ಮೂರ್ಖ ಜನರ ಸ್ವಾಗತ ಸತ್ಕಾರದಲ್ಲಿ ನಮ್ಮ ನಶ್ವರ ಶರೀರ ಬಳಲಿಬಿಟ್ಟಿದೆ. ಈ ಕೆಲಸವನ್ನು ಬೇಗ ಮುಗಿಸಿ ವಿಶ್ರಾಂತಿ ತೆಗೆದುಕೊಳ್ಳೋಣ,'' ಸ್ವಾಮಿ ಸತ್ಯಾನಂದಜೀ ಮೈ ಮುರಿಯುತ್ತಾ ಒಪ್ಪಿಗೆ ಸೂಚಿಸಿದರು.

ಜನರು ಕಾಣಿಕೆ ಹಣದೊಂದಿಗೆ ಸಮರ್ಪಿಸಿದ್ದ ಹೂಗಳು ಮತ್ತು ಇತರೆ ವಸ್ತುಗಳನ್ನು ಬೇರ್ಪಡಿಸುತ್ತಾ ಇಬ್ಬರೂ ಹಣವನ್ನು ಒಂದೆಡೆ ಗುಡ್ಡೆ ಮಾಡತೊಡಗಿದರು. ಅವರು ಮತ್ತೇನನ್ನೋ ಹುಡುಕುತ್ತಿರುವಂತೆ ತೋರುತ್ತಿತ್ತು.

ಸ್ವಾಮಿ ಶ್ರದ್ಧಾನಂದಜೀ ಮತ್ತೊಮ್ಮೆ ಕೆಂಪು ಗುಲಾಬಿ ಹೂಗಳ ರಾಶಿಯನ್ನು ತಡಕಾಡುತ್ತಿದ್ದಂತೆ ಅವರ ಕಣ್ಣುಗಳಲ್ಲಿ ಹೊಳಪು ಕಂಡಿತು, ``ಓಹೋ! ಸಿಕ್ಕಿತು. ನೋಡಿ,'' ಎಂದು ಸಂತೋಷದಿಂದ ಕೂಗಿದರು.

ಕೆಂಪು ಬಣ್ಣದ ರೇಷ್ಮೆ ಬಟ್ಟೆಯಲ್ಲಿ ಸುತ್ತಿದ್ದ ಗಂಟೊಂದು ಅವರ ಕೈಯಲ್ಲಿತ್ತು. ಸ್ವಾಮಿ ಸತ್ಯಾನಂದಜೀ ಕೂಡಲೇ ಅದನ್ನು ತೆಗೆದುಕೊಂಡು ಬಿಡಿಸಿ ನೋಡಿದರು. ಅದರಲ್ಲಿ 1 ಲಕ್ಷ ರೂಪಾಯಿಯ ಹೊಸ ನೋಟುಗಳ ಕಟ್ಟು ಕಣ್ಣು ಕೋರೈಸುವಂತಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ