ಪತ್ನಿ : ಇಂದಿನ ಕಾಲೇಜ್ ಹುಡುಗರಿಗೆ ಖಂಡಿತಾ ಸ್ವಲ್ಪ ತಿಳಿವಳಿಕೆ ಇಲ್ಲ ಬಿಡ್ರಿ.
ಪತಿ : ಯಾಕೆ ಹಾಗೆ ಹೇಳ್ತೀಯಾ?
ಪತ್ನಿ : ಜೆಂಟ್ಸ್ ಟಾಯ್ಲೆಟ್ಗೆ ಹೋದಾಗ ಇವರುಗಳು ಅಲ್ಲಿ `ಹೇಮಾ ಐ ಲವ್ ಯೂ!’ ಅಂತ ಗೀಚಿ ಬರ್ತಾರೆ. ಅಲ್ಲಿಗೆ ಹೇಮಾ ಹೋಗಿ ನೋಡ್ತಾಳೇನು? ದಡ್ಡ ಶಿಖಾಮಣಿಗಳನ್ನು ತಂದು!
ಸದಾಶಿನ ಹೆಂಡತಿ ಅಕಾಲ ಮರಣಕ್ಕೆ ತುತ್ತಾದಾಗ ಅವನು ಬಹಳ ಗೋಳಾಡತೊಡಗಿದ. ಆಗ ಅವನ ಗೆಳೆಯರು ಬಂದು ಸಮಾಧಾನಪಡಿಸಿದರು.
ಮೋಹನ್ : ಸಮಾಧಾನ ಮಾಡ್ಕೋ, ನಿನಗೆ ಅರ್ಜೆಂಟಾಗಿ ಏನಾದ್ರೂ ಬೇಕಿತ್ತೇ?
ಸದಾಶಿವ : ಲ್ಯಾಪ್ಟಾಪ್ ತಗೊಂಬಾ, ಈಗಲೇ ನಾನು ಫೇಸ್ಬುಕ್ನಲ್ಲಿ ಸ್ಟೇಟಸ್ ಸಿಂಗಲ್ ಅಂತ ನಮೂದಿಸಬೇಕು.
ಅಪರೂಪಕ್ಕೆ ಸೋಮಶೇಖರ ದಂಪತಿಗಳು ಚಂದ್ರಶೇಖರ ಅವರ ಮನೆಗೆ ಬಂದಿದ್ದರು. ಎಂದಿನ ಕುಶಲೋಪರಿ, ಕಾಫಿ ತಿಂಡಿಗಳಾದ ನಂತರ, ಗೆಳೆಯರ ಪತ್ನಿಯರು ಹರಟಲು ಕುಳಿತರು.
ರೇವತಿ : ಈಗಿನ ಹೊಸ ಟಿ.ವಿ. ಜಾಹೀರಾತುಗಳಲ್ಲಿ ಅದೇನೇನೋ ಕೊರಳ ಸರದ ಲಾಕೆಟ್, ಡಾಲರ್, ಬ್ರೇಸ್ಲೆಟ್ ತೋರಿಸ್ತಾರಪ್ಪ, ಅದರಿಂದ ದುರಭ್ಯಾಸಗಳು ಬಿಟ್ಟು ಹೋಗುತ್ತಂತೆ.
ಮಾಲತಿ : ಹೌದು ರೀ, ಈ ಗಂಡಂದಿರಿಗೆ ಬುದ್ಧಿ ಕಲಿಸಲು ನಾವು ಅಂಥದ್ದನ್ನು ಬೇಗ ಕೊಂಡು ಅವರಿಗೆ ತೊಡಿಸಬೇಕು.
ಚಂದ್ರಶೇಖರ್ : ಅದು ಬರೀ ಹೆಂಗಸರಿಗೆ ಮಾತ್ರವಲ್ಲ ಮಾಲತಿ, ಗಂಡಂದಿರಿಗೂ ಲಾಭ ತರುತ್ತದೆ. ಇವತ್ತೇ ನಾನೂ, ಸೋಮು ಹೋಗಿ 2-2 ಸೆಟ್ ತಂದುಬಿಡ್ತೀವಿ. ಆಗ ಹೆಂಗಸರು ಮಾತಿಗೆ ಮುಂಚೆ ಮುನಿಸಿಕೊಂಡು ತವರಿಗೆ ಹೋಗ್ತೀವಿ, ಮಕ್ಕಳನ್ನು ನೋಡಿಕೊಳ್ಳಿ ಕಿಟಿ ಪಾರ್ಟಿಗೆ ಹೋಗ್ತೀವಿ, ಅಂತ್ಹೇಳೋದೆಲ್ಲ ತಪ್ಪುತ್ತೆ.
ಸೋಮಶೇಖರ್ : ಸರಿಯಾಗಿ ಹೇಳಿದೆ ಚಂದ್ರು, ಈ ಶೋಷಮ್ಮಂದಿರ ಕಾಟ ಸಾಕಾಗಿ ಹೋಗಿದೆ!
ಗುಂಡ ಬೆಳಗ್ಗೆಯಿಂದಲೇ ವಾಟ್ಸ್ಆ್ಯಪ್ ನೋಡುತ್ತಾ ಕುಳಿತಿದ್ದ. ಅವನ ಫ್ರೆಂಡೊಬ್ಬಳು ಸ್ಯಾಂಡ್ವಿಚ್ ಫೋಟೋ ಅಪ್ಲೋಡ್ಮಾಡಿ, ಬನ್ನಿ ಟಿಫನ್ ಮಾಡೋಣ, ಎಂದು ಬರೆದಿದ್ದಳು. ಅದಕ್ಕೆ ಗುಂಡ, `ಆಹಾ… ಬ್ರೇಕ್ಫಾಸ್ಟ್ ಭಲೇ ಬೊಂಬಾಟಾಗಿದೆ,’ ಎಂದು ಕಮೆಂಟ್ ಮಾಡಿದ. ಇದನ್ನು ಕಂಡು ಕೋಪಗೊಂಡ ಅವನ ಹೆಂಡತಿ, ಮಧ್ಯಾಹ್ನ 3 ಗಂಟೆ ಆದರೂ ಊಟ ಹಾಕಲಿಲ್ಲ. ನಂತರ ಮೆಲ್ಲಗೆ, ‘ಊಟ ಮನೆಯಲ್ಲೇ ಮಾಡ್ತೀರೋ ಅಥವಾ ವಾಟ್ಸ್ಆ್ಯಪ್ನಲ್ಲೋ?’ ಎಂದು ಪ್ರಶ್ನಿಸಿದಳು
ಮ್ಯಾನೇಜರ್ : ಏನಯ್ಯ ಗುಂಡ…. ಹೀಗಾ ಕೆಲಸ ಮಾಡೋದು? ಯಾವತ್ತಾದ್ರೂ ಗೂಬೆ ನೋಡಿದ್ದೀಯಾ?
ಗುಂಡ (ತಲೆ ಕೆಳಗೆ ಹಾಕುತ್ತಾ) : ಇಲ್ಲ ಸಾರ್…
ಮ್ಯಾನೇಜರ್ : ಅಲ್ಲೇನು ನೋಡ್ತೀಯಾ ನಿನ್ನ ತಲೆ…. ಇಲ್ಲಿ ನನ್ನ ಕಡೆ ನೋಡು!
ಪತ್ನಿ : ನೋಡ್ರಿ, ಇದೇ ತರಹ ನಿಮ್ಮ ಕೂದಲು ಉದುರುತ್ತಿದ್ದರೆ, ನಾನು ನಿಮಗೆ ವಿಚ್ಛೇದನ ಕೊಡ್ಬೇಕಾಗುತ್ತೆ.
ಪತಿ : ಛೇ….ಛೇ, ಮೊದಲೇ ಹೇಳಬಾರದಿತ್ತೇ? ಕಡು ಮೂರ್ಖನಂತೆ ಕಂಡ ಕಂಡ ಹೇರ್ ಆಯಿಲ್ ಬಳಸಿ ಅದನ್ನು ಕಾಪಾಡಿಕೊಳ್ಳಲು ಎಷ್ಟು ಕಷ್ಟಪಡ್ತಿದ್ದೀನಿ!
ಕಿರಣ್ : ಈ ವಿಮೆಯ ಕಂಪನಿಗಳವರು ನಿಜಕ್ಕೂ ಕೆಟ್ಟವರು. ಹೆಚ್ಚು ಗಳಿಸುವವರ ಹೆಂಡತಿಯರೆದುರು ಕುಳಿತು, ಗಂಡ ಸತ್ತ ನಂತರ ಸಿಗುವ ಲಾಭಗಳ ಕುರಿತು ಹೇಳುತ್ತಲೇ ಇರುತ್ತಾರೆ.
ವರುಣ್ : ಓ ಅದಕ್ಕೇ ಇರಬೇಕು… ಅಗಾಗ ನನ್ನ ಹೆಂಡತಿ ನನ್ನ ವಯಸ್ಸಿನ ಕುರಿತಾಗಿ ಪ್ರಶ್ನೆ ಕೇಳಿ ಕೇಳಿ ಸಂತೋಷಪಡುತ್ತಾ, ಡಾರ್ಲಿಂಗ್, ನಿಮ್ಮ ಬೆಲೆ ನಿಮಗೆ ಗೊತ್ತಿಲ್ಲ ಬಿಡಿ ಅಂತಿದ್ಲು.
ಗುಂಡ ಅಪರೂಪಕ್ಕೊಮ್ಮೆ ಮಾವನ ಮನೆಗೆ ಬಂದಿದ್ದ. ಅವನ ಅತ್ತೆ ದೊಡ್ಡ ಮನಸ್ಸು ಮಾಡಿ, “ಅಪರೂಪಕ್ಕೆ ಬಂದಿದ್ದೀರಿ, ವಾಂಗಿಭಾತ್ ಬೇಕೋ ಅಥವಾ ಬಿಸಿಬೇಳೆ ಭಾತ್ ಬೇಕೋ?” ಎಂದು ವಿಚಾರಿಸಿಕೊಂಡರು.
“ಏನೋ ಒಂದು ಮಾಡಿ, ಹಾಳಾಗಿ ಹೋಗಲಿ. ಆದರೆ ನಿಮ್ಮ ಮಗಳ ತರಹ ಮುಕ್ಕಾಲು ಭಾಗದ ಅಡುಗೆ ಕೆಲಸ ನನ್ನ ಕೈಲೇ ಮಾಡಿಸಬೇಡಿ!” ಎಂದು ಗುಂಡ ಅವಲತ್ತುಕೊಂಡ.
ನವ ವಿವಾಹಿತ ಜೋಡಿಯೊಂದು ಹನಿಮೂನ್ ನೆಪದಲ್ಲಿ ಸಿಂಗಪೂರ್ ನಗರದ ವೀಕ್ಷಣೆಗೆ ಹೊರಟಿತು. ಗಂಡ ತನ್ನ ಹೊಸ ಹೆಂಡತಿಯ ಕಂಗಳನ್ನೇ ದಿಟ್ಟಿಸುತ್ತಾ, “ಈ ನಿನ್ನ ಕಂಗಳಲ್ಲೇ ನನಗೆ ಇಡೀ ಸಿಂಗಪೂರ್ ಸಿಟಿ ಕಾಣಿಸುತ್ತಿದೆ,” ಎಂದು ರೊಮ್ಯಾಂಟಿಕ್ ಆಗಿ ನುಡಿದ.
ರೊಮಾನ್ಸ್ ನ ಗಂಧವರಿಯದ ಅವಳು, “ಹಾಗೇಂತ ನನ್ನನ್ನೇ ನೋಡುತ್ತಾ ಇರಬೇಡಿ. ಸಿಂಗಪೂರ್ ಪಕ್ಕದ ಮಲೇಷಿಯಾ ನಗರವನ್ನೂ ನಾವು ನೋಡಬೇಕಿದೆ,” ಎನ್ನುವುದೇ?
ಇವನ ಮಾತು ಕೇಳಿಸಿಕೊಂಡ ದಾರಿಹೋಕನೊಬ್ಬ, “ಅವರ ಕಂಗಳನ್ನು ಸರಿಯಾಗಿ ದೃಷ್ಟಿಸಿ, ಯಾವ ಹಾದಿಯಲ್ಲಿ ಟ್ರಾಫಿಕ್ಜ್ಯಾಮ್ ಇಲ್ಲಾಂತ ಹೇಳಿ, ನಾನು ಆ ಹಾದಿಯಲ್ಲಿ ಬೇಗ ಹೋಗಿ ಬೇರೆ ಊರು ಸೇರಬೇಕು,” ಎಂದುಬಿಡುವುದೇ?
ರಾಜೇಶ್ : ನೀನು ಯಾವ ಚಿತ್ರ ಮಿಸ್ ಮಾಡಿದರೂ ಅಮೀರ್ಖಾನ್ನ `ಗಜನೀ’ ಮಾತ್ರ ಮಿಸ್ ಮಾಡಬೇಡ.
ಮಹೇಶ್ : ಅದೇಕೆ? ಅಷ್ಟೊಂದು ಚೆನ್ನಾಗಿದೆಯಾ?
ರಾಜೇಶ್ : ಹಾಗಲ್ಲ. ಈ ಹೆಂಡತಿಯರ ಕಿರಿಕಿರಿ ತಪ್ಪಿಸಿಕೊಳ್ಳಲು, ಅವಳು ಹೇಳಿದ್ದನ್ನೆಲ್ಲ ಕೇಳಿಸಿಕೊಂಡು, 15 ನಿಮಿಷಗಳ ನಂತರ ಅವನಂತೆಯೇ ಎಲ್ಲಾ ಮರೆತುಬಿಡುವುದನ್ನು ಕಲಿಯುವುದಕ್ಕಾಗಿ!
ಗುಂಡ : ನೀನೊಂದು ವಿಷಯ ಗಮನಿಸಿದೆಯಾ? ಆ ಹಾಳಾದ ಕಿಟ್ಟಿಯ ವಾಟ್ಸ್ಆ್ಯಪ್ ಸ್ಟೇಟಸ್ನ್ನು 7 ದಿನಗಳಿಂದ ಫಾಲೋ ಮಾಡ್ತಿದ್ದೀನಿ, ಡ್ರೈವಿಂಗ್ ಅಂತ್ಲೇ ಬರ್ತಿದೆ.
ವೆಂಕಿ : ಬಹುಶಃ ಇಷ್ಟು ಹೊತ್ತಿಗೆ ಅವನು ಆಫ್ಘಾನಿಸ್ತಾನನ್ನೂ ದಾಟಿರಬಹುದು.
ಸಾಮಾನ್ಯವಾಗಿ ಹೊಸದಾಗಿ ಮದುವೆಯಾದ ಗಂಡಸು ಸಪ್ಪೆಮೋರೆ ಹಾಕಿಕೊಂಡಿದ್ದರೆ, ಅವನ ಅವಿವಾಹಿತ ಗೆಳೆಯರು ಏನಾಯಿತು, ಯಾಕೆ ಎಂದು ವಿಚಾರಿಸಿಕೊಳ್ತಾರೆ. ಅವನು, ಏನಿಲ್ಲ. ಹೆಂಡತಿ ಜೊತೆ ವಾದ ವಿವಾದ ನಡೆಯಿತು ಅಂತ ವಿವರಣೆ ಕೊಡ್ತಾನೆ. ಅಸಲಿಗೆ ವಾದ ವಿವಾದ ಏನೂ ಇರುವುದಿಲ್ಲ. ಅವಳು ಬೈದದ್ದನ್ನು ಇವನು ಬೈಸಿಕೊಂಡು ತೆಪ್ಪಗೆ ಬಂದಿರ್ತಾನೆ. ಕ್ರಮೇಣ ಅವನು ಪದೇಪದೇ ತನ್ನ ಜೋಲುಮುಖ ಹೊತ್ತು ತಿರುಗಾಡುತ್ತಿದ್ದರೆ, ಗೆಳೆಯರೆಲ್ಲ ಅನಿರುವುದೇ ಹಾಗೆ ಅಂದುಕೊಂಡುಬಿಡ್ತಾರಂತೆ!
ಪ್ರತಿ ಭಾರತೀಯ ಪತ್ನಿಯೂ ಜೀವನದಲ್ಲಿ ಒಂದಲ್ಲ ಒಂದು ಸಲ ತನ್ನ ಪತಿಗೆ ಈ ಮಾತನ್ನು ಹೇಳಿರದೆ ಇರಲು ಸಾಧ್ಯವಿಲ್ಲ, “ನನ್ನಂಥ ಸೀದಾಸಾದಾ ಸ್ವಭಾವದ, ಹಸುಗೂಸಿನಂಥ ಹೆಂಡತಿ ಸಿಕ್ಕಿದ್ದಕ್ಕೆ ದೇವರಿಗೆ ಪ್ರತಿದಿನ ಈಡುಗಾಯಿ ಒಡೆಯಿರಿ. ಬೇರೆ ಯಾರಾದ್ರೂ ಗಯ್ಯಾಳಿ ಆಗಿದ್ರೆ ನಿಮ್ಮ ಗತಿ ಗೋವಿಂದ ಆಗಿರುತ್ತಿತ್ತು,” ಪಾಪ, ಆ ಪತಿರಾಯ ಅಂದುಕೊಳ್ತಾನೆ, ಹಸುಗೂಸಿನಂಥ ಇವಳ ಜೊತೆ ಏಗುವುದೇ ಹೀಗಾದರೆ ಇನ್ನು ಗಯ್ಯಾಳಿ ಹೇಗಿರ್ತಾಳೋ…..?!
ವಾಣಿ : ತ್ರೇತಾಯುಗದಲ್ಲಿ ರಾಮ ವನವಾಸಕ್ಕೆ ಹೊರಟೊಡನೆ ಸೀತೆ ಹಿಂಬಾಲಿಸಿದ್ದು ಯಾಕೆ ಗೊತ್ತೇ?
ರಾಣಿ : ಯಾಕಿರಬಹುದು ಅಂತೀಯಾ?
ವಾಣಿ : ಮನೆಯಲ್ಲಿ ಮೂವರು ಅತ್ತೆಯರ ಕಾಟ ತಪ್ಪಿಸಿಕೊಳ್ಳಲು ಕಾಡು ಪಾಲಾಗುವುದೇ ಮಿಗಿಲು ಅಂತ ಭಾವಿಸಿರಬೇಕು.