ದೀಪಿಕಾಳ ಕಷ್ಟಗಳು ಹೆಚ್ಚಲಿವೆಯೇ?
ಒಬ್ಬ ಮಾಜಿ ರಾ ಆಫೀಸರ್ ದೀಪಿಕಾಳ ಮೇಲೆ ಅವಳು ್ತ್ಯಾದಲ್ಲಿ ನಡೆದ ್ಯ ಪ್ರೊಟೆಸ್ಟ್ ನಲ್ಲಿ ಭಾಗವಹಿಸಲು 5 ಕೋಟಿ ಕೇಳಿದ್ದಳೆಂದು ಕಪೋಲಕಲ್ಪಿತ ಗಂಭೀರ ಆರೋಪ ಹೊರಿಸಿ, ಟೆನ್ಶನ್ ಹೆಚ್ಚಿಸಿದ್ದಾರೆ. ಇಷ್ಟು ದಿನ ಸಮಾಧಿಯಲ್ಲಿದ್ದ ಈ ಸಂಗತಿ ಈಗ ದಿಢೀರನೆ ಹೊರಗೆದ್ದು ಬಂದದ್ದು ಹೇಗೆ, ಯಾಕೆ ಎಂಬುದು ತರ್ಕಕ್ಕೆ ನಿಲುಕದ ವಿಷಯ. ಇದರಿಂದ ಆತಂಕಗೊಂಡ ದೀಪಿಕಾಳ ರಕ್ಷಣೆಗೆ ಧಾವಿಸಿರುವ ಸ್ವರಾ ಭಾಸ್ಕರ್ ತೇಪೆ ಹಚ್ಚುವ ಮಾತನಾಡಿ ಇನ್ನಷ್ಟು ಗೊಂದಲ ಹೆಚ್ಚಿಸಿದ್ದಾಳೆ. ಈಗ ಈ ವಿಷಯ ಎಲ್ಲಿಗೆ ಎಷ್ಟು ಸೀರಿಯಸ್ ಆಗಿ ಮುಟ್ಟುತ್ತದೋ ಗೊತ್ತಿಲ್ಲ, ದೀಪಿಕಾ ಬಲಿಯಾಗುವಳೋ? ಅಥವಾ ಆರೋಪ ಹೊರಿಸಿದ ಅಧಿಕಾರಿಯೋ?
ದಬಂಗ್ ಬೆಳಗಿದ ಕೆರಿಯರ್
ದಬಂಗ್ ಗರ್ಲ್ ಸಾನ್ಯಾ `ಶಕುಂತಲಾ ದೇವಿ’ ಚಿತ್ರದಲ್ಲಿ ಅಂತಾರಾಷ್ಟ್ರಿಯ ಖ್ಯಾತಿವೆತ್ತ ಹ್ಯೂಮನ್ ಕಂಪ್ಯೂಟರ್ ಬೆಂಗಳೂರಿನ ಶಕುಂತಲಾರ ಪಾತ್ರ ನಿರ್ವಹಿಸಿದ ವಿದ್ಯಾಬಾಲನ್ಳ ಮಗಳ ಪಾತ್ರ ನಿರ್ವಹಿಸಿ, ವಿದ್ಯಾಳಂತೆಯೇ ಸೈ ಎನಿಸಿದ್ದಾಳೆ. `ದಬಂಗ್’ ಚಿತ್ರದ ನಂತರ ಇವಳ ಅನೇಕ ಚಿತ್ರಗಳು ಬಂದ, ಹೋದ ಯಾರಿಗೂ ತಿಳಿಯಲೇ ಇಲ್ಲ. OTTಯಲ್ಲಿ ಅಮೇಝಾನ್ ಇತ್ಯಾದಿಗಳಲ್ಲಿ ಬಿಡುಗಡೆಗೊಂಡ ಈ ಚಿತ್ರದ ಯಶಸ್ಸಿನ ಮೇಲೆ ಸಾನ್ಯಾಳ ಕೆರಿಯರ್ ನಿಂತಿದೆ, ವಿದ್ಯಾ ಬಾಲನ್ ಗೆದ್ದಾಯ್ತು, ಇವಳ ಗತಿ ಏನಾಗುವುದೋ? ಹೇಗಾದರೂ ಈ ಚಿತ್ರ ಸಕ್ಸಸ್ ಆಗಿ ಮುಂದೆ ತನಗೊಂದಿಷ್ಟು ಪಾತ್ರಗಳು ಸಿಗುವಂತಾಗಲಿ ಎಂದು ಪ್ರಾರ್ಥಿಸುತ್ತಿದ್ದಾಳೆ. ವಿದ್ಯಾಳಂಥ ಆಲದ ಮರದ ಮುಂದೆ ಈ ತುಂಬೆ ಗಿಡ ಬಿಸಿಲು ಕಂಡೀತೇ? ಕಾಲವೇ ನಿರ್ಧರಿಸಬೇಕಷ್ಟೆ.
ಹಿಂದಿಯ ಹೊಸ ನಾಗಿಣಿ ಆಗಿ ಹೀನಾ
ಭಾರತೀಯ ಕಿರುತೆರೆಯಲ್ಲಿ ನಾಗಿಣಿಗಳ ಕಾಟ ಇಂದು ನಿನ್ನೆಯದಲ್ಲ. ಅಂದ ಕಾಲತ್ತಿಲೆ….. ಶ್ರೀದೇವಿಯ ಸೂಪರ್ ಡೂಪರ್ ಸಕ್ಸಸ್ `ನಾಗಿನ್’ ಚಿತ್ರದಿಂದ ಆರಂಭವಾದ ಈ ವ್ಯಾಮೋಹ ಕಿರುತೆರೆ ಧಾರಾವಾಹಿಗಳಿಗೆ ಮಹಾಮಾರಿಯಾಗಿ ಆಕ್ರಮಿಸಿದೆ. ಹಿಂದಿಯಲ್ಲಂತೂ ಪಾರ್ಟ್-4 ಈಗಾಗಲೇ ಮುಗಿದಿವೆ. ಇದೀಗ ಈ ಕಪೋಲಕಲ್ಪಿತ ತಲೆಬಾಲವಿಲ್ಲದ ಧಾರಾವಾಹಿಯ 5ನೇ ಭಾಗ ಪ್ರಸಾರಗೊಳ್ಳಲಿದೆ. ಈ ಸಲ 5ನೇ ನಾಗಿಣಿಯಾಗಿ ಭುಸುಗುಟ್ಟಲಿರುವವಳು ಹೀನಾ ಖಾನ್. ಲಾಕ್ ಡೌನ್ ಕಾರಣ ಫ್ರೀಯಾಗಿದ್ದ ಹೀನಾ ಟಿಕ್ಟಾಕ್ ವಿಡಿಯೋ ಮಾಡಿದ್ದೂ ಮಾಡಿದ್ದೇ, ಟಿಕ್ಟಾಕ್ ಬ್ಯಾನ್ ಆದಾಗ ಇವೆಲ್ಲ ಹೀನಾಯವಾಗಿ ಸೋತ. ಯಾರಾದರೂ ಖ್ಯಾತ ನಿರ್ದೇಶಕರು ತನ್ನತ್ತ ಕೃಪಾದೃಷ್ಟಿ ಬೀರಬಾರದೇ ಎಂದು ಕಾದಿದ್ದೇ ಬಂತು, ಅದೇನೂ ನಡೆಯದೆ ಕಿರುತೆರೆಗೆ ಮತ್ತೆ ಶರಣಾಗಿ ಭುಸುಗುಟ್ಟುತ್ತಿದ್ದಾಳೆ. ಹೀನಾ ಬೇಬಿ, ನೀನು ಮಾತ್ರವಲ್ಲ ಎಷ್ಟೋ ಸ್ಟಾರಿಣಿಯರ ಗತಿ ಹೀಗೇ ಆಗಿದೆ, ಪಾಲಿಗೆ ಬಂದದ್ದು ಪಂಚಾಮೃತ ಎಂದು ಬದುಕಿರೋ ಎನ್ನುತ್ತಾರೆ ಹಿತೈಷಿಗಳು.
ಇದೀಗ ಹೊಸ ಅವತಾರದಲ್ಲಿ ಆಯುಷ್ಮಾನ್
ನಮ್ಮ ವಿಕ್ಕಿ ಡೋನರ್ ಅಂದ್ರೆ ಆಯುಷ್ಮಾನ್ ಖುರಾನಾ ಬಾಲಿವುಡ್ನಲ್ಲಿ ತನ್ನದೇ ಆದ ಗಟ್ಟಿ ಸ್ಥಾನ ಸ್ಥಾಪಿಸಿಕೊಂಡಿದ್ದಾನೆ. ಇವನ ಪ್ರತಿಯೊಂದು ಚಿತ್ರದ ಪಾತ್ರ ವಿಭಿನ್ನವಾಗಿದ್ದು, ಅಭಿಮಾನಿಗಳಿಗೆ ಹುಚ್ಚೆಬ್ಬಿಸುತ್ತದೆ. ನಂಬಲರ್ಹ ಮೂಲಗಳ ಸುದ್ದಿ ಪ್ರಕಾರ, ಈಗ ಈತ ಅಭಿಷೇಕ್ ಕಪೂರ್ ನಿರ್ದೇಶನದ ಹೊಸ ಚಿತ್ರದಲ್ಲಿ ಅಥ್ಲೀಟ್ನ ಪಾತ್ರದಲ್ಲಿ ಮಿಂಚಲಿದ್ದಾನೆ. ಇದಕ್ಕಾಗಿ ಈತ ಸಖತ್ ತಯಾರಿಗೆ ಇಳಿದಿದ್ದಾನೆ. ನಿರ್ದೇಶಕರ ಪ್ರಕಾರ ಇದು ಈತನ ಕೆರಿಯರ್ಗೇ ಸವಾಲಾಗಬಹುದಾದ ಟರ್ನಿಂಗ್ ಪಾಯಿಂಟ್ಪಾತ್ರವಂತೆ!
ವಾವ್…… ಅವಕಾಶ ಬಂದಾಗ ಬಾಚಿಕೋ ಬ್ರದರ್!
ಹೆಚ್ಚಾಯ್ತು ಶೂಟಿಂಗ್ನ ಬಜೆಟ್ ಬಾಲಿವುಡ್ ಪಂಡಿತರ ಪ್ರಕಾರ ಕೊರೋನಾ ಮಹಾಮಾರಿಯ ಕಾಟದಿಂದಾಗಿ ಈಗಾಗಲೇ ಹಿಂದಿ ಚಿತ್ರೋದ್ಯಮಕ್ಕೆ 1500 ಕೋಟಿಗೂ ಹೆಚ್ಚಿನ ನಷ್ಟ ಆಗಿದೆ. ಕೊರೋನಾ ದೆಸೆಯಿಂದಾಗಿ ಪ್ರಸ್ತುತ ಶೂಟಿಂಗ್ನ ಖರ್ಚು ಸಿಕ್ಕಾಪಟ್ಟೆ ಹೆಚ್ಚಿದೆ. ಹಿಂದೆಲ್ಲ ಆ್ಯಕ್ಷನ್ಔಟ್ ಡೋರ್ ಸೀನ್ ಶೂಟಿಂಗ್ಗಾಗಿ ಜಾಗದ ಹುಡುಕಾಟ ಮಾತ್ರ ಅನಿವಾರ್ಯವಾಗಿತ್ತು. ಈಗ ಈ ಮಹಾಮಾರಿಯ ದೆಸೆಯಿಂದಾಗಿ ದುಬಾರಿ ಸ್ಟುಡಿಯೋಗಳಲ್ಲಿ ಪ್ರಯೋಗದಿಂದ ನಡೆಸಬೇಕಾಗಿದೆ. ದೊಡ್ಡ ಕಷ್ಟವೆಂದರೆ ಈ ಟೆಕ್ನಾಲಜಿ, ಅದರ ತಾಂತ್ರಿಕರ ಖರ್ಚು ಗಗನಕ್ಕೇರಿದೆ. ಈ ಸಂಕಷ್ಟ ಭರಿಸಲಾಗದ ನಿರ್ಮಾಪಕರು ಆ್ಯಕ್ಷನ್ ರಹಿತ, ಮನಮೋಹಕ ಲೊಕೇಶ್ನಗಳಿಲ್ಲದೆಯೇ ಶೂಟಿಂಗ್ ಮಾಡಬೇಕೇ? ಬಾಹುಬಲಿ, ರೋಬೋ ಮುಂತಾದ ವೈಭವೋಪೇತ ಚಿತ್ರಗಳ ಸವಿಯುಂಡ ಪ್ರೇಕ್ಷಕರಿಗೆ ಮುಂದಿನ ಚಿತ್ರಗಳು ಸಪ್ಪೆಯಾಗಲಿವೆಯೇ?
ರಣವೀರ್ ಯಾರನ್ನು ಗ್ಯಾಂಗ್ಸ್ಟರ್ ಎನ್ನುತ್ತಿದ್ದಾನೆ?
ನೆಂಟರಿಷ್ಟರನ್ನೇ ಉದ್ಧರಿಸುವ ಚಾಳಿ ಬಾಲಿವುಡ್ನಲ್ಲಿ ಇನ್ನಷ್ಟು ಡೀಪ್ ಆಗುತ್ತಿದೆಯೇ? ಈ ವಿವಾದದಲ್ಲಿ ಇದೀಗ ರಣವೀರ್ ಶೌರಿ ಸಹ ಸಿಲುಕಿದ್ದಾನೆ. ಅವನು ಇದರಲ್ಲಿ ಸಿಲುಕಿರುವುದಷ್ಟೇ ಅಲ್ಲ, ಇದಕ್ಕೆ ಹೊಸತೊಂದು ತಿರುವನ್ನೇ ಕೊಟ್ಟಿದ್ದಾನೆ. ಬಾಲಿವುಡ್ನಲ್ಲಿ ಕೆಲವು ಮುದಿಗೊಡ್ಡುಗಳ ಗ್ಯಾಂಗ್ ಭಾರಿ ಸಂಚು ನಡೆಸುತ್ತಾರೆ. ಅದನ್ನು ಅವರ ಮುಂದಿನ ಪೀಳಿಗೆ ಯಶಸ್ವಿಯಾಗಿ ಮುಂದುವರಿಸುತ್ತಿದೆ, ಎಂದು ಇವನು ಟ್ವೀಟ್ ಮಾಡಿದ್ದೇ ರಾದ್ಧಾಂತಕ್ಕೆ ಕಾರಣವಾಯಿತು. ಇವನ ಪ್ರಕಾರ ಈ ಗ್ಯಾಂಗಿನ ಉದ್ದೇಶ ಬಾಲಿವುಡ್ನಲ್ಲಿ ಟಾಪ್ನಲ್ಲಿದ್ದುಕೊಂಡು ಸ್ಟಾರ್ಗಳನ್ನು ಕಂಟ್ರೋಲ್ ಮಾಡುವುದಾಗಿದೆ. ನಿನ್ನ ಮಾತೇನೋ ಸರಿ, ಆದರೆ ಬಡವನ ಕೋಪ ದವಡೆಗೆ ಮೂಲ ಎಂಬುದು ನೆನಪಿರಲಿ. ಔಟ್ ಸೈಡರ್ಸ್ ಎಲ್ಲಾ ಒಂದಾಗಿ ಇದನ್ನು ಪ್ರಬಲವಾಗಿ ವಿರೋಧಿಸಬೇಕಷ್ಟೇ, ಎನ್ನುತ್ತಿದ್ದಾರೆ ಹಿತೈಷಿಗಳು.
ರಾಧಿಕಾಳಿಗೆ ಬೀಚ್ ಇಷ್ಟವಂತೆ!
ಹಿಂದಿಯ ರಾಧಿಕಾ ಬಹಳ ವರ್ಷಗಳಿಂದ ಅತ್ತ ಚಿತ್ರದಲ್ಲಾಗಲಿ, ಇತ್ತ ವೆಬ್ಸೀರೀಸ್ನಲ್ಲಾಗಲಿ ದರ್ಶನ ನೀಡಿಲ್ಲ. ಈ ಮೇಡಂ ಎಲ್ಲಿದ್ದಾರಂತೆ? ಸುದ್ದಿಗಾರರು ಹೇಗಾದರೂ ಅದನ್ನು ಪತ್ತೆ ಹಚ್ಚುತ್ತಾರೆ ಅಂತಿಟ್ಟುಕೊಳ್ಳಿ. ಈ ಮೇಡಂ ಕೊರೋನಾ ಕಾಟದ ಮಧ್ಯೆ ಸನ್ ಕಿಸ್ಡ್ ಬೀಚ್ ಫೋಟೋಗಳನ್ನು ಫೇಸ್ಬುಕ್, ಟ್ವೀಟರ್, ಇನ್ಸ್ಟಾಗ್ರಾಂಗಳಿಗೆ ತುಂಬಿಸುವುದೇ ಆಗಿದೆ. ಇದನ್ನು ಕಂಡು ಹಿತೈಷಿಗಳ ಸಲಹೆ ಎಂದರೆ, ಅಮ್ಮ ರಾಧಿಕಾ, ಸಾಗರದ ತೆರೆಗಳ ನಡುವೆ ಚಿನ್ನಾಟ ಸಾಕು. ಇನ್ನಾದರೂ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುವ ದಾರಿ ಹುಡುಕುವ, ಇಲ್ಲದಿದ್ದರೆ ಕಡಲ ತೆರೆ ಮಧ್ಯೆ ಕಾಣೆಯಾದೀಯ!
ಮಲೈಕಾಳ ಮನದಲ್ಲಿ ಅಂಜಿಕೆ ಏಕೆ?
ಸುಮಾರು 3 ತಿಂಗಳ ನಂತರ ಮಲೈಕಾಳನ್ನು ಟಿವಿಯ ರಿಯಾಲಿಟಿ ಶೋನಲ್ಲಿ ವಾಪಸ್ಸು ನೋಡಿ, ಅಭಿಮಾನಿಗಳಂತೂ ಇವಳೇಕೆ ಬಹಳ ಅಂಜಿಕೊಂಡಿದ್ದಾಳಲ್ಲ….. ಎಂದುಕೊಳ್ಳುತ್ತಿದ್ದಾರೆ. ಅವರ ಅಂದಾಜು ಹೆಚ್ಚು ಕಡಿಮೆ ಸರಿ, ಟ್ವಿಸ್ಟ್ ಅಂದ್ರೆ ಮಲೈಕಾ ಸ್ವತಃ ಹೇಳಿದ್ದು. ಕೊರೋನಾ ಮಹಾಮಾರಿಯ ನಡುವೆ ಶೂಟಿಂಗ್ಗೆ ಬಂದು ತಾನು ತುಸು ಹೆದರಿರುವುದಂತೂ ನಿಜ, ಆದರೆ ಶೂಟಿಂಗ್ಗೆ ಬಂದು ತಾನು ತುಸು ಹೆದರಿರುವುದಂತೂ ನಿಜ, ಆದರೆ ಶೂಟಿಂಗ್ಗೆ ಮರಳಿರುವುದು ತನಗೆ ಬಹಳ ಎಗ್ಸೈಟಿಂಗ್ ಆಗಿದೆ ಅನ್ನುತ್ತಾಳೆ. ಕೊರೋನಾ ಕಾಟದಿಂದಾಗಿ ತನಗಿಂತ ಕಿರಿಯ ಪ್ರಿಯತಮ ಅರ್ಜುನನಿಂದ ದೂರವಿರಬೇಕಾದ ವಿರಹಬಾಧೆ ಸಣ್ಣದೇನಲ್ಲ….. ಹಾಗಿರುವಾಗ ಅವನೊಡನೆ ಶಾಶ್ವತ ಬಂಧನಕ್ಕೆ ಗ್ರೀನ್ ಸಿಗ್ನಲ್ ಏಕೆ ನೀಡುತ್ತಿಲ್ಲ ಎಂದು ಹಿತೈಷಿಗಳು ಕೇಳುತ್ತಿದ್ದಾರೆ.
ಇದೀಗ ಫರ್ಹಾನ್ ಆಗಲಿದ್ದಾನೆ ಗಗನಯಾತ್ರಿ
ಅಯ್ಯಯ್ಯೋ… ಇದನ್ನು ಓದಿ ನಿಜಕ್ಕೂ ಫರ್ಹಾನ್ ಅಂತರಿಕ್ಷಕ್ಕೆ ಹಾರಲಿದ್ದಾನಾ ಎಂದು ಭಾವಿಸಬೇಡಿ. ಅಸಲಿಗೆ, ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಭಾರತದ ಪ್ರಥಮ ಗಗನಯಾತ್ರಿ ರಾಕೇಶ್ ಶರ್ಮಾರ ಕುರಿತ ಬಯೋಪಿಕ್ ಚಿತ್ರವನ್ನು ಖಾನ್ತ್ರಯರ ಕೈಯಲ್ಲಿ ಮಾಡಿಸಬೇಕೆಂದಿದ್ದು ಅದು ಮಗುಚಿಬಿತ್ತು, ಇದೀಗ ಫರ್ಹಾನ್ ಆ ಪಾತ್ರ ಮಾಡುವುದು ಎಂದಾಗಿದೆ. ಕೊರೋನಾ ಮಧ್ಯೆ ಅವಕಾಶ ಸಿಕ್ಕಿದ್ದೇ ಹೆಚ್ಚು ಎಂಬುದು ಬೇರೆ ಮಾತು. ಇದಿನ್ನೂ ಸುದ್ದಿಗಾರ ಅಂತೆ ಕಂತೆಗಳಲ್ಲಿದೆಯೇ ಹೊರತು ಖಚಿತವಾಗಿಲ್ಲ. ಅದು ಅಕ್ಷರಶಃ ನಿಜವಾದಾಗ, ರೀಲಿನಲ್ಲಾದರೂ ಫರ್ಹಾನ್ `ಗಗನವು ಎಲ್ಲೋ… ಭೂಮಿಯು ಎಲ್ಲೋ…..’ ಎಂದು ಹಾಡುವಂತಾಗಲಿ!
ಬಟ್ಟೆ ನೋಡಿ ಕ್ಯಾರೆಕ್ಟರ್ ಜಡ್ಜ್ ಮಾಡುವುದು ಸರಿಯೇ?
ಇಂಥ ಮಾತನ್ನು ಇದೀಗ ಚಿತ್ರರಂಗದಲ್ಲಿ ಕಣ್ಣು ಬಿಡುತ್ತಿರುವ ಶ್ರೀದೇವಿಯ ಮಗಳು ಜಾಹ್ನವಿ ಆಡುತ್ತಿದ್ದಾಳೆಂದರೆ ಏನೋ ಮಹತ್ವ ಇರಲೇಬೇಕು. ಸಾಧಾರಣ ಹುಡುಗಿಯರು ಈ ಮಾತಾಡಿದರೆ ಯಾರು ಬೆಲೆ ಕೊಟ್ಟಾರು? ಈ ಮಹಾತಾಯಿ ಬಿಚ್ಚಮ್ಮನಾಗಿ ಕುಣಿದಾಗ, ಫೇಸ್ಬುಕ್ನಲ್ಲಿ ಇವಳ ಅವತಾರ ಕಂಡು ಇತರ ನಟಿಯರು, ಟ್ರೋಲರ್ಸ್ ಉಗಿಯತೊಡಗಿದರು. ಅವಳ ಪ್ರಕಾರ, ಎಷ್ಟೋ ಸಲ ಜನ ಅವಳ ತುಂಡು ಡ್ರೆಸ್ ಅಶ್ಲೀಲ ಕಮೆಂಟ್ಸ್ ಪಾಸ್ ಮಾಡಿದಾಗ, ಅದು ತನ್ನ ಚಾರಿತ್ರ್ಯದ ಕುರಿತೇ ಟೀಕೆ ಎಂಬುದನ್ನು ಅರಿಯದಂಥ ಮುಗ್ಧಳೇನಲ್ಲ ಈಕೆ. ಅಮ್ಮಾ ಜಾಹ್ನವಿ, ನಿಮ್ಮಮ್ಮ ಹೆಸರೇನೋ ಸಾಕ್ಷಾತ್ ಗಂಗಾದೇವಿಯದನ್ನೇ ಇರಿಸಿದ್ದಾಳೆ ಆ ಪಾವಿತ್ರ್ಯತೆ ನೋಡುಗರ ದೃಷ್ಟಿಯಲ್ಲಿ ಉಳಿದೀತೇ ಎಂಬುದು ಹಿತೈಷಿಗಳ ಅಂಬೋಣ.