OTT ಗೆ ಮರಳಿದ ರಾಧಿಕಾ

ಒಂದು ಕಾಲದಲ್ಲಿ ವೆಬ್‌ ಸೀರೀಸ್‌ ಅಂದ್ರೆ ರಾಧಿಕಾ ಆಸ್ಮಿಗೆ ಆಲ್ ಇನ್‌ ಆಲ್ ಆಗಿತ್ತು. ರಾಧಿಕಾಳ ಶೂಟಿಂಗ್‌ ಡೇಟ್ಸ್ ನಿಶ್ಚಿತಗೊಳಿಸಿಕೊಂಡ ನಂತರವೇ ವೆಬ್‌ ಸೀರೀಸ್‌ನ ಚಿತ್ರದ ಇತರ ಕೆಲಸ ಶುರುವಾಗುತ್ತಿತ್ತು. ಅದೇನಾಯ್ತೋ ಏನೋ…. ಕ್ರಮೇಣ ರಾಧಿಕಾ OTT ಯಿಂದ ದೂರ ಸರಿದಳು. ಈಗ ಅವಳ ಫ್ಯಾನ್ಸ್ ಗೆ ಒಂದು ಗುಡ್‌ ನ್ಯೂಸ್‌ ಎಂದರೆ, ಅವಳು `ಘೋಲ್‌’ ಚಿತ್ರದಲ್ಲೂ ನಾಯಕಿ ಆಗಿರುತ್ತಾಳೆ ಅಂತ. ಈ ಹೊಸ ಚಿತ್ರದ ಪೋಸ್ಟರ್‌ನಲ್ಲೇನೋ ರಾಧಿಕಾ ಜಬರ್ದಸ್ತ್ ಆಗಿದ್ದಾಳೆ, ಆದರೆ ಈ ಸೀರಿಸ್‌ನ ಕಥೆ ಎಷ್ಟು ಗಟ್ಟಿ ಎಂದು ಕಾದು ನೋಡಬೇಕಷ್ಟೆ.

ದೇಸಿ ಗರ್ಲ್ ನ್ನು ಮುತ್ತಿದವರಾರು?

pc_1

ಪ್ರಿಯಾಂಕಾ ಹಾಲಿವುಡ್‌ಗೆ ಹಾರಿ ಎಲ್ಲೇ ಹೋಗಲಿ, ನಮ್ಮ ದೇಶದ ಮೀಡಿಯಾದಲ್ಲಿ ಸದಾ ಚರ್ಚೆಯಲ್ಲುಳಿಯುತ್ತಾಳೆ. ಈ ಹೊಸ ಪ್ರಕರಣ ರೈತರ ಆಂದೋಲಕ್ಕೆ ಸಂಬಂಧಿಸಿದ್ದು. ಇದೀಗ ಸೋಶಿಯಲ್ ಮೀಡಿಯಾ ಹೆಸರಲ್ಲಿ ಖ್ಯಾತ ಸೆಲೆಬ್ರಿಟಿಗಳು ಇದರೊಂದಿಗೆ ತಳುಕು ಹಾಕಿಕೊಂಡಿದ್ದಾರೆ. ಅಡಲ್ಟ್ ಚಿತ್ರಗಳ ಮಿಯಾ ಖಲೀಫಾ ಸಹ ಅದರಲ್ಲೊಬ್ಬಳು. ಮಿಯಾ ಪ್ರಿಯಾಂಕಾಳ ಕುರಿತು ಏನೆಂದು ಕಿಚಾಯಿಸಿದ್ದಾಳೆ ರೈತರ ಆಂದೋಲನದ ಕುರಿತಾಗಿ ಇಷ್ಟೆಲ್ಲ ರಾದ್ಧಾಂತ ನಡೆಯುತ್ತಿದ್ದರೆ ಪ್ರಿಯಾಂಕಾ ಮೌನವಾಗಿರುವುದು ಎಂದರೆ, ಬೈರೂತ್‌ನಲ್ಲಿ ಶಕೀರಾ ನಡೆದ ಅನ್ಯಾಯದ ವಿರುದ್ಧ ತೆಪ್ಪಗಿದ್ದಂತೆ! ಅಂದಹಾಗೆ ಮಿಯಾ ಸಹ ಬಾಲಿವುಡ್‌ ಚಿತ್ರಗಳಲ್ಲಿ ನಟಿಸಿ, ಮತ್ತೊಬ್ಬ ಸನ್ನೀ ಆಗ ಬಯಸುತ್ತಿದ್ದಾಳಂತೆ, ಆದರೆ ಬಾಲಿವುಡ್‌ ಪಂಡಿತರು, ಇದೆಲ್ಲ ಅವಳ ಸ್ಟಂಟ್‌ ಅಷ್ಟೇ ಎಂದು ಖಂಡಿಸುತ್ತಾರೆ.

ಶಿಲ್ಪಾಳ ಗುಟ್ಟು ಇದೀಗ ರಟ್ಟು!

shilpa1

ಅಯ್ಯೋ….. ಇದು ಅವಳ ಖಾಸಗಿ ಜೀವನದ ಕುರಿತಾದುದಲ್ಲ, ಅವಳ ಪತಿ ರಾಜ್‌ ಕುಂದ್ರಾ ಕುರಿತಾದುದು. ಮಾಡೆಲ್ ‌ಸಾಗರಿಕಾ ಶೋನಾ ಸುಮನ್‌ ರಾಜ್‌ಕುಂದ್ರಾ ಕುರಿತು, ಆತ ಒಂದು ಅಡೆಲ್ಟ್ ವೀಡಿಯೋ ರಾಕೆಟ್‌ನ ಭಾಗ ಎಂದು ಆರೋಪಿಸಿದ್ದಾಳೆ. ಬಾಲಿವುಡ್‌ನಲ್ಲಿ ಇತ್ತೀಚೆಗೆ ಪೋರ್ನ್‌ ಚಿತ್ರಗಳ ಅವಾಂತರ ಹೆಚ್ಚಾಗಿದೆ. ಇದೇ ಪ್ರಕರಣದಲ್ಲಿ ನಟಿ ಗಮನಾ ಸಿಷ್ಟಾಳನ್ನು ಬಂಧಿಸಲಾಗಿದೆ. ಆದರೆ ಈ ಕೊಚ್ಚೆಯಿಂದ ರಾಜ್‌ ಹೊರಬರುವುದು ಹೇಗೆ ಅಥವಾ ಆತ ನಿಜಕ್ಕೂ ತಪ್ಪಿತಸ್ಥನೇ ಎಂಬುದು ಇದರ ಸಂಪೂರ್ಣ ಪರಿಶೀಲನೆ ಆಗುವವರೆಗೂ ತಿಳಿಯುವುದಿಲ್ಲ. ಇಂಥ ಸೆಲೆಬ್ರಿಟಿಗಳು ಇದರಲ್ಲಿ ಸಿಲುಕಬೇಕೇಕೆ?

ಮನೋಜ್‌ ಈಗ ಇತಿಹಾಸ ತಿಳಿಸುತ್ತಾರಾ?

manoj_1

ತನ್ನ ಅದ್ಭುತ ನಟನೆಯಿಂದ ಖ್ಯಾತಿವೆತ್ತ ಮನೋಜ್‌ ಬಾಜಪೈ, ಇನ್ನಷ್ಟು ಸಾಧನೆಗೆ ತೊಡಗಿದ್ದಾರೆ. ಇದೀಗ ಮನೋಜ್ ಕಿರುತೆರೆಯಲ್ಲಿ ಒಂದು ಹೊಸ ಶೋ ಹೋಸ್ಟ್ ಮಾಡಲಿದ್ದಾರೆ. ಡಿಸ್ಕವರಿ ಪ್ಲಸ್‌ನ `ಸೀಕ್ರೆಟ್ಸ್ ಆಫ್‌ ಸಿನೋಲಿ’ ಎಂಬ ಇದರಲ್ಲಿ ಇತಿಹಾಸದ ಪುಟಗಳ ವಿಶ್ಲೇಷಣೆ ಆಗಲಿದೆಯಂತೆ. ಇದನ್ನು ವಿವರಿಸಲು ವೀಕ್ಷಕರೆದುರು ಮನೋಜ್‌ಬರಲಿದ್ದಾರೆ. ಮತ್ತೊಂದು ಸುದ್ದಿ ಎಂದರೆ, ಇದಕ್ಕಾಗಿ ಆತ 1 ತಿಂಗಳು ಅಂಡರ್‌ ಗ್ರೌಂಡ್‌ ಆಗಿದ್ದರಂತೆ. ಆದರೆ ಅದಕ್ಕೂ ಈ ಶೋಗೂ ಏನೂ ಸಂಬಂಧ ಇಲ್ಲವಂತೆ. ಅದನ್ನು ಆತ ಮುಂದಿನ ಚಿತ್ರದ ತಯಾರಿಗಾಗಿ ಮಾಡಿಕೊಂಡಿದ್ದಂತೆ. ಪ್ರತಿಭಾವಂತರೆಂದರೆ ಹೀಗೆ, ಪರ್ಫೆಕ್ಟ್ ತಯಾರಿ ಇಲ್ಲದೆ ವೇದಿಕೆ ಏರುವುದಿಲ್ಲ.

ಮಾನ್ಯಾಳ ಮಾತು ನಿಜಕ್ಕೂ ಮಾನ್ಯವೇ!

manya_1

ಇತ್ತೀಚೆಗೆ ಮಿಸ್‌ ಇಂಡಿಯಾ ಸ್ಪರ್ಧೆಯಲ್ಲಿ ವಿಜೇತಳಾದ ಮಾನಸಾ ವಾರಾಣಸಿ, ಎಲ್ಲೆಲ್ಲೂ ಮಿಂಚುತ್ತಿದ್ದಾಳೆ. ಮಾನಸಾ ವಿಜೇತೆ ಸರಿ, ಈಗ ಚರ್ಚೆಯಲ್ಲಿರುವುದು ಈ ಸ್ಪರ್ಧೆಯ ಫಸ್ಟ್ ರನ್ನರ್‌ ಅಪ್‌ ಮಾನ್ಯಾ ಸಿಂಗ್‌. ಅವಳ ತಂದೆ ಆಟೋ ಡ್ರೈವರ್‌. ಬಡತನದಲ್ಲೇ ಕಳೆದ ಬಾಲ್ಯ ಇಲ್ಲಿಯವರೆಗೂ ಯಶಸ್ವಿಯಾಗಿ ತಲುಪಿಸಿದೆ, ಆದರೆ ಭಯ ಬಿಟ್ಟಿದ್ದಲ್ಲ. ಮಾನ್ಯಾ ತನ್ನ ಕುಟುಂಬದ ಹೆಸರು ಎತ್ತಿಹಿಡಿದಿದ್ದಾಳೆ. ತನ್ನ ಓದು, ಕನಸು ನನಸಾಗಿಸಿಕೊಳ್ಳುವಲ್ಲಿ ಅವಳು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಮಧ್ಯಮ ವರ್ಗದ ಹುಡುಗಿಯರು ಮುಂದುವರಿಯಲು ಬಹಳ ಹೆದರುತ್ತಾರೆ, ಅವರಿಗೆ ಮಾನ್ಯಾ ಮಾದರಿಯಾಗಿದ್ದಾಳೆ!

ಕೃತಿಯ ಹೊಸ ಲುಕ್ಸ್ ನ ಮೋಡಿ

kriti_1

ಟೈಗರ್‌ ಶ್ರಾಫ್‌ ತನ್ನ ಮುಂದಿನ `ಗಣಪತ್‌’ ಚಿತ್ರಕ್ಕಾಗಿ ಬಹಳ ಉತ್ಸಾಹಿತನಾಗಿದ್ದಾನೆ. ಅದನ್ನು ಸೋಶಿಯಲ್ ಮೀಡಿಯಾ ಮೂಲಕ ಸದಾ ಹೇಳುತ್ತಿರುತ್ತಾನೆ. ಮೊದಲು ಅವನು `ಗಣಪತ್‌’ ಚಿತ್ರದ ತನ್ನ ಮೋಶನ್‌ ಪೋಸ್ಟರ್‌ ಶೇರ್‌ ಮಾಡಿದ, ಇದೀಗ ಚಿತ್ರದ ನಾಯಕಿ ಕೃತಿಯ ಫೋಟೋ ಹಾಕಿದ. ಕೃತಿಯ ಈ ಫೋಟೋ ಯದ್ವಾತದ್ವಾ ಫೇಮಸ್‌ಆಗ್ತಿದೆ. ಟೈಗರ್‌ಗೆ ಹುಲಿಯಂತೆ ಘರ್ಜಿಸುವುದೇ ಕೆಲಸವಾದ್ದರಿಂದ, ವೀಕ್ಷಕರು ಈ ಬಗ್ಗೆ ಹೆಚ್ಚಿನ ಭರವಸೆ ಹೊಂದಿದ್ದಾರೆ. ಭರವಸೆ ಏನೋ ಸರಿ, ಆದರೆ `ಬಾಗಿ, ವಾರ್‌’ ಬಿಟ್ಟರೆ ಟೈಗರ್‌ನ ಮಾರಾಮಾರಿ ಚಿತ್ರಗಳೆಲ್ಲ ತೋಪೆದ್ದಿವೆ. ಕೃತಿಗೆ ತನ್ನ ಈ ಹೊಸ ಚಿತ್ರ `ಹೀರೋಪಂತಿ’ ತರಹ ಹಿಟ್ ಆಗಲಿ ಎಂಬ ಆಸೆಯಂತೂ ಇದ್ದೇ ಇದೆ.

ಬಾಲಿವುಡ್‌ಗಾಗಿ ಬೋಲ್ಡ್ ಆಗಬೇಕಾದುದು ಅನಿವಾರ್ಯ

box

ಶರ್ಲಿನ್‌ ಚೋಪ್ರಾ ನೆನಪಿದೆಯೇ? ತನ್ನ ಸಿನಿಮಾ ಕೆರಿಯರ್‌ನ ಆರಂಭದಲ್ಲಿ ಸಣ್ಣಪುಟ್ಟ ಪಾತ್ರ ವಹಿಸುತ್ತಿದ್ದಳು. ಗೊತ್ತಾಗಲಿಲ್ಲವೇ? ಅಯ್ಯೋ….. `ಕಾಮಸೂತ್ರ 3ಡಿ’ ಮಾಡಿದವಳೇ ಇವಳು, ಈಗ ಗೊತ್ತಾಯ್ತಲ್ಲ, ಇವಳ ಬಂಡವಾಳ ಶರ್ಲಿನ್‌ ತನ್ನ ಅಡಲ್ಟ್ ಚಿತ್ರಗಳಿಂದ ಬಹಳ ಖುಷಿಯಾಗೇನೂ ಇಲ್ಲ. ಆಗ ಅವಳು ತನ್ನ ಅಳಲನ್ನು ತೋಡಿಕೊಳ್ಳುತ್ತಾ ಸುದ್ದಿಗಾರರೆದುರು, ಬಾಲಿವುಡ್‌ ತನ್ನ ಟ್ಯಾಲೆಂಟ್ ಗೆ ತಕ್ಕಂತೆ ಅವಕಾಶ ಕೊಟ್ಟಿದ್ದರೆ, ತಾನು ಇಂಥ ಚಿತ್ರಗಳಿಗೆ ಮೊರೆಹೋಗುತ್ತಿರಲಿಲ್ಲ ಎಂದಳು. ಇದೇನೋ ಸರಿ, ಆದರೆ ಬಾಲಿವುಡ್‌ನಲ್ಲಿ ಕಾಸ್ಟ್ ಕೌಚಿಂಗ್‌ ಇಲ್ಲದೆ ಉನ್ನತ ಚಿತ್ರಗಳಲ್ಲಿ ಅವಕಾಶ ಸಿಗುತ್ತದೆಯೇ….

ಜಾಹ್ನವಿ ಆಗಲಿದ್ದಾಳೆ ಹೆಲೆನ್

jhanvi1

ಜಾಹ್ನವಿ (ಶ್ರೀದೇವಿಯ ಮಗಳು)ಯ ಕೆರಿಯರ್‌ ಡೋಲಾಯಮಾನವಾದಾಗೆಲ್ಲ, ಅವಳ ತಂದೆ ಬೋನಿ ಕಪೂರ್‌ ಮುಳುಗುವ ದೋಣಿಯನ್ನು ದಡ ಸೇರಿಸುವ ನಾವಿಕನಾಗುತ್ತಾರೆ. ಈ ಸಲ ಹಾಗೇ ಆಯ್ತು. ಇತ್ತೀಚೆಂಗಂತೂ ಅವಳ ಬಳಿ ಯಾವ ದೊಡ್ಡ ಪ್ರಾಜೆಕ್ಟೂ ಇಲ್ಲ. ಹೀಗಾಗಿ ಬೋನಿ ದಕ್ಷಿಣದ `ಹೆಲೆನ್‌’ ಚಿತ್ರವನ್ನು ಹಿಂದಿಗೆ ರೀಮೇಕ್‌ ಮಾಡಲು ಹೊರಟಿದ್ದಾರೆ. ಹಾಗಿದ್ದ ಮೇಲೆ ಈ ಚಿತ್ರದ ನಾಯಕಿ ಜಾಹ್ನವಿ ಅಲ್ಲದೆ ಬೇರಾಗಿರಲು ಸಾಧ್ಯ? ಅಂದಹಾಗೆ ಈ ಚಿತ್ರದ ತಮಿಳಿನ ರೀಮೇಕ್‌ ಈಗಾಗಲೇ ಮುಗಿದಿದೆ. ಒಬ್ಬ ಸಾಧಾರಣ, ಸಂಘರ್ಷ ಮಾಡುವ ಹೆಣ್ಣಿನ ಕಥೆಯನ್ನು ಈ ತಂದೆ ಮಗಳ ಜೋಡಿ ಹಿಂದಿಯಲ್ಲಿ ಇದನ್ನೆಷ್ಟು ನಿಭಾಯಿಸುತ್ತದೋ ಕಾದು ನೋಡಬೇಕು.

ಪಾಲಿಗೆ ಬಂದದ್ದೆಲ್ಲ ಪಂಚಾಮೃತ!

jakline_1

 

ಕೊರೋನಾ ಕಾಲದಲ್ಲಿ ಜ್ಯಾಕ್ಲೀನ್‌ ಹೆಚ್ಚು ಕಾಲ ಸಲ್ಮಾನ್‌ ಖಾನ್‌ ಜೊತೆ ಕಳೆದಳು. ಮುಂದೆ ಒಂದು ದಿನ ಅವನ ಚಿತ್ರದಲ್ಲಿ ತನಗೊಂದು ದೊಡ್ಡ ಪಾತ್ರ ಸಿಗಬಹುದೆಂಬ ಆಸೆ ಅವಳಿಗೆ. ಆದರೆ ಹಾಗೇನೂ ನಡೆಯಲಿಲ್ಲ. ಪಾಪ, ಈ ಜ್ಯಾಕ್ಲೀನ್‌ ಈಗೇನು ಮಾಡಿಯಾಳು? ಆಗ ಅವಳ ನೆರವಿಗೆ ಬಂದವನು `ಖಿಲಾಡಿ’ ಕುಮಾರ್‌ ಅಂದ್ರೆ ಅಕ್ಷಯ್‌ ಕುಮಾರ್‌. ಆತನ ಮುಂದಿನ `ರಾಮಸೇತು’ ಚಿತ್ರದಲ್ಲಿ ಅವಳಿಗೆ ನಾಯಕಿಯ ಪಾತ್ರ ಕೊಡಿಸಿದ, ಇದು ನಂಬಲರ್ಹ ಮೂಲಗಳಿಂದ ಖಾತ್ರಿಯಾಗಿದೆ. ಪಾಲಿಗೆ ಬಂದದ್ದು ಪಂಚಾಮೃತ…… ಖಾನ್‌ ಅಲ್ಲದಿದ್ದರೆ ಕುಮಾರ್‌! ನಾಯಕಿ ಪಟ್ಟ ಅಂತೂ ಸಿಕ್ಕಿತಲ್ಲ ಈಕೆಗೆ.

ಸಲ್ಮಾನ್‌ ಪಾಲಿಗೆ ಕೆಟ್ಟವನಾದ ಇಮ್ರಾನ್‌

emraan_1

ಅಯ್ಯೋ….. ಬ್ಯಾಡ್‌ ಬಾಯ್‌ ಸಲ್ಮಾನ್‌ ಹಾಗೂ ಸೀರಿಯಲ್ ಕಿಸ್ಸರ್‌ ಮಧ್ಯೆ ಜಗಳ ಆಗಿರಬೇಕೆಂದು ಭಾವಿಸಬೇಡಿ. ಅಸಲಿ ವಿಷಯ ಅಂದ್ರೆ, ಇವರಿಬ್ಬರೂ ಕೂಡಿ ನಟಿಸಲಿರುವ `ಟೈಗರ್‌’ ಚಿತ್ರದಲ್ಲಿ ಹೀರೋ ಸಲ್ಮಾನ್‌ ಮುಂದೆ ವಿಲನ್‌ ಆಗಿ ಇಮ್ರಾನ್‌ ಹಶ್ಮಿ ನಟಿಸಲಿದ್ದಾನೆ. ಈ ಚಿತ್ರದ ನಿರ್ಮಾಪಕರಿಗೆ ಇಮ್ರಾನ್‌ಮಾತ್ರವೇ ಈ ಚಿತ್ರಕ್ಕೆ ನ್ಯಾಯ ಸಲ್ಲಿಸಬಲ್ಲ ಎಂದು ಅನಿಸಿತು. ಇಮ್ರಾನ್‌ಗಿದು ಜಾಕ್‌ ಪಾಟೇ ಸರಿ, ಏಕೆಂದರೆ ಇತ್ತೀಚೆಗೆ ಆತನ ಕೆರಿಯರ್‌ ಸಂಪೂರ್ಣ ತೋಪಾಗಿದೆ.

ಸನೀ ಸೆಟ್‌ ಮುತ್ತಿದ ಗೂಂಡಾಗಳು

bollywood1

ಸನೀ ಲಿಯೋನ್‌ ಇತ್ತೀಚೆಗೆ ವಿಕ್ರಂಭಟ್‌ ನಿರ್ದೇಶನದಲ್ಲಿ ವೆಬ್‌ ಸೀರೀಸ್‌ಗಾಗಿ `ಅನಾಮಿಕಾ’ ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಇದ್ದಕ್ಕಿದ್ದಂತೆ ಇವಳ ಶೂಟಿಂಗ್‌ ಸೆಟ್‌ನಲ್ಲಿ ಯಾರೋ ಕೆಲವರು ಗೂಂಡಾಗಳು ಆಕ್ರಮಿಸಿದವರೇ ಕೇಳಿದಷ್ಟು ಹಣ ಕೊಡಬೇಕೆಂದು ಪೀಡಿಸಿದರು. ಪರಿಸ್ಥಿತಿ ಬಿಗಡಾಯಿಸಿ ಶೂಟಿಂಗ್‌ ಕ್ಯಾನ್ಸ್‌ ಮಾಡಬೇಕಾಯಿತು. ವಿಕ್ರಂಭಟ್‌ ಪ್ರಕಾರ ಈ ಸೀರೀಸ್‌ಗೆ ಸಂಬಂಧಿಸಿದ ಅಬ್ಬಾಸ್‌ ಅಲೀ ಹಣದ ವ್ಯವಹಾರದಿಂದಾಗಿ ಈ ವಿವಾದ ಉಂಟಾಗಿದೆಯಂತೆ. ಈ ಕುರಿತಾಗಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಕ್ರಂ ಯೋಚಿಸುತ್ತಿದ್ದಾರೆ, ಆದರೆ ಸನೀ ಇದು ಮತ್ತೆ ರಿಪೀಟ್‌ ಆದರೇನು ಗತಿ ಎಂದು ತಲೆ ಮೇಲೆ ಕೈ ಹೊತ್ತಿದ್ದಾಳೆ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ