– ರಾಘವೇಂದ್ರ ಅಡಿಗ ಎಚ್ಚೆನ್.

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ಆರ್.ವಿ.ದೇವರಾಜ್ (67) ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳುತ್ತಿದ್ದಾಗ ಆರ್.ವಿ.ದೇವರಾಜ್ ಅವರಿಗೆ ಹಾರ್ಟ್​ ಅಟ್ಯಾಕ್ ಆಗಿದ್ದು, ತಕ್ಷಣವೇ ಅವರನ್ನು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆರ್.ವಿ ದೇವರಾಜ್ ಅವರು ವಿಧಿವಶರಾಗಿದ್ದಾರೆ.

ನಾಳೆ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ ಕಾಂಗ್ರೆಸ್ ಮುಖಂಡ ಆರ್​.ವಿ ದೇವರಾಜ್ ಅವರು ನಿನ್ನೆ ಚಾಮುಂಡೇಶ್ವರಿ ದರ್ಶನ ಮಾಡಲು ಚಾಮುಂಡಿ ಬೆಟ್ಟಕ್ಕೆ ತೆರಳಿದ್ದರು. ಚಾಮುಂಡಿ ಬೆಟ್ಟಕ್ಕೆ ಹೋಗ್ತಿದ್ದಾಗ ಹೃದಯಾಘಾತ ಸಂಭವಿಸಿದೆ. ಚಿಕ್ಕಪೇಟೆ ಕ್ಷೇತ್ರದಲ್ಲಿ ಜನಪ್ರಿಯರಾಗಿದ್ದ ಕಾಂಗ್ರೆಸ್​ನ ಆರ್.ವಿ ದೇವರಾಜ್ ಬರ್ತ್​ಡೇ ಖುಷಿಯಲ್ಲಿದ್ದಾಗಲೇ ವಿಧಿವಶರಾಗಿದ್ದಾರೆ. ನಿನ್ನೆಯಿಂದಲೇ ಚಿಕ್ಕಪೇಟೆಯಾದ್ಯಂತ ಹುಟ್ಟುಹಬ್ಬದ ಕಟೌಟ್ಸ್ ರಾರಾಜಿಸುತ್ತಿತ್ತು.

ಆರ್.ವಿ ದೇವರಾಜ್ ಅವರು ಮಾಜಿ ಸಿಎಂ‌ ಎಸ್​.ಎಂ ಕೃಷ್ಣ ಅವರಿಗೆ ಕ್ಷೇತ್ರ ತ್ಯಾಗ ಮಾಡಿದ್ದರು. ಕಾಂಗ್ರೆಸ್​ನ ಆರ್.ವಿ ದೇವರಾಜ್ ಮೂರು ಬಾರಿ ಶಾಸಕ, ಒಮ್ಮೆ MLC ಆಗಿದ್ದರು. ಇನ್ನು ಕೆಎಎಸ್​ಆರ್​ಟಿಸಿ ಅಧ್ಯಕ್ಷ, ಸ್ಲಂ ಬೋರ್ಡ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಆರ್.ವಿ ದೇವರಾಜ್ ಚಿಕ್ಕಪೇಟೆ, ಚಾಮರಾಜಪೇಟೆಯಿಂದಲೂ ಶಾಸಕರಾಗಿದ್ದರು.  ಆರ್.ವಿ ದೇವರಾಜ್ ನಿಧನ ಹಿನ್ನೆಲೆ ಚಿಕ್ಕಪೇಟೆಯಾದ್ಯಂತ ಶೋಕದ ವಾತಾವರಣ ಸೃಷ್ಟಿಯಾಗಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ